Tuesday, 7 March 2017

ಕವನ - ಅಂತರರಾಷ್ಟ್ರೀಯ ಮಹಿಳಾ ದಿನ



ಮತ್ತೊಮ್ಮೆ ಬಂದಿದೆ
ಮಾರ್ಚ್ ಎಂಟು
ಮಹಿಳಾ ದಿನವೆಂದೆ
ನಮಗದರ ನಂಟು.

ನೂರು ವರುಷಗಳ
ಇತಿಹಾಸ ಉಂಟು
ಬಿಚ್ಚಿದರೆ ದೊರೆವುದು
ಹೋರಾಟಗಳ ಗಂಟು.

1909ರಲ್ಲಿ ನಡೆದ
ಸ್ತ್ರೀ ಸಮ್ಮೇಳನದಲ್ಲಿ
ನಾಯಕಿ ಕ್ಲಾರಾ, ರೋಸಾ
ಹೋರಾಟದ ಕರೆಯಿತ್ತರಲ್ಲಿ.

1910ರಲ್ಲಿ ಸೇರಿದರು
ನ್ಯೂಯಾರ್ಕ್ ನಲ್ಲಿ
ಕೇಳಿದರು ಬೇಕೆಂದು
ಮತದಾನದ ಹಕ್ಕನಲ್ಲಿ.

ಆರಂಭವಾದವೆಲ್ಲೆಡೆ
ಹಕ್ಕಿನ ಹೋರಾಟಗಳು
ವಿಶ್ವದಲಿ ಬೆಳದವು
ಮಹಿಳಾ ಚಳುವಳಿಗಳು.

ದೇಶ ದೇಶಗಳಲ್ಲಿ
ಸಿಕ್ಕವು ಕೆಲ ಹಕ್ಕುಗಳು
ಇನ್ನುಳಿದವುಗಳಿಗಾಗಿ
ನಡೆದಿವೆ ಸೆಣಸಾಟಗಳು.

ಬಂಧನ, ಅಪಮಾನ
ಗುಂಡೇಟಿನ ಸುರಿಮಳೆ
ಸಹಿಸಿದರು ಎಲ್ಲವನು
ಕೀಳಲು ದಮನದ ಕಳೆ.

ಮೂಡಿದೆ ಮನದಲಿಂದು
ಪ್ರಶ್ನೆಗಳ ಸರಮಾಲೆ
ಒಡೆದಿದ್ದೇವೆಯೇ ನಾವು
ದಾಸ್ಯದ ಶೃಂಖಲೆ?

ಸ್ವಾತಂತ್ರ್ಯ ಸಿಕ್ಕಿದೆಯೆ
ನಿಜವಾಗಿ ನಮಗೆ?
ಸಮಾನತೆ ದೊರೆತಿದೆಯೆ
ದಿಟವಾಗಿ ನಮಗೆ?

ಬಿಡುಗಡೆಯಾಗಿದೆಯೆ
ದಾಸ್ಯ ಬಂಧನಗಳಿಂದ?
ಮುಕ್ತರಾಗಿದ್ದೇವೆಯೆ
ಎಲ್ಲ ಅಪಮಾನಗಳಿಂದ?

ನಿಂತಿವೆಯೆ ಎಲ್ಲ
ದಮನ ದೌರ್ಜನ್ಯಗಳು?
ಕೊನೆಗೊಂಡಿವೆಯೆ
ದರ್ಪದಬ್ಬಾಳಿಕೆಗಳು?

ದಕ್ಕಿದೆಯೆ ಎಲ್ಲರಿಗೂ
ಹಕ್ಕು-ಅಧಿಕಾರ?
ಸಿಕ್ಕಿದೆಯೆ ನಮಗೆ
ಆತ್ಮ ಸಮ್ಮಾನ?

ದೂರವಿದೆ ಇನ್ನೂ
ವಿಮೋಚನೆಯ ಗುರಿ
ಕಡಿದಾಗಿದೆ ಅದನ್ನು
ಪಡೆಯುವ ದಾರಿ.

ತಲುಪಿಹೆವು ಅರ್ಧ ಗಮ್ಯ 
ಶತಮಾನದ ಹೋರಾಟದಿ
ನಡೆಯಬೇಕಿದೆ ಇನ್ನೂ
ಛಲದಿ, ಆತ್ಮಬಲದಿ.

ದೊರೆಯಬೇಕಿದೆ ಶಿಕ್ಷಣ
ಸಂಬಳದ ಅಧಿಕಾರ
ಎಲ್ಲೆಡೆ ನಿರ್ಭಯವಾಗಿ
ಓಡಾಡಲು ಸಹಕಾರ.

ಬಿಡುಗಡೆಗೆ ಎಲ್ಲರು
ಐಕ್ಯತೆಯಿಂ ಕೂಡಿ
ದುಡಿದರೆ ಖಂಡಿತ
ಸಿಡಿಯುವುದು ಬೇಡಿ.
- ಸುಧಾ ಜಿ     

ಕವನ,- ತನ್ನ ತಾ ಕಾಣಲು



ಆಯಾಸದಿ ಲಕುಮಿ ಎದ್ದು ನೋಡಲಲ್ಲಿ
ಮಲಗಿತ್ತು ಮಗುವು ಮಗ್ಗಲಲ್ಲಿ
ಹಸಿವಿನಿಂದ ಅತ್ತು ಅತ್ತು
ಕಂದ ನಿಸ್ತೇಜವಾಗಿತ್ತು
ಕಂದನ್ನ ಕಂಡ ಹೆತ್ತ ಕರುಳು
ನುಂಗಿಕೊಂಡಿತ್ತು ತನ್ನ ಅಳು

ಕಂಕುಳಲ್ಲಿ ಏರಿಸಿ ಕಂದನ
ಹೊರಟಳರಸಿ ಲಕುಮಿ ಕೆಲಸವ
ಸುತ್ತಿ ಸುತ್ತಿ ಸುಸ್ತಾಗಿತ್ತು
ಆಘಾತ ಅವಳಿಗೆ ಕಾದಿತ್ತು

ಮನೆಯೊಡೆಯನ ಹಸಿವನೀಗಿಸಲೆ?
ಕಂದನ ಹಸಿವನಿಂಗಿಸಲೆ?
ಮಾಡುವುದು ಏನು? ದಾರಿ ಇರುವುದಾದರೂ ಏನು?

