ತೊದಲು ನುಡಿಗಳ ಆಡುತ್ತಿದ್ದಳು
ಬೊಂಬೆಗಾಗಿ ಜಗಳಾಡುತ್ತಿದ್ದಳು
ಈಗ ಸಿಡಿನುಡಿಗಳ ಆಡುತಾಳೆ
ನ್ಯಾಯಕಾಗಿ ಹೋರಾಡುತಾಳೆ
ಸಣ್ಣ ನೋವಿಗೂ ಸುಳ್ಳು ಏಟಿಗೂ
ಭಯದಿಂದ ಅಳುತ್ತಿದ್ದವಳು
ಈಗ ಪರರ ನೋವರಿತು
ಅವರ ಕಂಬನಿ ಒರೆಸುತ್ತಾಳೆ
ಬರೆಯಲಾರೆ ಅರಿಯಲಾರೆ
ಇನ್ನು ಶಾಲೆಗೆ ಹೋಗಲಾರೆ ಎನ್ನುತ್ತಿದ್ದಳು
ಈಗ ತಾ ಕಲಿತದನ್ನು ಇತರರಿಗೂ ಹೇಳುತ್ತಾಳೆ
ಅರಿವು ಮೂಡಿಸಿ ದಾರಿ ತೋರುತ್ತಾಳೆ
ನಿನ್ನೆ ಕತ್ತಲೆಗೆ ಅಂಜುತ್ತಿದ್ದಳು
ಇಂದು ಕತ್ತಲೆ ಮೀರಿ ಬೆಳಕು ಹರಡುತ್ತಾಳೆ
ನಿನ್ನೆ ನಮ್ಮ ಮನೆಯ ಮುದ್ದು ಮಗಳು
ಇಂದು ಎಲ್ಲರ ಮನೆಮಗಳಾಗಿ ಬಿಟ್ಟಿದ್ದಾಳೆ.
- ಡಾ. ಸುಚೇತಾ ಪೈ
No comments:
Post a Comment