Sunday 11 June 2017

Article - Women's participation in Financial institutions.



A group of students in my department, undertook a project to study Financial Literary Awareness among Rural Women. A brief Review of literature revealed that the number of women in workforce had come down in the past decade. This result was surprising as I was under the impression that as more women get access to education, more women may want to take part in income generating activities. But the National Sample Survey results disproved my assumption. Further, the review had revealed that more number of women in rural areas were involved in income generating activities. 
SELF HELP GROUP

When I looked into the current study, it was noted that nearly 75% of women were housewives, who were not involved in income generating activities. Nearly 65% of these women were involved in Self Help groups(SHGs). Majority of them had taken loans from SHGs and were saving money through SHGs. 

Majority of these rural women had bank account, they knew about saving money in the bank, the provision to take loans from the banks. They were also aware of few insurance schemes too. The awareness about Banking, savings, loans, calculation of rate of interest for loan taken, insurance schemes were some of the parameters considered to measure the financial literary of women.
When the women were asked about why and how they save money, their response was that saving is for children's education, celebration of some functions/ festivals at home and for needy period when there may not be much money provided by the spouse.
The reasons for taking loans were children's school/ college admission, ill health of family member, told by husband to take loans.
Most of the women told that they didn't share with their spouses, the extent of their savings as the money they saved was what they had spared by intelligent management of the house hold expenses. Some women used to buy small gold jewelry by their savings. In case of emergency, they would pledge the gold jewelry, to get the money. Few women had taken loans to buy cows so that they may sell the milk to get regular income. They reported that most of the time, the money that comes to their account through milk cooperative societies is taken by their spouses. They do not have much access to that money. Hence some of them invested in secrecy in chit funds run by local people or gave money for petty lending through third party. Many such women reported that they were at risk of loosing their money due to such transactions. But they had no other options.
These findings have left me with few more questions. Why has the ratio of women in work force reduced? Why education and income generating activities not having a proportional growth rate? Most of the rural women were into saving money as they understood the need for extra income. Yet they are not much into income generating activities. Even those women who are into income generating activities, are still letting the menfolk manage their finances most of the time. In spite of these limitations, savings through micro finance access through SHGs has shown tremendous opportunities for financial transactions. How to involve the women into income generating activities as well as make them financially independent so that they may enjoy the fruits of their efforts? 

I cannot simply propose or blame patriarchal society and its structure as an answer for all the questions churning in my mind. There is a need to seriously look into the way women themselves look at their roles. Not only nurturers but also providers as well as managers of their income. That day will be the beginning of financial empowerment among women. 

- Dr.Suman K Murthy  
  



ಸರಣಿ ಲೇಖನ - ಮಹಿಳೆ ಮತ್ತು ಮಕ್ಕಳು - 2

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

II. ಪ್ರಸವ-ಪೂರ್ವ ಚಿಕಿತ್ಸಾಕ್ರಮ
(1) ಗರ್ಭಪಾತ ಮತ್ತು ಗರ್ಭನಿರೋಧಕ
ಕೇಂದ್ರೀಯ ನಿಯಂತ್ರಣ ಮತ್ತು ಸ್ಥಳೀಯ ಸ್ವಾಯತ್ತತೆಯು ಯಾವ ಮಟ್ಟದಲ್ಲಿದೆ ಎಂಬುದು ಆಯಾ ವಿಷಯಕ್ಕೆ ಅನುಗುಣವಾಗಿರುತ್ತದೆ. ಮಗುವಿನ ಜನನದ ಪ್ರಶ್ನೆಗೆ ಬಂದರೆ, ಕೇಂದ್ರದ ಆಶಯಗಳನ್ನು ಅಪರೂಪವಾದ ದೃಢತೆಯೊಂದಿಗೆ ವ್ಯಕ್ತಪಡಿಸುತ್ತದೆ. ಸೋವಿಯತ್ ಯೂನಿಯನ್‍ಗೆ ಜನಸಂಖ್ಯೆ ಹೆಚ್ಚುವುದು ಬೇಕು; ಅದಕ್ಕೆ ಶಕ್ತಿಶಾಲಿ ಜನರು ಬೇಕು; ಈ ಉದ್ದೇಶ ಈಡೇರಬೇಕೆಂದರೆ ಪ್ರಸವಪೂರ್ವದ ಮತ್ತು ಪ್ರಸವ ನಂತರದ ಕಾಲವು ಬಹಳ ಮುಖ್ಯವೆಂದು ನಂಬಿದೆ. ಇದಕ್ಕೆ ಅನುಗುಣವಾಗಿ, ಅದು ಮಗುವಿನ ಜನನ, ಗರ್ಭಪಾತ ಮತ್ತು ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆಯ ಬಗ್ಗೆ ಬಹಳ ಕಾಳಜಿ ವಹಿಸುತ್ತದೆ.
ಎಲ್ಲರಿಗೂ ತಿಳಿದಿರುವ ಹಾಗೆ ರಷ್ಯಾದಲ್ಲಿ ಗರ್ಭಪಾತವು ಕಾನೂನುಬದ್ಧ; ಆದರೆ ನಿಯಂತ್ರಣವೇ ಇಲ್ಲ ಎನ್ನುವಂತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಸರ್ಕಾರಿ ಕ್ಲಿನಿಕ್‍ಗಳಲ್ಲಿ ಗರ್ಭಪಾತ ಮಾಡಿಸದಿದ್ದರೆ ಅದು ಸಂಪೂರ್ಣವಾಗಿ ಕಾನೂನು ಉಲ್ಲಂಘನೆಯಾಗುತ್ತದೆ ಮತ್ತು ಹೊರಗೆ ಮಾಡಿಸಿಕೊಂಡರೆ ಮೂರು ವರ್ಷಗಳ ಸೆರೆಮನೆ ವಾಸದ ಶಿಕ್ಷೆ ನೀಡಲಾಗುತ್ತದೆ – ಅದು ರಷ್ಯಾದಲ್ಲಿ ಬಹಳ ದೊಡ್ಡ ಶಿಕ್ಷೆ. (ಅಲ್ಲಿ ಪ್ರತಿಯೊಂದು ನಗರ ಹಾಗೂ ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿವೆ ಎನ್ನುತ್ತಾರೆ. ಒಂದು ಹೊಸ ಕಾರ್ಖಾನೆಯನ್ನು ಕಟ್ಟಿದ ಕೂಡಲೇ ಅಥವಾ ಹೊಸ ಜಿಲ್ಲೆ ಆರಂಭವಾದ ಕೂಡಲೇ ಅಲ್ಲೊಂದು ಸರ್ಕಾರಿ ಆಸ್ಪತ್ರೆ ತೆರೆಯಲು ಪ್ರಯತ್ನ ಮಾಡಲಾಗುತ್ತದೆ) ಗರ್ಭಪಾತಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆ ಮಾಡಿಸುವುದು ಕಡ್ಡಾಯ. ವೈದ್ಯಕೀಯ ಕಾರಣಗಳಿಗೋ ಅಥವಾ ದೊಡ್ಡ ಕುಟುಂಬ ಎನ್ನುವಂತಹ ಬೇರೆ ಕಾರಣಗಳಿಗೋ ಅಲ್ಲದಿದ್ದರೆ ಆಕೆ ಮಗುವಿಗೆ ಜನ್ಮ ನೀಡಬಾರದೇಕೆ – ಎಂದು ಆಕೆಯ ಮನವೊಲಿಸಲು ತುಂಬಾ ಪ್ರಯತ್ನಿಸುತ್ತಾರೆ. ಪ್ರಥಮ ಪ್ರಸವವಾದರಂತೂ ಗರ್ಭಪಾತ ನಿಲ್ಲಿಸಲು ತಮ್ಮೆಲ್ಲಾ ಶಕ್ತಿಯನ್ನು ಉಪಯೋಗಿಸುತ್ತಾರೆ. ಆದರೆ ಆಕೆಯ ಮಾತೇ ಕೊನೆ; ಅವಳಿಗೆ ಮಗು ಬೇಡವೆಂದರೆ ಬೇಡ, ಅಲ್ಲಿಗೆ ಮುಗಿಯಿತು. ಆದರೆ ಅವಳ ಮನವೊಲಿಸಲು ಮಾಡುವ ಪ್ರಚಾರದ ಮತ್ತು ಮನವೊಪ್ಪಿಸುವ ಕೆಲಸದ ದಾಳಿಯನ್ನು ಎದುರಿಸಿ ನಿಲ್ಲಬೇಕೆಂದರೆ ಆಕೆ ಬಹಳ ಗಟ್ಟಿ ಹೆಂಗಸಾಗಬೇಕು.
ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಇರುವ ವ್ಯತ್ಯಾಸವೆಂದರೆ, ರಷ್ಯಾದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿರುವುದರಿಂದ, ಮಾನ್ಯ ಮಾಡಿರುವುದರಿಂದ ಅದರಲ್ಲಿ ರಹಸ್ಯ ಕಾಪಾಡುವುದು ಮತ್ತು ಅದರ ದುಷ್ಪರಿಣಾಮಗಳು ಕಣ್ಮರೆಯಾಗಿವೆ. ಗರ್ಭಪಾತಕ್ಕೆ ಬಹಳ ಕಡಿಮೆ ಶುಲ್ಕವಿರುತ್ತದೆ; ಕಡುಬಡವ ಕಾರ್ಮಿಕರಿಗೆ ಉಚಿತ; ಮತ್ತು ಸಹಜ ಹೆರಿಗೆಯಿಂದ ಮಗು ಹುಟ್ಟಿದಾಗ ನೀಡುತ್ತಿದ್ದ ವೇತನವನ್ನೇ ಚೇತರಿಕೆಯ (ಛಿoಟಿvಚಿಟesಛಿeಟಿಛಿe) ಸಮಯದಲ್ಲೂ ನೀಡಲಾಗುವುದು. ಇದರ ಪರಿಣಾಮವು ಜನಸಮೂಹದ ಮೆಲೆ ಯಾವ ರೀತಿಯಿದೆ ಎನ್ನುವುದನ್ನು ಅಳೆಯುವುದು ಬಹಳ ಕಷ್ಟ; ಗರ್ಭಪಾತ ಮತ್ತು ಜನನಗಳ ಬಗ್ಗೆ ವಿವಿಧ ರೀತಿಯ ಸುದ್ದಿಗಳು ಬರುತ್ತವೆ. ಅದೇನೆ ಆಗಲಿ, ಜನಸಂಖ್ಯೆಯಂತೂ ವೇಗವಾಗಿ ಬೆಳೆಯುವತ್ತ ಸಾಗುತ್ತಿದೆ. ಈ ಜನಸಂಖ್ಯೆಯ ಹೆಚ್ಚಳಕ್ಕೆ ಪ್ರಸವ-ನಂತರದ ಆರೈಕೆಯು ಕಾರಣ ಎನ್ನುವುದರಲ್ಲಿ ಸಂದೇಹವೇ ಇಲ್ಲ; ಆದರೆ ಬೇರೆ ದೇಶದ ರೈತ ಸಮುದಾಯದಲ್ಲಿರುವಂತೆ ರಷ್ಯಾದಲ್ಲೂ ಸಹ ತಾಯ್ತನವು ಬಹಳ ಬೇಗ ಆರಂಭವಾಗುತ್ತದೆ ಎಂಬುದೂ ನೆನಪಿನಲ್ಲಿರಬೇಕು. ನಾನು ಲೆನಿನ್‍ಗ್ರಾದ್‍ನ ಕ್ಲಿನಿಕ್‍ನಲ್ಲಿ ನೋಡಿದ ತಾಯಂದಿರ ವಯಸ್ಸು ಸುಮಾರು ಹದಿನೇಳು ಅಥವಾ ಹದಿನೆಂಟಿರಬೇಕು.
ಗರ್ಭಪಾತಕ್ಕೆ ಪರ್ಯಾಯವಾಗಿ ಗರ್ಭನಿರೋಧಕ ಉಪಯೋಗಿಸುವುದು ಹೆಚ್ಚಾಗುತ್ತಿದೆ; ಮತ್ತು ತಾಯಂದಿರ ಆರೈಕೆಗಾಗಿ ಇರುವ ಮಾಸ್ಕೊ ಇನ್ಸ್‍ಸ್ಟಿಟ್ಯೂಟ್ ಫಾರ್ ದಿ ಪ್ರೊಟೆಕ್ಷನ್ ಆಫ್ ಮದರ್ಸ್ ತಂದಿರುವ ಪುಸ್ತಕಗಳಲ್ಲಿ ಗರ್ಭನಿರೋಧಕ ಒಂದು ಪರ್ಯಾಯ ಎಂದು ಸ್ಪಷ್ಟವಾಗಿ ಪರಿಗಣಿಸಲಾಗಿದೆ.  ಅದು ಅಪೇಕ್ಷಿತ ಪರ್ಯಾಯವೇ ಎಂಬುದು ಸ್ಪಷ್ಟವಾಗಿಲ್ಲ; ಹೌದೆಂದು ಕೆಲವು ಸೋವಿಯತ್ ವೈದ್ಯರು ಹೇಳಿದರೆ, ಬೇರೆ ಕೆಲವರು ಇಲ್ಲವೆನ್ನುತ್ತಾರೆ; ಇನ್ನು ಕೆಲವರು, ಇಂಗ್ಲೆಂಡ್ ಜನರಂತೆ ಎರಡೂ ಇರಬಾರದು ಎನ್ನುತ್ತಾರೆ. ಯವುದೇ ರೀತಿಯಲ್ಲಾದರೂ, ಜನನದ ನಿಯಂತ್ರಣವನ್ನು ವ್ಯಾಪಕವಾಗಿ ಉಪಯೋಗಿಸಲು ಎರಡು ಕಷ್ಟಗಳಿವೆ: ಮೊದಲನೆಯದಾಗಿ, ಅದನ್ನು ಉಪಯೋಗಿಸಲು ಏನೇ ಆಗಲಿ ಸ್ವಲ್ಪಮಟ್ಟಿಗಾದರೂ ಜಾಣತನ ಮತ್ತು ಜಾಗರೂಕತೆ ಬೇಕು, ಅದನ್ನು ಹಿಂದುಳಿದ ಪ್ರದೇಶಗಳಲ್ಲಿರುವ ಗ್ರಾಮೀಣ ಜನರಿಂದ ನಿರೀಕ್ಷಿಸುವುದು ಕಷ್ಟ; ಎರಡನೆಯದಾಗಿ, ಗರ್ಭನಿರೋಧಕ ವಸ್ತುಗಳನ್ನು ಸೋವಿಯತ್ ಯೂನಿಯನ್‍ನಲ್ಲೇ ತಯಾರಿಸಲಾಗುವುದು ಮತ್ತು ಅವುಗಳು ಯಾವಾಗಲೂ ನಂಬಲರ್ಹವಲ್ಲ. ಅದೇನೇ ಇರಲಿ, ಸೋವಿಯತ್ ಯೂನಿಯನ್‍ನಲ್ಲಿ ಈ ವಿಷಯಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ‘ಲೈಂಗಿಕ ಶಿಕ್ಷಣ’ವನ್ನು ನೀಡುತ್ತಿದ್ದಾರೆ; ಅದನ್ನು ಮಾಸ್ಕೊದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಿದ್ದಾರೆ; ಉದಾಹರಣೆಗೆ, ಒಡೆಸ್ಸಾದಲ್ಲಿ ಮದುವೆಯ ಬಗ್ಗೆ (ಅದು ಯಾವುದೇ ರೀತಿಯ ಮದುವೆಯಾಗಿರಬಹುದು) ಯೋಚಿಸುವ ಯುವಜನರು ವೈದ್ಯರನ್ನು ಕಾಣಬೇಕೆನ್ನುವುದು ಸಾಮಾನ್ಯ ನಿಯಮ. ಅದು ಕಾನೂನಲ್ಲ, ಆದರೂ ವೈದ್ಯರನ್ನು ಭೇಟಿ ಮಾಡೇ ಮಾಡುತ್ತಾರೆ ಮತ್ತು ಸೋವಿಯತ್ ರಷ್ಯಾದ ಜೀವನದಲ್ಲಿ ಬಲವಾದ ಗುಣಲಕ್ಷಣವಾದ ಅರೆ-ಸಾರ್ವಜನಿಕ ಶಾಲಾ ನೀತಿಸಂಹಿತೆ ಮೂಲಕ ಒತ್ತಾಯ ಮಾಡಲಾಗುತ್ತದೆ. ಜೊತೆಗೆ, ಕೈಗಾರಿಕೆಗಳಲ್ಲಾಗಲಿ, ಇನ್ನೆಲ್ಲೇ ಆಗಲಿ, ಕ್ಲಿನಿಕ್‍ಗಳಲ್ಲಿ ಜನನ ನಿಯಂತ್ರಣದ ಕುರಿತು ಚಿತ್ರಸಹಿತ ವಿವರಣೆಯ ಪೋಸ್ಟರ್‍ಗಳಿರುತ್ತವೆ ಮತ್ತು ಅದರ ಬಗ್ಗೆ ಉಪನ್ಯಾಸ ಮತ್ತು ಮಾಹಿತಿಗಳನ್ನು ನೀಡುತ್ತಾರೆ; ನಾವು ಈಗಾಗಲೇ ತಿಳಿಸಿದ ಮಾಸ್ಕೊದಲ್ಲಿರುವ ಸಂಸ್ಥೆಗಳಂತಹ ಕೆಲವು ಸಂಸ್ಥೆಗಳು ಸಲಹೆ ಮತ್ತು ವಿಚಾರಣೆಗಳ ಬಹಳ ವಿಸ್ತೃತವಾದ ವ್ಯವಸ್ಥೆಯನ್ನು ಹೊಂದಿವೆ; ಅದರಲ್ಲಿ ವೈದ್ಯಕೀಯ ತಪಾಸಣೆ ನಡೆಯುತ್ತಿರುವಾಗ ಕ್ರಮೇಣವಾಗಿ ವೈದ್ಯರು ಬಹಳ ದೊಡ್ಡದಾದ ಮತ್ತು ಲೆಕ್ಕವಿರದಷ್ಟು ವಿವರಗಳನ್ನು ತುಂಬಬೇಕಾದ ನಮೂನೆಗಳಿವೆ.
(2) ಮಗುವಿನ ಜನನ
ಈ ವಿಷಯದ ಋಣಾತ್ಮಕ ಅಂಶದಿಂದ ಮಗುವಿನ ಜನನದ ವ್ಯವಸ್ಥೆಯನ್ನು ನೋಡೋಣ. ಇಲ್ಲಿ ಮಾತೃತ್ವವನ್ನು ಕಾಪಾಡಲು ಸೋವಿಯತ್ ಕಾನೂನುಗಳು ಪ್ರಪಂಚದಲ್ಲೇ ಅತ್ಯಂತ ಉದಾರವಾದ ಅವಕಾಶಗಳನ್ನು ಮಾಡಿಕೊಟ್ಟಿವೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ದೈಹಿಕ ಶ್ರಮ ಹಾಕುವ ಪ್ರತಿಯೊಬ್ಬ ಉದ್ಯೋಗಸ್ಥೆಯೂ* (*ಈಉದ್ದೇಶಕ್ಕಾಗಿ ಕೆಲವೊಂದು ಉದ್ಯೋಗಗಳನ್ನು ಉದಾ: ವೈದ್ಯವೃತ್ತಿ, ದೈಹಿಕ ವೃತ್ತಿಗಳೆಂದು ವಿಭಾಗಿಸಲಾಗಿದೆ) ಪೂರ್ತಿ ವೇತನದೊಂದಿಗೆ ನಾಲ್ಕು ತಿಂಗಳ ರಜೆಯನ್ನು – ಮಗು ಹುಟ್ಟುವ ಮುನ್ನ ಮತ್ತು ನಂತರ ಎರೆಡೆರೆಡು ತಿಂಗಳು - ನೀಡಬೇಕೆಂದು ರಷ್ಯನ್ ಕಾನೂನು ಹೇಳುತ್ತದೆ. ಕಛೇರಿಗಳಲ್ಲಿ ಕೆಲಸ ಮಾಡುವವರಿಗೆ ರಜೆಯ ಕಾಲಾವಧಿಯು 12 ವಾರಗಳಾಗುತ್ತದೆ. ಇದರ ಜೊತೆಗೆ, ನವಜಾತ ಶಿಶುವಿಗೆ ಬೇಕಾದ ಬಟ್ಟೆಬರೆ, ಹಾಸಿಗೆ, ಮುಂತಾದವುಗಳನ್ನು ಕೊಳ್ಳಲು ಅಸಮರ್ಥರಾದ ತಾಯಂದಿರಿಗೆ ‘ತಾಯ್ತನ’ಕ್ಕೆ ಮತ್ತು ಹೊರಗಿನ ಆಹಾರ ತಿನ್ನಿಸಲು ವಿಶೇಷ ಭತ್ಯೆಗಳನ್ನು ನೀಡಲಾಗುವುದು. ಈ ರೀತಿಯ ಕೆಲವು ಸಹಾಯಗಳನ್ನು ಬಂಡವಾಳಶಾಹಿ ರಾಷ್ಟ್ರಗಳಲ್ಲೂ ಕೆಲವೊಮ್ಮೆ ಕೊಡುತ್ತಾರೆ; ಆದರೆ ಆ ದೇಶಗಳಲ್ಲಿ ಅದಕ್ಕೆ “ದಾನ” ಎಂಬ ಹೆಸರಿರುವುದು ಸಹಜ. ತಾಯಿಯು ಸಾಧ್ಯವಾದಷ್ಟೂ ಅತ್ಯಂತ ಅನಾನುಕೂಲವಾದ ಸಮಯದಲ್ಲಿ “ಕರುಣಾಮಯಿ ಮಹಿಳೆ”ಯರಿಂದ ಕಾಣಿಕೆಗಳನ್ನು ಸ್ವೀಕರಿಸಿ, ಅವರಿಗೆ ನಮಸ್ಕರಿಸಿ ಅಭಾರಿಯಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ; ಸೋವಿಯತ್ ರಷ್ಯಾದಲ್ಲಿ ಅದು ದಾನವಲ್ಲ, ಹಕ್ಕು.
ಪ್ರಸವಪೂರ್ವ ಆರೈಕೆಗಾಗಿ ಪ್ರತಿಯೊಬ್ಬ ಗರ್ಭಿಣಿಯೂ ಆಕೆಯ ಕಾರ್ಖಾನೆ ಅಥವಾ ಕಛೇರಿಯ ಕ್ಲಿನಿಕ್ ಅಥವಾ ಜಿಲ್ಲಾ ಕ್ಲಿನಿಕ್‍ಗೆ ಬರಬೇಕೆಂಬ ನಿರೀಕ್ಷೆಯಿದೆ; ಅದು ಅವರು ತಮ್ಮ ಸಂಬಳವನ್ನು ಪಡೆಯುವುದಕ್ಕೆ ಇರುವ ಷರತ್ತು ಎಂದು ತಿಳಿಸಿದರು. ಅಂತಹ ಕ್ಲಿನಿಕ್‍ಗಳಲ್ಲಿ ಪರಿಣಿತಿಯಲ್ಲಿ, ಕಾರ್ಯದಕ್ಷತೆಯಲ್ಲಿ ಮತ್ತು ಅದನ್ನು ನಡೆಸುವವರ ಅನುಭವದಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗಳಿರುತ್ತವೆ ಎನ್ನುವುದು ಸತ್ಯ. ನಾನು ನೋಡಿದ ಕ್ಲಿನಿಕ್‍ಗಳಲ್ಲಿ, ಲೆನಿನ್‍ಗ್ರಾದ್‍ನ ಲಾವ್ರೊವ್ ರಸ್ತೆಯಲ್ಲಿರುವ ಸ್ಮೊಲ್ನಿ ಜಿಲ್ಲೆಯಲ್ಲಿ ಸೇವೆ ಮಾಡುವ ಜಿಲ್ಲಾ ಕ್ಲಿನಿಕ್ ಅತ್ಯುತ್ತಮವಾದದ್ದು; ಅಲ್ಲಿ ಸಮಾಲೋಚನೆಗಾಗಿ ಗರ್ಭಿಣಿಯರು ಹಾಗೂ ಬಾಣಂತಿಯರು ನಿರಂತರವಾಗಿ ಹೊಳೆಯಂತೆ ಹರಿದು ಬರುತ್ತಾರೆ. ಜೊತೆಗೆ ನಿರೀಕ್ಷಣಾ ಕೊಠಡಿಗಳಲ್ಲಿ ಮತ್ತು ಬೇರೆ ಕಡೆಗಳಲ್ಲೂ ಸಹ ಬಹಳ ಪರಿಣಾಮಿಕಾರಿಯಾದ ಪೋಸ್ಟರ್‍ಗಳು ಇದ್ದವು. ಇವುಗಳನ್ನು ಋತುಗಳಿಗೆ ತಕ್ಕಂತೆ ಬದಲಾವಣೆ ಮಾಡುತ್ತಾರೆ. ಅವುಗಳು ಆಗಸ್ಟ್‍ನಲ್ಲಿ, ಮುಖ್ಯವಾಗಿ ನೊಣಗಳಿಂದ ಆಹಾರ ಪದಾರ್ಥಗಳು ಹಾಳಾಗುವ ಬಗ್ಗೆ, ಇನ್ನೂ ಮುಂತಾದ ವಿಷಯಗಳ ಬಗ್ಗೆ ತಿಳಿಸುತ್ತವೆ. ತಾಯಿಯು ಮಗು ಹುಟ್ಟಿದ ನಂತರ ಉದ್ಯೋಗಕ್ಕೆ ಹೋಗದಿದ್ದರೂ ಮಗುವಿನ ಆರೈಕೆಗಾಗಿ ವೇತನ ಪಡೆಯುತ್ತಾಳೆ. ಆ ಕಾಲಾವಧಿಯಲ್ಲೂ ಆಕೆ ಮಗುವಿನೊಂದಿಗೆ ಕ್ಲಿನಿಕ್‍ಗೆ ಕಾಲಕಾಲಕ್ಕೆ ಬರುವುದು ಕಡ್ಡಾಯ. ಲೆನಿನ್‍ಗ್ರಾದ್, ಮಾಸ್ಕೊ ಮತ್ತು ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟೂ ಕೇಂದ್ರಗಳಲ್ಲಿ ತಾಯಂದಿರು ಸಲಹೆಗಾಗಿ ಕ್ಲಿನಿಕ್‍ಗೆ ಬರುವಂತೆ ಉತ್ತೇಜಿಸಲು ಅನುಸರಣಾ ವಿಧಾನಗಳಿವೆ; ಜೊತೆಗೆ, ಕ್ಲಿನಿಕ್‍ನ ಸಿಬ್ಬಂದಿಗಳು ತಾಯಂದಿರ ಮನೆಗಳಿಗೇ ಭೇಟಿ ನೀಡಿ, ಅವರು ಹೇಗೆ ಚೇತರಿಸಿಕೊಳ್ಳುತ್ತಿದ್ದಾರೆಂದು ಗಮನಿಸುತ್ತಾರೆ. ಮನೆಗೆ ಭೇಟಿ ನೀಡುವ ಸೇವೆಯು ಎಷ್ಟರಮಟ್ಟಿಗೆ ನಡೆಯುತ್ತಿದೆ ಎನ್ನುವುದು ಸಿಬ್ಬಂದಿಯ ಲಭ್ಯತೆಯ ಮೇಲೆ ಅವಲಂಬಿತವಾಗಿದೆ; ಆದರೆ ಸಾಮಾನ್ಯವಾಗಿ ಹೇಳುವುದಾದರೆ, ಈ ವಿಷಯದಲ್ಲಾಗಲಿ ಅಥವಾ ಬೇರೆ ವಿಷಯದಲ್ಲಾಗಲಿ ರಷ್ಯನ್ ಆರೋಗ್ಯ ವ್ಯವಸ್ಥೆಯು ‘ಪ್ರಸವ ನಂತರ’ದ ಆರೈಕೆಗೆ ಮಹತ್ವ ನೀಡುವುದನ್ನು ತುಂಬಾ ಉತ್ತೇಜಿಸುತ್ತದೆ.
ಮಕ್ಕಳ ಜೀವನವನ್ನು ಕಾಪಿಟ್ಟುಕೊಳ್ಳುವ ಮತ್ತು ತಾಯಂದಿರ ಸೌಕರ್ಯ ಹಾಗೂ ಸಂತೋಷವನ್ನು ಹೆಚ್ಚಿಸುವ ಮಾರ್ಗವಾದ ‘ಸಲಹಾ ಸೇವೆ’ಯ ಬಗ್ಗೆ ಅತಿಶಯದಿಂದ ಮಾತನಾಡಲು ಸಾಧ್ಯವೇ ಇಲ್ಲ. ಅದರ ಕುರಿತು ಅಂಕಿಅಂಶಗಳನ್ನು ಪಡೆಯುವುದು ಸುಲಭವಲ್ಲ; ಆದರೆ ನಾವು ಗಮನಿಸಬೇಕಾದ ಅಂಶವೆಂದರೆ, 1910ರಲ್ಲಿ (ಒಂದು ವರ್ಷದಲ್ಲಿ) ಯುರೋಪಿಯನ್ ರಷ್ಯಾದಲ್ಲಿ ಶಿಶುಮರಣದ ಪ್ರಮಾಣವು ಸಾವಿರಕ್ಕೆ ಇನ್ನೂರ ಎಂಭತ್ತೈದು ಇತ್ತು; 1927ರ ಹೊತ್ತಿಗೆ ಅದು ನೂರ ಎಂಬತ್ತನಾಲ್ಕಿಗೆ ಬಂದಿತು; 1928ರಲ್ಲಿ ಲೆನಿನ್‍ಗ್ರಾದ್‍ನಲ್ಲಿ ನೂರ ಮುವತ್ತೇಳಕ್ಕೆ ಮತ್ತು ಮಾಸ್ಕೊದಲ್ಲಿ 128ಕ್ಕೆ ಇಳಿಯಿತು, ಇನ್ನೂ ಇಳಿಯುತ್ತದೆ ಎನ್ನುತ್ತಾರೆ; ಹಾಗಿದ್ದರೂ ಸಹ, ಬ್ರಿಟನ್‍ಗಿಂತಲೂ ಸ್ವಲ್ಪ ಹೆಚ್ಚಾಗೇ ಇದೆ. ಬಹಳ ಹಿಂದುಳಿದ ರೈತಾಪಿ ದೇಶದ ಪರಿಸ್ಥಿತಿಯಿಂದ ಹೊರಬರುತ್ತಿರುವ ಒಂದು ದೇಶದಲ್ಲಿ ಈ ಅಂಕಿಅಂಶಗಳು ಮಹತ್ವಪೂರ್ಣವಾದವು. ಬಹುಶಃ ಇನ್ನೂ ಹೆಚ್ಚಿನ ಗಮನಾರ್ಹವಾದ ವಿಷಯವೆಂದರೆ, ನಾರ್ಕೊಮ್ಸ್‍ದ್ರಾವ್ ಅಧಿಕಾರಿಗಳ ಪ್ರಕಾರ, ಕಜûಕಿಸ್ತಾನ್ ಮತ್ತು ಉಜ್óಬೆಕಿಸ್ತಾನ್, ಮುಂತಾದ ಸ್ವತಂತ್ರ ರಿಪಬ್ಲಿಕ್‍ಗಳಂತಹ ಹಿಂದುಳಿದ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯದ ದೊಡ್ಡ ಭಾಗ ಆರೋಗ್ಯ ಶಿಕ್ಷಣಕ್ಕೆ ಮತ್ತು ಪ್ರಚಾರಕ್ಕೆ ಖರ್ಚಾಗುತ್ತದೆ; ಪ್ರಚಾರವು ಹೆಚ್ಚಿನಾಂಶ ಪೋಸ್ಟರ್ ಮತ್ತು ಪ್ಲೆಕಾರ್ಡ್ ಮೂಲಕ ನಡೆಯುತ್ತದೆ. (ಇಲ್ಲಿ ವಿವಿಧ ರೀತಿಯ ತಾಯಿ ಮತ್ತು ಮಕ್ಕಳ ಸಂರಕ್ಷಣಾ ಸಂಸ್ಥೆಗಳಂತೆ, ಶಿಶುಜೀವನ ಮತ್ತು ಆರೋಗ್ಯ ಪರಿಸ್ಥಿತಿಗಳ ವಸ್ತುಸಂಗ್ರಹಾಲಯದ ಪಾತ್ರವನ್ನೂ ಗಮನಿಸಬೇಕು. ರಷ್ಯಾದಲ್ಲಿ ಈ ರೀತಿಯ ವಸ್ತುಸಂಗ್ರಹಾಲಯವು ಕೇವಲ ಐತಿಹಾಸಿಕ ಸ್ಥಳ ಅಥವಾ ಅಮೂರ್ತವಾದ ಆಸಕ್ತಿಯಾಗದೆ ಪ್ರಾಯೋಗಿಕವಾದ ಶೈಕ್ಷಣಿಕ ಸಂಸ್ಥೆಯಾಗಿದೆ.) ಜನಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳಕ್ಕೆ ಇತರ ಕಾರಣಗಳಂತೆ ಮಕ್ಕಳನ್ನು ಅಕಾಲ ಸಾವಿನಿಂದ ಪಾರುಮಾಡುವುದೂ ಸಹ ಒಂದು ಕಾರಣ.
ಮಗುವಿನ ಜನನದ ಬಗ್ಗೆ ಹೇಳುವುದಾದರೆ, ಯೂನಿಯನ್‍ನ ಮುಖಂಡರು ಘೋಷಿಸಿರುವ ಉದ್ದೇಶವೆಂದರೆ, ಸಾಧ್ಯವಾದಷ್ಟು ಮಗುವಿನ ಜನನ ಆಸ್ಪತ್ರೆಯಲ್ಲಾಗಬೇಕು. ಇದನ್ನು ಕೇಳಿ ಕೆಲವರು ಬೆಚ್ಚಿಬೀಳಬಹುದು; ಅವರಿಗೆ ರಷ್ಯಾದ ಕಾರ್ಮಿಕರ ಇಕ್ಕಟ್ಟಿನ ಪರಿಸ್ಥಿತಿ ತಿಳಿದಿಲ್ಲ; ಅವರು ತಮ್ಮ ಶತಮಾನಗಳ ಪರಿಸ್ಥಿತಿಯಿಂದ ಪೂರ್ಣವಾಗಿ ಮುಕ್ತವಾಗಿಲ್ಲ; ನಮ್ಮ ಪಕ್ಷದ ಸದಸ್ಯರೊಬ್ಬರು ಹೇಳುವಂತೆ, “ಅವರು ಇಂಗ್ಲೆಂಡಿನ ಹಂದಿಗೂಡಿಗಿಂತ ಕಡೆಯಾದ ಮನೆಗಳಲ್ಲಿ ವಾಸಿಸುತ್ತಾರೆ.” ಅವರ ಉದ್ದೇಶವಿನ್ನೂ ಪೂರ್ತಿಯಾಗಿಲ್ಲ; ಆದರೆ ಅದನ್ನು ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಸಾಧಿಸಬಹುದು ಎಂಬ ಆಶಯವಿದೆ. ಒಳರೋಗಿಗಳ ಆಸ್ಪತ್ರೆಯನ್ನು ಜನ ಮತ್ತು ವಸ್ತುಗಳು ಸಿಕ್ಕಿದಷ್ಟೂ ಬೇಗ ಕಟ್ಟುತ್ತಿದ್ದಾರೆ; ಆ ಕೆಲಸಕ್ಕೆ ಮಹಿಳೆಯರೂ ಸೇರಿಕೊಳ್ಳಬೇಕೆಂದು ಉತ್ತೇಜಿಸುತ್ತಿದ್ದಾರೆ. ಇಂಗ್ಲಿಷ್ ಗುಣಮಟ್ಟಗಳಿಗೆ ಒಗ್ಗಿಹೋಗಿರುವ ಕಾರ್ಮಿಕನಿಗೆ ಬಹುಶಃ ಈ ಆಸ್ಪತ್ರೆಗಳು ಒರಟಾಗಿರುವಂತೆ ಕಾಣಿಸಬಹುದು; ಉದಾಹರಣೆಗೆ, ಸಾಮಾನ್ಯವಾಗಿ ಗ್ರಾಹಕ ವಸ್ತುಗಳ ಕೊರತೆಯ ಭಾಗವಾದ ಅರಿವಳಿಕೆ, ಸೋಪು, ಬಟ್ಟೆಗಳ ಕೊರತೆಯಿದೆ; ಇದರ ಕುರಿತು ಈ ಪುಸ್ತಕದ ಇತರೆ ಲೇಖಕರು ಗಮನ ಸೆಳೆದಿದ್ದಾರೆ. ಅರಿವಳಿಕೆಯನ್ನು ಶಿಶುಜನನ (ಅಥವಾ ಗರ್ಭಪಾತ) ಸಂದರ್ಭದಲ್ಲಿ ಸಾಮಾನ್ಯವಾಗಿ ಬಳಸುವುದಿಲ್ಲ; ಇದನ್ನು ಒಪ್ಪಿಕೊಳ್ಳುತ್ತಾ ರಷ್ಯನ್ ವೈದ್ಯರು ಹೇಳುತ್ತಾರೆ, “ಅದರ ಅವಶ್ಯಕತೆಯಿಲ್ಲ ಅಥವಾ ಅದರ ನಿರೀಕ್ಷೆಯೂ ಇಲ್ಲ.” ಇದು ರಷ್ಯಾದ ಪೂರ್ವ ಇತಿಹಾಸವನ್ನು ನೋಡಿದರೆ ಸರಿಯೇನೋ; ಆದರೆ ನಾವು ಕರೆಯುವ ‘ನಾಗರಿಕತೆ’ಯು ಜನ ಸಮುದಾಯಕ್ಕೂ ವಿಸ್ತರಿಸುತ್ತಿರುವಾಗ, ಅರಿವಳಿಕೆ ಮತ್ತು ಇತರ ಔಷಧಗಳ ಬೇಡಿಕೆಯು ಹೆಚ್ಚುತ್ತಿದೆ ಮತ್ತು ವಿದೇಶಗಳಿಂದ ಪೂರೈಕೆಯಾಗದೆ ಹೋದರೆ ಕಷ್ಟಗಳು ಹೆಚ್ಚುವ ಸಾಧ್ಯತೆಗಳಿವೆ. ರಷ್ಯನ್ ಆರೋಗ್ಯ ಅಧಿಕಾರಿಗಳು ಮುಖ್ಯವಾದ ಔಷಧಿಗಳಲ್ಲಿ ಸ್ವಂತ ಕಾಲಮೇಲೆ ನಿಲ್ಲಬಹುದೆಂಬ ಭರವಸೆ ಹೊಂದಿದ್ದಾರೆ; ಆ ಪರಿಸ್ಥಿತಿ ಈಗಿಲ್ಲ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಮಲೇರಿಯಾ ರೋಗವನ್ನು ಹೊರಗಟ್ಟಲು ತುರ್ತು ಅವಶ್ಯಕವಾದ ಕ್ವಿನೈನ್, ಬಂಡವಾಳಶಾಹಿಗಳ ಏಕಸ್ವಾಮ್ಯಾಧಿಪತ್ಯದಿಂದಾಗಿ ಬಹಳ ಕಷ್ಟಕರವಾಗಿದೆ; ರಷ್ಯನ್ನರು ಸಿಂಥೆಟಿಕ್ ಕ್ವಿನೈನ್ ಅನ್ನು ಉತ್ಪಾದಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