ಒಲ್ಲೆನೆಂದರೆ ಕಂದ ಉಳಿಯುವುದಿಲ್ಲ
ಮಗುವಿಲ್ಲದಿರೆ
ನಾ ಬದುಕುಳಿಯುವುದಿಲ್ಲ
ಯಾವುದು ಸರಿ? ಯಾವುದು ತಪ್ಪು?

ಲಕುಮಿ ನೂರು ಬಾರಿ ತನ್ನನ್ನೇ ಕೇಳಿಕೊಂಡಳು
ಮಾಡಬೇಕು ಏನನ್ನು, ನಿರ್ಧರಿಸದಾದಳು

ಹೆಣ್ಣಿನ ನೋವ ಅರ್ಥ ಮಾಡಿಕೊಳ್ಳದ ಜಗವಿದು
ಹೆಣ್ಣಿನ ಮನಸ ಅರಿಯದ ಪ್ರಪಂಚವಿದು
ಇಲ್ಲಿ ಬದುಕಬೇಕಾದರೆ ಗಟ್ಟಿ ಮನಸು ಬೇಕು
ತುಚ್ಛ ಜನರ ಮೆಟ್ಟಿ ನಿಂತು ಮುನ್ನಡೆಯಬೇಕು
ನಾ ಬದುಕಬೇಕು ಇಂದು
ನಾ ಬಾಳಬೇಕು ಮುಂದೂ.

ದೃಢ ನಿಶ್ಚಯದಿಂದ
ಮುಂದೆ ಹೆಜ್ಜೆ ಇಟ್ಟು ನಡೆದಳು
ಕೊಳೆ ಬಾಳನು ಒದ್ದು ದಿಟ್ಟ ಹೆಜ್ಜೆ ಇಟ್ಟಳು
ತನ್ನ ತಾ ಕಾಣಲು

ಮತ್ತೆ ತನ್ನ ತಾ ಕಾಣಲು!!
- ಗಿರಿಜಾ ಕೆ ಎಸ್ 

Poem - Women



Who has downtrodden you?
Who has caused you sunk?
Who has held your freedom?
Who has drawn your arenas?
Nobody could even dare to
If you had dared to stand strong
If you had dared to remain unaltered
If you had dared to be yourself
Why didn’t you?
They bent you down
Not because you couldn’t stop them
But Because you chose to bend
However forced you were
They drew your boundaries
Not because you couldn’t decide
But because you let them
However helpless you were
They caged your freedom
Not because you didn’t know
where the key was
But because you
accepted to remain there
However worse the situation was
Why did you have to?
For what did you have to sacrifice
For what did you have to lose
For what did you have to give up
When you knew
This wasn’t what you wanted
When you knew
This wasn’t your happiness
When you knew
This would always remain your regret
Rise above, all the ladies
Wait no more
                  - Nileena Thomas 



ಕವನ – ಮಹಿಳೆಯರು
(ನಿಲೀನಾ ಥಾಮಸ್ ರವರ “ವುಮೆನ್” ಇಂಗ್ಲಿಷ್ ಕವಿತೆ ಅನುವಾದವಾಗಿದೆ)
ತುಳಿದಿದ್ದಾರೆ ನಿಮ್ಮನ್ನಾರು?
ಬೀಳುಗಳೆದಿದ್ದಾರೆ ನಿಮ್ಮನ್ನಾರು?
ನಿಮ್ಮ ಸ್ವಾತಂತ್ರ್ಯವನ್ನು ಕಸಿದವರಾರು?
ಲಕ್ಷ್ಮಣರೇಖೆಗಳನ್ನು ಹಾಕಿದವರಾರು?

ನೀವು ದೃಢವಾಗಿ ನಿಂತಿದ್ದರೆ 
ನಿಮ್ಮಂತೆಯೇ ನೀವಿರಲಿಚ್ಛಿಸಿದ್ದರೆ
ಬದಲಾಗಲು ತಿರಸ್ಕರಿಸಿದ್ದರೆ
ಸಾಹಸಿಸುತ್ತಿದ್ದರೆ ಯಾರಾದರೂ?

ಉಳಿಯಲಿಲ್ಲವೇಕೆ ನೀವು ಹಾಗೆ?

ತುಳಿದವರವರು ನಿಮ್ಮನ್ನು
ನಿಮಗದನ್ನು ತಡೆಯಲಾಗದ್ದಕ್ಕಲ್ಲ
ಒತ್ತಡ ತೀವ್ರವಾಗಿತ್ತೆಂದೂ ಅಲ್ಲ
ಬಾಗಲು ನೀವೇ ನಿರ್ಧರಿಸಿದಿರಿ

ನಿರ್ಧರಿಸಿದರು ನಿಮ್ಮ ಗಡಿಗಳನ್ನು
ನೀವೇ ನಿರ್ಧರಿಸಲಾಗದಕ್ಕಲ್ಲ
ಅಸಹಾಯಕರೆಂದೂ ಸಹ ಅಲ್ಲ
ನೀವೇ ಅದಕ್ಕನುವು ಮಾಡಿಕೊಟ್ಟಿರಿ

ಪಂಜರದಲ್ಲಿಟ್ಟರು ನಿಮ್ಮನ್ನವರು
ಕೀಲಿಕೈ ಎಲ್ಲಿತ್ತೆಂದು ಗೊತ್ತಿರಲಿಲ್ಲವೆಂದಲ್ಲ
ಅಸಹನೀಯ ಪರಿಸ್ಥಿತಿ ಎಂದೂ ಅಲ್ಲ
ನೀವೇ ಅಲ್ಲುಳಿಯಲು ನಿರ್ಧರಿಸಿದಿರಿ

ಉಳಿದಿರೇಕೆ ನೀವು ಹೀಗೆ?
ಯಾತಕ್ಕಾಗಿ ಈ ತ್ಯಾಗ?
ಯಾತಕ್ಕಾಗಿ ಈ ಸೋಲು?
ಕಾರಣವೇನು, ಎಲ್ಲ ಬಿಟ್ಟುಕೊಡಲು?
ನಿಮಗೆ ಗೊತ್ತಿದ್ದಾಗ
ಇದಲ್ಲ ನಿಮಗೆ ಬೇಕಿರುವುದೆಂದು
ನಿಮಗೆ ತಿಳಿದಿದ್ದಾಗ
ಇದು ನಿಮ್ಮ ಸಂತೋಷವಲ್ಲವೆಂದು
ನಿಮಗೆ ಅರಿವಿದ್ದಾಗ
ಜೀವನವಿಡೀ ನೋವುಳಿಯುವುದೆಂದು

