Sunday 9 April 2017

ಮಹಿಳಾ ಚಳವಳಿಯ ಇತಿಹಾಸ - ಮಹಿಳಾ ಪ್ರತಿರೋಧದ ಹೊಸ ಸಾಧ್ಯತೆಗಳು



ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ವಿದೇಶೀ ಶೋಷಣೆ ಹಾಗೂ ಊಳಿಗಮಾನ್ಯ ಪ್ರಭುಗಳ ದಮನದ ವಿರುದ್ಧ ನಡೆದ ರೈತಾಪಿ ವರ್ಗದ ಹೋರಾಟಗಳು, ಆದಿವಾಸಿ ಮತ್ತಿತರ ಸಮುದಾಯಗಳ ಹೋರಾಟಗಳು ಸಾಮೂಹಿಕ ಆಂದೋಲನಗಳಾಗಿದ್ದವು. ಇಂತಹ ಹೋರಾಟಗಳು ಭಾರತದ ಜನತೆಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದಂತೆಯೇ ಮಹಿಳೆಯರ ಆಲೋಚನೆಯನ್ನೂ ಪ್ರಭಾವಿಸಿದವು. ಜೊತೆಗೆ, ಮಹಿಳೆಯರ ಮೇಲಿನ ಹಿಂಸೆ, ಸಾಮಾಜಿಕ ತಾರತಮ್ಯಗಳ ಬಗ್ಗೆಯೂ ಅರಿವು ಮೂಡಿಸಿದವು. ಮಹಿಳೆಯರ ಅಧೀನ ಸ್ಥಿತಿ ಎಂಬುದು ಚರ್ಚಾಸ್ಪದವಾದ ವಿಚಾರವಾಯಿತು.
ಭಾರತದಲ್ಲಿ ಆಧುನಿಕ ಯುಗದಾರಂಭ ಎಂದು ನಾವು ಗುರುತಿಸುವ 18ನೇ ಶತಮಾನದ ಪುನರುಜ್ಜೀವನ ಯುಗದಲ್ಲಿ, ಪಾಶ್ಚಿಮಾತ್ಯ ಶಿಕ್ಷಣ, ಚಿಂತನೆ, ಚಳವಳಿಗಳ ಪ್ರಭಾವದಲ್ಲಿ ರೂಪುಗೊಂಡ ಸುಧಾರಣಾ ಚಳುವಳಿಗಳು ಮಹಿಳಾ ಪ್ರಶ್ನೆಯನ್ನು ಮುನ್ನೆಲೆಗೆ ತಂದುವು. ಹೆಚ್ಚಿನ ಸಮಾಜ ಸುಧಾರಕರ ಒತ್ತು ಇದ್ದದ್ದು ಮೇಲ್ವರ್ಗದ ಮಹಿಳೆಯರ ಸಮಸ್ಯೆಗಳಾದ ವಿಧವೆಯರ ಕೇಶಮುಂಡನ, ಸತಿ ಪದ್ಧತಿ, ವಿಧವಾ ವಿವಾಹಕ್ಕೆ ಅವಕಾಶವಿಲ್ಲದಿದ್ದದ್ದು ಇತ್ಯಾದಿ. ಆದರೆ ಫುಲೆ ದಂಪತಿಗಳು ದಲಿತರು, ಮಹಿಳೆಯರು ಮತ್ತು ಇನ್ನಿತರ ಶೋಷಿತ ಸಮುದಾಯಗಳ ವಾಸ್ತವಿಕ ಸಮಸ್ಯೆಗಳಾದ ಶಿಕ್ಷಣ ಆರೋಗ್ಯ, ಅಸ್ಪೃಶ್ಯತೆ, ರೈತರ ಸಮಸ್ಯೆಗಳು, ಬಾಲ್ಯವಿವಾಹ, ಬ್ರಾಹ್ಮಣ ಬಾಲವಿಧವೆಯರ ಸಮಸ್ಯೆಗಳು ಮುಂತಾದವನ್ನು ಕೇಂದ್ರೀಕರಿಸಿ ತಮ್ಮದೇ ಸುಧಾರಣಾ ಮಾರ್ಗವನ್ನು ರೂಪಿಸಿದರು. ಇದರಿಂದ ಮಹಿಳಾ ವಿಷಯಗಳ ಬಗ್ಗೆ ಬೇರೆ ರೀತಿ ಆಲೋಚಿಸುವ ಯುವಕರ ವರ್ಗವೊಂದು ತಯಾರಾಯಿತು.
ರಾಷ್ಟ್ರೀಯ ಆಂದೋಲನದಲ್ಲೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು. ಇದರಲ್ಲಿ ಎಲ್ಲಾ ವರ್ಗ, ಹಿನ್ನೆಲೆಗಳ ಮಹಿಳೆಯರೂ ಇರುತ್ತಿದ್ದರು. ಆದರೆ, ಇದನ್ನು ಸಾಧ್ಯವಾಗಿಸಲು ಗಾಂಧೀಜಿಯವರು ಬಳಸಿದ್ದು, ಮಹಿಳೆಯರ ಸಾಂಪ್ರದಾಯಿಕ ಪಾತ್ರದ ವಿಸ್ತರಣೆಯಾಗಿ ಈ ಸಾರ್ವಜನಿಕ ಬದುಕೂ ಇರುತ್ತದೆ ಎಂಬ ನಂಬಿಕೆಯನ್ನು! ಇದನ್ನೂ ಪ್ರಶ್ನಿಸುತ್ತಾ ಹಲವು ಸಂಸ್ಥೆಗಳ ದನಿಯೆದ್ದಿತು.