 - ಎಸ್.ಎನ್.ಸ್ವಾಮಿ 



ಆರೋಗ್ಯ - ಹಣ್ಣೆಲೆಗಳು - 4

( ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ )      

 ಆಧ್ಯಾಯ - 4
ಮೂತ್ರದ ಅಸಂಯಮ (Urinary Incontinence)

ಕೆಮ್ಮಿದಾಗ, ಸೀನುವಾಗ, ಜೋರಾಗಿ ನಗುವಾಗ ಮೂತ್ರ ಒಸರುವುದು, ಶೌಚಾಲಯಕ್ಕೆ ಹೋಗುವವರೆಗೆ ಮೂತ್ರ ನಿಯಂತ್ರಿಸಿಕೊಳ್ಳಲಾಗದಿರುವುದು, ಶೌಚಾಲಯಕ್ಕೆ ಹೋಗುವ ಮೊದಲೇ ಮೂತ್ರ ಬಂದು ನಿಮ್ಮ ಬಟ್ಟೆ ಒದ್ದೆಯಾಗುವುದು, ಇವೆಲ್ಲವನ್ನೂ ‘ಮೂತ್ರ ಅಸಂಯಮ’ ಎಂದು ಕರೆಯುತ್ತೇವೆ. ಋತುಬಂಧದ ಆಸುಪಾಸಿನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. ಈಸ್ಟ್ರೋಜನ್ ಜೀವರಸದ ಉತ್ಪಾದನೆಯಲ್ಲಿ ಕೊರತೆಯುಂಟಾಗಿ, ಮೂತ್ರ ಚೀಲದ, ಮೂತ್ರನಾಳದ ಪದರಗಳು ನಮೆತಕ್ಕೆ (atrophy) ಒಳಗಾಗಿ, ಮೂತ್ರವನ್ನೂ ಹಿಡಿದಿಡುವ ಶಕ್ತಿಯನ್ನೂ ಕಳೆದುಕೊಳ್ಳುತ್ತದೆ.


ರಾತ್ರಿ ನಿದ್ರೆಯಲ್ಲಿ ಕೂಡ ನಿಮಗೆ ಅರಿವಿಲ್ಲದಂತೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆಯಾಗಬಹುದು. ನಿಮಗೆ ಗಾಬರಿಯಾದಾಗ, ಗಡಿಬಿಡಿಯಲ್ಲಿರುವಾಗ ಮೂತ್ರ ಮಾಡಲು ನಿಮಗೆ ತುರ್ತಾಗಿ ಅನಿಸಬಹುದು. ಸಂಭೋಗದ ಸಮಯದಲ್ಲಿ ಇಲ್ಲವೆ ಆನಂತರದಲ್ಲಿ ಮೂತ್ರಕ್ಕೆ ಹೋಗಬೇಕೆನಿಸುವುದು. ಮೂತ್ರದ ಸೋಂಕು ಆಗಾಗ ಕಾಣಿಸಿಕೊಂಡು ಮೂತ್ರದ ಅಸಂಯಮಕ್ಕೆ ಕಾರಣವಾಗಬಹುದು. ದಿನವೂ ಒಳಬಟ್ಟೆಯನ್ನು (pad) ಧರಿಸಿರಬೇಕಾಗಬಹುದು. ನಿಮಗೆ ಮನೆಯಿಂದ ಹೊರಗಡೆ ಎಲ್ಲಿಯಾದರೂ ಹೋದಲ್ಲಿ ಈ ಸಮಸ್ಯೆ ಕಾಣಬಹುದು, ಆದ್ದರಿಂದ ನೀವು ಮನೆಯೊಳಗಡೆಯೇ ಉಳಿಯಬಹುದು.
pad


ಈ ಸಮಸ್ಯೆ ಇರುವವರಲ್ಲಿ ನೂರರಲ್ಲಿ ಒಬ್ಬರು ಮಾತ್ರ ವೈದ್ಯರ ಬಳಿ ಬರುತ್ತಾರೆ. ಸಂಕೋಚದಿಂದ  ಇದರ ಬಗ್ಗೆ ಯಾರು ಮಾತಾನಾಡದೇ ಇರುವ ಸಾಧ್ಯತೆಗಳಿವೆ. ಇದರ ಬಗ್ಗೆ ಸರಿಯಾದ ಮಾಹಿತಿ ಕೂಡ ಸಿಗುವುದಿಲ್ಲ. ಇದನ್ನು ವಿವಿಧ ರೀತಿಯ ಚಿಕಿತ್ಸೆಯಿಂದ ನಿವಾರಣೆಗೊಳಿಸಬಹುದು ಎಂಬ ಅರಿವಿರುವುದಿಲ್ಲ. ಇಂತಹ ಸಮಸ್ಯೆಗಳಿಂದ ಬಳಲುವವರು ವೈದ್ಯರ ಬಳಿ ಹೋಗಿ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಿರಿ. ನಿಮಗೆ ಬರೀ ಕೀಗಲ್‍ನ ವ್ಯಾಯಮ ಸಾಕಾಗಬಹುದು ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಔಷಧಗಳನ್ನು ನಿಮಗೆ ಬರೆದುಕೊಡಬಹುದು.


ಇಲ್ಲವೇ ನಿಮಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು. ಶಸ್ತ್ರ ಚಿಕಿತ್ಸೆಯಲ್ಲಿ ಕೂಡ ಈಗ ನಾನಾರೀತಿಯ ಬದಲಾವಣೆಗಳಾಗಿ  ಉತ್ತಮ ಫಲಿತಾಂಶ ದೊರೆಯುತ್ತದೆ. ವಿವಿಧ ರೀತಿಯ, ‘ಮೆಷ್’ (mesh) ಮಾರುಕಟ್ಟೆಯಲ್ಲಿ ಲಭಿಸುತ್ತವೆ. ಅದನ್ನು ಉಪಯೋಗಿಸಿ ಶಸ್ತ್ರಚಿಕಿತ್ಸೆ ಮಾಡಿದರೆ ಉತ್ತಮ ಫಲಿತಾಂಶ ಸಿಕ್ಕಿ ರೋಗಿಗೆ ಸಂತೋಷವಾಗುತ್ತದೆ. 
ಮೂರು ರೀತಿಯ ಮೂತ್ರದ ಅಸಂಯಮವನ್ನು ಗುರುತಿಸುತ್ತೇವೆ. ಅದನ್ನು ಪತ್ತೆಹಚ್ಚಲು ಕೆಲವೊಂದು ಪರೀಕ್ಷೆಗಳನ್ನು ಮಾಡುತ್ತೇವೆ.

