Tuesday 18 July 2017

PROGRAM - Workshop in Tumkur University

On 14th and 15th July, 2017 the Women Studies Centre of Tumkur University and Samruddhi Foundation, Mysore 
jointly conducted two days workshop.




Prof Indira R addressing the gathering





From left to right - Prof Rameshwari Verma, Prof Indira R, Dr. Venkateshwaralu, Prof Maitreyee Krishnaraj, Ms. Girija K S




Ms Girija K S, Co-ordinator, Women Studies Centre addressing the workshop

ಆರೋಗ್ಯ - ಹಣ್ಣೆಲೆಗಳು - 5

ಅಧ್ಯಾಯ - 5
ಋತುಬಂಧದ ಸಮಯದಲ್ಲಾಗುವ ಮಾನಸಿಕ ಬದಲಾವಣೆಗಳು

ಋತುಬಂಧದ ಸಮಯದಲ್ಲಿ ಕೌಟುಂಬಿಕ, ಸಾಮಾಜಿಕ ಹಾಗೂ ಔದ್ಯೋಗಿಕ ರಂಗಗಳು ಕೂಡ ಮುಖ್ಯವಾದ ಬದಲಾವಣೆಗಳಿಂದ ಕೂಡಿರುತ್ತವೆ. ದೈಹಿಕ ತೊಂದರೆಗಳ ಜೊತೆಗೆ ಈ ಬದಲಾವಣೆಗಳು ಕೂಡ ನಿಮ್ಮ ಮನಸ್ಸಿನ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ.

ಖಿನ್ನತೆ (Depression)

ಶೇಕಡ 78 ಮಹಿಳೆಯರಲ್ಲಿ ಕಂಡುಬರುವ ತೊಂದರೆಯೆಂದರೆ ಖಿನ್ನತೆ. ಋತುಬಂಧದ ಆಸುಪಾಸಿನಲ್ಲಿ ಆಗುವ ತೊಂದರೆಗಳನ್ನು ‘ಸ್ಯಾಂಡ್‍ವಿಚ್ ಜನರೇಶನ್ ಪೆನಾಮೆನನ್’(Sandwitch Generation phenomenonಎ0ದು ಕರೆಯುತ್ತೇವೆ. ಈ ಸಮಯದಲ್ಲಿ ಮಕ್ಕಳು ಪ್ರಬುದ್ಧರಾಗಿ ಮದುವೆಗೆ ಸಿದ್ಧರಾಗಿರುತ್ತಾರೆ. ಹೆಣ್ಣು ಮಕ್ಕಳಿದ್ದರಂತೂ ಅವರಿಗೆ ಒಳ್ಳೆ ಮನೆ ಸಿಗಬೇಕು, ಒಳ್ಳೆ ಗಂಡು ಸಿಗಬೇಕು ಮತ್ತು ವರದಕ್ಷಿಣೆ ಕೊಡಬೇಕಾಗಬಹುದು ಎಂಬ ಆತಂಕ. ಗಂಡು ಮಕ್ಕಳಾದರೆ ಒಳ್ಳೆ ಕೆಲಸ ಸಿಗಬೇಕು, ಕೈ ತುಂಬಾ ಸಂಬಳ ಬರಬೇಕು ಮದುವೆಯಾದ್ರೆ, ಒಳ್ಳೆ ಸೊಸೆ ಬರಬೇಕು, ಬರುವ ಸೊಸೆ ಹೇಗಿರುವಳೋ  ಎನೋ ಎಂಬೆಲ್ಲಾ ಚಿಂತೆ. ಮಗನನ್ನು ತನ್ನಿಂದ ಸೊಸೆ ಕಿತ್ತುಕೊಂಡರೆ ಎಂಬ ಚಿಂತೆ. ವಯಸ್ಸಾದ ತಂದೆ ತಾಯಿಯಂದಿರಿದ್ದರೆ ಅವರನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ. ಅತ್ತೆ ಮಾವಂದಿರು ಮನೆಯಲ್ಲಿದ್ದರೆ ಅವರ ಸೇವೆ ಮಾಡಬೇಕಾಗುತ್ತದೆ ಇವರು ವಯಸ್ಸಾದವರಾದ್ದರಿಂದ ಅವರಿಗೆ ಕಾಯಿಲೆಗಳು ಒಂದಲ್ಲ, ಒಂದು ಇದ್ದೇ ಇರುತ್ತದೆ. ಆಗ ಅವರನ್ನು ನೋಡಿಕೊಳ್ಳುವ ಒತ್ತಡ ಹೆಚ್ಚಾಗುತ್ತದೆ.
    
ಇನ್ನೂ ಕೆಲಸಕ್ಕೆ ಹೋಗುವ ಮಹಿಳೆಯರಲ್ಲಿ, ಹೊರಗಡೆ ಕೆಲಸದಲ್ಲೂ ಹಾಗೂ ಮನೆಯಲ್ಲೂ ಎರಡೂ ಕಡೆ  ಹೆಚ್ಚಿನ ಕೆಲಸ ಹಾಗೂ ತೀವ್ರ ಮಾನಸಿಕ  ಒತ್ತಡ ಇದ್ದೇ ಇರುತ್ತದೆ.

ಆರ್ಥಿಕ ಅಭದ್ರತೆ
ಮದುವೆಗೆ ಬಂದ ಹೆಣ್ಣು ಮಕ್ಕಳ ಮದುವೆ ಮಾಡುವುದು, ವರದಕ್ಷಿಣೆ, ಮದುವೆ ಖರ್ಚು. ಮಗ ನಿರುದ್ಯೋಗಿಯಾಗಿದ್ದರೆ ಅವನನ್ನೂ ಸಾಕಬೇಕಾದ ಅನಿವಾರ್ಯತೆ.
ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರು ಮನೋವೈದ್ಯರ ಬಳಿಗೆ ಹೋಗಿ ಸಲಹೆ ಸೂಚನೆ ಪಡೆಯಬೇಕಾಗುತ್ತದೆ.

ಖಾಲಿಯಾದ ಗೂಡು (Empty Nest Syndrome)
ಮಕ್ಕಳು ದೊಡ್ಡವರಾಗಿ, ಮದುವೆ ಇಲ್ಲವೇ, ಕೆಲಸದ ನಿಮಿತ್ತ ಮನೆಯಿಂದ ಹೊರಗುಳಿಯುವುದು
ತಂದೆತಾಯಿಯರು, ಅತ್ತೆ ಮಾವಂದಿರು ಮರಣ ಹೊಂದಿರುವುದು
ಗಂಡನನ್ನು ಕಳೆದುಕೊಳ್ಳುವುದು
ಗಂಡ ಇದ್ದರೂ ಪ್ರೀತಿಯ ಕೊರತೆ
ಸಾಮಾಜಿಕವಾಗಿ ಒಂಟಿತನದ ಅನುಭವ

ಇತರ ಮಾನಸಿಕ ತೊಂದರೆಗಳು
ಬಹುಬೇಗ ಕಿರಿಕಿರಿಯಾಗುವುದು
ಎಲ್ಲದ್ದಕ್ಕೂ ಸಿಡುಕುವುದು
ಮನೋಸ್ಥಿತಿಯ ತೊಯ್ದಾಟ
ತನ್ನನ್ನೂ ಯಾರು ಪ್ರೀತಿಸುವುದಿಲ್ಲ ಎಂಬ ಆತಂಕ
ಸಾವಿನ ಬಗ್ಗೆ, ಮುಪ್ಪಿನ ಬಗ್ಗೆ ಭಯ
ತನ್ನ ಸೌಂದರ್ಯ ಕುಂದಿದೆ ಎಂಬ ಚಿಂತೆ
ಲೈಂಗಿಕ ನಿರಾಸಕ್ತಿ
ತಲೆನೋವು 
ಎದೆಬಡಿತ ಹೆಚ್ಚಾಗುವುದು.

ಶೇಕಡ 92 ಮಹಿಳೆಯರು ಸಣ್ಣ ಪುಟ್ಟ ವಿಷಯಕ್ಕೆ ಸಹನೆ ಕಳೆದುಕೊಂಡು ಎಲ್ಲರ ಮೇಲೆ ಕೂಗಾಡುವುದನ್ನು ಕಾಣಬಹುದು. ಶೇಕಡ 75 ಮಂದಿಯಲ್ಲಿ ತಲೆನೋವು ಬರಬಹುದು, ದೃಷ್ಟಿದೋಷದಿಂದಲ್ಲ ಎನ್ನುವುದಕ್ಕೆ ನೇತ್ರ ವೈದ್ಯರ ಬಳಿ ಪರೀಕ್ಷಿಸಿ ಕನ್ನಡಕ ಬೇಕಾದರೆ ಮಾಡಿಸಿಕೊಳ್ಳಿ.

ಶೇಕಡ 64 ಮಂದಿಯಲ್ಲಿ ಮರುಗುಳಿತನ ಕಾಣಿಸಿಕೊಳ್ಳುತ್ತದೆ. ಹೆಸರುಗಳನ್ನು ಮರೆಯುವುದು, ಮನೆಯಲ್ಲಿಟ್ಟ ವಸ್ತುಗಳನ್ನು ಎಲ್ಲಿಟ್ಟಿದ್ದೇವೆಂದು ಮರೆಯುವುದು, ಅಂಗಡಿಗೆ ಹೋದಾಗ ಬೇಕಾಗುವ ವಸ್ತು ನೆನಪಾಗದಿರುವುದು, ಈ ಸಮಯದಲ್ಲಿ ಸಾಮಾನ್ಯ ಸಮಸ್ಯೆ.

ಶೇಕಡ 50 ಮಂದಿಯಲ್ಲಿ ನಿದ್ದೆ ಇಲ್ಲದಿರುವುದು ಕೂಡ ಒಂದು ಸಾಮಾನ್ಯ ಸಮಸ್ಯೆ ರಾತ್ರಿ ಸೆಖೆಯಾಗಿ ಏಳುವುದು, ಮೂತ್ರ ವಿಸರ್ಜನೆಗೆಂದು ಎದ್ದು ನಂತರ ನಿದ್ರೆ ಬಾರದೇ ಹೋಗುವುದು. ಮರುದಿನ ಸುಸ್ತಾಗುವುದು ಕೆಲಸ ಮಾಡಲು ಆಗದೇ ಇರಬಹುದು.

ಕಾರಣವಿಲ್ಲದೆ ಆಗಾಗ ಆಳುವುದು ಕೂಡ ಒಂದು ಸಾಮಾನ್ಯ ಸಮಸ್ಯೆ. ಕಣ್ಣಿನ ತುದಿಯಲ್ಲಿ ನೀರು ಯಾವಾಗಲು ಇರುವುದು. ಸಣ್ಣ ಪುಟ್ಟ ವಿಷಯಕ್ಕೆ ಅಳುವುದು. ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು ಕೂಡ ಈ ಸಮಯದಲ್ಲಿ ಕಾಡುವ ಒಂದು ಸಮಸ್ಯೆ.

ಉದ್ವಿಗ್ನತೆ (anxiety):

 ಉದ್ವಿಗ್ನತೆ ಋತುಬಂಧದ ಆಸುಪಾಸಿನಲ್ಲಿ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಮಾನಸಿಕ ಸ್ಠಿತಿ. ಪ್ರತಿ ಸಣ್ಣ ವಿಷಯವನ್ನು ದೊಡ್ಡದಾಗಿ ಮಾಡಿಕೊಳ್ಳುವುದು. ರಸದೂತಗಳ ಪ್ರಮಾಣದ ಏರುಪೇರಿನಿಂದಾಗಿ ಎಲ್ಲ ವಿಷಯಗಳಲ್ಲೂ ಉದ್ವಿಗ್ನತೆಗೊಳಗಾಗುವುದು ಸಾಮಾನ್ಯವಾಗಿ ಕ0ಡುಬರುತ್ತದೆ.