 ‘ಆಲ್ ಇಂಡಿಯಾ ವಿಮೆನ್ಸ್ ಕಾನ್ಫರೆನ್ಸ್' (AIWC), ‘ವಿಮೆನ್ಸ್ ಇಂಡಿಯನ್ ಡೆಮಾಕ್ರಟಿಕ್ ಫೆಡರೇಷನ್(WIDF)’ ತರಹದ ಉದಾರವಾದಿ ನೆಲೆಯ ಮಹಿಳಾ ಸಂಘಟನೆಗಳು ಆರಂಭವಾದವು. ಡಾ. ಬಿ.ಆರ್. ಅಂಬೇಡ್ಕರ್‍ರವರ ನೇತೃತ್ವದಲ್ಲಿ ಶೋಷಿತ ದಲಿತ ಸಮುದಾಯದ ಚಳವಳಿ ಬಲಗೊಂಡಂತೆ ಅದರಲ್ಲೂ ಭಾರೀ ದೊಡ್ಡ ಸಂಖ್ಯೆಯ ಶೋಷಿತ ಮಹಿಳೆಯರು ಪಾಲ್ಗೊಳ್ಳಲಾರಂಭಿಸಿದರು. ಅಂಬೇಡ್ಕರ್‍ರವರು ದಲಿತ ಮಹಿಳೆಯರ ಫೆಡರೇಷನ್ ಅನ್ನು ಸ್ಥಾಪಿಸಿದರು. ಅದು ಸಮಾಜ ಪರಿವರ್ತನೆಯ ಆಂದೋಲನೆದಲ್ಲಿ ಸಕ್ರಿಯವಾಗಿತ್ತು.


ಸ್ವಾತಂತ್ರ್ಯ ಹೋರಾಟದ ಕೊನೆಯ ಘಟ್ಟದಲ್ಲಿ ಎಡಪಂಥೀಯ ವಿಚಾರಗಳನ್ನುಳ್ಳ ಪ್ರಜಾತಾಂತ್ರಿಕ ಚಳವಳಿಗಳು ಬಿರುಸು ಪಡೆದುಕೊಂಡವು. ಅದರ ಅಂಗವಾಗಿ ‘ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್’ (NFIW) ತರಹದ ಸಂಘಟನೆಗಳಿಗೆ ವಿಶಾಲವಾದ ಸಮೂಹ ನೆಲೆ ಒದಗಿತು. 