ಆಲ್ಟ್ರಾಸೋನೋಗ್ರಫಿ ಮಾಡಿ ಮೂತ್ರಕೋಶದಲ್ಲಿ, ಮೂತ್ರಪಿಂಡದಲ್ಲಿ ಅಥವಾ ಗರ್ಭಕೋಶದಲ್ಲಿ ಏನಾದರೂ ತೊಂದರೆ ಇದೆಯೇ ಎಂದು ನೋಡಲಾಗುವುದು.


ಸಿಸ್ಟೋಸ್ಕೋಪಿ ಎಂಬ ಪರೀಕ್ಷೆಯಲ್ಲಿ ಸಣ್ಣಕೊಳವೆಯನ್ನು ಉಪಯೋಗಿಸಿ ಮೂತ್ರನಾಳದ ಮೂಲಕ ಅದನ್ನು ತೂರಿಸಿ ಮೂತ್ರಕೋಶದ ಒಳಭಾಗವನ್ನು ಪರೀಕ್ಷಿಸಿ ಏನಾದರು ಗಡ್ಡೆಯಿದ್ದರೆ ತುಣುಕನ್ನು ತೆಗೆದು ಪರೀಕ್ಷೆಗೆ ಕಳುಹಿಸುತ್ತೇವೆ


ಸಿಸ್ಟೋಮೆಟ್ರೋಗ್ರಾಮ್ ; ಸಣ್ಣ ನಳಿಕೆಯ0ತಹ ಯಂತ್ರವೊಂದನ್ನು ಮೂತ್ರ ನಾಳದ ಮೂಲಕ ಮೂತ್ರಕೋಶದಲ್ಲಿಟ್ಟು ವಿವಿಧ ಒತ್ತಡ ಪ್ರಮಾಣವನ್ನು ನೋಡಿ,ಯಾವ ರೀತಿಯ ಮೂತ್ರದ ಅಸಂಯಮ ಇದೆ? ಅದಕ್ಕೆ ಶಸ್ತ್ರಚಿಕಿತ್ಸೆ ಬೇಕೇಬೇಡವೇ ಎಂದು ನಿರ್ಧರಿಸಬಹುದು.

‘ಕೀಗಲ್’ನ ಕಿಳ್ಗುಳಿ ಸ್ನಾಯುಗಳ ವ್ಯಾಯಮ ಸ್ವಲ್ಪ ಮಟ್ಟಿಗೆ ಮೂತ್ರ ಅಸಂಯಮವನ್ನು ನಿಯಂತ್ರಿಸಲು ನೆರವಾಗುತ್ತದೆ. ಕೆಲವು ಔಷಧಗಳನ್ನು ಮೂತ್ರದ್ವಾರದ ಸುತ್ತಲೂ ಸೂಜಿಯಮೂಲಕ ಚುಚ್ಚುವುದರಿಂದ ಮೂತ್ರ ದ್ವಾರವು ಸಣ್ಣದಾಗಿ ಅಸಂಯಮ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಕೆಲವು ಹೊಸದಾಗಿ ಬಂದಿರುವ ಆವಿಷ್ಕಾರಗಳನ್ನು ‘ಟಿವಿಟಿ’(TVT) ಮತ್ತು ‘ಟಿಒಟಿ’(TOT) ಎ0ದು ಕರೆಯುತ್ತೇವೆ. ಇದು ಸ್ವಲ್ಪ ದುಬಾರಿಯಾದರೂ ಇದರಿಂದ ಒಳ್ಳೆಯ ಫಲಿತಾಂಶವಿದೆ. ಇವು ಬಹಳ ಸುಲಭವಾಗಿ ಹಾಗೂ ಬಹು ಬೇಗನೆ ಮಾಡುವಂತಹ ಶಸ್ತ್ರಚಿಕಿತ್ಸೆಗಳಾಗಿವೆ. ಶಸ್ತ್ರಚಿಕಿತ್ಸೆಯ ನಂತರ ಬೇಗನೆ ಸುಧಾರಿಸಿಕೊಳ್ಳಬಹುದು, ನೋವಾಗಲಿ, ತೊಂದರೆಗಳಾಗಲಿ ಬಹಳ ಕಡಿಮೆ.

ಕೃತಕ ಸ್ಪಿಂಕ್ಟರ್ :
 ಮೂತ್ರ ಸಂಗ್ರಹಿಸಲು ಮೂತ್ರ ದ್ವಾರದ ಹತ್ತಿರ ಈ ಸಾಧನವನ್ನು ಅಳವಡಿಸಬಹುದು. ಇದು ಮಾರುಕಟ್ಟೆಯಲ್ಲಿ ಸಿಗುವುದು ಕಡಿಮೆ ಯಾಕೆಂದರೆ ನಮ್ಮ ಮಹಿಳೆಯರಿಗೆ ಈ ಕುರಿತು ಮಾಹಿತಿಗಳೇ ಇರುವುದಿಲ್ಲ. 

(ಮುಂದುವರೆಯುತ್ತದೆ)