  - ಡಾ ಪೂರ್ಣಿಮಾ. ಜೆ      

ಕವನ - ಗೃಹಿಣಿಯ ಸ್ವಗತ



ನನಗೆ ಹೆಸರಿಲ್ಲ . . . . ಬರೀ ಪಾತ್ರಗಳು . . .
ರೆಕ್ಕೆ ಬಿಚ್ಚುವ ಮೊದಲೇ
ಮದುವೆಯ ಸಂಕೋಲೆ,
ತೌರ ನಂಟ ಕಳಚಿ, ಹೊಸ ಬಂಧಗಳಲಿ
ನನ್ನವರ ಹುಡುಕುವ ಒತ್ತು;

ಕೈಹಿಡಿದವನ ಮನವರಿವ ಮುನ್ನ
ಕೈಗೆರಡು ಕಂದಮ್ಮಗಳು
ಮನೆಯ ನಿತ್ಯ ದಿನಚರಿ ಆರಂಭ,
ಅಂತ್ಯ, ಎಲ್ಲಾ ನನ್ನಿಂದಲೆ;

ಆದರೆ . . . . ಕೊನೆಗೆ ಉಳಿಯುವುದು ಬರೀ ತಂಗಳನ್ನ,
ನನ್ನ ಪ್ರಪಂಚದಲಿ ಪ್ರಶಸ್ತಿ ಗರಿಗಳಿಲ್ಲ,
ನನ್ನವರ ಗೆಲುವು ನನ್ನದೆಂಬ ಹೆಮ್ಮೆ
ಆದರೆ . . . ನನ್ನ ಸೋಲು ಕೇವಲ ನನ್ನದೇ;

‘ನಾನು ದುಡಿಯಲೇ ಹೊರಗೆ?’ ಎಂದರೆ,
‘ನಿನಗೇಕೆ ಊರ ಉಸಾಬರಿ, ಮನೆ
ಸಂಭಾಳಿಸು, ಅಷ್ಟೇ ಸಾಕು ಹೆಣ್ಣಿಗೆ,
ಲೌಕಿಕ ವಿಚಾರದಡಿ ತುಟಿ ತೆರೆದರೆ,
ನಿನಗೆ ಪ್ರಪಂಚ ಜ್ಞಾನವಿಲ್ಲ,
ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ, ಸುಮ್ಮನಿರು;

ಅವಕಾಶ ಬೇಕು ನನಗೆ ಜಗವರಿಯಲು,
ಎರಡು ಮಾತಾಡಲು,
ಅದಿಲ್ಲದೆ ತೋರಿಸಲು ಬರೀ ಸೀರೆ ಆಭರಣಗಳು,
ಗಂಡನ ದಾಹ ತೀರಿದರೂ ನನ್ನ ಅತೃಪ್ತ
ಬಯಕೆಗಳು ನಿರಂತರ ಸುಪ್ತ,
ಮನೆಯೊಳಗಿನ ಅತ್ಯಾಚಾರಗಳ ಹೇಳಿಕೊಂಡವರ್ಯಾರು?

ನನ್ನ ಸೋಲಿಗೆ ಬೈಗುಳದ ಸುರಿಮಳೆ,
ಆದರೆ . . . ಹೊರಗಿನ ಜಂಜಾಟಕ್ಕೆ ಬೇಕು
ನನ್ನ ಸಮಾಧಾನ;
ಸಂಬಳ ರಜೆ ನನಗನ್ವಯವಿಲ್ಲ;

ಒಂದು ಧನ್ಯವಾದವೂ ಇಲ್ಲ, ಕೊನೆಗೆ
ಶತಮಾನದಿಂದಲೂ ಜಗದ ಕಿರೀಟ ತೊಟ್ಟ
ಪುರುಷನ ಹಿಂದೆ ಹೆಣ್ಣಿನ ನಿಟ್ಟುಸಿರು,
ತ್ಯಾಗಗಳಿರಬಹುದಲ್ಲವೇ?
ಲೋಕವಿಟ್ಟ ಹೆಸರು ‘ಆದರ್ಶ ಗೃಹಿಣಿ’
ನಡೆದ ದಾರಿ ತಿರುಗಿ ನೋಡಿದರೆ . . . . ಬರೀ ಸೊನ್ನೆ. .

-     ಜ್ಯೋತಿ    

Monday 17 July 2017

ಪುಟ್ಕಥೆಗಳು -


ಯಾವಾಗಲೂ ಮಂಕಾಗಿರುತ್ತಿದ್ದ ಮಡದಿಯನ್ನು "ಯಾಕ್ಹೀಗೆ, ನಿನಗೇನು ಕಡಿಮೆಯಾಗಿದೆ? ನೀ ಕೇಳಿದ್ದನೆಲ್ಲಾ ಕೊಡಿಸುತ್ತೀನಲ್ಲ" ಎಂದನು ಕೋಪದಿಂದ ಗಂಡ.  "ಎಲ್ಲಾ ಅತಿಯಾಗಿರುವುದೆ ಕಾರಣ" ಎಂದಳವಳು!!!


"ಎಲ್ಲರೊಡನೆ ಹೊಂದಿಕೊಂಡು ಹೋದರೆ ಬದುಕು ಸೊಗಸು"ಎಂದು ಮೊಮ್ಮಗಳಿಗೆ ಹೇಳಿದಳು ಅಜ್ಜಿ.  "ಇದನ್ನು ನಿನ್ನ ಮಗನಿಗೂ ಕಲಿಸಿದ್ದರೆ  ನನ್ನಮ್ಮನೂ ಇದೇ ಮನೆಯಲ್ಲಿರುತ್ತಿದ್ದಳು ನೊಂದು ನುಡಿದಳವಳು!!


"ತಪ್ಪು ಮಾಡಲು ಅವಕಾಶ ಕೊಡುವುದೂ ಒಂದು ದೊಡ್ಡ ತಪ್ಪು" ಎಂದ ಗೆಳತಿಯ ಮಾತಿನಿಂದ ಎಚ್ಚೆತ್ತು, ಇದುವರೆವಿಗು ಮೇಲಧಿಕಾರಿಯ ಕಿರುಕುಳವನ್ನು ಮೌನವಾಗಿ ಸಹಿಸಿ ಸಾಕಾಗಿದ್ದ ಅವಳು, ಅವನನ್ನು ಎದುರಿಸಲು ಸಜ್ಜಾದಳು!!


"ಗೊತ್ತಿದ್ದು ತಪ್ಪು ಏಕೆ ಮಾಡಿದೆ? ಮನೆಗೆ ತಡವಾಗಿ ಬಂದರೆ ಅಪ್ಪ ಬೈಯುತ್ತಾರೆ ಅಂತ ಗೊತ್ತಿಲ್ಲವಾ?" ಕೇಳಿದಳು ಮಗಳನ್ನು. "ಅಮ್ಮ, ಆದರೆ ಗೊತ್ತಿದ್ದೂ ದಿನಾ ಕುಡಿದು ತಡವಾಗಿ ಮನೆಗೆ ಬರುತ್ತಿದ್ದಾರಲ್ಲ ಅಪ್ಪ, ಅದು ಸರೀನಾ?" ಕೇಳಿದ ಅಲ್ಲೇ ಇದ್ದ ಮಗ!!


“ಹಿರಿಯರನ್ನು ಏಕೆ ರೇಗಿಕೊಂಡೆ, ನೀನು ನಡೆದುಕೊಂಡು ರೀತಿ ಸರೀನಾ? ಮಗಳನ್ನು ಪ್ರಶ್ನಿಸಿದಳು ಅಮ್ಮ. "ನೀತಿ ಬಿಟ್ಟು ನಡೆದ ಅವರಿಗೆ ಗೌರವ ಕೊಡಬೇಕಾ, ನೀನೆ ಹೇಳು" ಎಂದಳು ಮಗಳು.


ಪದೇ ಪದೇ ತುಳಿತಕ್ಕೆ ಒಳಗಾದ ಅವಳು ದಾರಿಕಾಣದೆ ಕುಳಿತ್ತಿದ್ದಳು. ಮಗಳು "ಉಳಿವಿಗಾಗಿ ಹೋರಾಟ" ಎಂದು ಓದುತ್ತಿದ್ದನ್ನು ಕೇಳಿ  ಎದ್ದು ನಿಂತಳು!!!


ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದ ಆಕೆ, ಗೆಳತಿಗೆ ಹೇಳಿದಳು "ಪ್ರೀತಿಗೆ ಬೆಲೆ ಕಟ್ಟಲಾಗದು." ಆದರೆ  ಬೆಲೆ ಕಟ್ಟಿಯೇ ಬಿಟ್ಟ ಆಕೆಯ ದತ್ತು ಮಗ!!


ಗಂಡ ಮತ್ತು ಮೈದುನಂದಿರ ದರ್ಪ, ದೌರ್ಜನ್ಯದಿಂದ ಬೇಸರಗೊಂಡು  ಸಾಯಲು ನಿರ್ಧರಿಸಿದಳು ಅವಳು. "ನಿನ್ನ ಮಗಳ ಗತಿಯೇನು? ಅವಳೂ ನಿನ್ನಂತಾಗಬೇಕೆ?" ಪ್ರಶ್ನಿಸಿದಳು ಗೆಳತಿ.  ತನ್ನ ನಿಲುವನ್ನು ಬದಲಿಸಿಕೊಂಡ ಆಕೆ ಪ್ರತಿಭಟಿಸಲು ತಯಾರಾದಳು!! 


"ನನ್ನನ್ನು ನಂಬು ನಾನು ಏನೂ ತಪ್ಪು  ಮಾಡಿಲ್ಲ " ಎಂದು ಎಷ್ಟು  ಹೇಳಿದರೂ ಕೇಳುತ್ತಿರಲಿಲ್ಲ ಅವಳನ್ನು, ಮದುವೆಯಾಗಬೇಕಿದ್ದ ಹುಡುಗ." ನಂಬಿಕೆಯೇ ಇಲ್ಲ ಎಂದ ಮೇಲೆ ಮದುವೆ ಏಕೆ?" ಅವನನ್ನು ಬಿಟ್ಟು ಹೊರಟಳವಳು!!


"ಯಾವತ್ತೂ  ಎದುರುತ್ತರ ಕೊಡದಿದ್ದವಳು ಇಂದೇಕೆ ಈ ರೀತಿ ಮಾತನಾಡುತ್ತಿರುವೆ?" ಕೇಳಿದ ಗಂಡ ಮಡದಿಯನ್ನು ಕೋಪದಿಂದ.  "ಬದಲಾವಣೆ ಈ ಲೋಕದ ನಿಯಮ, ನಾನೂ ಅದರಲೊಬ್ಬಳಲ್ಲವೇ?" ಕೇಳಿದಳು!!"



 - ವಿಜಯಲಕ್ಷ್ಮಿ ಎಂ ಎಸ್      

Sunday 16 July 2017

ಅನುವಾದಿತ ಕವಿತೆ - ಎವೆಲಿನ್ ರೋಸಳ ದಂತಕಥೆ


ವಸಂತ ಬಂದಾಗ, ಕಡುನೀಲಿ ಕಡಲಾದಾಗ
ಬಡಿಯುತ್ತಿತ್ತು ಮೃದು ಹೃದಯ ವೇಗದಿಂದಾಗ
ಹಡಗನೇರಿ ಬಂದಳು ಕಡೆಯ ದೋಣಿಯಲಿಳಿದವಳು
ಎವಲಿನ್ ರೋಸ ಎನ್ನುವ ಹುಡುಗಿಯೊಬ್ಬಳು 

ಚರ್ಮದ ಮೇಲೆ ಹೊದೆದಿದ್ದಳು, ಮೆರುಗು
ಕೂದಲ ಧಿರಸು; ದಿವ್ಯ ಸೌಂದರ್ಯ ಅದಕೆ.
ಚಿನ್ನವಿಲ್ಲ, ಆಭರಣವಿಲ್ಲ, ಮೈಮೇಲೆ; ಅಚ್ಚರಿಯ
ವೇಣಿಯ ಹೊರತು ಇಲ್ಲ ಬೇರೆ ಹೊದಿಕೆ.

“ಹೊ, ಕ್ಯಾಪ್ಟನ್, ಕರೆದೊಯ್ಯಿ ನನ್ನನು,
ನಿಮ್ಮೊಂದಿಗೆ, ಪವಿತ್ರ ನಾಡಿಗೆ. ನಾನು
ಹೋಗಲೇಬೇಕು ಕ್ರಿಸ್ತನಿರುವೆಡೆಗೆ.”
“ಕರೆದೊಯ್ಯುತ್ತೇವೆ, ನಾವು ಪೆದ್ದರಲ್ಲವೆ,
ನೀನೊ ಚೆಲುವೆಯರಲ್ಲಿ ಬಲು ಚೆಲುವೆ.”

“ಬಹುಮಾನ ನೀಡುವನು ಆ ದೇವನು,
ಬಡವರಲ್ಲಿ ಬಲು ಬಡವಿ ನಾನು.
ನನ್ನಾತ್ಮ ಸೇರಿಹುದು ದೊರೆ ಕ್ರಿಸ್ತನಿಗೆ.”
“ನಿನ್ನ ಸವಿದೇಹವನ್ನೊಪ್ಪಿಸು ನಮಗೆ,
ನಿನ್ನ ದೇವ ಕೊಡಲಾರ ಹಡಗ ಬಾಡಿಗೆ;
ಅವನು ಸತ್ತು ಬಲು ಸಮಯವಾಯ್ತು ಅದಕೆ.”

ಮಳೆ ಗಾಳಿಯಲಿ ಪಯಣ ಬೆಳೆಸಿದರು,
ಪ್ರೀತಿಸಿದರೆಲ್ಲರೂ ಎವೆಲಿನ್ ರೋಸಳನು.
ಬ್ರೆಡ್ಡ ತಿಂದಳು, ಮದ್ಯ ಕುಡಿದಳು, ಎಲ್ಲ ಅವರದು;
ತಿಂದು ಕುಡಿದು ಅಳುತ್ತಿದ್ದಳು ಮುದ್ದು ರೋಸಳು.

ಹಗಲು ರಾತ್ರಿಯೆನ್ನದೆ ಕುಣಿಕುಣಿದರು
ಪ್ರೀತಿಸಿದರೆಲ್ಲರೂ ಎವೆಲಿನ್ ರೋಸಳನು.
ಬ್ರೆಡ್ಡ ತಿಂದಳು, ಮದ್ಯ ಕುಡಿದಳು, ಎಲ್ಲ ಅವರದು;
ತಿಂದು ಕುಡಿದು ಅಳುತ್ತಿದ್ದಳು ಮುದ್ದು ರೋಸಳು.