ಸೋದರಿಯರೇ, ಸಹಿಸಬೇಡಿರಿನ್ನು
ಎಲ್ಲ ಕಟ್ಟುಗಳ ಮೀರಿರಿನ್ನು
ಮುಕ್ತವಾಗಲು ಕಾಯಬೇಡಿರಿನ್ನು!!
  -   ಸುಧಾ ಜಿ 

Book Review - I AM MALALA



Women and Education- Few thoughts

Recently I read the book ‘I AM MALALA’ by Malala Yousafzai and Christina Lamb.
The book is an autobiography of Malala Yousafzai who was awarded the Nobel Peace Prize in the year 2014 for her strong stance for advocating girl child/ women’s education. This young activist was born on 12 July 1997 in the Swat Valley of Pakistan - Afganistan border. She was encouraged by her father to study in his own school - Kushal Public School. During her years of schooling, the political topography of the Swat Valley changes with people getting highly influenced and deliberately led through a well orchestered religious propaganda by the Pakistani Taliban to follow the Islamic Law. These religious fundamentalists gradually took over the administration from the Government agencies and become a law unto themselves. They started Kangaroo courts; insisted that everyone follow the Muslim Law which according to their dictum forbids education to the Girls and Women. Life became very difficult for the people under the rule of Taliban as schools run for girls were under threat.
At such trying times, Malala starts a blog for BBC Urdu channel while she was still in her 7th standard. The blog runs from 3rd January 2009 to 12th March 2009. For her safety, she had been asked by the BBC to use a pseudonym ‘Gul Makai’. Over a period of time, a documentary gets done revealing her efforts for Right to Education of girls. This is followed by a number of awards and recognition which brings her identity to public domain. Then on, her family faces the threats from the Pakistani Taliban which ultimately leads to the heinous act of an assassination attempt on her life on 9 October 20012 while she was returning from her school after writing her examination. Two other girls sitting beside her, in the school bus, also got bullet wounds.
The critically injured Malala gets all the required medical help and is later shifted to United Kingdom. It takes her nearly three months to recover and she continues to receive treatment and rehabilitation. The story of Malala catches  the attention of the World  and over 2 million people sign the petition ‘’Right to Education’’ which culminates in the first Right to Education Bill in Pakistan. Even after going through such a terrible ordeal, Malala continues her fight for Right to Education of the Girls and women at various forums. On her sixteenth birthday, in her first public address post the assassination attempt, Malala addresses the United Nations giving a call for worldwide access to education.  In 2014, Malala becomes the youngest person to receive the Nobel Peace Prize sharing the prize with another Child Rights Activist, Kailash Satyarthi of India. The Malala Fund has been created by her to provide funds for education of girls.
After reading this autobiography, my thoughts were on difficulties and discrimination faced by the Girls in accessing education in most of the societies. Though the book focussed on the Muslim Fundamentalists, one can observe the parallel efforts in every religion to withhold access to knowledge for Girls and women. Education is the key to understand oneself and others around us and to unleash the power of human curiosity. It is the key to open the vistas unseen, unheard and an opportunity to open the mind to various possibilities. Yet this access has been systematically denied to women throughout the history of human society.
At least now, concerted efforts should be made by the civic societies to provide free access to education for all girls and women so that they can participate equally inn building a responsible society.  Further, it should be impressed upon the girls as well as women to understand the need for education, the opportunities that come their way due to getting education. The educated women need to join hands to help other women to become literate first and then pursue education further.
My second line of thinking focussed on how the systematic propaganda by religious fundamentalists and fanatics can sway the whole population, to start following an ideology without even giving rational consideration. The whole of Swat valley comes under the influence of Taliban in a span of two to three years with almost no resistance from those residing in the valley! Two things seem to have led to this situation. The gross neglect of development of the region by the consecutive elected governments leading to poor access to education among the whole population combined with poverty and unemployment leading to poor living standards. These factors seem to invariably lead people to blindly follow the religious dictum without dissent. In every country, we find such pockets of gross underdevelopment which leads to frustration among the youth and can lead them towards religious dogmatism. Thus there is a need to focus on such underdeveloped areas in our backyards so as to initiate developmental and educational avenues for the people of such areas. Otherwise such rising of religious fundamentalism may also hit every country very badly.
I do appreciate the book for leading me to think on the above mentioned areas.   

- Dr. Suman K Murthy



ಮಹಿಳಾ ಜಾಗೃತಿ ಗೀತೆ -1 - ಮೆರವಣಿಗೆ ಹೊರಡುತ್ತಾರೆ



[ಈ ಅಂಕಣದಲ್ಲಿ ನಾವು ಮಹಿಳಾ ಜಾಗೃತಿ ಗೀತೆಗಳನ್ನು ಹಾಕುತ್ತಿದ್ದೇವೆ.]


ಒಂದಲ್ಲಾ ಒಂದುದಿನ ಈ ನೆಲದ ಹೆಣ್ಣುಗಳು
ಮೆರವಣಿಗೆ ಹೊರಡುತ್ತಾರೇ  ||2||
ಮಳೆ ಹಾಡಹಾಡುತ್ತಾ
ಸಾಲು ಗಿಡಗಳ ನೆಡುತ್ತಾ
ಮೆರವಣಿಗೆ ಹೊರಡುತ್ತಾರೇ ||2||

ದೇಹದ ಗುಂಟ ಹರಿದ ನೆತ್ತರ
ಚರಿತೆ ತೊಳೆಯುತ್ತಾರೆ
ಹೆಣ್ಣುಗಳು ಚರಿತೆ ತೊಳೆಯುತ್ತಾರೆ
ಹೊಸ ನದಿಯಾ ಹುಡುಕುತ್ತಾ
ಹುಡುಕುತ್ತ ಸಾಗುತ್ತಾರೆ ||2||  || ಮೆರವಣಿಗೆ ||