- ಡಾ. ಪೂರ್ಣಿಮಾ ಜೆ 

ಲೇಖನ - ಮಹಿಳಾ ಸಶಕ್ತೀಕರಣ: ಒಂದು ಪುನರ್‍ಚಿಂತನೆ




ಮಹಿಳಾ ಸಶಕ್ತೀಕರಣವು ಕಳೆದ 30 ವರ್ಷಗಳಿಂದ ಬೆಳೆದು ಬಂದ ಪರಿಕಲ್ಪನೆಯಾಗಿದೆ. ಅದರ ಮೂಲವನ್ನು 3 ವಿಚಾರಧಾರೆಗಳಲ್ಲಿ ಗುರುತಿಸಿಕೊಂಡು ವಿಶ್ಲೇಷಿಸಬಹುದು. 1. ಸ್ತ್ರೀವಾದಿ ಚಿಂತನೆ 2. ಅಭಿವೃದ್ಧಿ ಪ್ರಕ್ರಿಯೆ ಹಾಗೂ 3. ತಳಮಟ್ಟದ ಜನರ ಸಂಘಟನೆ. 
ಸ್ತ್ರೀವಾದಿ ಚಿಂತನೆಯು “ವೈಯಕ್ತಿಕ ರಾಜಕೀಯವಾದುದು” ಎಂಬ ಪ್ರತಿಪಾದನೆಯನ್ನು ಆಧರಿಸಿ ಮಹಿಳಾ ಸಶಕ್ತೀಕರಣವನ್ನು ನೋಡುತ್ತದೆ. ಉದಾರವಾದಿ ಸ್ತ್ರೀವಾದಿಗಳು ಶಿಕ್ಷಣ ಆರೋಗ್ಯ ಆದಾಯ ಉದ್ಯೋಗವನ್ನು ನೀಡುವುದರ ಮೂಲಕ ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸಿದರೆ ಸಹಜವಾಗಿ ಸಶಕ್ತಗೊಳ್ಳುತ್ತಾರೆ ಎಂದು ನಂಬುತ್ತದೆ. ಆದರೆ ತೀವ್ರಗಾಮಿ ಸ್ತ್ರೀವಾದಿಗಳು, ಪುರುಷಪ್ರಧಾನ ಆಳ್ವಿಕೆ, ಮೌಲ್ಯಗಳನ್ನು ಪ್ರಶ್ನಿಸುವ, ಕುಟುಂಬ ವ್ಯವಸ್ಥೆಯನ್ನು ತೊಡೆದುಹಾಕುವ, ಅಸಮಾನ ಅಧಿಕಾರ ಹಾಗೂ ಜಂಡರ್ ಸಂಬಂಧಗಳನ್ನು ಬದಲಾಯಿಸುವ ಹಾಗು ಸಾಮಾಜಿಕ ರಚನೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತಂದರೆ ಮಾತ್ರ ಮಹಿಳೆಯರನ್ನು ಬಲಗೊಳಿಸಬಹುದು ಎಂದು ಪ್ರತಿಪಾದಿಸುತ್ತದೆ. 
ಮಹಿಳಾ ಸಶಕ್ತೀಕರಣದ ಕುರಿತು ಸಂಶೋಧನೆ ನಡೆಸುವ ಜೋ. ರೋಲ್ಯಾಂಡ್ ಅವರು ಮಹಿಳಾ ಸಶಕ್ತೀಕರಣವನ್ನು ‘ಶಕ್ತಿ ನೀಡುವ’ ‘ಇತರರೊಂದಿಗೆ ಹಂಚಿಕೊಳ್ಳುವ ಶಕ್ತಿ’ ಹಾಗೂ ‘ಆಂತರಿಕ ಶಕ್ತಿ’ ಎಂಬ ಶಕ್ತಿ ಪ್ರಕಾರಗಳೊಂದಿಗೆ ಅರ್ಥೈಸುತ್ತಾರೆ. ಬೇರೆಯವರ ಮೇಲೆ ಅಧಿಕಾರ ಚಲಾಯಿಸುವ ಶಕ್ತಿಯನ್ನು ಮಹಿಳಾ ಸಶಕ್ತೀಕರಣಕ್ಕೆ ಅನ್ವಯಿಸಲಾಗುವುದಿಲ್ಲ ಎನ್ನುತ್ತಾರೆ. ಏಕೆಂದರೆ ಇದೂವರೆಗೆ ಪುರುಷರು ಹೊಂದಿರುವ ಈ ಪ್ರಕಾರದ ಶಕ್ತಿಯನ್ನು ಮಹಿಳೆಯರಿಗೆ ಅನ್ವಯಿಸಿಕೊಂಡರೆ ಪುರುಷರ ಮೇಲೆ ಅಧಿಕಾರ ಹೊಂದುವುದು ಎಂಬರ್ಥದಲ್ಲಿ ಮಹಿಳಾ ಸಶಕ್ತೀಕರಣವನ್ನು ವ್ಯಾಖ್ಯಾನಿಸಿದಂತಾಗುತ್ತದೆ, ಅದೇ ಅದರ ಗುರಿಯಾಗಿಬಿಡುತ್ತದೆ. 
ಆದರೆ ವಾಸ್ತವದಲ್ಲಿ ಮಹಿಳಾ ಸಶಕ್ತೀಕರಣವೆಂದರೆ ಇದುವರೆಗೆ ಕಳೆದುಕೊಂಡ ಅವಕಾಶಗಳನ್ನು, ಸಮಾನತೆಯನ್ನು ಪಡೆಯುವುದು. ಜಂಡರ್ ತಾರತಮ್ಯಗಳಿಂದ ಮುಕ್ತಿಹೊಂದಿ ಸ್ವತಂತ್ರ್ಯ, ಸ್ವಾವಲಂಬಿ ವ್ಯಕ್ತಿಯಾಗಿ ಮಹಿಳೆಯರನ್ನು ರೂಪಿಸುವುದು ಮಹಿಳಾ ಸಶಕ್ತೀಕರಣದ ಅರ್ಥ ಹಾಗೂ ಗುರಿ.
ಮಾರ್ಕ್ಸ್ ವಾದಿ ಸ್ತ್ರೀವಾದದಲ್ಲಿ, ಮಹಿಳೆಯರು ಸಾಮಾಜಿಕ ಉತ್ಪಾದನೆಯಲ್ಲಿ ತೊಡಗಬೇಕು, ಖಾಸಗಿ ಆಸ್ತಿ ಪರಿಕಲ್ಪನೆ ತೊಲಗಿಸಬೇಕು ಹಾಗೂ ಮಹಿಳೆಯರು ಮಾಡುವ ಗೃಹಕೃತ್ಯಗಳಿಗೆ ಆರ್ಥಿಕ ಮನ್ನಣೆ ದೊರಕುವಂತಾಗಬೇಕೆಂಬ ಪ್ರತಿಪಾದನೆಗಳಲ್ಲಿ ಮಹಿಳಾ ಸಶಕ್ತೀಕರಣದ ಸುಳಿವನ್ನು ಗುರುತಿಸಬಹುದು.
ಮಹಿಳೆಯರು ಮನೆಯಿಂದ ಹೊರೆಗೆ ದುಡಿಯಲು ಆರಂಭಿಸಿದ್ದಾರೆ ಕುಟುಂಬದ ಆರ್ಥಿಕ ಪರಿಸ್ಥಿತಿ  ಸುಧಾರಿಸಿದರೂ ಮಹಿಳೆಯರು ಸಂಪೂರ್ಣವಾಗಿ ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಗಳಿಸಿದ ಆದಾಯದ ಮೇಲೆ ನಿಯಂತ್ರಣ ಹೊಂದುವುದು ಅಷ್ಟೇ ಮುಖ್ಯ. 
ಇತ್ತೀಚಿನ ದಿನಗಳಲ್ಲಿ ಜಾಗತೀಕರಣದ ಪ್ರಭಾವದಿಂದ ಖಾಸಗೀ ಆಸ್ತಿ ಪರಿಕಲ್ಪನೆ  ವಿಸ್ತಾರಗೊಳ್ಳುತ್ತಿರುವ ಹೊತ್ತಿನಲ್ಲಿ ಆದಾಯ, ಸಂಪತ್ತುಗಳ ಲಬ್ಯತೆ ಮತ್ತು ಅವುಗಳ ಮೇಲೆ ಒಡೆತನ ಪಡೆಯುವುದುಹರಸಾಹಸವೆ ಸರಿ. ಆರ್ಥಿಕತೆಯ ವಲಯದಲ್ಲಿ ವಸ್ತುವಿನ ಮಾರುಕಟ್ಟೆಯಲ್ಲಿ ಸ್ತ್ರೀದೇಹ ವಾಣಿಜ್ಯೀಕರಣಗೊಂಡು ಲೈಂಗಿಕ ವಸ್ತುವಾಗುತಿದ್ದರೆ ಶ್ರ್ರಮದ ಮೂರು ಕಟ್ಟೆಯಲ್ಲಿ ಮಹಿಳೆಯರ ಶ್ರಮ ಅಗ್ಗವಾಗಿ ಶೋಷಣೆಗೆ ಒಳಗಾಗುತ್ತದೆ. ಕಾರ್ಪೋರೇಟ್ ವಲಯದಲ್ಲಿ ಶಿಕ್ಷಣ ತರಬೇತಿ ಹೊಂದಿದ ನಗರದ ಹೆಣ್ಣುಮಕ್ಕಳು  ಉುದ್ಯೋಗ ಅವಕಾಶಗಳು ಹೆಚ್ಚುತ್ತಿರುವಂತೆ ಬಿಂಬಿಸುತ್ತಾರೆ. ಅಲ್ಲಿಯೂ ಗಂಡುಮಕ್ಕಳಿಗೆ ಹೋಲಿಸಿದರೆ ಅವರ ಪ್ರಮಾಣ ಕಡಿಮೆಯಿದೆ.  ಜೊತೆಗೆ ಅಲ್ಲಿ ಅವರ ಕೆಲಸದ ಸ್ಥಿತಿ ವಾತಾವರಣ, ಬಡ್ತಿ, ವೇತನ, ಸೇವಾ ಸೌಲಭ್ಯ, ಕೆಲಸದ  ಅವಧಿ ಹಾಗೂ ಕುಟುಂಬದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಆಳವಾಗಿ ಪರಿಶೀಲಿಸಿ ಇವೆಲ್ಲವೂ ಅವರನ್ನು ಅಶಕ್ತಗೊಳಿಸಿವೆಯೊ ಎಂಬ ಪಶ್ನೆಗೆ ಉತ್ತರ ಹುಡುಕಬೇಕಾಗಿದೆ.
ಜಾಗತೀಕರಣದ ಪ್ರಭಾವದೊಳಗೆ 25 ವರ್ಷ ಕಳೆದಿರುವ ನಮ್ಮ ಆರ್ಥಿಕ ಪರಿಸ್ಥಿತಿ, ಅಭಿವೃದ್ಧಿ ಪ್ರಕ್ರಿಯೆ ಹಾಗೂ ಸಾಮಾಜಿಕ ಬದಲಾವಣೆಯ ಹಿನ್ನಲೆಯಲ್ಲಿ ಮಹಿಳಾ ಸಶಕ್ತೀಕರಣವನ್ನು ಪುನರ್ ಚಿಂತನೆಗೆ ಒಳಪಡಿಸುವ ಅವಶ್ಯಕತೆಯಿದೆ. ಮಹಿಳಾ ಸಶಕ್ತೀಕರಣದ ಪರಿಕ್ರಮಗಳಲ್ಲಿ ಶಿಕ್ಷಣಕ್ಕೆ ಮೊದಲ ಆಧ್ಯತೆ. ಶಿಕ್ಷಣವು ವ್ಯಕ್ತಿಗೆ ಜ್ಞಾನ ಅರಿವು ಕೌಶಲ್ಯಗಳನ್ನು ನೀಡಿ ವ್ಯಕ್ತಿತ್ವವನ್ನು ರೂಪಿಸುವ ಉದ್ದೇಶ ಹೊಂದಿದೆ.  ಶಿಕ್ಷಣ ಪಡೆದ  ಹೆಣ್ಣುಮಕ್ಕಳಲ್ಲಿ ಆರ್ಥಿಕ ಸ್ವಾತಂತ್ರ್ಯ ಆಯ್ಕೆ ಹಕ್ಕು ಹಾಗೂ ಪ್ರಶ್ನಿಸುವ ಗುಣ ಸಹಜವಾಗಿ ಮೂಡುತ್ತದೆ. ಇಂತಹ ಹೆಣ್ಣುಮಕ್ಕಳನ್ನು ಸ್ತ್ರೀಯರು ಸೇರಿದಂತೆ ಇಡೀ ಸಮಾಜವು ಒಪ್ಪಿಕೊಳ್ಳಬೇಕು. 
ಸಶಕ್ತೀಕರಣದ ಗುಣಗಳನ್ನು ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳಲು  ಹೊರಟರೆ ಅನೇಕ ಅಡ್ಡಿಗಳು ಎದುರಾಗುತ್ತವೆ. ಬದಲಾದ, ಸಶಕ್ತಗೊಂಡ ಹೆಣ್ಣುಮಕ್ಕಳನ್ನು ಅಂಗೀಕರಿಸುವ ವಾತಾವರಣ ಸೃಷ್ಟಿಯಾಗಬೇಕು ಇಲ್ಲದಿದ್ದರೆ ಶಿಕ್ಷಣವೆ ಸಶಕ್ತೀಕರಣಕ್ಕೆ ವ್ಯತರಿಕ್ತ ಅಂಶವಾಗುತ್ತದೆ. ಉದಾ: ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ ಪಡೆದ ಹೆಣ್ಣುಮಕ್ಕಳು ವಿವಾಹದಲ್ಲಿ ಆಯ್ಕೆ ಹಕ್ಕನ್ನು ಚಲಾಯಿಸಲು ಹೊರಟರೆ ಇತ್ತೀಚಿಗೆ ಕಂಡು ಬರುತ್ತಿರುವ ಮರ್ಯಾದ ಹತ್ಯೆಗಳು ನಡೆಯುತ್ತವೆ, ಚಿಕ್ಕ ವಯಸ್ಸಿಗೆ ಮದುವೆ ಮಾಡುವ ಪದ್ಧತಿ ಜಾರಿಗೆ ಬರಬಹುದು. ದುಡಿಯುವ ಮಹಿಳೆ ತಮ್ಮ ಆದಾಯವನ್ನು ತಾವೆ ಖರ್ಚು ಮಾಡಿದರೆ ಅವಳ ಉದ್ಯೋಗ ಅವಕಾಶವನ್ನು ನಿರಾಕರಿಸುವ ಪರಿಸ್ಥಿತಿ ಮತ್ತೆ ಬರಬಹುದು. ಸ್ವಾವಲಂಬನೆ. ಸ್ವತಂತ್ರ್ಯ ವ್ಯಕ್ತಿತ್ವ, ಸ್ವಂತ ನಿರ್ಧಾರ ಕೈಗೊಳ್ಳುವ, ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಹೆಣ್ಣುಮಕ್ಕಳನ್ನು ಮದುವೆಯಾಗಲು ಹುಡುಗರು ನಿರಾಕರಿಸಬಹುದು. ಇದರ ಅರ್ಥ ಮಹಿಳಾ ಸಬಲೀಕರಣವನ್ನು ಬೇಡವೆಂದು ಅಲ್ಲ. ಸಶಕ್ತಗೊಂಡ ಮಹಿಳೆಯರನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಬೇಕು.
ದೊಡ್ಡ ನಗರಗಳಲ್ಲಿ ವಿಚ್ಛೇದನೆ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಕೂಗೂ ಕೇಳಿಬರುತ್ತದೆ. ಇದಕ್ಕೆ ಕಾರಣಗಳನ್ನು, ಸಾಂಪ್ರದಾಯಿಕ ಮನೋಭಾವದವರು, ಹುಡುಗಿಯರಲ್ಲಿ ಉಂಟಾದ ಬದಲಾವಣೆಯಲ್ಲಿ ಹುಡುಕುತ್ತಾ ಅವರನ್ನೇ ದೂಷಿಸುತ್ತಿರುವುದು ಕಂಡುಬರುತ್ತಿದೆ. ಅಂದರೆ ನಾವು  ಸಶಕ್ತೀಕರಣದ ಸೂಚಿಗಳು ಎಂದು ಏನನ್ನು ಗುರುಸುತ್ತೇವೋ ಅವುಗಳು ನವ ಪೀಳಿಗೆಯ ಹೆಣ್ಣುಮಕ್ಕಳಲ್ಲಿ ಕಂಡುಬಂದರೆ ವಿಚ್ಛೇದನಕ್ಕೆ ಅದೇ ಕಾರಣ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಅದೇ ಕಾರಣ ಆಗಿದ್ದರೂ ಅದನ್ನು ವಿಶ್ಲೇಷಿಸುವ ದೃಷ್ಟಿಕೋನ ಮೂಡಿಬರಬೇಕು. ಉದಾ: ಹೊರಗೆ ದುಡಿಯುವ ಹೆಣ್ಣುಮಕ್ಕಳಾಗಲಿ ಮನೆಯಲ್ಲಿರುವ ಹೆಣ್ಣುಮಕ್ಕಳಾಗಲಿ ಗೃಹಕೆಲಸದಲ್ಲಿ ಹಂಚಿಕೆಯನ್ನು  ಮುಕ್ತ ಚಲನೆ ಬಯಸುತ್ತಾರೆ, ಕುಟುಂಬದಲ್ಲಿ ನಿರ್ಧಾರ ಕೈಗೊಳ್ಳುವುದರಲ್ಲಿ ಭಾಗವಹಿಸಲು ಇಚ್ಛಿಸುತ್ತಾರೆ. ಆಸ್ತಿ, ಸಂಪತ್ತು ತಮ್ಮ ಹೆಸರಿನಲ್ಲಿ ಯಾಕೆ ನೊಂದಣಿ ಮಾಡಿಸಬಾರದು ಎಂದು ಪ್ರಶ್ನಿಸುತ್ತಾರೆ.  ಇವು ಕುಟುಂಬದಲ್ಲಿ ಕಲಹ ಉಂಟುಮಾಡುತ್ತವೆ. ಘರ್ಷಣೆ ವಿಪರೀತವಾದರೆ ವಿಚ್ಛೇಶನದಲ್ಲಿ ಕೊನೆಗೊಳ್ಳಬಹುದು. ಅಂದರೆ ಶಿಕ್ಷಣ, ಸಾಮಾಜೀಕರಣ, ಜ್ಞಾನ ಹಾಗೂ ಅರಿವಿನ ಮೂಲಕ ಹೆಣ್ಣುಮಕ್ಕಳನ್ನು ಸ್ವಾವಲಂಬಿ, ಸ್ವತಂತ್ರ್ಯ ವ್ಯಕ್ತಿಯಾಗಿ ರೂಪಿಸಿದರಷ್ಟೆ ಸಾಲದು ಅವರನ್ನು ಒಪ್ಪಿಕೊಳ್ಳುವ ಮನಸ್ಸು, ಕೌಟುಂಬಿಕ ರಚನೆಯಲ್ಲಿನ ಬದಲಾವಣೆಗಳು ಅಷ್ಟೆ ಮುಖ್ಯ. 
ನನ್ನ ಸಂಬಂಧಿಕರಲ್ಲಿ ವೃತ್ತಿಶಿಕ್ಷಣ ಪಡೆದು ಒಳ್ಳೆ ಕೆಲಸದಲ್ಲಿರುವ ಹೆಣ್ಣುಮಕ್ಕಳಿದ್ದಾರೆ. ಅವರನ್ನು ಕಾಡುತ್ತಿರುವ ಮೂಲ ಪ್ರಶ್ನೆ ಮನೆ ಕೆಲಸ ನಾವೊಬ್ಬರೆ ಮಾಡಬೇಕಾ? ಆಸ್ತಿಯನ್ನು ಖರೀದಿಸಿದರೆ, ವಸ್ತುಗಳನ್ನು ಕೊಂಡರೆ ನಮ್ಮ ಹೆಸರಿನಲ್ಲಿ ಯಾಕೆ ಇಡಬಾರದು? ಈ ಬದಲಾವಣೆ ಬೇಕೆಂದು ಕೇಳಿದರೆ ಮನೆಯಲ್ಲಿ ಜಗಳವಾಗುತ್ತದೆ ಇಲ್ಲ ಹಿಂದಿನಿಂದ ಏನು ನಡೆದುಕೊಂಡು ಬಂದಿದೆಯೊ ಅದನ್ನು ಒಪ್ಪಿಕೊಳ್ಳಬೇಕು. ಆಗ ಸಶಕ್ತೀಕರಣಗೊಂಡದ್ದರಿಂದ ಪ್ರಯೋಜನವೇನು? 
ಸಾಂಪ್ರದಾಯಿಕ ಸಾಮಾಜಿಕರಣದಲ್ಲಿ ಬೆಳೆದು ಬಂದ ಗಂಡುಮಕ್ಕಳಲ್ಲಿ ಇನ್ನೂ ಗೃಹಕೃತ್ಯಗಳು ಮಹಿಳೆಯರಿಗೆ ಸಂಬಂಧಿಸಿದ್ದು ತಾವು ಅದರಲ್ಲಿ ಭಾಗಿಯಾಗುವುದು ಕೀಳು ಅಥವಾ ಭಾಗಿಯಾಗಬೇಕೆಂಬ ಅರಿವಿಲ್ಲದಿರುವುದು ಅಥವಾ ಒಮ್ಮೆ ಮಾಡಿಬಿಟ್ಟರೆ ಮುಂದೆಯೂ ನಾವೆ ಮಾಡಬೇಕಾಗುತ್ತದೆ ಅಥವಾ ತಂದೆ ತಾಯಿ ಮತ್ತು ಮನೆಯವರು ಅಕ್ಕಪಕ್ಕದವರು ಹೆಂಡತಿಯು ಗುಲಾಮ ಎನ್ನುತ್ತಾರೆ ಎಂಬ ಭಯದಿಂದ ಗೃಹಕೃತ್ಯಗಳಲ್ಲಿ ಭಾಗಿಯಾಗುತ್ತಿಲ್ಲ. ಕೆಲವು ಕುಟುಂಬಗಳಲ್ಲಿ ಪುರುಷರು ಭಾಗಿಯಾಗುತ್ತಿರಬಹುದು. ಆಗಿದ್ದರೆ ಖಂಡಿತ ಸಂತೋಷ. ಆದರೆ ಅದರ ಪ್ರಮಾಣ ಎಷ್ಟು, ಯಾವ ರೀತಿಯ ಕೆಲಸಗಳಲ್ಲಿ ಭಾಗಿಯಾಗಿರುತ್ತಾರೆ ಅನ್ನುವುದು ಮುಖ್ಯ. ಹೆಣ್ಣು ಮಕ್ಕಳು ಕೇಳುವುದನ್ನು, ಪ್ರಶ್ನಿಸುವುದನ್ನು ಕುಟುಂಬದ ಸದಸ್ಯರು ಇಷ್ಟಪಡುವುದಿಲ್ಲ್ಟ. ಆಸ್ತಿಯಲ್ಲಿ ಸಮಪಾಲು ಕೇಳುವ ಹೆಣ್ಣುಮಕ್ಕಳನ್ನು ಸ್ವಾರ್ಥಿಗಳು, ತಂದೆ ತಾಯಿ ಅಣ್ಣತಮ್ಮಂದಿರ ಬಗ್ಗೆ ಪ್ರೀತಿ ಕಾಳಜಿ ಇಲ್ಲದವರು ಎಂದು ಟೀಕಿಸಲಾಗುತ್ತದೆ. 
ಶಿಕ್ಷಣ ಪಡೆದು, ವೈಚಾರಿಕತೆ ಬೆಳೆಸಿಕೊಂಡು ವೃತ್ತಿ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ಹೆಣ್ಣುಮಕ್ಕಳು ನಮ್ಮ ಸಾಂಪ್ರದಾಯಿಕ, ಪದ್ಧತಿ ಮೂಡನಂಬಿಕೆಗಳನ್ನು ಪ್ರಶ್ನಿಸಬಹುದು. ಮನೆಯಲ್ಲಿ ಆಚರಣೆ ಪೂಜೆಗಳಲ್ಲಿ ಭಾಗವಹಿಸಲು ಇಚ್ಛಿಸದೆ ಅವುಗಳನ್ನು ಮಾಡಲ್ಲ ಅನ್ನಬಹುದು. ಆಗ ಮನೆಯವರಿಂದ ಒತ್ತಡ ಬರುತ್ತದೆ, ನೀನು ಕಲಿತಾಕ್ಷಣ ಎಲ್ಲವನ್ನೂ ಪ್ರಶ್ನಿಸುವ, ನಿರಾಕರಿಸುವ ಹಾಗಿಲ್ಲ. ಹಿಂದಿನಿಂದ ಏನು ನಡೆದುಕೊಂಡು ಬಂದಿದೆಯೋ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುತ್ತಾರೆ. ವಿಶೇಷವಾಗಿ ಗಂಡನ ಮನೆಯವರು ತಮ್ಮ ಮನೆಯ ಆಚರಣೆ ರೀತಿರಿವಾಜುಗಳನ್ನು ಹೇರುತ್ತಾರೆ. ವೃತ್ತಿಯಲ್ಲಿ ತೊಡಗಿರುವ ಹೆಣ್ಣುಮಕ್ಕಳಿಗೆ  ಗೊಂದಲ ಉಂಟಾಗುತ್ತದೆ. ಉದಾ: ಗಂಡನ ಮನೆಯವರು  ಸಂಪ್ರದಾಯವರಾಗಿದ್ದರೆ ಕುಟುಂಬದ ಪದ್ಧತಿಯಂತೆ  ಹಬ್ಬ, ಪೂಜೆಗಳನ್ನು ಸೊಸೆ ಮಾಡಬೇಕೆಂದು  ನಿರೀಕ್ಷಿಸುತ್ತಾರೆ.  ನಂಬಿಕೆಯಿಲ್ಲವೆಂದು ಅಥವಾ ಸಮಯವಿಲ್ಲದೇ ಆಗಲ್ಲ ಎಂದರೆ ದೊಡ್ಡ ಗಲಾಟೆಯಾಗುತ್ತದೆ.
ಹೀಗೆ ಸಶಕ್ತೀಕರಣ ಪರಿವರ್ತನೆಯ ಹಂತದಲ್ಲಿರುವ ಹೆಣ್ಣುಮಕ್ಕಳು ಅಂತ್ಯಂತ ಗೊಂದಲ, ದ್ವಿಗುಣ ಹೊರೆ, ಒತ್ತಡಗಳಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಅದರಿಂದ ಹೊರಬರಬೇಕೆಂದರೆ ಒಂದು ವೃತ್ತಿಯನ್ನು ಬಿಟ್ಟು ಅಥವಾ ಕಡೆಗಣೆಸಿ ಕುಟುಂಬದ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ಇಲ್ಲಿ ಕುಟುಂಬದ ನಿರೀಕ್ಷೆಗಳನ್ನು ನಿರ್ಲಕ್ಷಿಸಿ ವೃತ್ತಿ ಬೆಳವಣಿಣಿಗೆಗೆ ಕಡೆ ಹೆಚ್ಚು ಗಮನ ಬಿಡಬೇಕು. ಇಲ್ಲ ಇವೆರಡನ್ನು ಸಮದೂಗಿಸಿಕೊಂಡು ಹೋಗುತ್ತೇನೆ ಎಂದು ‘ಸೂಪರ್ ವಿಮೆನ್’ ಆಗಬೇಕು. ಕುಟುಂಬ ಹಾಗೂ ಕೆಲಸದ ಸ್ಥಳಗಳಲ್ಲಿ ಬೆಂಬಲಪೂರಕ ವಾತಾವರಣವಿದ್ದರೆ ಖಂಡಿತ ಹೆಣ್ಣು ಮಕ್ಕಳು ‘ಸೂಪರ್ ವುಮೆನ್’ ಆಗುತ್ತಾರೆ. ಆದರೆ ಎಲ್ಲರಿಗೂ ಪೂರಕ ವಾತಾವರಣ ದೊರಕುವುದಿಲ್ಲ. 
 ನಮ್ಮ ಮುಂದಿರುವ ಪ್ರಶ್ನೆ ಮಹಿಳಾ ಸಶಕ್ತೀಕರಣ ಪ್ರಕ್ರಿಯೆಯನ್ನುಮುಂದುವರೆಸಿಕೊಂಡು ಹೋಗುವುದಾದರೆ ಅದರ ಪರಿಣಾಮಗಳನ್ನು ಹೇಗೆ ಎದುರಿಸಬೇಕು? ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ವೃತ್ತಿಪರರಾಗಿ ಸ್ವತಂತ್ರ್ಯ ವ್ಯಕ್ತಗಳನ್ನಾಗಿ ರೂಪಿಸಬೇಕು ಅದರಲ್ಲಿ ಎರಡು ಮಾತಿಲ್ಲ ಆದರೆ ಸಶಕ್ತಗೊಂಡ ಮಹಿಳೆ ಮುನ್ನಡೆಯಬೇಕು, ಅವಳ ಸಾಮರ್ಥ್ಯವನ್ನು ಉಳಿಸಿಕೊಳ್ಳುವಂತಾಗಿ ಅದು ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ಸಹಾಯಕವಾಗಬೇಕು. ಇದರಲ್ಲಿ ಪುರುಷರ ಕುಟುಂಬದ ಸದಸ್ಯರ ಹಾಗೂ ಜನರ ಬೆಂಬಲ, ಸ್ತ್ರೀಪರ ದೃಷ್ಟಿಕೋನ, ಸಮಾನತೆಯ ಮನೋಭಾವ ತುಂಬ ಮುಖ್ಯ ಮಹಿಳಾ ಸಶಕ್ತೀಕರಣದಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ಸಾಮಾಜೀಕರಣ ಪ್ರಮುಖ ಪಾತ್ರವಹಿಸುತ್ತದೆ. ಹೆಣ್ಣು ಗಂಡು ಮಕ್ಕಳನ್ನು ಬೆಳೆಸುವಲ್ಲಿ ತುಂಬ ತಾರತಮ್ಯವಿದೆ. ಈ ತಾರತಮ್ಯ ಮುಂದೆ ಹೆಣ್ಣು ಮಕ್ಕಳ ಸಶಕ್ತೀಕರಣಕ್ಕೆ ಅಡಿಯನ್ನುಂಟುಮಾಡುತ್ತವೆ. ಹೆಣ್ಣುಮಕ್ಕಳಲ್ಲಿ ತಾಳ್ಮೆ ಸಹನೆ ತ್ಯಾಗ, ಮನೆಗೆಲಸ ಕಲಿಸುವಂತೆ, ಪ್ರೀತಿ ಮಮತೆ ಗುಣಗಳನ್ನು ಬೆಳೆಸುವಂತೆ ಗಂಡುಮಕ್ಕಳಲ್ಲೂ ಬೆಳೆಸಬೇಕು. ಮನೆಗೆಲಸವನ್ನು ಹಂಚಿಕೊಳ್ಳುವ, ಆಸ್ತಿಯನ್ನು ಅಕ್ಕತಂಗಿಯರೊಂದಿಗೆ ಹಂಚಿಕೊಳ್ಳುವ, ಹೆಣ್ಣುಮಕ್ಕಳನ್ನು ಸಮಾನವಾಗಿ ನೋಡುವ, ಅವರ ಹಕ್ಕು ಪಾತ್ರಗಳನ್ನು ಗೌರವಿಸುವ, ಅವಳು ಕೀಳು, ತಾನು ಹೇಳಿದ ಹಾಗೆ ಅವಳು ಕೇಳಬೇಕು, ಅವಳು ಅಬಲೆ, ದುರ್ಬಲಳು, ತನ್ನ ಆಶ್ರಯದಲ್ಲೆ ಇರಬೇಕು. ತಾನು ಮೋಸಮಾಡಿದರೂ, ಕರ್ತವ್ಯ ನಿಭಾಯಿಸದಿದ್ದರೂ ತನ್ನನ್ನು ಪ್ರಶ್ನಿಸಬಾರದು ಗಂಡಿಗೊಂದು ನೀತಿ ಹೆಣ್ಣಿಗೊಂದು ನೀತಿ ಎಂಬ ಧೋರಣೆಗಳನ್ನು ಬೆಳೆಸಬಾರದು.
ಅದೇ ರೀತಿ ಹೆಣ್ಣುಮಕ್ಕಳಲ್ಲಿ ಹಕ್ಕು, ಸಮಾನತೆ, ಸ್ವಾತಂತ್ರ್ಯವನ್ನು ಬೆಳೆಸುವುದೆಂದರೆ ಖಂಡಿತ  ಸ್ವೇಚ್ಛಾಚಾರವಲ್ಲ, ವೈಯಕ್ತಿಕ ಬೆಳವಣಿಗೆಯೇ ಮುಖವೆಂದು, ದುರಭಿಮಾನ, ಸ್ವಕೇಂದ್ರಿತ ನಿಲುವು, ದಾಷ್ರ್ಯತನಗಳನ್ನು ಬೆಳೆಸುವುದಲ್ಲ. ಅವರ ಸಶಕ್ತೀಕರಣವೆಂದರೆ ಸಮಾನತೆಯ ಹಕ್ಕು ಪಡೆಯುವುದಾದರೂ ಪುರುಷರ ಮೇಲೆ ಅಧಿಕಾರ ಹೊಂದುವುದಿಲ್ಲ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವರು, ಸ್ವಾತಂತ್ರ್ಯ, ಹಕ್ಕುಗಳನ್ನು ಬಲಿಕೊಡದಿರುವುದು, ಹಿಂಸೆ, ಅನ್ಯಾಯ ವಂಚನೆಗಳನ್ನು ಒಪ್ಪಿಕೊಳ್ಳದೇ ಪ್ರತಿಭಟಿಸುವುದು, ಪ್ರಶ್ನಿಸುವುದು ಮಹಿಳಾ ಸಶಕ್ತೀಕರಣ. ಇತ್ತೀಚಿನ ಬಂಡವಾಳಶಾಹಿ ನಿಲುವಿನ ಮಹಿಳಾ ಸಶಕ್ತೀಕರಣವನ್ನು ವಿಶೇಷವಾಗಿ ಗಮನಿಸಬೇಕು. ಸ್ವಕೇಂದ್ರಿತ, ಮೇಲ್‍ಸ್ವರದಲ್ಲಿ ಆತ್ಮವಿಶ್ವಾಸವನ್ನು ಬಿಂಬಿಸುವ, ಮಹಿಳಾ ಸಶಕ್ತೀಕರಣ ಪರಿಕಲ್ಪನೆಯು ಸಮಾಜವಾದಿ ಮತ್ತು ಪ್ರಜಾಪ್ರಭುತ್ವ ತತ್ವ ಆದಾರಿತ ಪರಿಕಲ್ಪನೆಗಿಂತ ಭಿನ್ನವಾಗಿದೆ. 
ಬಹುರಾಷ್ಟ್ರೀಯ ಕಂಪನಿಗಳು ತಮ್ಮ  ವಸ್ತುಗಳ ಮಾರಾಟಕ್ಕೆ ಮಹಿಳಾ ಸಶಕ್ತೀಕರಣವನ್ನು ಸಾಧನವಾಗಿ ಬಳಸಿಕೊಳ್ಳುತ್ತವೆ. ಇಲ್ಲಿ ಹೆಣ್ಣಿನ ಸೌಂದರ್ಯ ಅದನ್ನು ಹೆಚ್ಚಿಸಿಕೊಳ್ಳಲು ಸೌಂದರ್ಯವರ್ಧಕಗಳ ಬಳಕೆ, ಹಾಗೂ ಇತರ ಗೃಹ ಉಪಯೋಗಿ  ವಸ್ತುಗಳ ಜಾಹಿರಾತಿನಲ್ಲಿ ಮಹಿಳಾ ಸಶಕ್ತೀಕರಣವನ್ನು ಬಿಂಬಿಸಲಾಗುತ್ತದೆ. ಹೆಣ್ಣುಮಕ್ಕಳಲ್ಲಿ ಕೌಶಲ್ಯ, ಜ್ಞಾನ, ಮಾಹಿತಿ ಮತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಬೆಳೆಸುವುದರ ಮೂಲಕ ಸಶಕ್ತಿಗೊಳಿಸುವದಕ್ಕಿಂತ ಸೌಂದರ್ಯವನ್ನು ಹೆಚ್ಚಿಸಿಕೊಂಡು, ವಸ್ತುಗಳ ಖರೀದಿಯಲ್ಲಿ ಜಾಣತನವನ್ನು ತೋರಿಸಿಕೊಂಡು, ಪುರುಷನಿಗೆ ಅಧೀನನಾಗಿದ್ದುಕೊಂಡೇ ಸಶಕ್ತಗೊಂಡಂತೆ ತೋರಿಸಲಾಗುತ್ತದೆ. ಇಲ್ಲವೇ ಸ್ವಕೇಂದ್ರೀಕೃತ, ಅತಿಯಾದ ವ್ಯಕ್ತಿಗತ ಸ್ವಾತಂತ್ರ್ಯ ಹಾಗೂ ಸಾಂಪ್ರದಾಯಿಕ ಸಿದ್ಧ ಮಾದರಿಗಳನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಮಹಿಳಾ ಸಶಕ್ತೀಕರಣವನ್ನು ಬಿಂಬಿಸಲಾಗುತ್ತದೆ.
ಆಂತರಿಕ ಶಕ್ತಿಯನ್ನು ರೂಪಿಸಿಕೊಂಡು ಜ್ಞಾನ ಕೌಶಲ್ಯ ಸಾಮೃಥ್ರ್ಯಗಳ ಮೂಲಕ ಆತ್ಮ ವಿಶ್ವಾಸ ಪಡೆದು ತಾನೂ ಸಶಕ್ತಗೊಂಡು ಇತರ ಮಹಿಳೆಯರನ್ನು ಸಶಕ್ತಗೊಳಿಸುತ್ತಾ ಮುಂದುವರೆಯುವುದೇ ನಿಜವಾದ ಮಹಿಳಾ ಸಶಕ್ತೀಕರಣ. ಬೌದ್ಧಿಕ ಚಿಂತನೆ, ನಿಲುವುಗಳು ಮಹಿಳಾ ಸಶಕ್ತೀಕರಣಕ್ಕೆ ಪೂರಕವಾಗುತ್ತವೆ. ಪ್ರತಿಯೊಂದು ಜೀವಿಯನ್ನು ಪ್ರೀತಿಯಿಂದ ಕಾಣುವುದು, ಎಲ್ಲ ಜನರನ್ನು ಸಮಾನವಾಗಿ ನೋಡುವುದು, ನಿಸ್ವಾರ್ಥ, ತ್ಯಾಗ, ಸಹನಾಶೀಲತೆ, ತಾಳ್ಮೆಗುಣಗಳು ಸಶಕ್ತೀಕರಣದ ಗುಣಾತ್ಮಕ ಅಂಶಗಳಾಗಿವೆ. ಇವುಗಳನ್ನು ಮಹಿಳೆಯರಿಗಷ್ಟೆ ಅಲ್ಲ ಪುರುಷರಲ್ಲೂ ಬೆಳೆಸಿದರೆ ಮಹಿಳಾ ಸಶಕ್ತೀಕರಣವನ್ನು ಸಾಧಿಸಬಹುದು. 
- ಡಾ. ಹೇಮಲತ.ಎಚ್.ಎಮ್
ಮೈಸೂರು

Poem - AWAKENING DREAM


It was so real
 Her screams, her shouts The men, the mob
My chats, my calls
Their slaps, their smacks
  
Every moment I remember fresh
Every talk I recall precise
 Every scream I hear exact
Every move I see clear

Real, not just did it seem But real did it feel
Though not really was it real!!
She was harmed
And held were we But held by what?
Nobody knows what

Look did we, but just it, did we 
Pity did we, but just it, did we
Pained was she, though had it to be we 
Sole was she, though had it not to be 
Scream did she, stare did we
Cry did she, listen did we 
Hit did they, look did we

How could I? How could you? How could we?
If was she your sister
 If was she your mother                        
If was she your friend
If was she your girl

Would we have stayed back the same?
Though a disturbing dream
Yet a very questioning one
Only wondering how even in dreams
Did the crowd stay passive
Keeping the real reality of today's apart!!