ಹಗಲು ರಾತ್ರಿಯೆನ್ನದೆ ಕುಣಿಕುಣಿದರು,
ಚುಕ್ಕಾಣಿಯನು ಅನಾಥ ಮಾಡಿದರು.
ಸವಿಯಾದವಳು, ಬಲು ಮೃದು ರೋಸ
ಅವರೋ, ಕಲ್ಲಿಗಿಂತ ಕಠಿಣರು.

ವಸಂತ ಕಳೆಯಿತು, ಬೇಸಗೆ ಹೋಯಿತು,
ಮಸುಕು ಬೆಳಕಲಿ, ಕೂವೆಯಿಂದ ಕೂವೆಗೆ 
ಹರಿದ ಶೂಗಳಲಿ, ರಾತ್ರಿಯಲ್ಲಿ ಓಡುತ್ತಿದ್ದಳು
ಶಾಂತ ಕಡಲ ತೀರವನ್ನು ಹುಡುಕುತ್ತಿದ್ದಳು.
ಪಾಪದ ಹುಡುಗಿ ಎವೆಲಿನ್ ರೋಸ.

ಹಗಲು ಕುಣಿದಳು, ರಾತ್ರಿ ಕುಣಿದಳು
ಜೀವವಿಲ್ಲ, ರೋಗಿಯಾದಳು.
‘ಓ ಕ್ಯಾಪ್ಟನ್, ಹೋಗುವುದೆಂದಿಗೆ
ನನ್ನ ದೊರೆಯ ಬಳಿಗೆ?’

ಅವಳ ತೊಡೆಯ ಮೇಲೆ ಮಲಗಿ ಕ್ಯಾಪ್ಟನ್
ಒಮ್ಮೆ ನಕ್ಕನು, ಮುತ್ತನೊಂದಿತ್ತನು.
“ನಾವಲ್ಲಿ ಸೇರದಿರೆ, ಕಾರಣ ಯಾರೆಂದು ಕೇಳಿದರೆ,
ಕಾರಣ ಅವಳೇ, ಆ ಎವೆಲಿನ್ ರೋಸಳೆ.”

ಹಗಲು ಕುಣಿದಳು, ರಾತ್ರಿ ಕುಣಿದಳು,
ಸಾಯುವುದಕೂ ಶಕ್ತಿಯಿಲ್ಲ.
ಕ್ಯಾಪ್ಟನಿಗಾಗಲಿ, ಯುವಕನಿಗಾಗಲಿ ಅವರೆಲ್ಲರಿಗೂ
ಅವಳೀಗ ರಸಹಿಂಡಿದ ಕಬ್ಬಿನ ಜಲ್ಲೆ.

ತನ್ನ ಚರ್ಮದ ಮೇಲೊಂದು ಹೊದ್ದಿದ್ದಳು
ಒಣಗಿ ಒರಟಾದ ರೇಷ್ಮೆ ಬಟ್ಟೆ,
ಅಂದಗೆಟ್ಟ ಹಣೆಯ ಮೇಲೆ ಸುತ್ತಿತ್ತು
ಕೊಳೆಯಾದ ಸಿಕ್ಕುಗಟ್ಟಿದ ಕೂದಲು.

“ಓ ನನ್ನ ದೊರೆಯೆ ಬರಲಾರೆ ನಿನ್ನ ಬಳಿ,
ನಿನಗೊಪ್ಪಿಸಲಾರೆ, ನನ್ನದು ಪಾಪಿಷ್ಠ ದೇಹ.
ಹಾಳು ಸೂಳೆಯ ಬಳಿ ಬರಬೇಡ
ನಾನೊಬ್ಬ ಪಾಪಿಷ್ಠ ಹೆಂಗಸು.”

ಕೂವೆಯಿಂದ ಕೂವೆಗೆ ಹಾರಿದಳು ಗಂಟೆಗಟ್ಟಲೆ
ಕಾಲು, ಹೃದಯಗಳೆರೆಡೂ ಹರಿದಿದ್ದವು.
ಯಾರೂ ನೋಡದಿದ್ದ ಒಂದು ರಾತ್ರಿ
ತನ್ನ ತೀರವ ಹುಡುಕಿ ಹೊರಟಳು.

ಅದು ಚಳಿ ತುಂಬಿದ ಮಾಘ ಮಾಸ
ಕುಳಿರ್ ಕಡಲಲಿ ಈಜಿದಳು ದೂರ ದೂರ;
ಮರಗಳಿಂದ ಚಿಗುರೊಡೆಯಲೆಂದರೆ
ವಸಂತ ಮಾಸವಿನ್ನೂ ಬಲುದೂರ.

ಕಡುನೀಲಿ ಕಡಲ ತೆರೆಗಳಿಗೆ ಮೈಯನೊಡ್ಡಿದಳು
ತೊಳೆದವು ಅವಳನು ಬೆಳ್ಳಗೆ, ಕಾಂತಿಯೊಂದಿಗೆ.
ಅವಳು ಸೇರಿದಳು ದೊರೆಯ ನಾಡಿಗೆ,
ಕ್ಯಾಪ್ಟನ್ ಬರುವ ಮುನ್ನ ವೇಳೆಯೊಳಗೆ.

ನಾಕದ ಬಾಗಿಲ ಬಳಿ ಬಂದಳು ವಸಂತದಲಿ,
ಬಾಗಿಲು ಮುಚ್ಚಿದನು ಸಂತ ಪೀಟರನು,
“ದೇವರೇ ಹೇಳಿಹನು, ಅವನಿಗೆ ಬೇಡ
ಈ ಪಾಪದ ಎವೆಲಿನ್ ರೋಸ.”

ನರಕದ ಬಾಗಿಲ ಬಳಿ ಬಿದ್ದಾಗ ಅವಳು
ಬಾಗಿಲಿಗೆ ಅಗಳಿಯಿದ್ದುದ ಕಂಡಳು.
ಅರಚಿತು ದೆವ್ವ, “ನನಗೆ ಬೇಡ,
ಈ ಪಾಪದ ಎವೆಲಿನ್ ರೋಸ.”

ಎತ್ತ ಹೋಗಲೆಂದರಿಯದೆ ಅಲೆಯುತಿಹಳು,
ಗಾಳಿಯೊಳು, ತಾರೆಗಳೇ ತುಂಬಿಹ ಆಕಾಶದಡಿ,
ಹೊಲ ದಾಟುವುದ ಕಂಡೆನೊಂದು ಸಂಜೆಯಲಿ,
ಎಡವುತ್ತಿದ್ದಳು ಹೆಜ್ಜೆ ಹೆಜ್ಜೆಗೂ, ನೆಟ್ಟಗೆ ನಿಲಲಾರಳು.
ನೆಟ್ಟಗೆಂದೂ ನಿಲಲಿಲ್ಲ, ಪಾಪದ ಕೂಸು ಎವೆಲಿನ್ ರೋಸ.

- ಮೂಲ: ಬಟ್ರೋಲ್ಟ್ ಬ್ರೆಕ್ಟ್
ಅನುವಾದ: ಎಸ್.ಎನ್.ಸ್ವಾಮಿ 

Thursday 13 July 2017

ಸುಮ್ಮನಿರಬೇಕಂತೆ - ಕವನ



ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಕತ್ತಲಲ್ಲಿ ಸತ್ಯ ಬಚ್ಚಿಟ್ಟು ಗೌಪ್ಯವಾಗಿಡಬೇಕಂತೆ 
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಕತ್ತಲಿದ್ದಾಗ ಬೆಳಕನರಸಿದರೆ ನೆರಳಿಗೆ ನೋವಾಗುತ್ತದಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಮಾತುಗಳು ರೆಕ್ಕೆ ಬಡಿಯದಂತೆ ಅವನ್ನು ಎದೆಗೂಡಿನಲ್ಲೇ ಬಚ್ಚಿಡಬೇಕಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು

ಸತ್ಯಕ್ಕೆ ಮೌನದ ಬೇಡಿ ತೊಡಿಸಿ ಹಾಳುಕೂಪಕ್ಕೆ ದೂಡಬೇಕಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಗಿಡಗಳಿಗೆ ನೀರುಣಿಸಿದರೆ ಬೇರುಗಳಿಗೆ ಉಸಿರುಗಟ್ಟುತ್ತದಂತೆ 
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಮೈತಬ್ಬಿ ನಾಗರ ಹೆಡೆಬಿಚ್ಚಿ ಹೂವ ಹಿಚುಕಿ ಹಿಂಡಿದರೆ
ಅದೇ ನಾಗರಕ್ಕೆ ಹಿತವಂತೆ 
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ನಿದ್ದೆಯಲ್ಲಿದ್ದವರನ್ನು ಸದ್ದು ಮಾಡಿ ಎಬ್ಬಿಸಿದರೆ
ಅವರ ಕನಸುಗಳಿಗೆ ಇರುಸುಮುರುಸು ಆಗುತ್ತದಂತೆ. ಅದಕ್ಕೇ ಎಲ್ಲಾರೂ
ಸುಮ್ಮನಾಗಿರಬೇಕಂತೆ ಸುಮ್ಮನಿರಬೇಕು 
ಸ್ಫಟಿಕದಂತಹ ಸತ್ಯ ಮಾತನಾಡಿದರೆ ಎಲ್ಲರ ನೆಮ್ಮದಿ ಕೆಡುತ್ತದಂತೆ
ಅದಕ್ಕೇ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಚಿಗುರೇ ಎದ್ದು ಮರವ ನುಂಗಿದರೆ ಮರ ಹಣ್ಣು ಕೊಡುವುದಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು!!


ನಾನೂ ಸುಮ್ಮನಿರುತ್ತೇನೆ 

ಅಂತಃಸತ್ವ ಕಳೆದು ಕೊಂಡವರು
ಪಾಶಾಣ ಹೃದಯಿಗಳು
ನೀತಿಗೆಟ್ಟು ನಿತ್ಯ ಸತ್ಯದ ಹತ್ಯೆ ಮಾಡುವವರು
ಸುಳ್ಳಿನ ಕಂತೆ ಏಣಿಸುತ್ತಾ ಹಲ್ಲುಗಿಂಜುವವರು
ರೂಢಿಗಳ ರಾಡಿಯಲ್ಲೇ ಮಡಿ ಪಾಲಿಸುವವರು
ಸುಮ್ಮನಿರಲಿ
         
ಆಗ ನಾನೂ ಸುಮ್ಮನಿರುತ್ತೇನೆ.
  -          ಡಾ. ಸುಚೇತಾ ಪೈ, ಬಳ್ಳಾರಿ

ಪುಸ್ತಕ ವಿಮರ್ಶೆ - ಹುದುಗಲಾರದ ದು:ಖ (A Grief to Bury)