ದೇಹವ ಮುಚ್ಚಿದ ಎಲ್ಲವ ಕಳಚಿ
ಬಿಡಿಸಿಕೊಳ್ಳುತ್ತಾರೆ
ಬಂಧನ ಬಿಡಿಸಿಕೊಳ್ಳುತ್ತಾರೆ
ಈ ನೆಲದಾ ಹಾದಿಬೀದಿಗಳ
ತುಂಬ ಸೇರುತ್ತಾರೆ ||2||  || ಮೆರವಣಿಗೆ ||
   -   ವಿನಯ ಒಕ್ಕುಂದ  

ಮಹಿಳಾ ಸಾಧಕಿಯರು - 1- ಅಂತರರಾಷ್ಟ್ರೀಯ ಮಹಿಳಾ ದಿನದ ರೂವಾರಿ - ಕ್ಲಾರಾ ಜೆಟ್ಕಿನ್


ಮಾರ್ಚ್ ತಿಂಗಳು ಬಂದಿತೆಂದರೆ ಸಾಕು ಮಹಿಳೆಯರಿಗೆ ಏನೋ ಸಂಭ್ರಮ. ಮಾರ್ಚ್ ರಂದು ವಿಶ್ವದಾದ್ಯಂತ  ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತೇವೆ. ಆದರೆ ಇದರ ಹಿಂದೆ ಎಷ್ಟೋ ಜನರ ಹೋರಾಟಶ್ರಮವಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಅದರಲ್ಲಿ ಪ್ರಮುಖರಾದವರು ಕ್ಲಾರಾ ಜೆಟ್ಕಿನ್ ರವರು.
  ಮಹಿಳಾ ಹೋರಾಟಗಾರ್ತಿಸಮಾಜವಾದಿ ಚಿಂತಕಿ ಕ್ಲಾರಾರವರು 1857 ಜುಲೈ 5 ರಂದು ಮಧ್ಯಮ ವರ್ಗದ  ಗಾಟ್‌ಫ್ರಿಡ್ ಐಸೆನರ್ ಮತ್ತು ಜೋಸೆಫಿನ್ ವೀಟೆಲ್ ಐಸೆನರ್ ರವರ ಮೊದಲನೆ ಮಗಳಾಗಿ ಜರ್ಮನಿಯಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರು ಶಿಕ್ಷಕರಾಗಿದ್ದರು. ಕ್ಲಾರಾರವರು ತಂದೆ ಬೋಧಿಸುತ್ತಿದ್ದ ಶಾಲೆಯಲ್ಲಿ  ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು. ತಂದೆಯ ನಿವೃತ್ತಿ ನಂತರ ಪಟ್ಟಣಕ್ಕೆ ಬಂದು ನೆಲೆಸಿದರು. ನಂತರ ಇವರು ಸಾಹಿತ್ಯ ಮತ್ತು  ಇತಿಹಾಸದಲ್ಲಿ ಪದವಿ ಮುಗಿಸಿದರು. ಇವರು ಶಿಕ್ಷಕಿಯಾಗಿರುವಾಗ ವುಮೆನ್ಸ್ ಎಜುಕೇಶನ್ ಸೊಸೈಟಿ ಮತ್ತು ನ್ಯಾಷನಲ್ ಅಸೋಸಿಯೇಷನ್ ಆಫ್ ಜರ್ಮನ್ ವುಮೆನ್ ನಡೆಸುತ್ತಿದ್ದ ಸಭೆಗಳಲ್ಲಿ ಭಾಗವಹಿಸುತ್ತಿದ್ದರು 
  1878ರಲ್ಲಿ ರಷ್ಯಾದ ವಿದ್ಯಾರ್ಥಿಗಳ ಪರಿಚಯವಾಗಿ ಇವರು "ಸಾಮಾಜಿಕ ಕಾರ್ಮಿಕ ಪಕ್ಷಕ್ಕೆ" ಸೇರಿದರು. 1878 ರಲ್ಲಿ ಜರ್ಮನಿಯಲ್ಲಿ ಬಿಸ್ಮಾರ್ಕ್ ಸಾಮಾಜಿಕ ಚಟುವಟಿಕೆಗಳನ್ನು ನಿಷೇಧಿಸಿದ್ದರಿಂದ ಕ್ಲಾರಾರವರನ್ನು ಪ್ಯಾರಿಸ್ ಗೆ ಗಡಿಪಾರು ಮಾಡಲಾಯಿತು. ಈ ಸಮಯದಲ್ಲಿ ಪರಿಚಯವಾದ ಮಾರ್ಕ್ಸ್ ವಾದಿ ಆಸಿಫ್ ಜೆಟ್ಕಿನ್ ಇವರಿಗೆ ಮಾರ್ಕ್ಸ್ ರವರ ಸಿದ್ಧಾಂತಗಳನ್ನು ತಿಳಿಸಿಕೊಟ್ಟರು.  ನಂತರ ಕ್ಲಾರಾರವರು ಆಸಿಫ್ ಜೆಟ್ಕಿನ್ ರವರನ್ನು ವಿವಾಹವಾಗಿ ಜೆಟ್ಕಿನ್ ಎಂಬ ಹೆಸರನ್ನು ಸೇರಿಸಿಕೊಂಡರು.
ಕ್ಲಾರಾರವರು ಕಾನ್ಸ್ಟೆಂಟಿನ್ ಮತ್ತು  ಮ್ಯಾಕ್ಸಿಮ್ ಎಂಬ ಎರಡು ಮಕ್ಕಳ ತಾಯಿಯಾದರು. 1889 ರಲ್ಲಿ ಆಸಿಫ್ ಜೆಟ್ಕಿನ್ ರವರು ಮರಣ ಹೊಂದಿದರು.
  ಪ್ಯಾರಿಸ್ ನಲ್ಲಿ ಇದ್ದ ಸಮಯದಲ್ಲಿ ಕ್ಲಾರಾರವರು ಅಂತರರಾಷ್ಟ್ರೀಯ ಸಮಾಜವಾದಿ ಗುಂಪಿನ ಸಂಘಟನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದರು. ಆ ಸಮಯದಲ್ಲಿ ಮಹಿಳೆಯರ ಸ್ಥಿತಿ  ತುಂಬಾ ಶೋಚನೀಯವಾಗಿತ್ತು. ಹೆಣ್ಣು ಗಂಡೆಂಬ ತಾರತಮ್ಯ ನೀತಿಯಿಂದ ಮಹಿಳೆಯರಿಗೆ ಕೆಲಸ ಸಿಗುತ್ತಿರಲಿಲ್ಲ. ಮಹಿಳೆಯರಿಗೆ ಸರಿಯಾದ ವೇತನವನ್ನು ನೀಡುತ್ತಿರಲಿಲ್ಲ ಮತ್ತು ಅವರಿಗೆ ಮತ ಚಲಾಯಿಸುವ ಹಕ್ಕು ಇರಲಿಲ್ಲ. ಇಂತಹ ಸಂದರ್ಭದಲ್ಲಿ  ಮಹಿಳೆಯರಿಗೆ ರಾಜಕೀಯವಾಗಿಆರ್ಥಿಕವಾಗಿ ಸಮಾನ ಅವಕಾಶಗಳು ಮತ್ತು  ಮತ ಚಲಾಯಿಸುವ ಹಕ್ಕು  ದೊರೆಯುವಂತೆ ನಡೆಸಿದ ಹೋರಾಟದಲ್ಲಿ ಕ್ಲಾರಾರವರ ಪಾತ್ರ ಗಣನೀಯವಾದದು.
1891 ರಿಂದ 1928 ರವರೆಗಿನ ಸಾಮಾಜಿಕ ಪ್ರಜಾಸತ್ತಾತ್ಮಕ ಮಹಿಳೆಯರ ಹೋರಾಟದಲ್ಲಿ  ಬಹಳ ಶ್ರಮಿಸಿದರು. ಇದೇ ಸಮಯದಲ್ಲಿ "equality "ಪತ್ರಿಕೆಯ ಸಂಪಾದಕಿಯಾಗಿಯೂ ಕೆಲಸ ನಿರ್ವಹಿಸಿದ್ದರು. 