    - Nileena Thomas 

ನಾಟಕ - ರಷ್ಯನ್ ಗುಣ

ಮೂಲ ಕಥೆ : ‘ರಷ್ಯನ್ ಕ್ಯಾರೆಕ್ಟರ್’ ಅಲೆಕ್ಸಿ ಟಾಲ್ಸ್ಟಾಯ್


ದೃಶ್ಯ-1

(ಸೈನಿಕರ ಶಿಬಿರ. ಟೆಂಟಿನ ಹೊರಗೆ ಒಂದಿಬ್ಬರು ಕುಳಿತುಕೊಂಡು ಮಾತನಾಡುತ್ತಿದ್ದಾರೆ. ಅಲೆಕ್ಸಿ ಅವರಿಂದ ಸ್ವಲ್ಪ ದೂರದಲ್ಲಿ ಕುಳಿತು ಬರೆಯುವುದರಲ್ಲಿ ಮಗ್ನನಾಗಿದ್ದಾನೆ. ಆತನ ಜೊತೆ ಟ್ಯಾಂಕ್ ಚಾಲಕ ಚ್ಯುವಿಲೊವ್ ಅವನಿಗೆ ಏನನ್ನೋ ಹೇಳುತ್ತಿದ್ದಾನೆ. ಗುಂಡು ಹಾರುವ ಶಬ್ಧ, ದೂರದಲ್ಲೆಲ್ಲೋ ಬಾಂಬ್ ಸಿಡಿದ ಶಬ್ಧ ಕೇಳಿ ಬರುತ್ತಿರುತ್ತದೆ. ಒಬ್ಬ ಸೈನಿಕ ಕುಂಟುತ್ತಾ ಬಂದು ಅವರನ್ನು ಸೇರುತ್ತಾನೆ. ಒಂದಿಬ್ಬರು ಸೈನಿಕರು ಸೈನಿಕನೊಬ್ಬನನ್ನು ಹೊತ್ತುಕೊಂಡು ಬರುತ್ತಾರೆ. ಆಗ ಬಾಂಬ್ ದಾಳಿಯನ್ನು ಸೂಚಿಸುವ ಸೈರನ್ ಶಬ್ಧ ಕೇಳಿ ಬರುತ್ತದೆ. ಗಡಿಬಿಡಿ ಉಂಟಾಗುತ್ತದೆ. ಒಳಗಿನಿಂದ ಒಬ್ಬ ಓಡಿಬರುತ್ತಾನೆ. ಅಲ್ಲಿದ್ದವರ ಸಹಾಯ ಪಡೆದು ಕಾಲಿಗೆ ಪೆಟ್ಟಾದವನನ್ನು ಕರೆದುಕೊಂಡು ಹೋಗುತ್ತಾನೆ. ‘ಲೈಟ್ ಆಫ್ ಮಾಡಿ’, ‘ಬಂಕರ್‍ಗೆ ಹೋಗಿ’, ‘ಬೆಂಕಿ ಆರಿಸಿ’ ಎಂಬ ಕೂಗಾಟಗಳು ಕೇಳಿ ಬರುತ್ತವೆ. ಬಾಂಬ್ ಬಿದ್ದ ಶಬ್ಧ. ನಂತರ ಎಲ್ಲವೂ ಶಾಂತವಾಗುತ್ತದೆ. ಒಬ್ಬೊಬ್ಬರೇ ಹೊರಗೆ ಬರುತ್ತಾರೆ)
ಗ್ರೆಗೊರ್ : ಈ ನಾಜಿಗಳ ವಂಶಾನೆ ನಿರ್ವಂಶ ಮಾಡೋವರ್ಗೂ ನೆಮ್ಮದಿಯಿಲ್ಲ. ಪಾವೆಲ್, ಒಮ್ಮೊಮ್ಮೆ ಅನ್ಸುತ್ತೆ, ಇಡೀ ಜರ್ಮನಿಗೇ ಬೆಂಕಿ ಹಚ್ಚೋಣ ಅಂತ.
ಪಾವೆಲ್ : ಇಡೀ ಜರ್ಮನಿಗೇ ಬೆಂಕಿ ಹಚ್ಚಿದ್ರೆ, ನಾಜಿಗಳ ಜೊತೆ ಮನುಷ್ಯರೂ ಬೆಂದು ಹೋಗ್ತಾರೆ, ಗ್ರೆಗೊರ್.
ಗ್ರೆಗೊರ್ : ನಾವೇನೂ ಮನುಷ್ಯರಲ್ವಾ? ನಮ್ಮ  ಮನೆಯವರು ಮನುಷ್ಯರಲ್ವಾ? ನಮ್ಮನ್ನೆಲ್ಲಾ ದಿನಾ ಸಾಯಿಸ್ತಾರೆ. ಅವ್ರು ಮಾಡೋ ಅತ್ಯಾಚಾರ, ಅನಾಚಾರಗಳನ್ನ ನೆನಸಿಕೊಂಡ್ರೆ, ಅವರನ್ನ ಜೀವಂತವಾಗಿ ಹೂಳಬೇಕು ಅನ್ಸುತ್ತೆ. ಪಾಪಿಗಳು, ಪಾಪಿಗಳು.
ಪಾವೆಲ್ : ಅದು ಸರಿ. ಆದ್ರೆ ಈಗ ಅವರನ್ನ ಸೋಲಿಸೋದು ಹೇಗೆ ಅಂತ ಹೆಚ್ಚು ಯೋಚ್ನೆ ಮಾಡ್ಬೇಕು.
ಮಿಖಾಯಿಲ್ : ಪಾವೆಲ್, ನಿನ್ನೆ ಸ್ವೆರ್‍ದ್ಲೊವ್ ಮೇಲೆ ನಾಜಿಗಳು ದಾಳಿ ಮಾಡಿದ್ರಂತೆ. ಇಡೀ ಪ್ರದೇಶಾನ ತಮ್ಮ ಕೈಗೆ ತೆಗೆದುಕೊಂಡಿದ್ದಾರಂತೆ.
ಪಾವೆಲ್ : ಹೌದಾ ಮಿಖಾಯಿಲ್?
ಮಿಖಾಯಿಲ್ : ಹೌದು. ನಮ್ಮವರೇನೂ ಸುಮ್ನೆ ಬಿಟ್ಟಿಲ್ಲ. ಚೆನ್ನಾಗಿ ಕೊಟ್ಟಿದ್ದಾರೆ.
ಆಂದ್ರೆಯ್ : ಸ್ವೆರ್‍ದ್ಲೊವ್ ಜನರು ನಾಜಿಗಳಿಗೆ ಏನ್ ಮಾಡಿದ್ರು ಅಂತಾನೂ ಹೇಳು, ಮಿಖೊ.
ಮಿಖಾಯಿಲ್ : (ನಗುತ್ತಾ) ನೀನೇ ಹೇಳು ಆಂದ್ರೆಯ್. (ಎಲ್ಲರೂ ‘ಏನ್ ಮಾಡಿದ್ರು, ಹೇಳು’ ಎನ್ನುತ್ತಾರೆ)
ಆಂದ್ರೆಯ್ : ಸ್ವೆರ್‍ದ್ಲೊವ್ ಊರಿನಿಂದ ಆದಷ್ಟೂ ಜನರನ್ನ ದೂರದ ಹಳ್ಳಿಗಳಿಗೆ ಕಳುಹಿಸಿಬಿಟ್ರು. ಫ್ಯಾಕ್ಟರಿಯಿಂದ, ಮನೆಗಳಿಂದ ಏನೇನ್ ತಗೋಬಹುದೊ, ಅದನ್ನೆಲ್ಲಾ ತಗೊಂಡ್ರು. ಉಳಿದಿದ್ದನ್ನ ನಾಶ ಮಾಡಿದ್ರು. ಅಲ್ಲಿಗೆ ಬಂದ ನಾಜಿಗಳಿಗೆ ಏನೂ ಸಿಗದಿರೋ ಹಾಗೆ ಮಾಡಿದ್ರು. ನಾಜಿಗಳಿಗೆ ಏನೂ ಸಿಗಲಿಲ್ಲ. ಚೆನ್ನಾಗಿ ಬಾಯಾರಿದ್ರು. ಸಿಕ್ಕ ಸಿಕ್ಕ ಕಡೆ ನೀರು ಕುಡಿದ್ರು. ಪಾಪ, ಅದರಲ್ಲಿ ಭೇದಿ ಪೌಡರ್ ಸೇರಿತ್ತು ಅಂತ ಅವರಿಗೇನೂ ಗೊತ್ತಿತ್ತು. (ಎಲ್ಲರೂ ನಗುತ್ತಾರೆ) ಅವರಲ್ಲಿದ್ದ ಶೋಕಿದಾರರು ಮನೆಗೆ ನುಗ್ಗಿ, ಫೇಸ್ ಪೌಡರ್‍ನ ಮೈಗೆಲ್ಲಾ ಸುರಿದುಕೊಂಡ್ರು. ಅದು ತುರಿಕೆ ಪುಡಿ ಅಂತ ಆಮೇಲೆ ಗೊತ್ತಾಯ್ತು. (ಎಲ್ಲರೂ ಗಹಗಹಿಸಿ ನಗುತ್ತಾರೆ) ಒಳ್ಳೆ ಮಂಗಗಳ ಥರಾ ಕುಣೀತಾ ಇದ್ರು.
ಮಿಖಾಯಿಲ್ : ಆ ನಾಜಿಗಳು ರಷ್ಯನ್ನರು ಅಂದ್ರೆ ಏನ್ ಅಂದ್ಕೊಂಡಿದ್ದಾರೆ. ದಡ್ಡರು, ಹೇಡಿಗಳು ಅಂತಾನಾ? ಹುಂ, ಅವರ ಕೈಗೆ ಸಿಕ್ಕಿದ ಗೆರಿಲ್ಲಾ ನಾಯಕರು, ಪಾರ್ಟಿಸಾನ್ ಹುಡುಗರೂ ಸಹ ಒಂದಕ್ಷರಾನೂ ಬಿಟ್ಟಿಲ್ಲ. ಯಾವ ರಹಸ್ಯಾನೂ ಬಾಯಿಬಿಟ್ಟಿಲ್ಲ. ಪಾರ್ಟಿ ಕಾಮ್ರೇಡ್ಸ್ ಅಂತೂ ನಾಜಿಗಳ ನೆರಳಲ್ಲೇ ಇದ್ದು ಅವರ ಮೇಲೆ ದಾಳಿ ಮಾಡೋದಿಕ್ಕೆ ತಯಾರಿ ಮಾಡ್ತಾನೆ ಇದಾರೆ.
ಗ್ರೆಗೊರ್ : ಬಂಧಿಗಳಿಗೆ ತುಂಬಾ ಹಿಂಸೆ ಕೊಡ್ರಾರಾ? ಹೇಗೆ ಸಹಿಸ್ಕೋತಾರೋ?
(ಆಗ ಯುವತಿ ಸಾಷ ಮತ್ತು ಮಧ್ಯ ವಯಸ್ಸಿನ ನಿಕೊಲೆಯವ್ನಾ ಬರುತ್ತಾರೆ)
ನಿಕೊಲೆಯೆವ್ನಾ : ಟೀ ಕುಡಿತೀರಪ್ಪಾ! ತಗೊಳ್ಳಿ. ಸಾಷ ಬಿಸ್ಕತ್ ಕೊಡು.
ಸಾಷ : (ಬಿಸ್ಕತ್ ಕೊಡುತ್ತಾ) ಕಾಮ್ರೇಡ್ ಗ್ರೆಗೊರ್, ನಮ್ಮವರು ನಾಜಿಗಳ ಹಿಂಸೆನಾ ಹೇಗೆ ಸಹಿಸ್ಕೋತಾರೆ ಅಂತ ಕೇಳ್ತಿದ್ರಲ್ಲಾ. ನಾವು ಸೋವಿಯತ್ ಜನತೆ. ನಾವೊಂದು ಉದಾತ್ತ ಧ್ಯೇಯಕ್ಕೋಸ್ಕರ ಬಂದಿದೀವಿ. ಯಾವುದೇ ಅಸಮಾನತೆ ಇಲ್ಲದ, ಭೇದ ಇಲ್ಲದ, ಎಲ್ಲರೂ ಚೆನ್ನಾಗಿ ಬದುಕುವ ಸಮಾಜನ ಕಟ್ತಾ ಇದೀವಿ. ಈಗ ಅದನ್ನ ಉಳಿಸ್ಕೊಳ್ಳೋದಕ್ಕೋಸ್ಕರ ಹೋರಾಡ್ತಾ ಇದೀವಿ. ಹಾಗಾಗಿ ಕಷ್ಟಾನ ಸಹಿಸಿಕ್ಕೋಳ್ಳೋದಿಕ್ಕೆ ಸಾಧ್ಯವಾಗುತ್ತೆ. ನಮ್ಮದು ಮೃದು ಹೃದಯ, ಉಕ್ಕಿನ ದೇಹ. ಮುಂದಿನ ಭವಿಷ್ಯಕ್ಕೋಸ್ಕರ ನಮ್ಮ ಜೀವವನ್ನೂ ಕೊಡೋದಿಕ್ಕೆ ತಯಾರಾಗೇ ಬಂದಿದೀವಿ.
ನಿಕೊಲೆಯೆವಾ : ನಮಗೋಸ್ಕರ ಹಿಂದಿನವರು ಜೀವ ಕೊಟ್ರು, ಈಗ ನಾವು ಮುಂದಿನವರಿಗೋಸ್ಕರ... (ಗದ್ಗದಿತಳಾಗುತ್ತಾಳೆ)
ಪಾವೆಲ್ : ಅದೇ ಅಲ್ಲವಾ ರಷ್ಯನ್ ಗುಣ!
ಗ್ರೆಗೊರ್ : ಯಾವುದು?
ಪಾವೆಲ್ : ಅದೆಲ್ಲವೂ.
ಗ್ರೆಗೊರ್ : ಅದೆಲ್ಲವೂ ಅಂದ್ರೆ?
ಆಂದ್ರೆಯ್ : ಈಗ ಈ ನಮ್ಮ ದೇಶಪ್ರೇಮಿ ಯುದ್ಧಾನೇ ತಗೊ. ನಾವೀಗ ಹೇಗೆ ಹೋರಾಡ್ತಾ ಇದೀವಿ. ನಮ್ಮ ನಿಕೊಲೆಯೆವ್ನಾಳ ಇಬ್ಬರು ಮಕ್ಕಳೂ ಮಡಿದು ಸೋವಿಯತ್ ಧೀರರಾಗಿದ್ದಾರೆ. ನಮ್ಮ ಪ್ರತಿಯೊಂದು ಮನೇಲೂ ಒಬ್ಬನಲ್ಲ ಒಬ್ಬ ಧೀರ ತಾಯ್ನಾಡನ್ನ ಫ್ಯಾಸಿಸ್ಟರಿಂದ ಕಾಪಾಡೋದಿಕ್ಕೆ ಜೀವ ತೆತ್ತಿದ್ದಾನೆ.
ಮಿಖಾಯಿಲ್ : ಅದಷ್ಟೇ ಅಲ್ಲ. ಸೈನಿಕರಾಗಿ ರಣಾರಂಗಣದಲ್ಲಿ ಇರೋವರನ್ನ ಬಿಟ್ಟು ಬೇರೆ ಜನಾನೂ ಇದಾರೆ. ಹಳ್ಳಿಗಳಲ್ಲಿ ಹೊಲಗದ್ದೆಗಳಲ್ಲಿ ಬಾಂಬಿನ ಮೋಡದ ಕೆಳಗೆ ಕೆಲಸ ಮಾಡೊ ರೈತರು ನಮ್ಮ ಸೈನಿಕರಿಗೆ, ಜನರಿಗೆ ಆಹಾರ ಕೊಡ್ತಾರೆ. ಕಾರ್ಖಾನೆಗಳಲ್ಲಿ ಕೆಲಸ ಮಾಡೋ ಕಾರ್ಮಿಕರು ಯುದ್ಧದ ನೆರಳಿನಲ್ಲೇ ಶಸ್ತ್ರಾಸ್ತ್ರಗಳನ್ನ ಉತ್ಪಾದನೆ ಮಾಡ್ತಾರೆ. ಎಲ್ಲರೂ ಒಂದಲ್ಲ ಒಂದು ರೀತೀಲಿ ಯುದ್ಧದಲ್ಲಿದ್ದಾರೆ. ಯುದ್ಧದಲ್ಲಿ ಗೆಲ್ಲೋದಿಕ್ಕೆ ಶ್ರಮಿಸ್ತಾ ಇದಾರೆ. ಎಲ್ಲರೂ ಯೋಧರೇ!
ಸಾಷ : ಬರೇ ಧೀರೋದಾತ್ತ ಕೆಲಸಗಳಷ್ಟೇ ರಷ್ನನ್ ಗುಣ ಅಲ್ಲ, ಕಾಮ್ರೇಡ್. ನಾವು ಎಲ್ಲರ ದುಡಿತ ಒಬ್ಬನಿಗಲ್ಲ. ಎಲ್ಲರೂ ಎಲ್ಲರಿಗಾಗಿ. ಯಾರೂ ಆಳಲ್ಲ, ಯಾರೂ ಅರಸನಲ್ಲ. ಇಡೀ ಮನುಕುಲ ಒಂದೇ. ಇಡೀ ಮನುಕುಲದ ಹಿತಕ್ಕಾಗಿ ನನ್ನ ಹಿತವನ್ನ ಅರ್ಪಿಸಬೇಕು ಎನ್ನುವ ಸಿದ್ಧಾಂತವನ್ನ ಜೀವನದಲ್ಲಿ ಅಳವಡಿಸಿಕೊಂಡು ನವ ಮನುಷ್ಯರಾಗ್ತಾ ಇದೀವಿ. ಆದ್ದರಿಂದ ನಮ್ಮ ನೀತಿ, ನೈತಿಕತೆಗಳೇ ಬೇರೆ. ನಮ್ಮ ಸಂಸ್ಕøತಿನೇ ಬೇರೆ. ಅದು ಬಹಳ ಹೊಸದು. ತುಂಬಾ ಉದಾತ್ತವಾದದ್ದು.
ಗ್ರೆಗೊರ್ : ಉದಾಹರಣೆಗೆ...
ಸಾಷ : ಉದಾಹರಣೆ. (ಯೋಚಿಸುತ್ತಾ) ಯಾವ ಉದಾಹರಣೆ ಕೊಡಲಿ. (ಗಂಭೀರವಾಗಿ ಬರೆಯುತ್ತಿದ್ದ ಅಲೆಕ್ಸಿ, ಇವರ ಮಾತುಗಳನ್ನ ಕೇಳಿಸಿಕೊಳ್ಳುತ್ತಿರುತ್ತಾನೆ. ಅತ್ತಿಂದಿತ್ತ ಓಡಾಡುತ್ತಿರುವಾಗ ಅವನನ್ನು ಗಮನಿಸಿದ ಸಾಷ, ಅವನತ್ತ ತಿರುಗಿ) ಅಲೆಕ್ಸಿ, ನೀವು ಎಷ್ಟೊಂದು ಯುದ್ಧಭೂಮಿಗಳನ್ನ ನೋಡಿದ್ದೀರಾ! ನಗರ, ಹಳ್ಳಿಗಳಲ್ಲಿ ಬಗೆಬಗೆಯ ಜನರನ್ನ ನೋಡಿದ್ದೀರಾ!! ಅದರ ಬಗ್ಗೆ ತುಂಬಾ ಬರೆದಿದ್ದೀರಾ ಕೂಡ. ರಷ್ಯನ್ ಗುಣಕ್ಕೆ ಒಳ್ಳೆ ಉದಾಹರಣೆ ಕೊಡೋದಿಕ್ಕೆ ನೀವೆ ಸರಿಯಾದ ವ್ಯಕ್ತಿ.
ಅಲೆಕ್ಸಿ : (ಟ್ಯಾಂಕ್ ಚಾಲಕ ಚ್ಯುವಿಲೊವ್ ಜೊತೆ ಅವರ ಬಳಿಗೆ ಬರುತ್ತಾನೆ) ರಷ್ಯನ್ ಗುಣ! ಅದನ್ನ ವಿವರಿಸೋದಕ್ಕೆ ಸಾಧ್ಯವಿಲ್ಲ. ನಿಜ, ಉದಾಹರಣೆಯೇನೋ ಸಾಕಷ್ಟಿದೆ. ಆದರೆ ಯಾವುದನ್ನು ಆಯ್ಕೆ ಮಾಡ್ಕೋಬೇಕು? ಅದು ನನಗಂತೂ ಬಹಳ ಕಷ್ಟದ ಕೆಲಸ.
ಚ್ಯುವಿಲೊವ್ : ನಿಮಗೇ ಕಷ್ಟ ಆದ್ರೆ ಇನ್ನು ನಮ್ಮಂತಹವರ ಕಥೆಯೇನೂ? (ಎಲ್ಲರೂ ನಗುತ್ತಾರೆ)
ಅಲೆಕ್ಸಿ : ನಮ್ಮಂತಹವರ ಕಥೆ ! ಹಾಂ, ಚ್ಯುವಿಲೊವ್, ಈಗ ನೀನು ಹೇಳ್ತಾ ಇದ್ಯಲ್ಲ ಕಥೆ, ನಿನ್ನ ಲೆಫ್ಟಿನೆಂಟ್ ದ್ರೊಮೊವ್ ಕಥೆ, ಅದನ್ನೇ ಹೇಳು. ರಷ್ಯನ್ ಗುಣಕ್ಕೆ ಅದೇ ಒಳ್ಳೆಯ ಉದಾಹರಣೆ.
ಚ್ಯುವಿಲೊವ್ : ಏನು, ನಾನು ಕಥೆ ಹೇಳೋದಾ? ನಾನು ಅಕ್ಷರ ಗೊತ್ತಿಲ್ಲದಿರೋ ದಡ್ಡ. ನನಗೆ ಹೇಳೋಕೆ ಎಲ್ಲಿ ಬರುತ್ತೆ. ನೀವು ಕಥೆ ಬರೆಯವ್ರು. ನೀವು ಹೇಳಿದ್ರೇನೇ ಚೆನ್ನ. 
ಅಲೆಕ್ಸಿ : ಚ್ಯುವಿಲೊವ್, ಸತ್ಯವನ್ನ ನೇರವಾಗಿ ಹೇಳೋದೇ ಚೆನ್ನ. ಅದು ಹೃದಯಕ್ಕೆ ಮುಟ್ಟುತ್ತೆ. ಒರಟಾಗಿರಬಹುದು, ದೊಡ್ಡ ಶಬ್ಧಗಳಿಲ್ಲದಿರಬಹುದು. ಅವುಗಳೆಲ್ಲಾ ಅಲಂಕಾರಕ್ಕೆ, ಶಬ್ಧಾಡಂಬರಕ್ಕೆ ಅಷ್ಟೆ. ಆ ಕಥೇನ ನೀನೇ ಹೇಳು.
ಚ್ಯುವಿಲೊವ್ : ಆಯ್ತು, ಹೇಳ್ತೀನಿ. ಇದು ಹೋದ ವರ್ಷ ಕಸ್ರ್ಕ್ ಯುದ್ಧದಲ್ಲಿ ನಡೆದ ಘಟನೆ. ನಾನು ಟ್ಯಾಂಕ್ ಡ್ರೈವರ್ ಆಗಿದ್ದೆ. ನಮಗೆ ಲೆಫ್ಟಿನೆಂಟ್ ಆಗಿದ್ದೋರು ದ್ರೊಮೊವ್, ದ್ರೊಮೊವ್ ಯೆಗೊರೊವಿಚ್. ಆತ ಆಜಾನುಬಾಹು, ನೋಡೋದಿಕ್ಕೂ ಸುಂದರವಾಗಿದ್ದ. ಟ್ಯಾಂಕ್ ಮೇಲಿಂದ ಕೆಳಗಿಳಿದು ಬರ್ತಾ ಇದ್ರೆ, ಯುದ್ಧ ದೇವತೆಯೇ ಇಳಿದು ಬರೋ ಹಾಗಿತ್ತು. ಕಸ್ರ್ಕ್ ಹಳ್ಳಿಯ ಹತ್ತಿರ ಗುಡ್ಡದಲ್ಲಿ ಜೋರು ಯುದ್ಧ ನಡೀತಾ ಇತ್ತು. ಜರ್ಮನ್ನರನ್ನ ಹಿಂದಕ್ಕೆ ಓಡಿಸ್ತಾ ಇದ್ವಿ. ಆಗ ಒಂದು ಶೆಲ್ ನಮ್ಮ ಟ್ಯಾಂಕಿಗೆ ಬಡಿತು. ಇಬ್ಬರು ಅಲ್ಲೇ ಸತ್ತರು. ನಾನು ಹೊರಕ್ಕೆ ಜಿಗಿದೆ. ಇನ್ನೊಂದು ಶೆಲ್ ಹೊಡೆತಕ್ಕೆ ಬೆಂಕಿ ಹತ್ತಿಕೊಂಡ್ತು. ಲೆಫ್ಟಿನೆಂಟ್‍ಗೆ ಏನಾಯ್ತು ಅಂತ ಟ್ಯಾಂಕ್ ಮೇಲಕ್ಕೆ ಹೋದೆ. ಅವರ ಬಟ್ಟೆಗೆ ಬೆಂಕಿ ಹತ್ತಿತ್ತು. ಹೇಗೋ ಕೆಳಕ್ಕೆ ಎತ್ತಿಕೊಂಡು ಬಂದು, ನೆಲದಲ್ಲಿ ಮಲಗಿಸಿ ಬೆಂಕಿ ಆರಿಸಿದೆ...