‘ಹುದುಗಲಾರದ ದು:ಖ’ ಗ್ರಂಥದ ಒಂದು ಅವಲೋಕನ
ವಸಂತ ಕಣ್ಣಾಬಿರನ್ ಅವರ ‘ಎ ಗ್ರೀಫ್ ಟು ಬರಿ’ ಗ್ರಂಥವು ಎಂ.ಎಸ್. ಆಶಾದೇವಿ ಅವರ ಅನುವಾದ ಸಂಯೋಜಕತ್ವದಲ್ಲಿ ‘ಹುದುಗಲಾರದ ದು:ಖ’ ಎಂಬ ಹೆಸರಿನಲ್ಲಿ ಪ್ರಕಟಗೊಂಡಿದೆ. ಗ್ರಂಥವು ವೈವಾಹಿಕ ಚೌಕಟ್ಟಿನ ಮಹಿಳಾ ಲೋಕವನ್ನು ತೆರೆದಿಟ್ಟಿದೆ. ಅದರಲ್ಲೂ ಸಾಂಪ್ರದಾಯಿಕ ಮತ್ತು ಆಧುನಿಕತೆ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಪಲ್ಲಟ ಕಾಲಗಟ್ಟದಲ್ಲಿ ಹುಟ್ಟಿ ಬೆಳೆದು ಬಂದ 12 ವಿಶೇಷ ಮಹಿಳೆಯರ ಬದುಕನ್ನು ಅವರ ಮಾತಿನ ಮೂಲಕವೇ ಕಟ್ಟಿ ಕೊಟ್ಟಿದೆ. ಈ ಗ್ರಂಥ ಓದಿದ ನಂತರ ನನ್ನಲ್ಲಿ ಮೂಡಿದ ಕೆಲವು ಅನಿಸಿಕೆ ಹಾಗು ಅವಲೋಕಿಸಿದ ಕೆಲವು ಅಂಶಗಳನ್ನು ಹಂಚಿಕೊಳ್ಳುವುದು ಈ ಲೇಖನದ ಉದ್ದೇಶ. 
ಶೀರ್ಷಿಕೆಯ ಅನುವಾದದ ಬಗ್ಗೆ ಹೇಳುವುದಾದರೆ ‘ಎ ಗ್ರೀಫ್ ಟು ಬರಿ’ ಎಂಬುದು ‘ಹುದುಗಿಸಿಕೊಂಡ ದು:ಖ’ ಅಥವಾ ‘ಹುದುಗಿಸಬೇಕಾದ ದು:ಖ’ ಎಂದಾಗಿದಿದ್ದರೆ ಸೂಕ್ತವಾಗುತಿತ್ತು ಅನಿಸುತ್ತದೆ. ಪ್ರಕರಣಗಳನ್ನು ಓದಿದಾಗ ಎಲ್ಲಾ ಮಹಿಳೆಯರು ತಮ್ಮ ನಿಜವಾದ ಭಾವನೆ, ನೋವು, ನಲಿವು, ಅನಿಸಿಕೆ, ದು:ಖ, ಅಭಿಪ್ರಾಯಗಳನ್ನು ಹೊರಹಾಕಲಾಗದೆ ಒಳಗೆ ಮುಚ್ಚಿಟ್ಟುಕೊಂಡು ಎಲ್ಲವೂ ಓಕೆ, ಚೆನ್ನಾಗಿದೆ ಎಂದು ಬಿಂಬಿಸಿಕೊಂಡಿರುವದು ಕಂಡುಬರುತ್ತದೆ.     
ಆಯ್ದುಕೊಂಡಿರುವ ಎಲ್ಲಾ ಮಹಿಳೆಯರು ಶಿಕ್ಷಿತ, ಮೇಲು ವರ್ಗದ(ಕೆಲವರು ಮಧ್ಯಮ ವರ್ಗದವರು) ನಗರದ, ರಾಜಕೀಯವಾಗಿ ಸಾಮಾಜಿಕವಾಗಿ ಮೇಲು ಸ್ತರದ ಕುಟುಂಬಗಳಿಂದ ಬಂದವರು. ಅವರು ಏನೆಲ್ಲಾ ಸಾಧನೆ ಮಾಡಿದ್ದರೂ ಅದಕ್ಕೆ ಈ ಹಿನ್ನಲೆ ಕಾರಣವಾಗಿದೆ. ಒಂದಿಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಉದ್ಯೋಗ ಮಾಡಿದ್ದಾರೆ. ಇವರುಗಳ ವೈವಾಹಿಕ ಮತ್ತು ವೈಧವ್ಯ ಜೀವನವನ್ನು ಪರಿಶೀಲಿಸುವ ಉದ್ದೇಶವಿಟ್ಟುಕೊಂಡು ಗ್ರಂಥ ರಚಿಸಿರುವುದರಿಂದ  ಅವರ ಔದ್ಯೋಗಿಕ ಸಾಮಾಜಿಕ ಸಾಧನೆಗಳಿಗೆ ಹೆಚ್ಚು ಒತ್ತು ನೀಡಿಲ್ಲ. ಬಹುಶ: ಮಹಿಳೆಯರ ಸಮಸ್ತ ಸಾಧನೆಯನ್ನು ಬೆಳಕಿಗೆ ತರಬೇಕೆಂದರೆ ನೂರಾರು ಗ್ರಂಥಗಳು ಪ್ರಕಟವಾಗಬೇಕಾಗುತ್ತದೆ, ಆಗಬೇಕಿದೆ.
ಜೀವನದ ಅನೇಕ ಸಂಗತಿಗಳನ್ನು ಹೀಗೆ ಎಂದು ಖಚಿತವಾಗಿ  ಹೇಳಲಾಗುವುದುಲ್ಲ ಅಥವಾ ಸಾಮಾನ್ಯೀಕರಿಸಿ ಹೇಳುವುದು ಕಷ್ಟ. ಸಾಮಾನ್ಯವಾಗಿ ಮಹಿಳೆಯರ ಜೀವನದ ಬಾಲ್ಯ, ಯೌವನ, ವಿವಾಹ, ಮಕ್ಕಳು, ಅವರ ಪೋಷಣೆ, ಉದ್ಯೋಗ, ಕೌಟುಂಬಿಕ ಜೀವನ, ವೈಧವ್ಯ, ಆರೋಗ್ಯ, ಲೈಂಗಿಕತೆ, ಉಡುಪು ಇತ್ಯಾದಿ ವಿಷಯಗಳಲ್ಲಿ  ದ್ವಂದ್ವ, ಗೊಂದಲ, ಅಸ್ಪಷ್ಟತೆಯಿಂದ ಕೂಡಿ ಮೇಲುಸ್ತರದಲ್ಲಿ ಬಿಂಬಿತವಾಗುತ್ತವೆ. ಗ್ರಂಥದಲ್ಲಿ ದಾಖಲಾಗಿರುವ 12 ಮಹಿಳೆಯರ ಮಾತುಗಳನ್ನು ಗಮನಿಸಿದರೆ ಸಂಪೂರ್ಣವಾಗಿ ತಮ್ಮನ್ನು ತೆರೆದುಕೊಂಡಿದ್ದಾರೆ, ಮನಸ್ಸಿನ ಆಳದಲ್ಲಿರುವ ಭಾವನೆ, ಅನಿಸಿಕೆಗಳನ್ನು ಮುಕ್ತವಾಗಿ ಹೇಳೀಕೊಂಡಿದ್ದಾರೆ ಅಂತ ಅನಿಸುವುದಿಲ್ಲ. ಬಹುಶ: ತಮ್ಮ ವೈಯಕ್ತಿಕ ಬದುಕು ಸಾರ್ವಜನಿಕವಾಗುವುದು ಇಷ್ಟವಿಲ್ಲದಿರಬಹುದು. ಅದರಲ್ಲೂ ತಮ್ಮ ಪತಿ ಬಗ್ಗೆ ಒಟ್ಟಾರೆ ಅಭಿಪ್ರಾಯವನ್ನು ಅವರಿಗೆ ಹೇಳಾಲಾಗಿಲ್ಲ. ಒಂದೊ ಅವರಿಗೇ ಸ್ಪಷ್ಟತೆಯಿಲ್ಲದಿರಬಹುದು ಅಥವಾ ಹೇಳಿಕೊಳ್ಳಲಾಗದಂತಿರಬಹುದು. 
ನಾನು ಗಮನಿಸಿರುವ ಒಂದು ಅಂಶವೆಂದರೆ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಗಂಡ ಎಷ್ಟೇ ಕಡಟ್ಟವನಿರಲಿ, ಇಷ್ಟವಿಲ್ಲದವನಾಗಿರಲಿ ಅವನನ್ನು ಬಿಟ್ಟುಕೊಡುವುದಿಲ್ಲ. ಯಾಕಿರಬಹುದು ಎಂದು ನನ್ನಲ್ಲಿ ಕುತೂಹಲವಿತ್ತು. ನನ್ನ ಅಂದಾಜಿನಂತೆ, ಗಂಡಂದಿರಿಂದಲೆ ಅವರು ಜೀವನವನ್ನು ಕಟ್ಟಿಕೊಳ್ಳಬೇಕು, ಅನಿವಾರ್ಯವಾಗಿ ಅವರನ್ನೆ ನಂಬಿ ಬದುಕುವಂತ ಪರಿಸ್ಥತಿಯನ್ನು ಸೃಷ್ಟಿಸಿಲಾಗಿದೆ, ಅವರಿಂದಲೆ ಹೆಸರು, ಸ್ಥಾನ, ಗುರುತಿಸುವಿಕೆ, ಸಾಮಾಜಿಕ ಮನ್ನಣೆ, ಆರ್ಥಿಕ ಸವಲತ್ತು ಸಿಗುತ್ತಿರುತ್ತದೆ. ಬೇಕೊ ಬೇಡವೊ ವಿವಾಹದ ಮೂಲಕ ಸಂಬಂಧ ಏರ್ಪಟ್ಟಿರುತ್ತದೆ, ಕ್ರಮೇಣ ಅವರ ಬಗ್ಗೆ ಪ್ರೀತಿ, ಮೋಹ ಬೆಳೆದಿರುತ್ತದೆ, ಕೆಲವೊಮ್ಮೆ ಕುರುಡು ಮೋಹವೂ ಆವರಿಸಿರುತ್ತದೆ, ಅವನ ಅವಗುಣಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅವರೆಂತವರೆ ಆದರೂ ತಮ್ಮವರು ಎಂಬ ಆಪ್ತತೆಯನ್ನು ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ಅವರನ್ನು ಬಿಟ್ಟುಕೊಡುವುದಿಲ್ಲ. ಹಾಗೆಂದು ಗಂಡಂದಿರ ಬಗ್ಗೆ ದೂರು ಹೇಳುತ್ತಾ ಕೂರಬೇಕೆಂದಿಲ್ಲ. ನಿಜ ಹೇಳದಿದ್ದರೆ ಮಹಿಳೆಯರ ಪರಿಸ್ಥಿತಿಗೆ ಅವರೆಷ್ಟು ಕಾರಣ ಎಂದು ತಿಳಿಯದೆ ಸಮಾಜದಲ್ಲಿ ಪುರುಷರು ಒಳ್ಳೆಯವರೆಂದೆ ಬಿಂಬಿತರಾಗಿ ಎಲ್ಲದಕ್ಕೂ ಮಹಿಳೆಯರೆ ಕಾರಣ ಅವರು ಸರಿಯಿಲ್ಲ, ಅವರದೆ ತಪ್ಪು ಅನ್ನುವ ಅಭಿಪ್ರಾಯ ಮೂಡುತ್ತದೆ. 
ಮಹಿಳೆಯರ ಸ್ಥಾನ ಗಂಡನ ಸ್ಥಾನ ಪ್ರತಿಷ್ಟೆಯನ್ನು ಅವಲಂಬಿಸಿರುವಾಗ ಅವನ ಬಗ್ಗೆ ದೂರು ಹೇಳಿದರೆ, ದೋಷಗಳನ್ನು ಎತ್ತಿ ಆಡಿದರೆ ತನ್ನ ಸ್ಥಾನ ಪ್ರತಿಷ್ಟೆಗೆ ಕುಂದುಂಟಾಗಬಹುದೆಂಬ ಅಂಜಿಕೆಯಿರಬಹುದು. ತಮ್ಮವರು ಅಂತ ಅಂದುಕೊಂಡವರ ಬಗ್ಗೆ ಜನ ಆಡಿಕೊಂಡರೆ, ಅಗೌರವಿಸಿದರೆ ಮಹಿಳೆಯರಿಗೆ ಸಹಿಸಿಕೊಳ್ಳಲಾಗುವುದುದಿಲ್ಲ. ಮಕ್ಕಳು ಎಷ್ಟೇ ತಪ್ಪು ಮಾಡಿದರು ಒಪ್ಪಿಕೊಳ್ಳದ ತಂದೆತಾಯಿಯ ಕುರುಡು ಪ್ರೀತಿಯ ತರ. ಎಲ್ಲವನ್ನು ಒಪ್ಪಿಕೊಳ್ಳುವ, ಹೊಂದಿಕೊಳ್ಳುವ, ಸಹಿಸಿಕೊಳ್ಳುವ ವಿಶಾಲ ಮನೋಭಾವದಂತ ವ್ಯಕ್ತಿ ಸಹಜ ಗುಣಗಳು ಗಂಡನನ್ನು ಬಿಟ್ಟುಕೊಡದಿರುವುದಕ್ಕೆ ಕಾರಣವಿರಬಹುದು.
ಹನ್ನೆರಡು ಮಂದಿಯಲ್ಲಿ ಇಬ್ಬರು ಮಾತ್ರ ತಮಗೆ ಒಪ್ಪಿಗೆಯಾಗದ ವಿವಾಹದಿಂದ ಆಚೆ ಬಂದು ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಉಳಿದವರೆಲ್ಲ ನಿರಂತರ ಹೋರಾಟದ ಮೂಲಕ ವೈವಾಹಿಕ ಜೀವನವನ್ನು ಉಳಿಸಿಕೊಂಡಿದ್ದಾರೆ. ನೀರಾ ದೇಸಾಯಿಯವರು ತಮ್ಮ ಮಿತಿಯನ್ನು ಮೀರಿ ಕೌಟುಂಬಿಕ ಹೊಂದಾಣ ಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಹೆಂಡತಿಯಾರಾಗಿ ಪತಿ ಬಗ್ಗೆ, ಕುಟುಂಬದ ಸದಸ್ಯರ ಬಗ್ಗೆ ತಮ್ಮ ಅಸಮಧಾನ ಭಿನ್ನಾಭಿಪ್ರಾಯ ಮನಸ್ತಾಪಗಳನ್ನು ಅತ್ಯಂತ ನಾಜೂಕಿನಿಂದ ಹೇಳಿಕೊಂಡಿದ್ದಾರೆ. ಇದನ್ನು ಒರಟು ಭಾಷೆಯಲ್ಲಿ ಹೇಳಿದಿದ್ದರೆ ‘ವೈವಾಹಿಕ ಸಂಬಂಧ ಹಾಳಾಗಿತ್ತು, ಇಂತಹ ಮದುವೆ ಬೇಕಿತ್ತಾ? ಗಂಡಸರು ಒಳ್ಳೆಯವರಲ್ಲ, ಅವರ ಸಂಬಂಧವೆ ಬೇಡ ಎಂದು ಬಿಟ್ಟು ಬಂದೆ’ ಎಂದು ಹೇಳುವ ಸಾದ್ಯತೆಯಿತ್ತು. ಸೌಮ್ಯ ಹಾಗು ಮೃದು ರೂಪದ ವ್ಯಕ್ತಪಡಿಸುವಿಕೆ ಸುತಾಪ ಮುಖರ್ಜಿ, ಕೊಯ್ಲಿ ರಾಯ್, ಅಬ್ಬೂರಿ ಛಾಯಾದೇವಿ ಅವರ ಪ್ರಕರಣಗಳಲ್ಲಿ ಕಂಡುಬರುತ್ತದೆ. 
  ಇಲ್ಲಿ ಇನ್ನೊಂದು ಕುತೂಹಲದ ಪ್ರಶ್ನೆ ಏಳುತ್ತದೆ ಮಹಿಳೆಯರ ವೈವಾಹಿಕ ಮತ್ತು ವೈಧವ್ಯದ ಪರಿಸ್ಥಿತಿಯನ್ನು ಪರುಷರ ದೃಷ್ಟಿಯಿಂದ ನೋಡಿದರೆ ಏನೇನು ಅಂಶಗಳು ಕಂಡುಬರುತಿದ್ದವು? ಪರುಷರು ತಮ್ಮ ಹೆಂಡತಿಯನ್ನು ಬಿಟ್ಟುಕೊಡುತಿದ್ದರಾ? ಬಿಟ್ಟುಕೊಡುತ್ತಿರಲಿಲ್ಲವೆನಿಸುತ್ತದೆ. ಮಹಿಳೆಯರು ಪರಿಪೂರ್ಣರಲ್ಲ ಅವರು ಎಲ್ಲಾ ವಿಷಯಗಳಲ್ಲೂ ಸರಿ ಎಂದು ಹೇಳಲಾಗುವುದಿಲ್ಲ. ಪುರುಷರೂ ಮಹಿಳೆಯರನ್ನು ಸಹಿಸಿಕೊಳ್ಳಬೇಕಾಗುತ್ತದೆ, ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೂ ಪುರುಷರು ಮಾಡಿಕೊಡುವ ವೈಧವ್ಯ ಜೀವನ ಚಿತ್ರಣ ಭಿನ್ನವಾಗಬಹುದು.
ಹೆಣ್ಣುಮಕ್ಕಳು ತಮಗೇನೆ ಆದರು ಅಂದರೆ ಹಕ್ಕು ಉಲ್ಲಂಘನೆಯಾದರು, ಅವಕಾಶ ವಂಂಚಿತರಾದರು, ಅಸಮಾನತೆ ಎದುರಿಸುತಿದ್ದರು ಅದು ಸಹಜವೇನೊ, 'ಇನ್ನೇನು ಮಾಡಬೇಕಾಗುತ್ತದೆ, ಬೇರೆ ಮಹಿಳೆಯರಿಗೆ ಹೋಲಿಸಿದರೆ ನನ್ನದೆ ವಾಸಿ, ಜೀವನದಲ್ಲಿ ಇದಕ್ಕಿಂತ ಇನ್ನೇನು ಬೇಕು, ಇರುವುದರಲ್ಲಿ, ಸಿಕ್ಕಿರುವುದಕ್ಕೆ ತೃಪ್ತಿಪಡಬೇಕು, ತಮ್ಮದೆ ತಪ್ಪಿರಬಹುದು, ಸುಮ್ಮನೆ ದೂರಿದರೆ ಏನು ಪ್ರಯೋಜನ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು,' ಎಂದೆಲ್ಲಾ ಯೋಚಿಸಿ ತಮ್ಮ ಮನದಾಳದ ಭಾವನೆ ಆಸೆ ಆಕಾಂಕ್ಷೆಗಳನ್ನು, ನೋವು, ನಲಿವು, ಹಿಂಸೆಗಳನ್ನು ಒಳಗೆ ಹುದುಗಿಸಿ ಮೇಲು ನೋಡಕ್ಕೆ ಎಲ್ಲವು ಚೆನ್ನಾಗಿದೆ ಎಂದು ತೋರಿಸಿಕೊಳ್ಳುತ್ತಾರೆ ಅನಿಸುತ್ತದೆ.
‘ಸಂಸಾರ ಗುಟ್ಟು ವ್ಯಾಧಿ ರಟ್ಟು’  ಎಂಬ ಗಾದೆಯಂತೆ  ಮಹಿಳೆಯರು ತಮ್ಮ ವೈಯಕ್ತಿಕ, ಕೌಟುಂಬಿಕ ಪರಿಸ್ಥಿತಿ, ವಾಸ್ತವ ಹಾಗೂ ಸಮಸ್ಯೆಗಳನ್ನು ಹೊರಗೆಡವಬಾರದು ಎಂಬ ಸಾಮಜೀಕರಣವು ದು:ಖ ದುಮ್ಮಾನಗಳನ್ನು ಹುದುಗಿಸಿಕೊಳ್ಳುವಂತೆ ಮಾಡುತ್ತವೆ.
ಮಹಿಳಾಭಿವೃಧ್ಧಿಯಲ್ಲಿ ಚರ್ಚಿಸುವ ‘ಪ್ರಾಕ್ಟಿಕಲ್ ಜಂಡರ್ ನೀಡ್ಸ್’ ಮತ್ತು ಸ್ರ್ಟಾಟಜಿಕ್ ಜಂಡರ್ ನೀಡ್ಸ್’ ಪರಿಕಲ್ಪನೆಗಳಂತೆ ಇಲ್ಲಿ ಮಹಿಳೆಯರು ಮೂಲ ಭೂುತ ಅವಶ್ಯಕತೆಗಳ ಪೂರೈಕೆಗೆ ಪರದಾಡಬೇಕಿರಲಿಲ್ಲ ಆದರೆ ಸ್ವಂತಿಕೆ, ಆಯ್ಕೆ, ನಿರ್ಧಾರ ಕೈಗೊಳ್ಳುವಿಕೆ, ಸಮಾನತೆ, ಸ್ವಾತಂತ್ರ್ಯಗಳಿಗಾಗಿ ಗುದ್ದಾಡಬೇಕಿತ್ತು. ಇದಕ್ಕೆ ಸಾಕಷ್ಟು ಪೂರಕ ವಾತಾವರಣವಿದ್ದರೂ ಅವರ ಜೀವನ ಹೋರಾಟದಿಂದ ಮುಕ್ತವಾಗಿರಲಿಲ್ಲ. ಇವರ ಜೀವನವೇ ಇಷ್ಟು ದೊಡ್ಡ ಹೋರಾಟವಾಗಿರಬೇಕಾದರೆ ಸಮಾನ್ಯ, ಕೆಳ ವರ್ಗದ, ಹಿಂದುಳಿದ ಜಾತಿ, ಧಾರ್ಮಿಕ ಕಟ್ಟುಪಾಡುಗಳ ನಡುವೆ ಬಂಧಿಯಾಗಿರುವ ಮಹಿಳೆಯರ ಜೀವನವು ಎನ್ನೆಷ್ಟು ಹೋರಾಟಮಯವಾಗಿರಬಹುದು.
ಗ್ರಂಥವು ಆಯ್ದ ಮಹಿಳೆಯರ ವೈಧವ್ಯದ ಬದುಕಿನ ಚಿತ್ರಣವನ್ನು ನೀಡಿದರು ಅದೇ ವರ್ಗದ ಇತರ ಮಹಿಳೆಯರನ್ನು ಪ್ರತಿನಿಧಿಸುತ್ತದೆ. ಆತ್ಮಚರಿತ್ರೆಯ ಒಂದು ಭಾಗವಾಗಿ ಹೊರಹೊಮ್ಮಬಹುದಾದ ವಿಷಯಗಳು ಪ್ರಕರಣ ಅಧ್ಯಯನ ರೂಪದಲ್ಲಿ ಬಂದಿದೆ.  ಕೆಲವೊಂಮೆ ಸಾಮಾನ್ಯ ಮಹಿಳೆಯರಂತೆ ಇನ್ನು ಕೆಲವೊಮ್ಮೆ ಕ್ರಾಂತಿಕಾರಿ ಮಹಿಳೆಯರಂತೆ ತೋರಿಬರುತ್ತಾರೆ. ಲೇಖಕಿ ವಸಂತ ಅವರು ಪ್ರಸ್ತಾವನೆಯಲ್ಲಿ ಹೇಳಿರುವಂತೆ ‘ಸ್ವಂತ ಆಯ್ಕೆ, ನಿರ್ಧಾರ, ಸಾಮರ್ಥ್ಯ ಬಳಕೆ, ಏನನ್ನಾದರು ಸಾಧಿಸಬೇಕೆಂಬ ಹಂಬಲದಿಂದ ಜೀವನವನ್ನು ಕಟ್ಟಿಕೊಂಡು ಎದುರಾದ ಸಮಸೆಯಗಳನ್ನು ನಿವಾರಿಸಿಕೊಂಡಿರುವುದು ಇಂದಿನ ಯುವ ಮಹಿಳೆಯರು ಎದುರಿಸುತ್ತಿರುವ ಸವಾಲುಗಳಿಗೆ ಉತ್ತರವನ್ನು ನೀಡಬಲ್ಲವು ಈ ಪ್ರಕತಣ ಅಧ್ಯಯನಗಳು’. ಆದರೆ ಯುವ ಮಹಿಳೆಯರು ಈ ಗ್ರಂಥವನ್ನು ಓದುತ್ತಾರಾ ಅನ್ನುವ ಪ್ರಶೆ ಏಳುತ್ತದೆ.
ಗ್ರಂಥವು ಅನುವಾದವಾಗಿರುವುದರಿಂದ ಕೆಲವು ಕಡೆ ವಾಕ್ಯ ರಚನೆ ಮತ್ತು ನಿರೂಪಣೆ ಸರಾಗ ಓದಿಗೆ ಅಡ್ಡಿ ಉಂಟುಮಾಡುತ್ತವೆ. ಇದೇ ರೀತಿ ವಿವಿಧ ಗುಂಪು, ಪರಿಸ್ಥಿತಿ, ಘಟ್ಟಗಳಲ್ಲಿರುವ ಮಹಿಳೆಯರ ಜೀವನವನ್ನು ಮಹಿಳಾ ಅಧ್ಯಯನದ ದೃಷ್ಟಿಕೋನ ಮತ್ತು ಸ್ತ್ರೀವಾದಿ ಆಯಾಮದಲ್ಲಿ ಪರಿಶೀಲಿಸಿದರೆ ಮಹಿಳಾ ವಾಸ್ತವ ಬದುಕನ್ನು ಅನಾವರಣಗೋಳಿಸಬಹುದು.

