Tuesday 7 March 2017

ಕವನ,- ತನ್ನ ತಾ ಕಾಣಲು



ಆಯಾಸದಿ ಲಕುಮಿ ಎದ್ದು ನೋಡಲಲ್ಲಿ
ಮಲಗಿತ್ತು ಮಗುವು ಮಗ್ಗಲಲ್ಲಿ
ಹಸಿವಿನಿಂದ ಅತ್ತು ಅತ್ತು
ಕಂದ ನಿಸ್ತೇಜವಾಗಿತ್ತು
ಕಂದನ್ನ ಕಂಡ ಹೆತ್ತ ಕರುಳು
ನುಂಗಿಕೊಂಡಿತ್ತು ತನ್ನ ಅಳು

ಕಂಕುಳಲ್ಲಿ ಏರಿಸಿ ಕಂದನ
ಹೊರಟಳರಸಿ ಲಕುಮಿ ಕೆಲಸವ
ಸುತ್ತಿ ಸುತ್ತಿ ಸುಸ್ತಾಗಿತ್ತು
ಆಘಾತ ಅವಳಿಗೆ ಕಾದಿತ್ತು

ಮನೆಯೊಡೆಯನ ಹಸಿವನೀಗಿಸಲೆ?
ಕಂದನ ಹಸಿವನಿಂಗಿಸಲೆ?
ಮಾಡುವುದು ಏನು? ದಾರಿ ಇರುವುದಾದರೂ ಏನು?

ಒಲ್ಲೆನೆಂದರೆ ಕಂದ ಉಳಿಯುವುದಿಲ್ಲ
ಮಗುವಿಲ್ಲದಿರೆ
ನಾ ಬದುಕುಳಿಯುವುದಿಲ್ಲ
ಯಾವುದು ಸರಿ? ಯಾವುದು ತಪ್ಪು?

ಲಕುಮಿ ನೂರು ಬಾರಿ ತನ್ನನ್ನೇ ಕೇಳಿಕೊಂಡಳು
ಮಾಡಬೇಕು ಏನನ್ನು, ನಿರ್ಧರಿಸದಾದಳು

ಹೆಣ್ಣಿನ ನೋವ ಅರ್ಥ ಮಾಡಿಕೊಳ್ಳದ ಜಗವಿದು
ಹೆಣ್ಣಿನ ಮನಸ ಅರಿಯದ ಪ್ರಪಂಚವಿದು
ಇಲ್ಲಿ ಬದುಕಬೇಕಾದರೆ ಗಟ್ಟಿ ಮನಸು ಬೇಕು
ತುಚ್ಛ ಜನರ ಮೆಟ್ಟಿ ನಿಂತು ಮುನ್ನಡೆಯಬೇಕು
ನಾ ಬದುಕಬೇಕು ಇಂದು
ನಾ ಬಾಳಬೇಕು ಮುಂದೂ.

ದೃಢ ನಿಶ್ಚಯದಿಂದ
ಮುಂದೆ ಹೆಜ್ಜೆ ಇಟ್ಟು ನಡೆದಳು
ಕೊಳೆ ಬಾಳನು ಒದ್ದು ದಿಟ್ಟ ಹೆಜ್ಜೆ ಇಟ್ಟಳು
ತನ್ನ ತಾ ಕಾಣಲು

ಮತ್ತೆ ತನ್ನ ತಾ ಕಾಣಲು!!
- ಗಿರಿಜಾ ಕೆ ಎಸ್ 

No comments:

Post a Comment