ದೃಶ್ಯ-2

(ಯುದ್ಧಭೂಮಿ. ಚ್ಯುವಿಲೊವ್ ಕೂಗಾಟ ಕೇಳಿ ಒಂದಿಬ್ಬರು ಸೈನಿಕರು ಅವನ ಬಳಿಗೆ ಬರುತ್ತಾರೆ. ಚ್ಯುವಿಲೊವ್ ದ್ರೊಮೊವ್‍ನ ಮೂಗಿನ ಬಳಿ ಕೈಯಿಟ್ಟು ಉಸಿರಾಡುತ್ತಿದ್ದಾನೆಯೋ ಇಲ್ಲವೋ ಎಂದು ನೋಡುತ್ತಾನೆ)
ಚ್ಯುವಿಲೊವ್ : ಉಸಿರಾಡ್ತಾ ಇದಾನೆ. ಹೇಗಾದ್ರೂ ಬದುಕಿಸಬಹುದು. ಎತ್ಕೊ. ಆಸ್ಪತ್ರೆಗೆ ಕರೆದುಕೊಂಡು ಹೋಗೋಣ.
ಸೈನಿಕ-1 : ಇರು. (ಇನ್ನೊಬ್ಬ ಸೈನಿಕನಿಗೆ) ಅಲ್ಲಿ ಕಾಟನ್ ಬೆಡ್‍ಶೀಟ್ ಇದೆ ತಗೊಂಡು ಬಾ. ಇಲ್ಲಾಂದ್ರೆ ಎತ್ಕೊಂಡು ಹೋಗೋದು ಕಷ್ಟ. ಚರ್ಮ ಕಿತ್ಕೊಂಡು ಬರುತ್ತೆ. (ಅಷ್ಟರಲ್ಲಿ ನರ್ಸ್ ಬರುತ್ತಾಳೆ. ಅಲ್ಲೇ ಪ್ರಥಮ ಚಿಕಿತ್ಸೆ ಮಾಡುತ್ತಾಳೆ. ಇನ್ನೊಬ್ಬ ಸೈನಿಕ ಬೆಡ್‍ಶೀಟ್ ತರುತ್ತಾನೆ)
ನರ್ಸ್ : ಇಲ್ಲೇ ಮೆಡಿಕಲ್ ಟೆಂಟ್ ಇದೆ. ಕರ್ಕೊಂಡು ಬನ್ನಿ.
(ಸೈನಿಕರು ದ್ರೊಮೊವ್‍ನನ್ನು ಹೊತ್ತುಕೊಂಡು ಹೋಗುತ್ತಾರೆ)

ದೃಶ್ಯ-3

(ಆಸ್ಪತ್ರೆಯ ದೃಶ್ಯ. ದ್ರೊಮೊವ್ ಮುಖದ ತುಂಬಾ ಬ್ಯಾಂಡೆಜ್ ಇದೆ. ನರ್ಸ್ ಬರುತ್ತಾಳೆ. ಹಿಂಬದಿಯಿಂದ ಚ್ಯುವಿಲೊವ್ ಮತ್ತು ಅಲೆಕ್ಸಿಯ ಧ್ವನಿ)
ಚ್ಯುವಿಲೊವ್ ಧ್ವನಿ : ದ್ರೊಮೊವ್ ಕೆಲವು ತಿಂಗಳು ಆಸ್ಪತ್ರೆಯಲ್ಲೇ ಕಳೀಬೇಕಾಯ್ತು. ಆಪರೇಷನ್ನೆಲ್ಲಾ ಮಾಡಿದ್ರು.
ಅಲೆಕ್ಸಿ ಧ್ವನಿ : ಪ್ಲಾಸ್ಟಿಕ್ ಸರ್ಜರಿ.
ಚ್ಯುವಿಲೊವ್ ಧ್ವನಿ : ಅದೇ. ಅದನ್ನೇ ಮಾಡಿದ್ರು. ಕಣ್ಣು, ಕಿವಿ, ಮೂಗು, ತುಟಿ, ಹುಬ್ಬು ವಾಪಸ್ ಬಂತು. ಆದರೆ ಮುಖ ಮಾತ್ರ... (ಧ್ವನಿ ನಿಲ್ಲುತ್ತದೆ)
(ನರ್ಸ್ ಬಂದು ಬ್ಯಾಂಡೇಜ್ ಬಿಚ್ಚುತ್ತಾಳೆ. ಮುಖದಲ್ಲಿ ಮೂಳೆ ಕಾಣುತ್ತಿರುತ್ತವೆ. ವಿರೂಪವಾಗಿರುತ್ತದೆ. ದ್ರೊಮೊವ್ ಬೆಳಕಿಗೆ ಹೊಂದಿಕೊಳ್ಳಲು ಕಣ್ಣನ್ನು ಉಜ್ಜಿಕೊಂಡು ಸರಿಪಡಿಸಿಕೊಳ್ಳುತ್ತಾನೆ.)
ದ್ರೊಮೊವ್ : (ನರ್ಸ್‍ಗೆ) ಸ್ವಲ್ಪ ಕನ್ನಡಿ ಕೊಡಿ. ಮುಖ ನೋಡ್ಬೇಕು. (ಧ್ವನಿ ಒರಟಾಗಿದೆ)
ನರ್ಸ್ : (ಅಳುಕುತ್ತಾ) ಈಗೇನು ಆತುರ. ನಿಧಾನವಾಗಿ ನೋಡಿದ್ರಾಯ್ತು.
ದ್ರೊಮೊವ್ : (ಅದನ್ನು ಕೇಳಿಸಿಕೊಳ್ಳದೆ ತನಗೆ ತಾನೆ ಹೇಳಿಕೊಳ್ಳುತ್ತಾನೆ) ಇದೇನು ನನ್ನ ಧ್ವನಿನಾ. ನನಗೇ ಗುರುತು ಹಿಡಿಯೋಕೆ ಆಗ್ತಿಲ್ಲ. ನಾನು ಬದುಕಿದೀನಿ ತಾನೆ. (ತನ್ನನ್ನೇ ತಾನು ಚಿವಿಟಿಕೊಂಡು ‘ಹಾಂ’ ಎನ್ನುತ್ತಾನೆ) ಸ್ವಲ್ಪ ಕನ್ನಡಿ ಕೊಡಿ, ನನ್ನ ಮುಖನಾದ್ರೂ ಗುರುತು ಹಿಡಿತೀನಿ.
ನಸ್ : (ತೊದಲುತ್ತಾ) ಪರ್ವಾಗಿಲ್ಲ... ಬೇಡ ಬಿಡಿ.
ದ್ರೊಮೊವ್ : (ಮಿಲಿಟರಿ ಶೈಲಿಯಲ್ಲಿ) ಇದು ನನ್ನ ಆರ್ಡರ್. ಕನ್ನಡಿ ಕೊಡಿ. (ದ್ರೊಮೊವ್‍ಗೆ ಕನ್ನಡಿ ಕೊಟ್ಟ ನರ್ಸ್ ಆ ಕಡೆ ತಿರುಗಿ ಮುಖ ಮುಚ್ಚಿಕೊಂಡು ಅಳುತ್ತಾಳೆ. ಕನ್ನಡಿ ನೋಡಿದ ದ್ರೊಮೊವ್ ಒಂದು ಸಲ ನರಳುತ್ತಾನೆ) ಧ್ವನಿ ಮಾತ್ರ ಗುರುತು ಸಿಗೋಲ್ಲ ಅಂದುಕೊಂಡೆ. ಮುಖಾನೂ ಗುರುತು ಸಿಗೊಲ್ಲ. (ನರ್ಸ್ ಕಡೆ ತಿರುಗಿ) ನನಗಾಗಿ ಅಳಬೇಡಿ. ನಾನು ಇದಕ್ಕಿಂತಲೂ ಘೋರವಾಗಿರೋದನ್ನ ನೋಡಿದ್ದೀನಿ. ನನ್ನನ್ನ ಪ್ರೀತಿಸುವವರಿಗಾಗಿ ಅಳಬೇಕು. ಅವರಿಗೆ ಇದನ್ನು ಸಹಿಸಲು ಕಷ್ಟವಾಗಬಹುದು.
(ಅಲ್ಲಿಗೆ ಜನರಲ್ ಬರುತ್ತಾನೆ. ದ್ರೊಮೊವ್ ಮುಖ ಪ್ರೇಕ್ಷಕರತ್ತ ತಿರುಗಿರುತ್ತೆ)
ಜನರಲ್ : ಕಾಮ್ರೇಡ್ ದ್ರೊಮೊವ್, ಹೇಗಿದ್ದೀರಾ? (ದ್ರೊಮೊವ್ ತಿರುಗುತ್ತಾನೆ) ಜನರಲ್ ಮುಖ ನೋವಿನಿಂದ ಕಳಾಹೀನವಾಗುತ್ತದೆ. ನೇರವಾಗಿ ನೋಡುವುದನ್ನು ತಪ್ಪಿಸುತ್ತಾನೆ)
ದ್ರೊಮೊವ್ : ಚೆನ್ನಾಗಿದೀನಿ ಕಾಮ್ರೇಡ್ ಜನರಲ್.
ಜನರಲ್ : ಈ ದಿನ ನಿಮಗೆ ಡಿಸ್‍ಚಾರ್ಜ್.
ದ್ರೊಮೊವ್ : ಹೌದು, ಆಸ್ಪತ್ರೆಯಿಂದ ಡಿಸ್‍ಚಾರ್ಜ್, ರೆಜಿಮೆಂಟ್‍ನಲ್ಲಿ ಚಾರ್ಜ್.
ಜನರಲ್ : (ಕಷ್ಟಪಟ್ಟು ನಗುತ್ತಾ) ದ್ರೊಮೊವ್. ನಿಮ್ಮ ಆರೋಗ್ಯ ಸುಧಾರಿಸ್ಕೊಳ್ಳಿ. ನಂತರ ಸೈನ್ಯ ಬಿಟ್ಟು ನಿಮ್ಮನ್ನ ಬೇರೆ ಕಡೆ ಕಳುಹಿಸೋದಿಕ್ಕೆ ವ್ಯವಸ್ಥೆ ಮಾಡ್ತೀನಿ.
ದ್ರೊಮೊವ್ : (ಸ್ವಲ್ಪ ಸಿಟ್ಟಿನಿಂದ) ಸೈನ್ಯ ಬಿಟ್ಟು ಬೇರೆ ಕಡೆ. ಜನರಲ್, ಹಾಳಾಗಿರೋದು ನನ್ನ ಮುಖದ ಹೊರಗಿನ ಸೌಂದರ್ಯ. ದೇಹಾನೂ ಅಲ್ಲ, ಮನಸ್ಸೂ ಅಲ್ಲ. ನಾನೊಬ್ಬ ಸೈನಿಕ. ಒಂದೋ ಯುದ್ಧ ನಿಲ್ಲಬೇಕು, ಇಲ್ಲಾ ನಾನು ಸಾಯಬೇಕು. ಅಲ್ಲಿಯವರೆಗೂ ನಾನು ಸೈನಿಕನಾಗೇ ಉಳೀತೀನಿ.
ನರ್ಸ್ : ಗಾಯ ಈಗ ತಾನೆ ವಾಸಿಯಾಗಿದೆ. ಆಗಲೇ ರಣರಂಗಕ್ಕೆ ಹೋಗ್ಬೇಕಾ? ಎಲ್ಲರಿಗೂ ಗೊತ್ತು. ನೀವು ಪರಾಕ್ರಮಿಗಳು, ಯಾವುದಕ್ಕೂ ಹೆದರೋಲ್ಲ ಅಂತ. ಆದರೆ ಅದನ್ನೆಲ್ಲಾ ಈ ರೀತಿ ತೋರಿಸೋದು ಬೇಡ.
ದ್ರೊಮೊವ್ : (ವಿಷಣ್ಣನಾಗಿ ನಗುತ್ತಾ) ಸಿಸ್ಟರ್, ನಮ್ಮ ರಷ್ಯನ್ ಜನರೆಲ್ಲಾ ಗಾಯಗಳೊಂದಿಗೇ ಯುದ್ಧ ಮಾಡ್ತಿದಾರೆ. ಮನಸ್ಸಿನ ಗಾಯ, ದೇಹದ ಗಾಯ ಎಲ್ಲಾನೂ ಹೊತ್ಕೊಂಡು. ಅದೆಲ್ಲಾ ಮಾಗೋದಿಕ್ಕೆ ಬಹಳ ಕಾಲ ಬೇಕು. ಆದ್ರೆ ಎಲ್ಲರ ಗಾಯಗಳು ಮಾಗಬೇಕು ಅಂದ್ರೆ, ಈ ದೇಶದಲ್ಲಿ ಒಬ್ಬ ನಾಜಿನೂ ಇರಬಾರದು. ಸೋವಿಯತ್ ಸರ್ಕಾರ ಸುಭದ್ರವಾಗಿರಬೇಕು; ಕಾಮ್ರೇಡ್ ಸ್ಟಾಲಿನ್ ನಾಯಕರಾಗಿರಬೇಕು. ಬಾಂಬಿನ ಮಳೆ ಸುರಿತಾ ಇರೋವಾಗ ಕಾಮ್ರೇಡ್ ಸ್ಟಾಲಿನ್ ಬಯಲಿಗೆ ಬಂದು ಸೈನಿಕರ ಜೊತೆ ಮಾತನಾಡ್ತಾರೆ, ಜೀವದ ಹಂಗು ತೊರೆದು. ಇನ್ನು ನಾವು ಕೆಲವು ಗಾಯಗಳಿಗೆ ಹೆದರಬೇಕೆ?
ಜನರಲ್ : ಸರಿ ದ್ರೊಮೊವ್. ಸ್ವಲ್ಪ ದಿನ ರಜೆ ತಗೊಂಡು ಪೂರ್ತಿ ಗುಣಮುಖರಾಗಿ ಬನ್ನಿ. ನಿಮ್ಮಂಥ ಲೆಫ್ಟಿನೆಂಟ್‍ಗಳು ರಷ್ಯಾಗೆ ಬೇಕು.
ದ್ರೊಮೊವ್ : ಎಂಟು ತಿಂಗಳು ರಜೆಯಲ್ಲೇ ಇದ್ನಲ್ಲಾ ಜನರಲ್.
ಚ್ಯುವಿಲೊವ್ : ಕಾಮ್ರೇಡ್ ಲೆಫ್ಟಿನೆಂಟ್ ಎಂಟು ತಿಂಗಳು ಇದ್ದದ್ದು ಆಸ್ಪತ್ರೇಲಿ, ರಜೆಯಲ್ಲಲ್ಲ. (ಎಲ್ಲರೂ ನಗುತ್ತಾರೆ)
ಜನರಲ್ : ನೀವು ಊರಿಗೆ ಹೋಗಿ ಬಹಳ ವರ್ಷಗಳಾಯಿತು. ತಂದೆ ತಾಯೀನೂ ನೋಡಿದ ಹಾಗಾಗುತ್ತೆ. ಊರಿಗೆ ಹೋಗಿ ಬನ್ನಿ. ನಿಮಗಾಗಿ ನಾವೆಲ್ಲರೂ, ನಿಮ್ಮ ಟ್ಯಾಂಕ್, ಚ್ಯುವಿಲೊವ್ ಎಲ್ಲರೂ ಕಾಯ್ತಾ ಇರ್ತೀವಿ.
(ದ್ರೊಮೊವ್ ತಲೆಯಲ್ಲಾಡಿಸುತ್ತಾನೆ. ಜನರಲ್ ಹಿಂದಕ್ಕೆ ತಿರುಗುತ್ತಾನೆ. ಚ್ಯುವಿಲೊವ್ ದ್ರೊಮೊವ್ ಬಳಿಗೆ ಬರುತ್ತಾನೆ)
ಚ್ಯುವಿಲೊವ್ : (ಚೇಡಿಸುತ್ತಾ) ನಿಮ್ಮ ಗೆಳತಿ ಕಾತ್ಯಾ ಮಾಲಿಶೆವಾ, ಆಕೆನೂ ನೋಡಿಕೊಂಡು ಬರಬಹುದು. ನನ್ನ ಶುಭಾಷಯಗಳನ್ನೂ ತಿಳಿಸಿ.
(ದ್ರೊಮೊವ್ ತಲೆಯಲ್ಲಾಡಿಸುತ್ತಾನೆ. ಚ್ಯುವಿಲೊವ್ ಹೋದ ಮೇಲೆ ಅತ್ತಿಂದಿತ್ತ ತಿರುಗಾಡುತ್ತಾ ಯೋಚಿಸುತ್ತಾನೆ)
ದ್ರೊಮೊವ್ : (ಸ್ವಗತ) ಹೌದು, ಅಪ್ಪ, ಅಮ್ಮನ್ನ ನೋಡಬೇಕು. ಕಾತ್ಯಾಳನ್ನೂ ಮಾತನಾಡಿಸಬೇಕು. ನಾನು ಹೋದರೆ ಅವರಿಗೆಲ್ಲಾ ಸಂತೋಷವಾಗುತ್ತೆ. (ಒಂದು ಕ್ಷಣ ನಡುಗುತ್ತಾನೆ) ಆದ್ರೆ ಈ ಮುಖ ನೋಡಿದ್ರೆ, ಸಂತೋಷವಾಗುತ್ತಾ, ಭಯ ಆಗಲ್ವಾ, ಅವರಿಗೆ ನೋವಾಗಲ್ವಾ, ಕಾತ್ಯಾಳಿಗೆ ಅಸಹ್ಯವಾಗಲ್ವಾ? ಇಲ್ಲಾ, ಇಲ್ಲ. ಅವರಿಗೆ ಈ ಮುಖ ತೋರಿಸಲಾರೆ. ಆದರೆ ಅವರಿಗೆ ಏನಂತ ಹೇಳಲಿ. ನಾನೇನ್ ಮಾಡಲಿ... ಏನ್ ಮಾಡಲಿ...
ದೃಶ್ಯ-4