ಹೇಮಲತ ಎಚ್.ಎಮ್.
ಮಹಿಳಾ ಅಧ್ಯಯನ ವಿಭಾಗ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ಮಂಡ್ಯ. 571402

ಕಥೆ - ಒಂದು ಹೆಣ್ಣಿನ ಸ್ವಗತ


ಅಪ್ಪನಿಗೆ ನನ್ನ ಮೇಲೆ ಏಕಿಷ್ಟು ಅನುಮಾನ? ನಾನೇನು ತಪ್ಪು ಮಾಡಿದೆ? ಹೆಣ್ಣಾಗಿ
ಹುಟ್ಟಿದ್ದೇ ತಪ್ಪೇ? ನಾನು ಏನು ಮಾಡಿದರೂ ತಪ್ಪು ಎಂದು ಏಕೆ ಹೇಳುತ್ತಾರೆ?
ಹೊರಗಡೆ ಹೋದರೆ ತಪ್ಪು, ಯಾರೊಂದಿಗಾದರೂ ಮಾತನಾಡಿದರೆ ತಪ್ಪು,
ಗೆಳತಿಯರು ಮನೆಗೆ ಬಂದರೆ ತಪ್ಪು, ಅಂಗಡಿಗೆ ಹೋದರೆ ತಪ್ಪು. ಅಬ್ಬಾ ಈ ತಪ್ಪುಗಳ ಸರಮಾಲೆಯಲ್ಲಿ ಬದುಕು ಸಾಕಾಗಿದೆ.

ನಾನು ಸುಂದರವಾಗಿದ್ದರೆ ಅದೂ ನನ್ನ ತಪ್ಪೇ? ಯಾರೋ ನನ್ನನ್ನು ನೋಡಿದರೆ
ನಾನೇನು ಮಾಡಲು ಸಾಧ್ಯ, ಅದೂ ನನ್ನ ತಪ್ಪೇ? ಅಲಂಕಾರವಿರಲಿ, ಕೇವಲ ಹೊರಗೆ ಹೋಗುವಷ್ಟು ಸಿದ್ಧವಾದರೂ ಟೀಕೆಗಳ ಸುರಿಮಳೆ – ಇದನ್ನು ಹಾಕಿಕೊಳ್ಳಬೇಡ, ಅದ್ಯಾಕೆ ಇಷ್ಟು ಗಿಡ್ಡ, ಇದ್ಯಾಕೆ ಇಷ್ಟು ಉದ್ದ ಇತ್ಯಾದಿಗಳು. ಇವರು ಹಾಕುವ ಲಕ್ಷ್ಮಣ ರೇಖೆಗಳು ಒಂದೇ ಎರಡೇ. ಪ್ರತಿ ಬಾರಿ ಒಂದು ರೇಖೆ ಹಾಕಿದಾಗಲೂ ಸೀತೆಯ ಕಥೆಯ ಬೋಧನೆ. ನೋಡು ರೇಖೆ ದಾಟಿದ ಸೀತೆಯ ಕಥೆ ಏನಾಯ್ತು ಎಂದು. ಆದರೆ ಸೀತೆಯ ದುರಂತ ಆರಂಭವಾದದ್ದು ರಾಮನ ಮನೆಯಲ್ಲಿ, ರಾಮನೊಂದಿಗೆ ಬದುಕನ್ನು ಹಂಚಿಕೊಂಡಾಗ, ಅಯೋಧ್ಯೆಯಲ್ಲಿದ್ದಾಗ, ಗರ್ಭವತಿಯಾಗಿದ್ದಾಗ. ಕನಿಷ್ಟ ಪಕ್ಷ ಹೊತ್ತುಕೊಂಡು ಹೋದ ರಾವಣ ಸೀತೆಗೆ ಆಯ್ಕೆಯ ಸ್ವಾತಂತ್ರ್ಯವನ್ನಾದರೂ ಕೊಟ್ಟಿದ್ದ. ಆದರೆ ರಾಮ ತುಂಬು ಗರ್ಭಿಣೆಯನ್ನು ಕಾಡಿಗಟ್ಟಬೇಕಾದರೆ ಅವಳಿಗೆ ಸ್ವಾತಂತ್ರ್ಯ ಕೊಟ್ಟನೇ? ಹಾಗಿದ್ದರೆ ಈ ಲಕ್ಷ್ಮಣ ರೇಖೆಗಳು ಏಕೆ? ಅವರ ಹಿಡಿತದಿಂದ ಸ್ತ್ರೀ ಜಾರಿಹೋಗುತ್ತಾಳೆಂದೇ?