1908 ರ ಅಮೆರಿಕದ ಮತದಾನದ ಹಕ್ಕಿಗಾಗಿ ನಡೆದ ಹೋರಾಟದಿಂದ ಸ್ಪೂರ್ತಿಗೊಂಡ ಕ್ಲಾರಾರವರು 1910ರ ಆಗಸ್ಟ್ ನಲ್ಲಿ ಕೊಪನ್ ಹೇಗ್ ನಲ್ಲಿ  ಪ್ರಥಮ ಅಂತರರಾಷ್ಟ್ರೀಯ ಸಮಾಜವಾದಿ  ಮಹಿಳಾ ಸಮಾವೇಶ ದಲ್ಲಿ  ವರ್ಷಕ್ಕೊಂದು ದಿನವನ್ನು ಮಹಿಳೆಯರ ದಿನವಾಗಿ ನಿಗದಿಪಡಿಸಿ ಆಚರಿಸುವಂತೆ ಪ್ರಸ್ತಾಪ ಮಾಡಿದರು.
 ಇದನ್ನು 17 ರಾಷ್ಟ್ರದ 100 ಪ್ರತಿನಿಧಿಗಳು ಅನುಮೋದಿಸಿದರು. ಈ ಎಲ್ಲಾ ಬೆಳವಣಿಗೆಯ ಫಲವಾಗಿ 1911 ರಲ್ಲಿ ಪ್ರಥಮ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
  ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ ಕ್ಲಾರಾರೋಸಾ ಲುಕ್ಸೆಂಬರ್ಗ್ ಮೊದಲಾದವರು ಪಕ್ಷದ ಸಿದ್ಧಾಂತಗಳನ್ನು ಮೀರಿ ಅಂತರರಾಷ್ಟ್ರೀಯ ಯುದ್ಧ ವಿರೋಧಿ ಸಮ್ಮೇಳನವನ್ನು 1915 ರಲ್ಲಿ ಬರ್ಲಿನ್ ನಲ್ಲಿ ಸಂಘಟಿಸಿದರು. ಈ ಯುದ್ಧ ವಿರೋಧಿ ಚಟುವಟಿಕೆಗಳಿಂದ ಕ್ಲಾರಾರವರನ್ನು ಹಲವಾರು ಬಾರಿ ಬಂಧಿಸಲಾಯಿತು. 1916 ರಲ್ಲಿ ಇವರನ್ನು "ಗೃಹಬಂಧನ" ದಲ್ಲಿರಿಸಲಾಯಿತು ಆದರೆ ಅವರ ಆರೋಗ್ಯದ ಸಮಸ್ಯೆಯಿಂದ ಬಿಡುಗಡೆ ಮಾಡಲಾಯಿತು. 1916ರಲ್ಲಿ ಸ್ಥಾಪನೆಯಾದ ಇಂಡಿಪೆಂಡೆಂಟ್ ಸೋಷಿಯಲಿಸ್ಟ್  ಡೆಮಾಕ್ರೆಟಿಕ್ ಪಾರ್ಟಿ ಸ್ಥಾಪಕರಲ್ಲಿ ಇವರು ಒಬ್ಬರು. ಜರ್ಮನಿಯ ಕ್ರಾಂತಿಯ ಸಮಯದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಜರ್ಮನಿ  ಪ್ರಾರಂಭವಾಯಿತು. ಕ್ಲಾರಾರವರು ಇದರ ಸದಸ್ಯತ್ವವನ್ನು ಪಡೆದರು. 1920 ರಿಂದ 1933 ರವರೆಗೆ ಪ್ರತಿನಿಧಿಯಾಗಿ ಪಕ್ಷವನ್ನು ಮುನ್ನೆಡೆಸಿದರು. 1920 ರಲ್ಲಿ  "ಮಹಿಳೆಯರ ಪ್ರಶ್ನೆ"(The women question) ಎಂಬ ವಿಷಯದ ಬಗ್ಗೆ ಲೆನಿನ್ ರವರನ್ನು ಸಂದರ್ಶಿಸಿದರು.
  1924ರವರೆಗೆ ಇವರು K.P.D.ಯ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. 1921ರಿಂದ 1933ರವರೆಗೆ ಇವರು ಕಮ್ಯುನಿಸ್ಟ್  ಇಂಟರ್ ನ್ಯಾಷನಲ್  ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.1925 ರಲ್ಲಿ ಜರ್ಮನ್ ಲೆಫ್ಟ್ ವಿಂಗ್ ಸಾಲಿಡಾರಿಟಿ ಆರ್ಗನೈಸೇಷನ್ ನ ಅಧ್ಯಕ್ಷರಾಗಿ ಆಯ್ಕೆಯಾದರು. 1932 ರಲ್ಲಿ ರೀಚ್ಸ್ಟಾಗ್ ನ ಅಧ್ಯಕ್ಷರಾಗಿದ್ದರು.
1933 ರಲ್ಲಿ ಹಿಟ್ಲರ್ ಮತ್ತು ನಾಜಿ ಪಕ್ಷದವರು ಸಮತಾವಾದಿ ಪಕ್ಷವನ್ನು ನಿಷೇಧಿಸಿದರು. ಪರಿಣಾಮವಾಗಿ ಕ್ಲಾರಾರವರನ್ನು ಗಡಿಪಾರು  ಮಾಡಲಾಯಿತು. ರಷ್ಯಾಕ್ಕೆ ತೆರಳಿದ ಕ್ಲಾರಾರವರು ತಮ್ಮ 76ನೇ  ವಯಸ್ಸಿನಲ್ಲಿ ನಿಧನರಾದರು. ಇವರನ್ನು "Grandmother of communism" (ಸಮತಾವಾದದ ಅಜ್ಜಿ) ಎಂದು ಗೌರವಿಸಲಾಗಿದೆ.
  1949ರ ನಂತರ ಕ್ಲಾರವರ ಹೆಸರು ಎಲ್ಲಾ ಕಡೆ ಪ್ರಸಿದ್ಧಿಯಾಯಿತು. ಜರ್ಮನಿಯ ಪ್ರಮುಖ ಪಟ್ಟಣಗಳ ರಸ್ತೆಗಳಿಗೆ ಇವರ ಹೆಸರನ್ನಿಡಲಾಯಿತು.
1954 ರಲ್ಲಿ ಕ್ಲಾರಾರವರ ಚಿತ್ರವಿರುವ ಪದಕವನ್ನು  ಹೊರತಂದರು.
1967 ರಲ್ಲಿ  ಕ್ಲಾರಾ ಜೆಟ್ಕಿನ್ ರವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
1987 ರಲ್ಲಿ ಇವರ ಚಿತ್ರವಿರುವ ಅಂಚೆಚೀಟಿ ಮುದ್ರಿಸಿದರು.
  ಕ್ಲಾರಾ ಜೆಟ್ಕಿನ್ ರಂತೆ ಮಹಿಳೆಯರ ಸಮಾನತೆಗೆ ಎಲ್ಲರೂ ಶ್ರಮಿಸಿದಾಗ ಮಾತ್ರ ಅವರ ಪರಿಕಲ್ಪನೆಯ "ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ"ಗೆ ನಿಜವಾದ ಅರ್ಥ ದೊರೆಯುವುದು.
     -  ವಿಜಯಲಕ್ಷ್ಮಿ ಎಂ ಎಸ್ 