(ಮನೆಯ ದೃಶ್ಯ. ದ್ರೊಮೊವ್ ತಾಯಿ ಟೇಬಲ್ ಬಳಿಯಿದ್ದ ಕುರ್ಚಿಯಲ್ಲಿ ಕುಳಿತುಕೊಂಡು ಏನನ್ನೋ ಯೋಚಿಸುತ್ತಿದ್ದಾಳೆ. ಬಾಗಿಲು ಬಡಿದ ಶಬ್ಧ ಕೇಳಿಸುತ್ತದೆ)
ತಾಯಿ : ಯಾರು? ಯಾರು?
ದ್ರೊಮೊವ್ : ನಾನು. (ಗಂಟಲನ್ನು ಸರಿಪಡಿಸಿಕೊಂಡು) ಲೆಫ್ಟಿನೆಂಟ್ ಜೊಕೊವ್. ಸೋವಿಯತ್ ಯೂನಿಯನ್‍ನ ಧೀರ ಸೈನಿಕ. ನಿಮ್ಮ  ಮಗನ ಸ್ನೇಹಿತ.
(ತಾಯಿ ಗಡಿಬಿಡಿಯಿಂದ ಎದ್ದು ಬಾಗಿಲು ತೆಗೆಯುತ್ತಾಳೆ. ದ್ರೊಮೊವ್‍ನನ್ನು ದಿಟ್ಟಿಸಿ ನೋಡುತ್ತಾಳೆ. ಮುಖದಲ್ಲಿ ಪ್ರೀತಿ, ವೇದನೆ ಎರಡೂ ಇದೆ)
ತಾಯಿ : ಏನು ಮಗೂ, ಏನು ಬೇಕು?
ದ್ರೊಮೊವ್ : ನಿಮ್ಮ ಮಗ, ನಿಮ್ಮನ್ನು ನೋಡಿ ಮಾತನಾಡಿಸ್ಕೊಂಡು ಬರೋದಿಕ್ಕೆ ಹೇಳಿದ್ದಾನೆ. ಅದಕ್ಕೇ ಬಂದೆ ಅಮ್ಮ.
ತಾಯಿ : (ಆತನ ಕೈ ಹಿಡಿದು) ಅಯ್ಯೋ ನನ್ನ ಬುದ್ದಿಗಿಷ್ಟು ಒಳಗೆ ಬಾ. ನಿನ್ನನ್ನು ಹೊರಗೇ ನಿಲ್ಸಿದೀನಿ. (ಪೇಚಾಡಿಕೊಂಡು ಒಳಗೆ ಕರೆದೊಯ್ಯುತ್ತಾಳೆ) ಕುಳಿತಿಕೊ ಮಗು. ನೀರು ತರ್ತೀನಿ.
(ಆತನು ಅಲ್ಲಿದ್ದ ಸ್ಟೂಲನ್ನು ದಿಟ್ಟಿಸಿಕೊಂಡು ನೋಡಿ, ಏನೋ ನೆನಪಿಗೆ ಬಂದಂತೆ ಹೋಗಿ ಕುಳಿತುಕೊಳ್ಳುತ್ತಾನೆ) ನೀರು ತಗೋ. (ಅವನ ಬಳಿ ಕುಳಿತುಕೊಂಡು) ನಿಜ ಹೇಳಪ್ಪಾ, ಪಾಷಾ ಬದುಕಿದ್ದಾನ, ನನ್ನ ಮಗ ದ್ರೊಮೊವ್ ಬದುಕೇ ಇದ್ದಾನೆ ಅಲ್ವಾ? ಎಲ್ಲಾ ಚೆನ್ನಾಗಿದೆ ಅಲ್ವಾ?
ದ್ರೊಮೊವ್ : ಹೌದಮ್ಮ ಬದುಕಿದ್ದಾನೆ. ಗುಂಡುಕಲ್ ಥರ ಇದಾನೆ.
ತಾಯಿ : ಊಟ, ತಿಂಡಿ ಸರಿಯಾಗಿ ಮಾಡ್ತಾನಾ? ಅಂದ್ರೆ, ನಿಮಗೆಲ್ಲಾ ಊಟ, ನಿದ್ದೆ ಸರಿಯಾಗಿ ಆಗುತ್ತಾ?
ದ್ರೊಮೊವ್ : ಓಹೋ, ಅದಕ್ಕೇನಮ್ಮಾ. ನಾವು ಯಾವ ಊರಿಗೆ ಹೋದ್ರೂ ಅಲ್ಲೊಬ್ಬ ತಾಯೀನೊ, ಅಕ್ಕ, ತಂಗೀನೋ ಇರ್ತಾಳೆ. ಹೊಟ್ಟೆ ತುಂಬಾ ಊಟ ಹಾಕ್ಕೋಕ್ಕೆ. ಮನಸ್ಸಿನ ತುಂಬಾ ಪ್ರೀತಿ ಕೊಡೋಕೆ. ನಿಮ್ಮ ಮಗ ಅಂತೂ ಅದೆಂಥಾ ಹೊಟ್ಟೆ ಬಾಕ.
ತಾಯಿ : ಅವನು ಚಿಕ್ಕ ವಯಸ್ಸಿನಿಂದಲೂ ಹಾಗೆ. ಚೆನ್ನಾಗಿ ತಿಂತಾನೆ. ನಿಜ ಹೇಳಪ್ಪಾ, ಯುದ್ಧ ತುಂಬಾ ಭಯಾನಕ ಅಲ್ವಾ. ಸಾವು, ಗಾಯ, ಕಲೆಗಳು, ಅಬ್ಬಬ್ಬಾ ನಿಮ್ಮದು ಎಂಥಾ ಗುಂಡಿಗೆ?
ದ್ರೊಮೊವ್ : ನಿಜ ಅಮ್ಮಾ, ಯುದ್ಧ ತುಂಬಾ ಭಯಾನಕ. ಸಹಿಸಲಸಾಧ್ಯವಾದ ನೋವು ತರುತ್ತೆ. ಆದರೆ ಅದು ಮುಂದಿನ ಸುಖಕ್ಕೆ ಈಗ ಪಡೋ ಕಷ್ಟ. ನಾವು ಸಾವು-ನೋವುಗಳ ಮಧ್ಯೇನೆ ಇದ್ದಾಗ, ಎಲ್ಲಾ ಅಭ್ಯಾಸವಾಗಿ ಹೋಗುತ್ತೆ. ಸಹಿಸೋದೂ ಸುಲಭ ಆಗುತ್ತೆ. ದೂರ ನಿಂತು ನೋಡೋರಿಗೆ ಕಷ್ಟ ಅಷ್ಟೆ.
(“ಮರಿಯಾ” ಎಂದು ಹೊರಗಿನಿಂದ ಕೂಗಿದ ಶಬ್ಧ ಕೇಳುತ್ತದೆ)
ತಾಯಿ : (ಗಡಿಬಿಡಿಯಿಂದ ಒಮ್ಮೆ ದ್ರೊಮೊವ್ ಕಡೆ, ಮತ್ತೊಮ್ಮೆ ಬಾಗಿಲ ಕಡೆ ನೋಡುತ್ತಾ ಬಾಗಿಲು ತೆಗೆಯಲು ಹೋಗುತ್ತಾಳೆ) ತಂದೆ... ದ್ರೊಮೊವ್ ತಂದೆ ಯೆಗೊರ್ ಯೆಗೊರೊವಿಚ್ ಬಂದರು. 
(ದ್ರೊಮೊವ್ ಎದ್ದು ನಿಲ್ಲುತ್ತಾನೆ. ಕೈ ಕೈ ಹಿಸುಕಿಕೊಳ್ಳುತ್ತಾನೆ. ತಂದೆ ಅವನ ಬಳಿಗೆ ಬರುತ್ತಾರೆ)
ಇವನು ನಮ್ಮ ದ್ರೊಮೊವ್‍ನ ಸ್ನೇಹಿತ ಜೊಕೊವ್. ನಮ್ಮನ್ನ ನೋಡೋದಿಕ್ಕೆ ಬಂದಿದ್ದಾನೆ.
ಯೆಗೊರ್ : (ಕೈಕುಲುಕುತ್ತಾ) ನಿಮ್ಮನ್ನು ನೋಡಿ ಸಂತೋಷವಾಯಿತು. ಬಂದು ಬಹಳ ಹೊತ್ತಾಯಿತೆ. ಕುಳಿತುಕೊಳ್ಳಿ. ಯುದ್ಧ ಹೇಗೆ ನಡೀತಾ ಇದೆ. ನಾವು ನಾಜಿಗಳನ್ನ ಸೋಲಿಸೋದಿಕ್ಕೆ ಸಾಧ್ಯವಾಗಿದೆ, ಅಲ್ವಾ?
ದ್ರೊಮೊವ್ : ನಾವು ವೀರಾವೇಶದಿಂದ ಹೋರಾಡ್ತಾ ಇದೀವಿ. ಇಲ್ಲಿಯವರೆಗೂ ಹಿಂದೆ ಸರೀತಾ ಇದ್ವಿ. ಸ್ಟಾಲಿನ್‍ಗ್ರಾದ್ ಯುದ್ಧ ಆದ ಮೇಲೆ ನಾವು ಗೆಲ್ತಾ ಇದೀವಿ.
ಯೆಗೊರ್ : ಹೂಂ. (ಎನನ್ನೋ ನೆನಪಿಸಿಕೊಂಡವನಂತೆ) ತುಂಬಾ ಹಸಿವಾಗಿರಬೇಕು. ತಾಯಿ ಊಟಕ್ಕೆ ಬಡಿಸು. ಬನ್ನಿ ಜೊಕೊವ್. ಊಟ ಮಾಡ್ಕೊಂಡೇ ಮಾತನಾಡೋಣ.
(ಊಟಕ್ಕೆ ಬಡಿಸುತ್ತಿರುವಾಗ ತಾಯಿಯ ಕಣ್ಣು ದ್ರೊಮೊವ್‍ನ ಕೈಗಳ ಮೇಲೆ ಇದೆ. ಅದನ್ನು ಅಕಸ್ಮಾತ್ತಾಗಿ ನೋಡಿದ ದ್ರೊಮೊವ್ ಪೆಚ್ಚಾಗಿ ನಗುತ್ತಾನೆ)
ಈ ಬೇಸಿಗೆಯೊಳಗೆ ಯುದ್ಧ ಮುಗಿಯೋ ಹಾಗೆ ಕಾಣ್ಸುತ್ತೆ.
ದ್ರೊಮೊವ್ : ಅದೇನು ಯುದ್ಧಭೂಮಿಯಲ್ಲಿ ಇಲ್ಲದಿದ್ರೂ, ಬೇಸಿಗೆಯೊಳಗೆ ಮುಗಿಯುತ್ತೇ ಅಂತ ಹೇಗೆ ಹೇಳ್ತೀರಾ?
ಯೆಗೊರ್ : ಇಡೀ ಸೋವಿಯತ್ ದೇಶಾನೇ ಯುದ್ಧಭೂಮಿ ಆಗಿದೆಯೆಲ್ಲಾ ಜೊಕೊವ್. ಒಬ್ಬೊಬ್ಬರೂ ಒಂದೊಂದು ರಣಾಂಗಣದಲ್ಲಿ. ಜನರಿಗೆ ತೀರಾ ರೋಸಿ ಹೋಗಿದೆ. ಬದುಕಿದ್ರೆ ಸಮಾಜವಾದಿ ನೆಲದಲ್ಲಿ ಮಾತ್ರ ಅಂತ ನಿರ್ಧಾರ ಮಾಡಿದ್ದಾರೆ.
(ಊಟ ಮುಗಿಸಿಕೊಂಡು ಎದ್ದೇಳುತ್ತಾರೆ. ಯೆಗೊರ್ ಮರದ ಬೀರುವಿನ ಬಾಗಿಲು ತೆಗೆದು ವೋಡ್ಕಾ ಬಾಟಲು ತೆಗೆಯುತ್ತಾನೆ. ದ್ರೊಮೊವ್ ಬೀರುವಿನತ್ತ ದಿಟ್ಟಿಸಿ ನೋಡುತ್ತಿರುತ್ತಾನೆ. ತಾಯಿ ಅವನನ್ನೇ ಗಮನಿಸುತ್ತಾಳೆ) ಕ್ಷಮಿಸಿ, ವೋಡ್ಕಾ ಸ್ವಲ್ಪವೇ ಇರೋದು.
(ಆಗ ಕೆಲವರು ಮನೆಯೊಳಗೆ ಬರುತ್ತಾರೆ. ಯೆಗೊರ್ ಅವರನ್ನು ಸ್ವಾಗತಿಸಿ, ಪರಿಚಯ ಮಾಡಿಕೊಡುತ್ತಾರೆ)
ಈಕೆ ನತಾಶ, ಸಾಮೂಹಿಕ ಕೃಷಿಕ್ಷೇತ್ರದ ಅಧ್ಯಕ್ಷೆ. ಈತ ಪೊಲಿನ್‍ಸ್ಕಿ ಶಾಲೆಯ ಮುಖ್ಯೋಪಾಧ್ಯಾಯ. ಈತ ಲೆವ್‍ಷೆಂಕೊ. ಉಕ್ಕಿನ ಕಾರ್ಖಾನೆಯಲ್ಲಿ ಫರ್ನೆಸ್ ವಿಭಾಗದ ಮುಖ್ಯಸ್ಥ.
ನತಾಶ : ಯುದ್ಧದ ಬಗ್ಗೆ ಕೇಳಿ ನಿಮಗೆ ಕೆಟ್ಟ ನೆನಪುಗಳನ್ನು ತರೋದಿಕ್ಕೆ ಇಷ್ಟ ಇಲ್ಲ. ನಿಮಗೊಂದಿಷ್ಟು ಬ್ರೆಡ್ ಕೊಡೋಣ ಅಂತ ಬಂದೆ.
ದ್ರೊಮೊವ್ : (ಸ್ವೀಕರಿಸುತ್ತಾ) ಧನ್ಯವಾದಗಳು.
ಪೊಲಿನ್‍ಸ್ಕಿ : ನಾವು ಮಕ್ಕಳಿಗೆ ನಿಮ್ಮ ವೀರಗಾಥೆಗಳನ್ನ ಹೇಳ್ತಾ ಇದೀವಿ. ಮುಂದಿನ ಸಮಾಜದ, ಸುಂದರ ಬದುಕಿನ ಕನಸುಗಳನ್ನು ತುಂಬ್ತಾ ಇದೀವಿ. ಆದ್ರೆ ನೀವು ನಿಜವಾಗ್ಲೂ ಹೋರಾಡ್ತಾ ಇರೋರು. ನಿಮಗೆ ಋಣಿಯಾಗಿದ್ದೇವೆ.
ದ್ರೊಮೊವ್ : ನಾವೂ ಹೀಗಾಗೋದ್ರಲ್ಲಿ ನಿಮ್ಮಂಥ ಶಿಕ್ಷಕರ ಪಾತ್ರ ಇದೆಯಲ್ಲಾ! ಅದನ್ನ ಹೇಗೆ ಮರೆಯೋದು?
ಲೆವ್‍ಷೆಂಕೊ : ಸ್ವಲ್ಪ ಸಿಗರೇಟಿನ ಪುಡಿ ಇದೆ. ಚಳಿಗೆ ಬೇಕಾಗುತ್ತೆ ಇಟ್ಕೊಳ್ಳಿ.
ಯೆಗೊರ್ : (ಅದರ ವಾಸನೆ ಹಿಡಿದು) ತುಂಬಾ ಚೆನ್ನಾಗಿದೆ. ಒಳ್ಳೆ ಕ್ವಾಲಿಟಿ.
ನತಾಶ : (ಜೋರಾಗಿ ನಗುತ್ತಾ) ಹೊ, ಹೊ. ಸರಿಬಿಡಿ. ನಾವು ಗೆಲ್ಲೋದಂತೂ ಗ್ಯಾರಂಟಿ.
ಎಲ್ಲರೂ : ಯಾಕೆ?
ನತಾಶ : ಲೆವ್‍ಷೆಂಕೊ ಮಾವ ಖಜಾನೆಯಲ್ಲಿರೋ ಇಟ್ಕೊಂಡಿರೋ ಹೊಗೆಸೊಪ್ಪು ಕೊಟ್ಟಿದಾನೆ ಅಂದ್ರೆ, ಅಸಾಧ್ಯವಾದದ್ದು ಯಾವುದೂ ಇಲ್ಲ ಅಂತ ಲೆಕ್ಕ.
(ಎಲ್ಲರೂ ನಗುತ್ತಾರೆ)
ಲೆವ್‍ಷೆಂಕೊ : (ಸ್ವಲ್ಪ ನಾಚಿಕೆಯಿಂದ) ನಾನೇನೂ ಜಿಪುಣ ಅಲ್ಲ. ಹೊಗೆಸೊಪ್ಪಿನ ವಿಷಯದಲ್ಲಿ ಸ್ವಲ್ಪ ಹಾಗೆನೇ, ಇರಲಿ. ನಮ್ಮ ಹುಡುಗರಿಗಿಂತಾ ಹೊಗೆಸೊಪ್ಪೆ? ಬೇರೆಯವರೂ ಏನೇನೂ ಕೊಡ್ತೀನಿ ಅಂತಿದ್ರು. ಪೊಲೊವ್ನಾ ತಿಂಡಿ ಮಾಡ್ತೀನಿ ಅಂತಿದ್ಲು.
ಯೆಗೊರ್: ಏನಿದು? ಎಲ್ರೂ ಅವರನ್ನ ಈಗ್ಲೇ ವಾಪಸ್ ಕಳಿಸ್ತೀರೋ ಹಾಗಿದೆ. ಅವರು ಇನ್ನೂ ಒಂದೆರೆಡು ದಿನ ಇರ್ತಾರೆ. ಅಲ್ವಾ ಜೊಕೊವ್?
ತಾಯಿ : ಇದ್ದು ಹೋಗಪ್ಪಾ. ಬಂದಿರೋದು ಅಪರೂಪ.
ದ್ರೊಮೊವ್ : (ತಡವರಿಸುತ್ತಾ) ಆಯ್ತು, ಆಯ್ತು ಇರ್ತೀನಿ.
ನತಾಶ : ಹಾಗಿದ್ರೆ ಒಳ್ಳೆಯದೇ ಆಯ್ತು. ಬನ್ನಿ ನಮ್ಮ ಸಾಮೂಹಿಕ ಕೃಷಿಕ್ಷೇತ್ರಕ್ಕೆ ಹೋಗೋಣ. ನಮ್ಮ ಊರಿನ ರೈತರೆಲ್ಲಾ ಸೇರಿಕೊಂಡು ಸಾಮೂಹಿಕ ಕೃಷಿಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಅಂತ ನೋಡಿ.
ಪೊಲಿನ್‍ಸ್ಕಿ : ನಮ್ಮ ಮಕ್ಕಳ ಜೊತೆ ಸಮಯ ಕಳೀರಿ. ನಿಮ್ಮನ್ನು ನೋಡಿ ತುಂಬಾ ಸಂತೋಷ ಪಡ್ತಾರೆ.
ದ್ರೊಮೊವ್ : (ಆಶ್ಚರ್ಯದಿಂದ) ನನ್ನ ನೋಡಿ... ಸಂತೋಷ ಪಡ್ತಾರಾ...
ಪೊಲಿನ್‍ಸ್ಕಿ : ಹೌದು, ನಿಮ್ಮಂಥ ಧೀರ ಯೋಧರನ್ನು ನೇರವಾಗಿ ನೋಡಿದ್ರೆ, ಅವರಿಗೆ ಅದೆಷ್ಟು ಸಂತೋಷ, ಹೆಮ್ಮೆ, ಅಭಿಮಾನ ಬರುತ್ತೆ ಗೊತ್ತಾ.
ಲೆವ್‍ಷೆಂಕೊ : ಬನ್ನಿ, ಬನ್ನಿ. ಹುಡುಗ್ರ ಜೊತೆ ಮಾತನಾಡಿ. ಅವರು ಬರೀ ಪುಸ್ತಕ ಓದಿ ಪಂಡಿತರಾದ್ರೆ ಸಾಕಾಗೊಲ್ಲ. ಜೀವನ ಗೊತ್ತಾಗಬೇಕು. ನಿಮ್ಮ ಅನುಭವ ಹೇಳಬೇಕು. ಯುದ್ಧದಲ್ಲಿ ಏನೆಲ್ಲಾ ನಡೀತಾ ಇದೆ ಅನ್ನೋದನ್ನ ಯುದ್ಧದಲ್ಲಿರೋರ ಬಾಯಿಂದಲೇ ಕೇಳಬೇಕು. ಹೊರಡಿ.
ದ್ರೊಮೊವ್ : ನಡೀರಿ ಹೋಗೋಣ. (ತಂದೆಯತ್ತ ತಿರುಗಿ) ಕಾತ್ಯಾ ಮಾಲಿಶೆವಾ ಎಲ್ಲಿ ಸಿಕ್ತಾರೆ?
ಪೊಲಿನ್‍ಸ್ಕಿ : ಆಕೆಯ ಪರಿಚಯ ನಿಮಗಿದೆಯಾ? ಆಕೆ ನಮ್ಮ ಶಾಲೆ ಟೀಚರ್.
ದ್ರೊಮೊವ್ : ಇಲ್ಲ, ಇಲ್ಲ. ಇವರ ಮಗ ನೋಡಿಕೊಂಡು ಬರೋದಿಕ್ಕೆ ಹೇಳಿದ್ದ.
ಪೊಲಿನ್‍ಸ್ಕಿ : ಆಕೆ ಇವತ್ತು ಶಾಲೆಗೆ ಬಂದಿಲ್ಲ.
ತಾಯಿ : ಮನೇಲಿದ್ದಾಳೆ. ಈಗ್ಲೆ ಬರೋದಿಕ್ಕೆ ಹೇಳಿ ಕಳಿಸ್ಲಾ?
ದ್ರೊಮೊವ್ : ಈಗ ಬೇಡ. ನಾನು ಇವರ ಜೊತೆ ಹೋಗಿ ಬರ್ತೀನಿ. ಬರೋ ಅಷ್ಟರಲ್ಲಿ ಆಕೆ ಬಂದಿದ್ದರಾಯಿತು.
(ಎಲ್ಲರೂ ಹೊರಡುತ್ತಾರೆ. ಎಲ್ಲರೂ ಹೋದ ಮೇಲೆ ತಾಯಿ ಇದ್ದಕ್ಕಿದ್ದಂತೆ ಅಳುತ್ತಾಳೆ)
ಯೆಗೊರ್ : ಯಾಕೆ ತಾಯಿ, ದ್ರೊಮೊವ್‍ನ ನೆನಪು ಬಂತಾ? ಅವನೂ ಹೀಗೆ ಒಂದಿನ ಬರ್ತಾನೆ. ಯಾಕೆ ಯೋಚ್ನೆ ಮಾಡ್ತೀಯಾ?
ತಾಯಿ : ಯೆಗೊರ್, ನೀವು ಅವನನ್ನ ಸರಿಯಾಗಿ ನೋಡ್ಲಿಲ್ವಾ?
ಯೆಗೊರ್ : ಯಾಕೆ? ನೋಡಿದ್ನಲ್ಲಾ. ಮಾತಾಸಿಡ್ತಾನೆ ಇದೀನಲ್ಲಾ.
ತಾಯಿ : ನಿಮಗೆ ಅವನ ಗುರುತು ಸಿಗಲಿಲ್ವಾ? ಅವನೇ ನಮ್ಮ ಪಾಷ.
ಯೆಗೊರ್: ಏನು, ನಮ್ಮ ಮಗ ದ್ರೊಮೊವಾ? ದ್ರೊಮೊವ್‍ನ ಸ್ನೇಹಿತ ಅಂತ ಅವನೇ ಹೇಳಿದ್ನಲ್ಲಾ?
ತಾಯಿ : ಆದ್ರೆ ಅವನ ರೀತಿ ನೀತಿ ನೋಡಿದ್ರೆ ಗೊತ್ತಾಗುತ್ತೆ ಯೆಗೊರ್. ಅವನು ಬೆಂಚಿನ ಮೇಲೆ ಕುಳಿತ್ಕೊಂಡ ರೀತಿ. ಕೈಯಲ್ಲಿ ಚಮಚ ಹಿಡ್ಕೊಂಡಿದ್ದು. ನೀವು ಮರದ ಬೀರು ತೆಗೆದಾಗ ಬೆಂಕಿಪೆಟ್ಟಿಗೆನ ಒಂದೇ ಸಮ ನೋಡ್ತಿದ್ದ. ಅದರಲ್ಲಿ ಅವನಿಟ್ಟಿರೋ ಮೀನು ಹಿಡಿಯೊ ಹುಕ್‍ಗಳಿವೆ. ಯೆಗೊರ್, ಅವನು ನನ್ನ ಪಾಷ, ನನ್ನ ಪಾಷಾನೇ.
ಯೆಗೊರ್ : ನಿನಗೆಲ್ಲೋ ಹುಚ್ಚು ಹಿಡಿದಿದೆ. ಅವನು ನಿಜವಾಗಿಯೂ ನಮ್ಮ ಮಗನೇ ಆಗಿದ್ದರೆ, ಸುಳ್ಯಾಕೆ ಹೇಳ್ತಿದ್ದ.
ತಾಯಿ : (ಅಳುತ್ತಾ) ಬಹುಶಃ ತನ್ನ ವಿರೂಪ ಆಗಿರೋ ಮುಖಾನ ನಮಗೆ ತೋರ್ಸೋದಿಕ್ಕೆ ಇಷ್ಟ ಆಗ್ಲಿಲ್ವೋ ಏನೋ.
ಯೆಗೊರ್ : ನೀನು ದಡ್ಡಿ. ಇವತ್ತು ಸೋವಿಯತ್ ದೇಶದಲ್ಲಿ ಕಲೆಗಳಿರೋ ಮುಖಾನೇ ಅತ್ಯಂತ ಸುಂದರವಾದದ್ದು. ಅದು ದೇಶಕ್ಕಾಗಿ ಹೋರಾಡಿದ ಸಂಕೇತ. ಅದರಲ್ಲೂ ಈಗ ಬಂದವನ ಮುಖ ನೋಡು, ಅಂಥ ಮುಖ ಇರೋದು ಯಾರಿಗಾದರೂ ಗೌರವದ ವಿಷಯ. ಅಂತಹವನು ನಮ್ಮ ಹೆಮ್ಮೆಯ ಪುತ್ರ. ಮುಖದ ಮೇಲಿನ ಕಲೆ, ಎದೆಯ ಮೇಲಿನ ಪದಕ.
(ಆಗ ದ್ರೊಮೊವ್ ಒಳಗೆ ಬರುತ್ತಾನೆ. ಅವನ ಹಿಂದೆ ಇನ್ನಿತರರೂ ಬರುತ್ತಾರೆ. ತಾಯಿ ಕಣ್ಣನ್ನು ಒರೆಸಿಕೊಳ್ಳುತ್ತಾಳೆ)
ತಾಯಿ : (ದ್ರೊಮೊವ್‍ಗೆ) ಟೀ ಮಾಡಲೇ? ಇನ್ನೇನು ಕಾತ್ಯಾ ಬರ್ತಾಳೆ.
(ತಾಯಿ ಒಳಗೆ ಹೋಗುತ್ತಾಳೆ. ಕಾತ್ಯಾ ಒಳಗೆ ಬರುತ್ತಾಳೆ) 
ಯೆಗೊರ್ : ಬಾಮ್ಮಾ, ಬಾ. ಇವನು ದ್ರೊಮೊವ್‍ನ ಸ್ನೇಹಿತ, ಲೆಫ್ಟಿನೆಂಟ್ ಜೊಕೊವ್.
ಕಾತ್ಯಾ : (ದ್ರೊಮೊವ್ ಆಕೆಗೆ ಬೆನ್ನು ಹಾಕಿ ನಿಂತಿದ್ದಾನೆ) ನಮಸ್ಕಾರ. ದ್ರೊಮೊವ್ ಹೇಗಿದ್ದಾನೆ?
ದ್ರೊಮೊವ್ : (ತಿರುಗುತ್ತಾ) ಚೆನ್ನಾಗಿದ್ದಾನೆ. ನಿಮ್ಮನ್ನು ಕೇಳಿದ.
(ಅವನ ಮುಖ ನೋಡಿದ ಕಾತ್ಯಾ ಒಂದು ಕ್ಷಣ ಬೆಚ್ಚಿದಳು. ಅವಳ ಮುಖದಲ್ಲಿ ನೋವು ಕಾಣಿಸಿಕೊಂಡು ಮಾಯವಾಯಿತು. ಇದನ್ನು ಗಮನಿಸಿದ ದ್ರೊಮೊವ್‍ಗೆ ತುಂಬಾ ಬೇಸರವಾಗುತ್ತದೆ)
ಕಾತ್ಯಾ : (ಸುಧಾರಿಸಿಕೊಂಡು) ಆತನಿಗೆ ತಿಳಿಸಿ. ನಾನು ಅವನಿಗಾಗಿ ಕಾಯ್ತಾ ಇದೀನಿ ಅಂತ. ಏಳೆಂಟು ತಿಂಗಳಾಯ್ತು, ಕಾಗದಾನೂ ಬರೆದಿಲ್ಲ. ಅವನ ನಿರೀಕ್ಷೆಯಲ್ಲೇ ಇದ್ದೀನಿ.
ಯೆಗೊರ್ : ಜೊಕೊವ್, ಕಾತ್ಯಾ ತುಂಬಾ ಗಂಭೀರೆ. ಅವಳು ದ್ರೊಮೊವ್‍ಗೆ ಕಾಯ್ತೀನಿ ಅಂತ ಹೇಳಿದ್ರೆ ಅವನು ಒಂದೇ ಕೈ, ಒಂದೇ ಕಾಲಲ್ಲಿ ಬಂದ್ರೂ ಸರಿಯೇ, ಅವನಿಗಾಗೇ ಕಾಯ್ತಾ ಇರ್ತಾಳೆ. ಅವನಿಗೆ ಸ್ವಲ್ಪ ತಿಳಿಹೇಳಿ. ಕಾಗದ ಬರೀಲಿ.
(ತಾಯಿ ಟೀ ತೆಗೆದುಕೊಂಡು ಬರ್ತಾಳೆ)
ತಾಯಿ : ಟೀ ತಗೊಪ್ಪಾ. ಬಾ ಕಾತ್ಯಾ, ನೀನೂ ತಗೊ. ಒಳಗಡೆ ಇದೆ.
(ಕಾತ್ಯಾ ದ್ರೊಮೊವ್‍ನನ್ನೇ ನೋಡುತ್ತಾ ಒಳಗೆ ಹೋಗುತ್ತಾಳೆ)
ದ್ರೊಮೊವ್ : (ಟೀ ಕುಡಿದ ಮೇಲೆ) ತಾಯಿ ನಾನಿನ್ನು ಹೊರಡ್ತೀನಿ.
ತಾಯಿ : ಯಾಕಪ್ಪಾ? ಒಂದೆರೆಡು ದಿನ ಇರ್ತೀನಿ ಅಂದಿದ್ದೆ.
ಯೆಗೊರ್ : ಏನಾದರೂ ಬೇಸರವಾಯ್ತೆ?
ದ್ರೊಮೊವ್ : ಏನಿಲ್ಲಾ. ಯುದ್ಧ ಕರೀತಾ ಇದೆ. ನಾನು ಈಗಲೇ ಹೋಗಬೇಕು. ಇಲ್ಲಿ ನಿಲ್ಲೋಕೆ ಆಗ್ತಿಲ್ಲ. ನಾನಿನ್ನು ಬರ್ತೀನಿ.
ಯೆಗೊರ್ : ಸ್ವಲ್ಪ ಇರಿ. ಕುದುರೆಗಾಡೀನಾದ್ರೂ ತರ್ತೀನಿ. ಸಾಮೂಹಿಕ ಕೃಷಿಕ್ಷೇತ್ರದಲ್ಲಿದೆ.
ದ್ರೊಮೊವ್ : ಅವರಿಗೆ ತೊಂದರೆ ಬೇಡ. ನಾನೊಬ್ಬನೇ ನಡೆದು ಹೋಗ್ತೀನಿ, ಹಳ್ಳಿಯ ಸೌಂದರ್ಯವನ್ನ ನೋಡಿಕೊಂಡು. ಅದೇ ಹೆಚ್ಚು ಚೆನ್ನ.
(ದ್ರೊಮೊವ್ ಹೊರಡಲನುವಾಗುತ್ತಾನೆ. ತಾಯಿ ಬಂದು ಒಂದು ಶಾಲು ಕೊಡುತ್ತಾಳೆ. ಅದನ್ನು ಒಂದು ಕ್ಷಣ ನೋಡಿ ಭಾವಪರವಶನಾಗುತ್ತಾನೆ. ಮುಂದಕ್ಕೆ ಹೆಜ್ಜೆ ಇಡಲು ಹೋಗುತ್ತಾನೆ. ತಾಯಿ ‘ಪಾಷ’ ಎಂದು ಕೂಗುತ್ತಾಳೆ. ತಕ್ಷಣವೇ ದ್ರೊಮೊವ್ ‘ಅಮ್ಮ’ ಎಂದು ಬಿಡುತ್ತಾನೆ. ಕೈಗಳಿಂದ ಮುಖ ಮುಚ್ಚಿಕೊಂಡು ಕೆಳಗೆ ಕುಸಿಯುತ್ತಾನೆ. ತಾಯಿ ಓಡಿ ಬಂದು ಭುಜ ಹಿಡಿದುಕೊಳ್ಳುತ್ತಾಳೆ)
ತಾಯಿ : (ಅಳುತ್ತಾ) ಪಾಷ, ಪಾಷ. ಯಾಕೆ ಸುಳ್ಳು ಹೇಳಿದೆ? ನಿನ್ನ ಮುಖ ನೋಡಿ ಮಗನೋ, ಅಲ್ಲವೋ ಅಂತ ಹೇಳ್ತೀವಾ?
ದ್ರೊಮೊವ್ : ಅಮ್ಮಾ ದಯವಿಟ್ಟು ಕ್ಷಮಿಸು. ನಾನು ನಿಮ್ಮನ್ನು ಸರಿಯಾಗಿ ಅರ್ಥ ಮಾಡ್ಕೊಳ್ಳಲಿಲ್ಲಾ. ನಿಮಗೆ ನೋವು ಕೊಡಬಾರದು ಅಂತ ಅಂದ್ಕೊಂಡು ತುಂಬಾನೆ ನೋವು ಕೊಟ್ಟೆ. ಅಪ್ಪಾ, ನಿಮ್ಮ ಹೆಮ್ಮೆಗೆ ಧಕ್ಕೆ ತರಲ್ಲ.
ಯೆಗೊರ್ : ಹೋ, ಪಾಷ. ಇದು ನೀನೇನಾ. ನನ್ನ ಬುದ್ಧಿಗೆ ಹೊಳೀದೇ ಹೋದದ್ದು, ಅವಳ ಹೃದಯಕ್ಕೆ ತಿಳೀತು. ನಾನು ನಿನಗೆ ಯಾವಾಗ್ಲೂ ಹೇಳ್ತಾ ಇದ್ದೆ. ರಷ್ಯನ್ ಆಗಿರೋದಕ್ಕೆ ಹೆಮ್ಮೆ ಪಡು ಅಂತ. ಈ ಮುಖ ಹೊತ್ತ ರಷ್ಯನ್ ಆಗಿರೋದಕ್ಕೆ ಇನ್ನೂ ಹೆಚ್ಚು ಹೆಮ್ಮೆ ಪಡು. ಅದರಲ್ಲೇ ನಿಜವಾದ ಅಂತಃಸತ್ವ ಅಡಗಿರೋದು. ಮನುಷ್ಯತ್ವ ಇರೋದು. ಅದೇ ರಷ್ಯನ್ ಗುಣ.
ತಾಯಿ : ಪಾಷ, ಕಾತ್ಯಾ...
ದ್ರೊಮೊವ್ : ಅಮ್ಮಾ, ನಾನು ಮತ್ತೆ ಯುದ್ಧಭೂಮಿಗೆ ಹೊರಡೋನು. ವಾಪಸ್ ಬರ್ತೀನಾ, ಬಂದ್ರೂ ಹೇಗಿರ್ತೀನಿ ಗೊತ್ತಿಲ್ಲ. ಅವಳಿಗೆ ಮುಂದೆ ಒಳ್ಳೆ ಭವಿಷ್ಯ ಇದೆ. ಈ ಸುಟ್ಟ ಮುಖಾನಾ ಸಾಯೋವರ್ಗು ಯಾಕೆ ನೋಡ್ಬೇಕು?
ಕಾತ್ಯಾ : (ಒಳಗಿನಿಂದ ಇಣುಕಿ ಕೇಳಿಸಿಕೊಳ್ಳುತ್ತಿದ್ದವಳು ದ್ರೊಮೊವ್‍ನ ಬಳಿ ಓಡಿ ಬಂದು) ಪಾಷಾ... ನಾವು ಪ್ರೀತಿಸಿದಾಗ ಏನ್ ಮಾತಾಡ್ಕೊಂಡ್ವಿ ನೆನಪಿದೆಯಾ? ನಮ್ಮ ಪ್ರೀತಿ ದೈಹಿಕ ಆಕರ್ಷಣೆ ಅಲ್ಲ. ಒಂದು ಆದರ್ಶಕ್ಕಾಗಿ ಅಂತ. ನಮ್ಮ ಪ್ರೀತಿ ಸೋವಿಯತ್ ಸಮಾಜಾನ ಬೆಳೆಸೋದ್ರಲ್ಲಿ ಅರಳಬೇಕು ಅಂತ ನೀನೇ ಹೇಳಿದೆ. 
ದ್ರೊಮೊವ್ : ಆದರೆ ಕಾತ್ಯಾ...
ಕಾತ್ಯಾ : ಆದರೇನೂ ಇಲ್ಲ, ಏನೂ ಇಲ್ಲ. ನೀನು ಆದರ್ಶ ಬಿಟ್ಟಿದೀಯಾ ಹೇಳು?
ದ್ರೊಮೊವ್ : ಇಲ್ಲ.
ಕಾತ್ಯಾ : ನೀನು ಆದರ್ಶ ಬಿಟ್ಟ ದಿನ ನಾನು ನಿನ್ನನ್ನ ಬಿಡ್ತೀನಿ. ಅಲ್ಲಿಯವರೆಗೂ ನಾವು ಅಗಲಬಾರದು.
(ಎಲ್ಲರೂ ಸಂತೋಷದಿಂದ ಚಪ್ಪಾಳೆ ಹೊಡೆಯುತ್ತಾರೆ)