ಇವರಿಗೆ ನಾನು ಬೇಡ ಎನಿಸಿದ್ದರೆ ಹುಟ್ಟಿದಾಗಲೇ ಸಾಯಿಸಿಬಿಡಬೇಕಿತ್ತು. ಈ ಬದುಕು ಇನ್ನೆಷ್ಟು ದಿನ. ಸಹಿಸಿ, ಸಹಿಸಿ, ಸಹನೆ ನಾಶವಾಗಿದೆ. ಏನಾದರೊಂದು ತೀರ್ಮಾನ ಕೈಗೊಳ್ಳಬೇಕು. ನಾನೀಗ ಏನು ಮಾಡಲಿ. ಬೇಡಪ್ಪಾ ಬೇಡಾ. ಈ ನರಕಾನೇ ಬೇಡ. 

ಹೋಗಲಿ ಮದುವೆ ಮಾಡಿಕೊಂಡು ಈ ಮನೆಯಿಂದ ಹೊರ ಹೋಗೋಣ ಎಂದುಕೊಂಡರೆ ಬರುವವನು ಇವರಂತೆಯೇ ಇದ್ದರೆ, ಆಗ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗುವುದಿಲ್ಲವೇ? ಹಾಗೆಯೇ ಹೊರಹೋದರೆ ಇವರನ್ನು ಧಿಕ್ಕರಿಸಿ, ಇವರು ನನ್ನನ್ನು ಬದುಕಲು ಬಿಡುವರೇ? ಸಮಾಜದ ನಿಂದನೆಯನ್ನು ಸಹಿಸಿ ಬದುಕಲು ಸಾಧ್ಯವೇ? ಹೋಗಲಿ ಏನೆಂದರೂ ಸಹಿಸಿಕೊಳ್ಳೋಣ ಎಂದುಕೊಂಡರೆ ಆ ಸಹನೆಗೆ ಬೆಲೆ ಎಲ್ಲಿ? ಈ ನಿಂದನೆಗೆ ಕೊನೆ ಎಲ್ಲಿ? ಈ ಮನಸ್ಸೊಂದು ಮರಗಟ್ಟಿ ಹೋಗಬಾರದೇ. ಕಲ್ಲಾಗಬಾರದೇ?

ಹಾ, ಆ ಅಹಲ್ಯೆಯಂತೆ ಕಲ್ಲಾಗಬಾರದೆ. ಅಯ್ಯೊ, ಆದರೆ ಅವಳು ತಪ್ಪು ಮಾಡಿದಳು
ಎನ್ನುತ್ತದೆ ಜಗತ್ತು, ನನ್ನನ್ನು ಹಾಗೆಯೇ ನೋಡಿದರೆ? ಆದರೆ ಆ ಅಹಲ್ಯೆ ತಪ್ಪು ಮಾಡಿದಳೋ ಇಲ್ಲವೋ ಯಾರಿಗೆ ಗೊತ್ತು. ಗೌತಮ ಶಾಪ ಕೊಟ್ಟನೋ ಇಲ್ಲವೊ,ಅಥವಾ ಅವನ ನಿಂದನೆಗೆ ಅವಳೆ ಕಲ್ಲಾಗಿಬಿಟ್ಟಳೋ ಗೊತ್ತಿಲ್ಲ!

ಅಯ್ಯೊ, ಈ ಕಣ್ಣೀರೊಂದು, ನಿಲ್ಲುತ್ತಲೇ ಇಲ್ಲ. ಯಾರು ಕೊಟ್ಟರೊ, ಯಾರು ಕಲಿಸಿದರೋ ಹೆಣ್ಣುಮಕ್ಕಳಿಗಿದನ್ನು. ಹೆಣ್ಣು ಏಕಿಷ್ಟು ಅಬಲೆ. ದೈಹಿಕವಾಗಿಯಂತೂ ಅಲ್ಲ. ನಾನು ಮಾಡುವ ಕೆಲಸವನ್ನು ನನ್ನ ಅಣ್ಣತಮ್ಮಂದಿರೂ ಸಹ ಮಾಡುವುದಿಲ್ಲ. 3ನೇ ಬಾರಿ ಪಾಸಾದ ತಮ್ಮನಿಗೆ ಡೊನೇಷನ್ ಕೊಟ್ಟು ಕಾಲೇಜಿಗೆ ಕಳಿಸುವ ಇವರು, 85% ತೆಗೆದರೂ ನನ್ನನ್ನು ಮುಂದೆ ಓದಲು ಕಳಿಸಲು ಸಂಕಟ ಪಡುತ್ತಾರೇಕೆ?

ನಾನು ನಿಜಕ್ಕೂ ಇವರ ಮಗಳೇನಾ ಎಂಬ ಅನುಮಾನ ಕಾಡುತ್ತದೆ. ಇಲ್ಲಾ ಎಲ್ಲಿಂದಾದರೂ ತಂದು ಸಾಕಿಕೊಂಡಿದ್ದಾರಾ? ಮನೆಯಲ್ಲಿಯೇ ಇರು ಎಲ್ಲವನ್ನು ತಂದುಕೊಡುತ್ತೇನೆ ಎಂದರೆ ನಾನೇನು ಪಂಜರದಲ್ಲಿರುವ ಗಿಣಿಯೇ? ಮದುವೆ ಮಾಡಿಬಿಡುತ್ತೇವೆ. ನಂತರ ಏನಾದರೂ ಮಾಡಿಕೊ ಎನ್ನುತ್ತಾರೆ. ಅಂದರೆ ಮದುವೆಯಾದಮೇಲೆ ಹಾಳಾದರೆ ಪರವಾಗಿಲ್ಲವಾ. ಅಂದರೆ ನಾವೇನೋ ಇವರ ಮೇಲೆ ಹೊರೆಯಿದ್ದಂತೆ, ಇಳಿಸಿಕೊಂಡು ಬೇರೆಯವರ ಹೆಗಲಿಗೆ ವರ್ಗಾಯಿಸಿದರೆ ಸಾಕು ಎನ್ನುವಂತಿದೆ ಇವರ ಧೋರಣೆ.

ನನಗೆ ಬೇಡಪ್ಪಾ ಈ ರೀತಿಯ ಬದುಕು. ಹಾಗಿದ್ದರೆ, ಇರುವುದು ಎರಡೇ ದಾರಿ. ನಾನೇ ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳುವುದು, ಇಲ್ಲವೇ ಬದುಕನ್ನು ಮುಗಿಸುವುದು. ಹಾ! ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳುವುದು ಸಾಧ್ಯವೇ? ಇಲ್ಲ. ಹಾಗಿದ್ದರೆ ಉಳಿದಿರುವುದೊಂದೇ ದಾರಿ - ಸಾವು.

ಈಗ ನಿರಾತಂಕವೆನಿಸಿದೆ. ಈ ನರಕಯಾತನೆ ಇನ್ನು ಕೆಲವೇ ಘಂಟೆಗಳಲ್ಲಿ ಶಾಶ್ವತವಾಗಿ ದೂರವಾಗುತ್ತದಲ್ಲ ಎಂದು ಖುಶಿಯಾಗುತ್ತಿದೆ. ಈ ನರಕದಿಂದ ಬಿಡುಗಡೆ ಎಂದುಕೊಂಡ ತಕ್ಷಣ ಎಷ್ಟು ಆರಾಮಾಗಿದೆ. ಸಾವೇನೂ ಭಯವೆಂದೆನಿಸುತ್ತಿಲ್ಲ. ಎಲ್ಲರೂ ಧೈರ್ಯ ಬೇಕು ಎನ್ನುತ್ತಾರೆ, ಯಾಕೆ? ಬದುಕಿನ ಜಂಜಡದಿಂದ ಮುಕ್ತಿ ಪಡೆಯುವ ಮಾರ್ಗ ಸಲೀಸಾಗಿದೆಯಲ್ಲಾ, ಭಯವೇಕೆ. ನನ್ನ ವಿಧಿ ಎಷ್ಟು ವಿಚಿತ್ರವಲ್ಲವೇ? ಬದುಕಿಗಿಂತ ಸಾವೇ ಹಾಯೆನಿಸಬೇಕಾದರೆ?

ಪತ್ರ ಬರೆದಿಟ್ಟು ಸಾಯಬೇಕೆ? ಅಥವಾ ಬೇಡವೇ? ಏನೆಂದು ಬರೆಯಲಿ. ನಿಮ್ಮ ಕಾಟ ತಡೆಯಲಾರದೇ ಸತ್ತೆನೆಂದೆ? ಬೇಡ ಬಿಡು. ಪೋಲಿಸರು ಬರುತ್ತಾರೇನೋ. ಬರಲಿ ಬಿಡು, ಬಂದು ಸ್ವಲ್ಪ ವಿಚಾರಿಸಿಕೊಳ್ಳಲಿ. ನನಗೆ ಅಷ್ಟು ಕಷ್ಟ ಕೊಟ್ಟ ಅವರು ಕಷ್ಟವೇನೆಂದು ತಿಳಿಯಲಿ. ಅಥವಾ ಅವರೇ ಕಾರಣವೆಂದು ಬರೆದಿಟ್ಟರೆ? ನೋಡಲಿ, ನೋವಾಗಲಿ. ಹಾಗಾದರೂ ಬದಲಾಗುತ್ತಾರೇನೊ, ಆದರೆ ಏನು ಪ್ರಯೋಜನ? ನಾನಿರುವುದಿಲ್ಲವಲ್ಲ. ಆದರೆ ಜೀವಂತವಿರುವ ನನ್ನ ಕಣ್ಣೀರಿಗೆ ಬೆಲೆ ಕೊಡದಿರುವರು, ನಾನು ಸತ್ತರೆ ಒಂದು ಹನಿ ಕಣ್ಣೀರಾದರೂ ಹಾಕುವರೇ? ಬೇಜಾರು ಮಾಡಿಕೊಳ್ಳುವರೆ? ಹೋಗಲಿ ಬಿಡು ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ.

ಹೇಗೋ ನಿರ್ಧಾರ ತೆಗೆದುಕೊಂಡಮೇಲೆ ಸಾಯೋದು ಹೇಗೆ ಅನ್ನೋದಾದ್ರೂ ನಿರ್ಧರಿಸೋಣ. ಮನೆಯಲ್ಲಿ ಹೇಗೂ ಹಗ್ಗವಿದೆ, ಇಲಿ ಪಾಷಾಣವಿದೆ, ಬಾವಿಯಿದೆ, ನಿದ್ರೆಮಾತ್ರೆಗಳಿವೆ, ಸೀಮೆಎಣ್ಣೆಯೂ ಇದೆ. ಯಾವುದಾದ್ರೂ ಒಂದನ್ನು ಆರಿಸಿಕೊಂಡರಾಯಿತು. ಇಲಿ ಪಾಶಾಣ, ನಿದ್ರೆಮಾತ್ರೆ ತಿಂದರೆ ಏನೋ ಕಣ್ತಪ್ಪಿ, ಏನೋ ತಿಂದು ಹೀಗಾಗಿದೆ ಅಂದುಕೊಳ್ತಾರೆ. ಬಾವಿಗೆ ಬಿದ್ರೆ, ಕಾಲು ಜಾರಿ ಅಂದ್ಕೋತಾರೆ. ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಕೊಂಡ್ರೇ ಅದೂ ಆಕಸ್ಮಿಕ ಅಂದುಕೊಳ್ತಾರೆ. ಅಪ್ಪನಿಗೆ ಏನಾದ್ರೂ ತಟ್ಟುತ್ತಾ? ಹಾಗಿದ್ದರೆ ನೇಣು ಹಾಕ್ಕೊಂಡ್ರೆ ಅವರಿಗೆ ಗೊತ್ತಾಗುತ್ತೆ. 