ಮಹಿಳಾ ಸಾಧಕಿಯರು - 2- ಅಂತರರಾಷ್ಟ್ರೀಯ ಮಹಿಳಾ ದಿನದ ರೂವಾರಿ - ರೋಸಾ ಲುಕ್ಸೆಂಬರ್ಗ್



ಅಂತರರಾಷ್ಟ್ರೀಯ  ಮಹಿಳಾ ದಿನಾಚರಣೆಯ ಸಮಯದಲ್ಲಿ  ಕ್ಲಾರಾ ಜೆಟ್ಕಿನ್ ರವರ ಜೊತೆಗೆ ಕೇಳಬರುವ ಮತ್ತೊಬ್ಬ ಮಹಿಳೆ ಹೆಸರೆಂದರೆ ಮಾರ್ಕ್ಸ್ ವಾದಿ ಚಿಂತಕರು, ತತ್ವಜ್ಞಾನಿಗಳು, ಅರ್ಥಶಾಸ್ತ್ರಜ್ಞರುಯುದ್ಧ ವಿರೋಧಿ ಕಾರ್ಯಕರ್ತರು ಮತ್ತು ಕ್ರಾಂತಿಕಾರಿ  ಸಮಾಜವಾದಿಗಳೂ ಆದ ರೋಸಾ ಲುಕ್ಸೆಂಬರ್ಗ್ ರವರದ್ದು. ಇವರು ಮಾರ್ಚ್ 5 ,1871 ರಲ್ಲಿ ಎಲಿಯಾಸ್ ಲುಕ್ಸೆಂಬರ್ಗ್ ಮತ್ತು ಲಿನೆ ಲೊವೆನ್ಸ್ ಟೈಮ್ ರ ಮಗಳಾಗಿ ಪೋಲೆಂಡ್ ನಲ್ಲಿ ಜನಿಸಿದರು. ಇವರ ಜನನ ಪೋಲೆಂಡ್ನಲ್ಲಿಯಾದರೂ ಇವರು  ಜರ್ಮನ್ ಪ್ರಜೆಯಾದರು. ತಂದೆ ಮರದ ವ್ಯಾಪಾರಿಯಾಗಿದ್ದರು. ತಂದೆ ಉದಾರವಾದಿ ವಿಚಾರಗಳನ್ನು ಹೇಳುತ್ತಿದ್ದರು. ತಾಯಿ ಧಾರ್ಮಿಕ ವ್ಯಕ್ತಿಯಾಗಿದ್ದರು. 
ರೋಸಾರವರಿಗೆ ಜರ್ಮನ್, ಪೋಲೀಶ್ ಭಾಷೆಗಳಲ್ಲದೆ, ರಷ್ಯನ್ ಭಾಷೆಯು ತಿಳಿದಿತ್ತು. ಇವರು 1880 ರಲ್ಲಿ ಶಾಲೆಗೆ ಸೇರಿದರು. ಇವರು 1887 ರಲ್ಲಿ ಸೆಕೆಂಡರಿ ಸ್ಕೂಲ್ ಗ್ರಾಜುಯೇಷನ್ ಮುಗಿಸಿದರು. ನಂತರ ಸ್ವಿಡ್ಜರ್ಲ್ಯಾಂಡ್ ನ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ತತ್ವಜ್ಞಾನಇತಿಹಾಸರಾಜ್ಯಶಾಸ್ತ್ರ,  ಅರ್ಥಶಾಸ್ತ್ರ ಮತ್ತು ಗಣಿತವನ್ನು ಓದಿದರು. 1897 ರಲ್ಲಿ "ಪೋಲೆಂಡ್ ನ ಕೈಗಾರಿಕಾ ಅಭಿವೃದ್ಧಿ " ಎಂಬ ಹೆಸರಿನಲ್ಲಿ ಡಾಕ್ಟರೇಟ್ ಮಹಾಪ್ರಬಂಧವನ್ನು ಮಂಡಿಸಿ, "ಡಾಕ್ಟರ್  ಆಪ್ ಲಾ" ಪದವಿಯನ್ನು ಪಡೆದರು. 
1886ರಲ್ಲಿಯೇ ಪ್ರೊಲೆಟೇರಿಯಟ್ ಪಾರ್ಟಿ (ಕಾರ್ಮಿಕವರ್ಗದ ಪಕ್ಷ)ದ ಸದಸ್ಯೆಯಾದರು. ಇವರು ತಮ್ಮ 20ನೆ ವಯಸ್ಸಿನಲ್ಲಿಯೇ ಮುಷ್ಕರಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ಚಟುವಟಿಕೆಗಳನ್ನು ಪ್ರಾರಂಭಿಸಿದರು. 1893 ರಲ್ಲಿ "ಕಾರ್ಮಿಕರ ಧ್ಯೇಯ" ಎಂಬ ಪತ್ರಿಕೆಯನ್ನು ಆರಂಭಿಸಿದರು. ಆಸ್ಟ್ರಿಯ ಮತ್ತು ರಷ್ಯಾದಲ್ಲಿ ಸಮಾಜವಾದ ಕ್ರಾಂತಿಯಾದ ನಂತರ ಇವರು ಕೇವಲ ಪೋಲೆಂಡ್ ನ ಸ್ವಾತಂತ್ರ್ಯಕ್ಕಾಗಿ ಹೋರಾಡದೆ, ಇಡೀ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಇವರು ತಮ್ಮ ಜೀವನದ ಬಹಳಷ್ಟು  ಸಮಯವನ್ನು ಜರ್ಮನಿಯಲ್ಲಿ ಕಳೆದರೂ ಪೋಲೆಂಡ್ ನವಸಮಾಜವಾದಿ ಪ್ರಭುತ್ವದ ಮುಖ್ಯ ಚಿಂತಕರಾಗಿದ್ದರು  ಮತ್ತು ಪ್ರಮುಖ ಸಂಘಟನಾಕಾರರಾಗಿದ್ದರು. 