ನಾಟಕ ರೂಪಾಂತರ : ಎಸ್.ಎನ್.ಸ್ವಾಮಿ


ಪ್ರಸ್ತುತ - ರಾಧೆಯ ಬದುಕಿನ ಪುಟದೊಳಗೆ

                     
              ಬದುಕಿನ ಬಗ್ಗೆ ಸುಂದರ ಕನಸುಗಳನ್ನು ಕಾಣುತ್ತಾ ಜಿಗಿಯುತ್ತಾ. ನಲಿಯುತ್ತಾ ಆಟವಾಡುತ್ತಿದ್ದ, ಮುಂದೆ ಓದಿ ಒಳ್ಳೆಯ ಕೆಲಸ ಪಡೆಯಬೇಕೆಂದು ಬಯಸಿದ ರಾಧೆ ಇಂದು ಇದೆಲ್ಲದ್ದರಿಂದ ದೂರ ಉಳಿದಿದ್ದಾಳೆ, ಒಂದೆಡೆ ಹತಾಶೆ, ಮತ್ತೊಂದೆಡೆ ಯಾವುದರಲೂ ಆಸಕ್ತಿಯೇ ಇಲ್ಲ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಪುಟ್ಟ ರಾಧೆಯು ತನ್ನಗಾದ ನೋವಿನ ಘಟನೆಯಿಂದ ಹೊರಬರಲಾರದೆ ನೊಂದಿರುವಳು.
        ಮನೆಯಲ್ಲಿ ಕಡುಬಡತನವಿದ್ದು ಒಂದು ಹೊತ್ತಿನ ಊಟಕ್ಕು ಕಷ್ಟವಾಗುತ್ತಿತ್ತು. ಅಮ್ಮ ಹೇಗೋ ಕೂಲಿ ಮಾಡಿ ನಾಲ್ಕು ಮಕ್ಕಳ ಹೊಟ್ಟೆ ತುಂಬಿತ್ತಿದ್ದಳು. ಆಗಷ್ಟೇ ಯೌವನಕ್ಕೆ ಕಾಲಿಟ್ಟ ರಾಧೆ ಓದಬೇಕೆಂಬ ಕನಸು ಹೊತ್ತು ಮುನ್ನಡೆಯುತ್ತಿದ್ದಳು, ತನ್ನ ಓದಿನ ಜೊತೆಗೆ ಅಮ್ಮನಿಗೆ ಸಹಾಯ ಮಾಡುತ್ತಾ ಬದುಕುತ್ತಿದ್ದ ಛಲಗಾತಿ ರಾಧೆ ಎಲ್ಲರ ಮೆಚ್ಚುಗೆಗೂ ಪಾತ್ರಳಾಗಿದ್ದಳು. ಅಮ್ಮನಿಗೂ ಆತಂಕ ಆದರೂ ಮಗಳ ಭವಿಷ್ಯಕ್ಕೆ, ಕನಸಿಗೆ ಎಂದೂ ಹಿಂದೇಟುಹಾಕಿದವಳಲ್ಲ. 
ಹೀಗೆ ಕನಸ್ಸನ್ನು ಸಾಕಾರಗೂಳಿಸಿಕೊಳ್ಳುವತ್ತ ಶತ ಪ್ರಯತ್ನ ಮಾಡುತ್ತಿದ್ದ ರಾದೆಯ ಬದುಕಿನಲ್ಲಿ ಒಂದು ಕಹಿ ಘಟನೆ ನಡದೇ ಹೋಯಿತು. ತನ್ನ ಕನಸ್ಸಿಗೆ ಬೆಂಬಲವಾಗಿದ್ದ ಸುಶೀಲಾ, ಪರಿಚಯಸ್ಥನೆಂದು ಪರಿಚಯಮಾಡಿಕೊಟ್ಟ ರಾಮು ಅವಳ ಬಾಳಿಗೆ ಮುಳ್ಳಾಗುತ್ತಾನೆಂದು ಸ್ವತಃ ಸುಶೀಲಾಳೆ ನಂಬಿರಲಿಲ್ಲ. ಅಮಾಯಕಳಾಗಿದ್ದ, ಸುಂದರಳಾಗಿದ್ದ ರಾಧೆಯ ಮೇಲೆ ಈ ಕಾಮುಕನ ದೃಷ್ಟಿ ಬೀಳುತ್ತದೆ ಎಂದು ತಿಳಿದಿರಲಿಲ್ಲ. 
ಅಮ್ಮನಿಲ್ಲದ ಹೊತ್ತಿನಲ್ಲಿ ಬಂದು ಕಾಳಜಿಯಿರುವವನಂತೆ ನಟಿಸುತ್ತಿದ್ದ ರಾಮು. ಮೊದಮೊದಲು ರಾಧೆಯೂ ಸಹ ಪರಿಚಯಸ್ಥನೆಂದು  ಸಲುಗೆಯಿಂದ ಇದ್ದಳು. ಆದರೆ ಕ್ರಮೇಣ ಅವನ ವರ್ತನೆಗಳಲ್ಲಿ ಬದಲಾವಣೆ ಕಂಡು ಮುಜುಗರ ಪಟ್ಟಿದ್ದಲ್ಲದೆ, ಅವನ ಬರುವಿಕೆಯು ಅವಳಿಗೆ ಬೇಸರವೂ ತರಿಸಿತ್ತು. ಅಮ್ಮನಲ್ಲಿ ಹೇಳಿಕೊಳ್ಳೋಣವೆಂದರೆ ಎನೋ ಭಯ, ಸಂಕೋಚ ಅಡ್ಡಿಯಾಗುತ್ತಿತ್ತು.. 
ಹೀಗೊಂದು ದಿನ ಶಾಲೆಯಿಂದ ಬಂದ ರಾಧೆಯು ಅನಿರೀಕ್ಷತವಾಗಿ ಆ ಕಾಮುಕ ರಾಮುವಿನ ಬಲೆಗೆ ಬೀಳುತ್ತಾಳೆ. ಏನಾಗುತ್ತಿದೆಯಂದು ಅರಿಯುವ ಮುನ್ನವೆ ಆ ಪುಟ್ಟ ಹೃದಯಕ್ಕೆ ಘಾಸಿಯಾಗಿತ್ತು. ಅಮ್ಮನಿಗೆ ಹೇಳಿದರೆ ನೆಟ್ಟಗಿರಲ್ಲ ಎಂಬ ಬೆದರಿಕೆ ಬೇರೆ. 
ಕ್ರಮೇಣ ದಿನ ಕಳೆದಂತೆ ಯಾವುದರಲ್ಲೂ ಆಸಕ್ತಿ ಇಲ್ಲದವಳಂತೆ ಕಾಣುತ್ತಿದ್ದ ಮಗಳನ್ನು ಗಮನಿಸಿದ ಅಮ್ಮ, "ರಾಧಾ ಏನಾಯಿತಮ್ಮ?" ಎಂದು ಕೇಳಿದಾಗ ಹೇಳಲ್ಲಿಕ್ಕೆ ಹಿಂಜರಿಕೆ, ಅಸಹಾಯಕತೆ, ಬೆದರಿಕೆ ಎಲ್ಲವೂ ಕಣ್ಮುಂದೆ ಬಂದು ಬಿಕ್ಕಿ ಬಿಕ್ಕಿ ಅಳತೂಡಗಿದಳು. 
ಪುಟ್ಟ ಕಂದನ ಸಂತೈಸಿ  ದೃಡ ನಿಶ್ಚಯಕ್ಕೆ ಬಂದು ಕೈಯಲ್ಲಿ ಮಚ್ಚು ಹಿಡಿದು ಹೊರಟೇ ಬಿಟ್ಟಳು, ರಾಧಾಳ ತಾಯಿಯ ಈ ರಣಚಂಡಿ ಅವತಾರವನ್ನು ನೋಡಿದ ರಾಮು ಅಲ್ಲಿಂದ ಕಾಲ್ಕಿತ್ತು ಓಡಿಹೋದ. ಇತ್ತ ಸೀದಾ ಮನೆಗೆ ಬಂದ ತಾಯಿ ರಾಧೆಯನ್ನು ಕರೆದುಕೊಂಡು ಪೋಲೀಸ್ ಠಾಣೆಗೆ ಹೋಗಿ ದೂರು ನೀಡಿ ಮಗಳನ್ನು ಅಪ್ಪಿ ಕಣ್ಣೀರು ಸುರಿಸಿದಳು. 
ಆ ಕಣ್ಣೀರಿನಲ್ಲಿ ನೂರು ನೋವು ವೇದನೆ ಎದ್ದು ಕಾಣುತ್ತಿತ್ತು, ಇನ್ಯಾವುದೇ ಮಕ್ಕಳಿಗೂ ಹೀಗಾಗಬಾರದು ಎಂದು ಎಂದು ತನ್ನ ನೋವ ನುಂಗುತ್ತಲೇ, ರಾಮುವಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದಳು. ಪುಟ್ಟ ರಾಧೆಯು ತನ್ನ ಬದುಕಿನಲ್ಲಾದ ಈ ದುರ್ಘಟನೆಯನ್ನು ಮರೆಯಲ್ಲಿಕ್ಕಾಗದೆ, ತೀವ್ರ ಆಘಾತಕ್ಕೆ ಒಳಗಾಗಿ ಹಾಸಿಗೆ ಹಿಡಿದಿರುವಳು.
              ಈ ರಾಧೆ ಮತ್ತು ಇವಳಂತಿರುವ ಎಲ್ಲರಿಗೂ ನ್ಯಾಯ ಸಿಗುವುದೇ ಈ ಸಮಾಜ ಬದಲಾಗುವುದೇ?  ಪುಟ್ಟ ಮಕ್ಕಳ ಮೇಲಾಗುವ ದೌರ್ಜನ್ಯ ನಿಲ್ಲುವುದೇ? ಯಾರು ನೀಡುತ್ತಾರೆ ಈ ಪ್ರಶ್ನೆಗಳಿಗೆ ಉತ್ತರ- -- - -
  ಉತ್ತರ ಹುಡುಕುವ ಪ್ರಯತ್ನದಲ್ಲಿದ್ದೀನಿ ನಾನೂ ಕೂಡ.


- ಗಿರಿಜಾ ಕೆ ಎಸ್