ಆದರೆ ಸತ್ತ ಮೇಲೆ ಜನ ಏನೆಂದುಕೊಳ್ತಾರೆ? ಏನು ಮಾಡಿಕೊಂಡಿದ್ದಳೋ ಏನೋ, ಅದಕ್ಕೆ..... ಈ ರೀತಿ ನಾನಾ ಮಾತುಗಳು ಬರುತ್ತವೆ. ಯಾರೇನೆಂದುಕೊಂಡರೆ ನನಗೇನೂ. ಕೇಳಿಸಿಕೊಳ್ಳಲು ನಾನಿರುವುದಿಲ್ಲವಲ್ಲ. ಆದರೂ ಅಪ್ಪ ಇಷ್ಟು ದಿನ ಏನು ಅನುಮಾನ ಪಟ್ಟಿದ್ದರೊ ಅದು ನಿಜ ಎಂದು ಅವರಿಗನಿಸದೇ ಇರುತ್ತದಾ? ನಾನು ಮಾಡದ ತಪ್ಪಿಗೆ ಈ ಕಳಂಕ ಜೀವನದುದ್ದಕ್ಕೂ ಇರುವುದಿಲ್ಲವೇ? ಅರೇ ಯಾರ ಜೀವನದುದ್ದಕ್ಕೂ. ನಾನಂತೂ ಇರುವುದಿಲ್ಲವಲ್ಲ. ಆದರೂ ಈ ರೀತಿ ಸಾಯಬೇಕೆ? ತಪ್ಪು ಉದಾಹರಣೆ ನೀಡಲು ಬೇರೆ ಅಪ್ಪ ಅಮ್ಮಂದಿರು ನನ್ನ ಹೆಸರನ್ನು ಬಳಸಿಕೊಳ್ಳುವುದಿಲ್ಲವೇ?

ಅಯ್ಯೊ ಸಾಯುವುದೂ ಕೂಡ ಇಷ್ಟು ಕಷ್ಟವೇ? ಬದುಕಿದ್ದಾಗಲೂ ಅನ್ನಿಸಿಕೊಳ್ಳಬೇಕು, ಸತ್ತ ಮೇಲೆಯೂ ಅನ್ನಿಸಿಕೊಳ್ಳಬೇಕಾ? ಈ ನರಕ ತಪ್ಪುವುದೇ ಇಲ್ಲವೇ? ಹಾ! ಅನ್ನಿಸಿಕೊಳ್ಳುವುದು ಸತ್ತ ಮೇಲೆಯೇ ತಪ್ಪೋದಿಲ್ಲ ಎಂದ ಮೇಲೆ ಬದುಕಿಯೇ ಬಿಡಬಾರದೇಕೆ?

ಅಯ್ಯೊ ಮತ್ತೆ ಈ ನರಕದಲ್ಲಾ? ಅರೆ, ನರಕ ಎಂದು ಯಾಕೆ ಅಂದ್ಕೋಬೇಕು. ಬದುಕುವ ನಿರ್ಧಾರ ಮಾಡಿದ ಮೇಲೆ ಧೈರ್ಯವಾಗಿಯೇ ಬದುಕಿಬಿಡೋಣ. ಹಾಗಿದ್ದರೆ ಈಗಲೇ ಒಂದು ನಿರ್ಧಾರಕ್ಕೆ ಬರಬೇಕು. ಅಪ್ಪನನ್ನು ಇವತ್ತು ಕೇಳಿಯೇ ಬಿಡಬೇಕು. ಅವರ ಎಲ್ಲಾ ಅಪಮಾನಕರ ಮಾತುಗಳನ್ನು ಧಿಕ್ಕರಿಸಬೇಕು. ಕಳಿಸಿದರೆ ಓದಲು ಹೋಗುವುದು, ಇಲ್ಲದಿದ್ದರೆ ಹೇಗೂ ಗೆಳತಿ ತನ್ನ ಕಂಪನಿಯಲ್ಲಿಯೇ ಕೆಲಸವಿದೆ ಬಾ ಎಂದಿದ್ದಳಲ್ಲಾ. ಅಲ್ಲಿಗೆ ಹೋದರಾಯಿತು. ನಂತರ ಕಷ್ಟಪಟ್ಟು ಓದಿ ಒಳ್ಳೆಯ ಜೀವನ ನಡೆಸಬಹುದು. ಹಾ! ಅದೇ ಸರಿ.

ಅಬ್ಬಾ! ಮನಸ್ಸು ಈಗೆಷ್ಟು ಪ್ರಶಾಂತವಾಗಿದೆ. ಎಷ್ಟು ಧೈರ್ಯವೆನಿಸುತ್ತಿದೆ. ಏನು ಬೇಕಾದರೂ ಮಾಡಬಲ್ಲೆ, ಏನು ಬೇಕಾದರೂ ಎದುರಿಸಬಲ್ಲೆನೆಂಬ ನಂಬಿಕೆ ಬರುತ್ತಿದೆ. ಮತ್ತೆ ಇಷ್ಟು ದಿನ ಇದೆಲ್ಲಾ ಯೋಚಿಸದೆ ಮೂರ್ಖಳಂತೆ ಯೋಚಿಸಿ ಅಳುತ್ತಾ ಕುಳಿತೆ. 

ಹೋಗಲಿ ಬಿಡು, ಈಗಲಾದರೂ ಬುದ್ಧಿ ಬಂತಲ್ಲ.
ನಡೆ ಮನವೇ, ಬದುಕೋಣ, ಜಗತ್ತನ್ನು ಜಯಿಸೋಣ!!
- ಸುಧಾ ಜಿ    

ಸರಣಿ ಲೇಖನ - ಮಹಿಳೆ ಮತ್ತು ಮಕ್ಕಳು - 3

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

III. ಆಸ್ಪತ್ರೆಗಳು
ಈ ಹಂತದಲ್ಲಿ ಸೋವಿಯತ್ ಆಸ್ಪತ್ರೆಗಳ ಕುರಿತು ಒಂದು ಟಿಪ್ಪಣಿಯನ್ನು ಸೇರಿಸುವುದು ಉಚಿತವೆನಿಸುತ್ತದೆ. ಅವುಗಳಲ್ಲಿ ತುಂಬಾ ವ್ಯತ್ಯಾಸಗಳಿವೆ. ಉದಾಹರಣೆಗೆ, ಮಾಸ್ಕೊದಲ್ಲಿರುವ ಕ್ರೆಮ್ಲಿನ್ ಆಸ್ಪತ್ರೆಯು ಉಪಕರಣ, ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ಇಂಗ್ಲಿಷ್ ಆಸ್ಪತ್ರೆಗಳಿಗೂ ಹೇಳಿಕೊಡುವಂತಿವೆ. ಅಲ್ಲಿ ಹಲವಾರು ಹೊಸತರದ ಸಲಕರಣೆಗಳಿವೆ ಮತ್ತು ಎಲ್ಲವೂ ಕೆಲಸ ಮಾಡುತ್ತಿವೆ; ಅದು ಶಸ್ತ್ರಚಿಕಿತ್ಸೆಯ ಸ್ವಚ್ಛತೆಯಲ್ಲಿ ಬಹಳ ಅತ್ಯುತ್ತಮವಾದ ಮಟ್ಟಹೊಂದಿದೆ; ಜೊತೆಗೆ, ಕೆಲವು ವ್ಯವಸ್ಥೆಗಳಲ್ಲಿ, ಇಬ್ಬರಿಗಿಂತ ಹೆಚ್ಚು ಇರದ “ವಾರ್ಡ್”ಗಳಂತಹ ವ್ಯವಸ್ಥೆಗಳಲ್ಲಿ, ಒಳರೋಗಿಗಳಿಗೆ ಹನ್ನೆರೆಡು ಗಿನಿಗಳನ್ನು ಸಂಗ್ರಹಿಸುವ ಲಂಡನ್ ನರ್ಸಿಂಗ್ ಹೋಮ್‍ಗಳೊಂದಿಗೆ ಹೋಲಿಸಬಹುದು: ಇದಕ್ಕಿಂತಲೂ ಉತ್ತಮವಾದ ವ್ಯವಸ್ಥೆಯಿರುವ ಆಸ್ಪತ್ರೆಗಳಿವೆಯೆಂದು ಕೇಳಿದ್ದೇನೆ. ಆದರೆ ಈ ಆಸ್ಪತ್ರೆಯನ್ನು ಸರ್ಕಾರಿ ಅಧಿಕಾರಿಗಳು ಮತ್ತು ಕಮ್ಯುನಿಸ್ಟ್ ಪಾರ್ಟಿಯ ಉನ್ನತ ಸ್ಥಾನಗಳಲ್ಲಿರುವವರು ಮಾತ್ರ ಉಪಯೋಗಿಸಬಹುದು. (ಇಲ್ಲಿ ಒಂದು ವಿಷಯವನ್ನು ನಾನು ಹೇಳಲೇ ಬೇಕು. ನಾನು ಮಾತನಾಡಿಸಿದವರಲ್ಲಿ ಯಾರಿಗೂ ಸ್ವಲ್ಪವೂ ಇದರ ಬಗ್ಗೆ ಬೇಸರವಿಲ್ಲ. ಅವರು ಉನ್ನತ ಸರ್ಕಾರಿ ಅಧಿಕಾರಿಗಳ ಜೀವ ಅದೆಷ್ಟು ಮುಖ್ಯವೆಂದರೆ, ಅವರ ಆರೋಗ್ಯ ಹದಗೆಟ್ಟರೆ ದೇಶದ ಅತ್ಯುತ್ತಮ ಸಂಪನ್ಮೂಲಗಳನ್ನು ಅವರ ಆರೋಗ್ಯ ಉತ್ತಮಪಡಿಸಲು ಉಪಯೋಗಿಸಬೇಕು ಎಂದು ಒಪ್ಪಿಕೊಳ್ಳುತ್ತಾರೆ. ಅದು ಟ್ರಾಟ್‍ಸ್ಕಿ ಪದಪುಂಜದಲ್ಲಿ ಹೇಳುವುದಾದರೆ ‘ತೆರ್ಮಿದೊರ್’ ಇರಬಹುದು; ಆದರೆ ಅದು ತೆರ್ಮಿದೊರ್ ಎನ್ನುವುದಾದರೆ ಅದನ್ನು ಜಾಕೊಬಿಯನ್ಸ್ ಬೆಂಬಲಿಸುತ್ತಾರೆ. ನಮ್ಮ ಅತ್ಯಂತ ಭಾವುಕ ಮತ್ತು ಬೇಸರ ತರಿಸುವ ಕಮ್ಯುನಿಸ್ಟ್ ಬೆಂಬಲಿಗರಾದ ಮಾಸ್ಕೊ ಮಾರ್ಗದರ್ಶಕರು ಕ್ರೆಮ್ಲಿನ್ ಆಸ್ಪತ್ರೆಯನ್ನು ಸೋವಿಯತ್ ರಾಜ್ಯದ ವಿಜಯದ ಸಂಕೇತವೆಂದು ಹೇಳುತ್ತಾರೆ.)
ಲೆನಿನ್‍ಗ್ರಾದ್‍ನಲ್ಲಿರುವ ಮೆಚ್ನಿಕೊವ್ ಆಸ್ಪತ್ರೆಯು ಬಹಳ ವಿಶಿಷ್ಟವಾಗಿದೆ. ಇಲ್ಲಿ ಸಮವಸ್ತ್ರವಿಲ್ಲದಿರುವುದನ್ನು ಮತ್ತು ರೋಗಿಗಳೂ ಸೇರಿದಂತೆ ಜನರು ವಾರ್ಡ್‍ನ ಸುತ್ತಮುತ್ತ, ಶಸ್ತ್ರಚಿಕಿತ್ಸಾಕೇಂದ್ರದ ಸುತ್ತಮುತ್ತ ಕೂಡ ಓಡಾಡುವುದನ್ನು ನೋಡಿದರೆ ಶುದ್ಧವೈದ್ಯಕೀಯವಾದಿಗಳು ದಿಗ್ಭ್ರಮೆಗೊಳ್ಳುತ್ತಾರೆ. ಬಹುಶಃ ಇಲ್ಲಿ ಕ್ರಿಮಿಶುದ್ಧೀಕರಣದ ಮಟ್ಟವು ಅತ್ಯುತ್ತಮವಾದ ಇಂಗ್ಲಿಷ್ ಆಸ್ಪತ್ರೆಗಳಿಗಿಂತ ಕಡಿಮೆಯಿರಬಹುದು. ಇನ್ನೊಂದೆಡೆ, ಇಂಗ್ಲಿಷ್ ಆಸ್ಪತ್ರೆಗಳಿಗೆ ಮೆಚ್ನಿಕೊವ್ ಆಸ್ಪತ್ರೆಯಿಂದ ಕಲಿಯಲು ಕೆಲವು ವಿಷಯಗಳಿವೆ. ಉದಾಹರಣೆಗೆ, ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗೆ ಇಪ್ಪತ್ನಾಲ್ಕು ಅಥವಾ ನಲವತ್ತೆಂಟು ಗಂಟೆಗಳ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯಿದೆ; ಅದು  ಅತ್ಯಂತ ಅಪೇಕ್ಷಿತ ವಿಷಯ; ಜೊತೆಗೆ ಅಲ್ಲಿ ತೋಟವಿದೆ – ತರಕಾರಿ, ಹಣ್ಣು ಮತ್ತು ಹೂವುಗಳ ತೋಟವಿದೆ; ಅಲ್ಲಿ ಕಡಿಮೆ ಅವಧಿಗೆ ನರಸಂಬಂಧಿತ ಸಮಸ್ಯೆಗಳಿರುವ ರೋಗಿಗಳನ್ನು ಕೆಲಸಕ್ಕೆ ಹಾಕುತ್ತಾರೆ ಮತ್ತು ಹೂವುಗಳನ್ನು ವಾರ್ಡ್‍ಗಳಿಗೆ ಮತ್ತು ಪ್ರತ್ಯೇಕ ಕೊಠಡಿಗಳಿಗೆ ಕಳುಹಿಸುತ್ತಾರೆ. ನನಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ; ಆದರೂ ಸಹ, ನನಗೆ ಸಿಕ್ಕಿದ ಮಾಹಿತಿಯ ಪ್ರಕಾರ, ಪಾಶ್ಚಿಮಾತ್ಯ ಗುಣಮಟ್ಟಕ್ಕೆ ಒಗ್ಗಿದವರಿಗೆ ಕೆಲವು ಜಿಲ್ಲಾ ಆಸ್ಪತ್ರೆಗಳ ಸ್ವಚ್ಛತೆ ಮತ್ತು ಪ್ರತ್ಯೇಕ ಕೊಠಡಿಗಳನ್ನು ನೋಡಿ ಗಾಬರಿಯಾಗಬಹುದು ಎನಿಸುತ್ತದೆ. ಆದರೆ ರಷ್ಯನ್ ಜನತೆಯ ಹಿಂದಿನ ಇತಿಹಾಸವನ್ನು ಮರೆಯಬಾರದು; ಆಸ್ಪತ್ರೆಯೇ ಇಲ್ಲದಿರುವುದಕ್ಕಿಂತ ಯಾವುದಾದರೂ ಆಸ್ಪತ್ರೆಯೇ ಉತ್ತಮ!
ಒಂದನೆಯ ಪಂಚವಾರ್ಷಿಕ ಯೋಜನೆಯಾಗಲೀ, ಎರಡನೆಯದಾಗಲೀ, ಯುವ ಸೋವಿಯತ್ ನಾಗರಿಕರ ಹುಟ್ಟಿನ ಪ್ರಮಾಣದಲ್ಲಿ ಸಂಖ್ಯೆಯ ಹೆಚ್ಚಳದ ಬಗ್ಗೆ ಸಂತೋಷದಿಂದ ಹೇಳುವಂತಿಲ್ಲ; ಆದರೆ ಒಂದು ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನಾರ್ಕೊಮ್ಸ್‍ದ್ರಾವ್‍ನ ಅಧಿಕಾರಿಯು ಬಹಳ ಉತ್ಸಾಹದಿಂದ ಹೇಳಿದುದನ್ನು ಇಲ್ಲಿ ದಾಖಲಿಸಬಹುದು: “ಆಸ್ಪತ್ರೆಗಳಲ್ಲಿ ತಾಯಂದಿರು ಒಳಗೆ ಹೋಗುತ್ತಾರೆ, ಮಕ್ಕಳು ಹೊರಗೆ ಬರುತ್ತಾರೆ.”
   - ಎಸ್.ಎನ್.ಸ್ವಾಮಿ