ಇವರಿಗೆ ಜರ್ಮನಿಗೆ ಹೋಗಲು ಅವಕಾಶವಿರಲಿಲ್ಲ. ಅದಕ್ಕಾಗಿ ಇವರು ತಮ್ಮ ಹಳೆಯ ಸ್ನೇಹಿತನ ಮಗನಾದ ಗುಸ್ಟಾವ್ ಲುಬೇಕ್ ರವರನ್ನು 1897ರಲ್ಲಿ ವಿವಾಹವಾಗಿ ಜರ್ಮನಿಯ ಪ್ರಜೆಯಾದರು. ಆದರೆ ಅವರೊಂದಿಗಿರಲಿಲ್ಲ.  5 ವರ್ಷದ ನಂತರ ವಿಚ್ಛೇದನೆಯನ್ನು ಪಡೆದುಕೊಂಡರು.
ಜರ್ಮನಿಯ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದಲ್ಲಿ ಕ್ಲಾರಾರವರನ್ನು ಭೇಟಿಯಾದರು. ಇಬ್ಬರು ಒಟ್ಟಿಗೆ ಸೇರಿ ಸಂಘಟನೆ ಕಾರ್ಯಗಳಲ್ಲಿ ತೊಡಗಿದರು. ಇವರಿಬ್ಬರ ಗೆಳೆತನ ಜೀವನಪರ್ಯಂತ ಉಳಿಯಿತು. ಇವರು ಜರ್ಮನಿಯಲ್ಲಿ ಅಂತರರಾಷ್ಟ್ರೀಯತೆಯ ಆಧಾರದ ಮೇಲೆ ಸಮಾಜವಾದಿ ಚಿಂತನೆಯನ್ನು  ಬೆಳೆಸಿದರು. ಇವರು ಸಂಕುಚಿತ ರಾಷ್ರೀಯತೆಯನ್ನು ವಿರೋಧಿಸುತ್ತಿದ್ದರು. ಇವರ ಪ್ರಕಾರ 'ಕ್ರಾಂತಿ ಬದುಕಿನ ರೀತಿಯಾಗಿತ್ತು.' ಜರ್ಮನಿಯ ಪಕ್ಷದಲ್ಲಿ ಸುಧಾರಣಾವಾದಿ ಸಂಸದೀಯ ವಿಧಾನವನ್ನು ವಿರೋಧಿಸಿದರು. ಇವರು ಸಾಮಾಜಿಕ  ಕ್ರಾಂತಿಯನ್ನು ಎತ್ತಿಹಿಡಿದರು. ಬರ್ಲಿನ್ ಪಕ್ಷದ ತರಬೇತಿ ಕೇಂದ್ರದಲ್ಲಿ ಮಾರ್ಕ್ಸ್ ವಾದ ಮತ್ತು ಅರ್ಥಶಾಸ್ತ್ರವನ್ನು ಬೋಧಿಸುತ್ತಿದ್ದರು. 1900 ರಿಂದ ಯೂರೋಪಿನ ವರ್ತಮಾನ ಪತ್ರಿಕೆಗಳಲ್ಲಿ ಸಮಕಾಲೀನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು  ವಿಶ್ಲೇಷಿಸುತ್ತಿದ್ದರು. 1904 ರಿಂದ 1906 ರವರೆಗೆ ಇವರು ನಡೆಸುತ್ತಿದ್ದ  ರಾಜಕೀಯ ಚಟುವಟಿಕೆಗಳಿಂದ 3 ಬಾರಿ ಬಂಧಿಯಾಗಿದ್ದರು.
1910
ರಲ್ಲಿ ಕ್ಲಾರಾ ಜೆಟ್ಕಿನ್ ರವರೊಡನೆ ಸೇರಿ 2ನೇ ಅಂತರರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಆಗ್ರಹಿಸಿಪ್ರತಿ ವರ್ಷ ಮಾರ್ಚ್ 8 ನ್ನು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ಪ್ರಸ್ತಾಪಿಸಿದರು.
1914