ಕವನ - ಅಸಹಾಯಕಳು



ಹೊರಗೆಡವಲಿ ಹೇಗೆ ನನ್ನೆದೆಯ ನೋವನ್ನು
ಹೇಗೆ ಸುಧಾರಿಸಲಿ ಈ ನನ್ನ ಮಗುವನ್ನು
ಬತ್ತಿದಾ ಎದೆಯನು ಜಗ್ಗಿ ರಕ್ತ ಮೆತ್ತಿದ
ಬಾಯನು ತೆರೆದು ಕೀರಲು ದನಿಯಲಿ
ಚೀರುತಿದೆ ಪ್ರಾಣಹೋಗುವ ಹಾಗೆ

ಕತ್ತಲು ತುಂಬಿದ ಗುಡಿಸಲಿನ ಒಳಗಡೆ
ತಲೆ ನೇವರಿಸುತ ಎದೆಗವಚಿ ಮಗುವನ್ನು
ಕತ್ತು ಸೆಣೆದಳು ಜೀವ ಹೋದನುಭವದಿಂದ
ಎದೆಯ ನೋವಿಗೆ ಕಣ್ಣೀರು ಸುರಿಯುತಿದೆ
ಬಿದ್ದು ಒದ್ದಾಡಿದಳು ಮಗುವನೆಸೆದು ಕೆಳಗೆ

ಈ ಪಾಪಿ ಮಡಿಲಲ್ಲಿ ಏಕೆ ಹುಟ್ಟಿದೆ ನೀನು
ಹಸಿವನೀಗಲು ಕೂಡ ಶಕ್ತಿಯಿಲ್ಲದ ನಾನು
ಹೇಗೆ ಸುಧಾರಿಸಲಿ ಈ ನನ್ನ ಮಗುವನ್ನು

ಹಾಲು ತರುವೆನೆಂದು ಹೊರನಡೆದನು ತಂದೆ
ತೂಗುತಿಹನು ನೇಣ ಕೊರಳಿಗೇರಿಸಿ ಹೊರಗೆ
ಹೋಟಲಿನ ಲೋಟ ತೊಳೆವ ನಿನ್ನಣ್ಣ
ಬರುವನು ಹಾಲನಿಡಿದು ಅಳಬೇಡ

ಬಿದಿರು ಬೊಂಬೆಯನಿಡಿದು ಆಡುತ ಮಲಗು
ಕನಸಿನಲಿ ಬರುವುದು ನೀ ಬಯಸುವ ಹಾಲು
ಬೇಕಾದಷ್ಟು ಕುಡಿದು ತೃಪ್ತಳಾಗು

ನಾ ಕೊಡುವೆನು ಹಾಲ ಈ ನಿನ್ನ ಕಂದನಿಗೆ
ಈ ರಾತ್ರಿ ಬರುವೆಯ ನೀ ನನ್ನ ಜೊತೆಗೆ
ಎಂದ ದುರುಳನ ಮಾತು ಕಿವಿಯ ತಮಟೆಯನೊಡೆದು
ನರವ್ಯೂಹ ಬಿಗಿದಿದೆ ಕಣ್ಣು ಕುರುಡಾಗಿದೆ
ಇದಕಿಂತ ಸಾವೇ ಮೇಲು

ಕತ್ತನಿಸುಕಲು ಸಿದ್ಧವಾಯಿತು ನೇಣು
ಸೆರಗನೆಳೆಯಿತು ಮಗುವು ಅಳುತ
ಅಮ್ಮ ಹಸಿವು ಎದೆಯ ಕೊಡು ಬೇಗ

ಈಟಿಯಿಂದಿರಿದಳು, ಆತ್ಮವನು ಕೊಂದಳು
ಹಾಲಿಗಾಗಿ ಪರರ ಬಳಿಗೆ ನಡೆದಳು
ಬಡವರ ಮಗಳೀಕೆ ಅಸಹಾಯಕಳು
ಶ್ರೀಮಂತರಡಿಗಳಡಿ ಹುಡಿಯಾಗಿ ಹೋದಳು
  - ನರಸಿಂಹರಾಜು    

Article - LEAD IN COSMETICS AND IN FASHION JEWELLERY


Lead is a wonderful metal, is a normal constituent of earth’s crust, with trace amounts found naturally in soil, plants and water. If left undisturbed lead is practically immobile. However, once mined and transformed into man made products, lead has become the most widely scattered toxic metal in the world.
Lead has many useful properties and is used in many products like paints, batteries, in soldering metals, toys, cosmetics, fashion jewellery, cable sheath, ceramic wares, and plastics, as shields in radiation labs and in X-ray labs. The list is inexhaustive. Thus we find that modern man cannot have a comfortable life without lead, if not handled properly he cannot live with lead too.
Lead enters our body through food, water, air and also through absorption from the articles containing lead which are in contact with the skin. Lead poisoning is dangerous in that it does not show striking symptoms and could not be diagnosed at the early stage. Lead poisoning is slow and cumulative killer. Lead, on entry into the body, will get absorbed and get distributed to all tissues and finally accumulates in the bones .Lead crosses the placental barrier and reaches the foetus. The fetus can be poisoned before birth. It also crosses the blood-brain barrier in infants and damages the central nervous system. Young children, infants and fetuses absorb lead faster than adults. Lead has been proven to be a neurotoxin that can cause learning, behavioral and language problems along with increased aggression and lowered IQ in children. In adults it causes infertility, high B.P., loss of appetite, paralysis, and swelling of brain, anemia and finally death. In pregnant women, it causes pre-term delivery, low birth weight, still birth and miscarriage.
The World Health Organisation (WHO) estimates that 120 million people are overexposed to lead (approximately 3 times the number infected by HIV/AIDS) and 99% of the most severely affected are in the developing world. Lead poisoning is the most serious environmental threat to children and one of the most significant contributors to occupational disease Developed countries like the U.S., U.K. and Germany have taken aggressive steps to combact lead poisoning. In developing countries actions have been slower and sporadic.
National Referral Centre for Lead Poisoning in India, which is a joint venture of St. John’s National Academy of Health Sciences and the George Foundation is working towards creating awareness among people about the hazards of lead, uses and misuses of lead.
An inter-institutional volunteer programme has been mooted by NRCLPI under the guidance of Dr.Thuppil Venkatesh, St. John’s Medical College in association with national and state level governing bodies, wanted students to address problems relating to communities and society in lessening pollution in air, water, soil and create a more aware and healthier society. Hence NRCLPI has been sponsoring “PROJECT LEAD FREE” in 15 different colleges in Bangalore. Apart from this it is has also conducted workshops on “Prevention of Lead Poisoning (LEADer- Lead Educator Programme) for school, college teachers and also students.
A few of our college students with Dr.C.K.Mythily of Chemistry department, as project co-ordinator have taken up a short term students research project “LEAD IN COSMETICS AND IN FASHION JEWELLERY”.
Our survey through net has revealed that many of the cosmetics like lipsticks, hair dyes, kohls, mascara, kajals, surma, sindoor, nail polishes etc. contain lead. The lipsticks which adds a naturalluscious color to lips contain lead (colourant). Reports about lipstick containing lead are flooding the media, since the Campaign for Safe Cosmetics conducted a survey in U.S. and found that 61% contained lead ranging from .03 to 0.065 ppm. One study estimates that average women consumes 4 to 6 pounds of lipsticks a year, from licking her lips and eating it with food. Lead builds up in the body overtime and lead containing lipsticks applied several times a day , every day ,can add upto significant exposure level. Dyeing of hair to look younger is more common a practice among women, men and also among youngsters (hair colouring). Lead acetate is used as a colourant in hair dyes.
Kohl is worn for a variety of reasons including tradition, beautification, to ward off evil eye, to protect against eye ailments, to get relief from the glare of the sun is found to contain large proportions of galena (ore of lead) and stibnite. Lead and antimony in kohl are toxic and kill bacteria transmitted by flies and contaminated water. However the toxins can enter the bloodstream of the user and cause chronic health problems. Sometimes in babies it has caused infant death due to lead poisoning. Lead levels in commercial kohl preparation have been found to be as high as 84%.
There is no strict rules and regulations laid down by any government to control or check the lead content in cosmetics. The cosmetic industry needs to clean up its act and remove lead and other toxic ingredients from its products.
The aim of our project is to create awareness among the general public about the presence of lead in cosmetics and in fashion jewellery. We have collected samples from local markets which middle class people would frequently buy .The samples have been submitted for analysis .
We, the women force of India should be aware of lead poisoning as we pass this toxin to our unborn babies also Lead poisoning to a very large extent is a preventable condition. Awareness along with precautionary measures can alleviate this condition and can help create a “LEAD-SAFE” ENVIRONMENT.

LEARNING FOR BETTER LIVING
The levels of lead in the blood may increase if
1) The diet is too low or too high in protein
2) The diet is too high in fats
3) The diet is too low in calcium
4) The diet is low in iron
5) The diet is low in zinc
Hence eat a balanced diet
Offer regular meals and snacks to your children. This can help reduce their changes of having high blood lead levels.

Lead safe environment at home –What you can do
1) Reduce dust at home –Don’t sweep but wet-wash floors, seal cracks, vents and stop dust accumulating. Vaccum clean regularly. Remove shoes at the door.
2) Keep kids’ play areas safe. Let not the play areas of kids be bare. Put grass or plants over or near it. Wash kids’ toys, pets clean.
3) Make sure children wash hands and faces before they eat or have a nap.
3) Check for peeling or deteriorating paint in your home if it was built before 1970.
4) Wash your hands, face and hair and change your clothes immediately when get back from your work place.

- Dr. C. K. Mythily,
Associate Professor
Department of Chemistry
Bangalore


                         


Poem - IMAGE




I have always tried to see you,
At least a glimpse of you
When I take off my helmet,
Immediately I look for you
I go to washrooms,
Sometimes to look at you
When you smiled at me,
I have always returned the same
When you cried,
I never laughed
We are so similar,
Yet so different
Though I am what I am
You are what I wanna be
I lived in the society
But you lived in me
I am answerable to everybody except me
But you are answerable to none except you
I am chained to feel by my brains
But you are free to feel from your heart
When will that day arrive
When I and you could merge into one?
I cannot wait till my death
As there is no existence beyond
Neither can I be born again
As the clocks are accustomed
To turn clockwise
If not me, who can break
The mirror in between for us?

-Nileena Thomas