ರಲ್ಲಿ ಯೂರೋಪಿನ ಎಲ್ಲಾ ಕಾರ್ಮಿಕ ಪಕ್ಷಗಳು ಜೊತೆಗೂಡಿ ಯುದ್ಧವನ್ನು ನಿಲ್ಲಿಸಲು ಕರೆ ನೀಡಿದವು. ಇದನ್ನು ಎಲ್ಲಾ ಪಕ್ಷಗಳು ಅಂಗೀಕರಿಸಿದವು. ಇವರು ಫ್ರಾಂಕ್ ಫರ್ಟ್ ನಲ್ಲಿ ಬಹಿರಂಗವಾಗಿ ಯುದ್ಧ ವಿರೋಧಿ ಪ್ರತಿಭಟನೆಗಳನ್ನು ಪ್ರದರ್ಶಿಸಿದರು. ಇವರನ್ನು ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಬಂಧಿಸಲಾಯಿತು. 1917 ನವೆಂಬರ್ 8 ರಂದು ಬಿಡುಗಡೆ ಮಾಡಲಾಯಿತು. ರೋಸಾ ಮತ್ತು ಲೆಬ್ನೆಕ್ಟ್ ಇಬ್ಬರು ಸೇರಿ ಸ್ಪಾರ್ಟಕಸ್ ಲೀಗ್ ನ್ನು ಪುನರಾರಂಭಿಸಿದರು. ಮತ್ತು  1917 ರಲ್ಲಿ "red flag" ಪತ್ರಿಕೆಯನ್ನು ಪ್ರಾರಂಭಿಸಿದರು.
1919
ಜನವರಿಯಲ್ಲಿ ಬರ್ಲಿನ್ ನಲ್ಲಿ ಎರಡನೆಯ ಕ್ರಾಂತಿಯ ಅಲೆ  ಪ್ರಾರಂಭವಾಯಿತು. ಇದರಲ್ಲಿ ರೋಸಾ ಮತ್ತು ಲೆಬ್ನೆಕ್ಟ್ ಇಬ್ಬರು ಸಕ್ರಿಯವಾಗಿ  ಭಾಗವಹಿಸತೊಡಗಿದರು. ಪರಿಣಾಮವಾಗಿ ಇಬ್ಬರನ್ನು 1919ರ ಜನವರಿಯಲ್ಲಿ ಬಂಧಿಸಲಾಯಿತು. ರೋಸಾರವರನ್ನು ನಗ್ನಗೊಳಿಸಿ ಹಿಂಸಿಸಲಾಯಿತು. ತಲೆ ಎತ್ತಿ ನಿಂತ ರೋಸಾರವರನ್ನು ಭೀಕರವಾಗಿ 
ಕೊಲ್ಲಲಾಯಿತು. ಅವರ ದೇಹವನ್ನು ಬರ್ಲಿನ್ ನ ಕಾಲುವೆಗೆ ಬಿಸಾಕಲಾಯಿತು. ಲೆಬ್ನೆಕ್ಟ್ ರವರಿಗೂ ಹಿಂಸೆ ನೀಡಿ ಕೊಂದು ಶವವನ್ನು  ಬಿಸಾಕಲಾಯಿತು. ಆದರೆ 1919 ಜೂನ್ 1 ರಂದು ಇವರ ದೇಹಗಳನ್ನು ಪತ್ತೆ ಹಚ್ಚಿ ಗುರುತಿಸಲಾಯಿತು.  ಇಬ್ಬರನ್ನು ಬರ್ಲಿನ್ ನ ಫ್ರೆಡರಿಕ್ ಫೆಲ್ಡೆ  ಕೇಂದೀಯ ರುದ್ರಭೂಮಿಯಲ್ಲಿ ಊಳಲಾಯಿತು. ಪ್ರತಿ ವರ್ಷ ಜನವರಿ ಎರಡನೆ ಭಾನುವಾರವನ್ನು, ಸಮಾಜವಾದಿ ಕಮ್ಯೂನಿಸ್ಟರು ಇವರ ಸಂಸ್ಮರಣ ದಿನವನ್ನಾಗಿ ಆಚರಿಸುವರು.
   ರೋಸಾ ಮರಣದ ನಂತರ ಪೂರ್ವ ಜರ್ಮನಿಯಲ್ಲಿ ಹಲವಾರು ರಸ್ತೆಗಳಿಗೆ ಮತ್ತು ಪಾರ್ಕ್ ಗಳಿಗೆ ಇವರ ಹೆಸರನ್ನಿಡಲಾಗಿದೆ. ಪೋಲೆಂಡ್ ನ ಕಾರ್ಖಾನೆಯೊಂದಕ್ಕೆ ಇವರ ಹೆಸರನ್ನಿಡಲಾಗಿದೆ. ಖ್ಯಾತ ಕವಿ ಬರ್ಟೋಲ್ಟ್ ಬ್ರೆಟ್ ಇವರ ಗೌರವಾರ್ಥ ಕವನವನ್ನು ಬರೆದಿದ್ದಾರೆ. ಲುಕ್ಸೆಂಬರ್ಗ್ ನಲ್ಲಿ ಇವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. 1986 ರಲ್ಲಿ ಜರ್ಮನಿಯಲ್ಲಿ ರೋಸಾ ಲುಕ್ಸೆಂಬರ್ಗ್ ಎಂಬ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ.
ಇವರ ಪ್ರಮುಖ ಕೃತಿಗಳೆಂದರೆ ಬಂಡವಾಳದ ಕ್ರೋಢೀಕರಣ, ಸಮಗ್ರ ಕೃತಿಗಳು, ಸಮಗ್ರ ಪತ್ರಗಳುರಾಜಕೀಯ ಕೃತಿಗಳು ಮೊದಲಾದವುಗಳು.

   - ವಿಜಯಲಕ್ಷ್ಮಿ ಎಂ ಎಸ್