ಈ ಸಂಘಟನೆಗಳು ಮುಖ್ಯವಾಗಿ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳು, ಕಾರ್ಮಿಕ ಮಹಿಳೆಯರಿಗೆ ಹೆರಿಗೆ ಭತ್ಯೆ, ಸಮಾನ ವೇತನ ಮೊದಲಾದ ಹಕ್ಕೊತ್ತಾಯಗಳನ್ನಿಟ್ಟುಕೊಂಡಿದ್ದವು. ಜೊತೆಗೆ, ಮಹಿಳೆಯರ ಉನ್ನತಿ, ರೈತಾಪಿ ಮತ್ತು ಕಾರ್ಮಿಕ ಮಹಿಳೆಯರು ಮತ್ತು ಮಕ್ಕಳಿಗೆ ಸುಭದ್ರತೆ, ಸಾಮಾಜಿಕ ನ್ಯಾಯ, ಒಟ್ಟಿನಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವಿಮೋಚನೆಯ ವಿಷಯವನ್ನು ಕೇಂದ್ರೀಕರಿಸಿದ್ದವು.
ಇವೆಲ್ಲದರಾಚೆಗೂ, ಸ್ವಾತಂತ್ರ್ಯಾನಂತರ ಸುದೀರ್ಘ ಕಾಲ ಭಾರತದ ಮಹಿಳಾ ದನಿ ಮರೆಯಾದದ್ದು ಒಂದು ರೀತಿಯ ಒಂದು ರೀತಿಯಲ್ಲಿ ವಿಪರ್ಯಾಸವೇ ಸರಿ. ಈ ನಿರ್ಲಿಪ್ತ ಅವಧಿಯನ್ನು ದಾಟಿ ಮತ್ತೆ ಮಹಿಳಾಪರ ಸಂಗತಿಗಳು ಮುನ್ನೆಲೆಗೆ ಬಂದದ್ದು 70ರ ದಶಕದಲ್ಲೇ! 1971ರಲ್ಲಿ ವಿಶ್ವಸಂಸ್ಥೆಯ ಸೂಚನೆಯ ಮೇರೆಗೆ ಮಹಿಳೆಯರ ಸ್ಥಿತಿಗತಿಯನ್ನು ಪರಿಶೀಲಿಸಲು ‘ಕಮಿಟಿ ಆನ್ ದಿ ಸ್ಟೇಟಸ್ ಆಫ್ ವಿಮೆನ್ ಇನ್ ಇಂಡಿಯಾ’ ಎಂಬ ಸಮಿತಿಯೊಂದನ್ನು ರಚಿಸಲಾಯಿತು. ಹಿರಿಯ ಮಹಿಳಾ ಹೋರಾಟಗಾರರಿದ್ದಂತಹ ಈ ಸಮಿತಿ ಭಾರತದಾದ್ಯಂತ ತಿರುಗಾಡಿ ಎಲ್ಲಾ ಸ್ತರಗಳ ಮಹಿಳೆಯರ ಬದುಕಿನ ಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿದಾಗ ಕಂಡದ್ದು ಆಘಾತಕರ ವಾಸ್ತವಗಳು. ಇದನ್ನು ಆಧರಿಸಿ ಆ ಸಮಿತಿಯು ‘ಸಮಾನತೆಯೆಡೆಗೆ’ ಎಂಬ ವರದಿಯನ್ನು ಬಿಡುಗಡೆ ಮಾಡಿತು. ಈ ವರದಿ ಭಾರತದ ಮಹಿಳಾಪರ ಮತ್ತು ಪ್ರಜಾತಾಂತ್ರಿಕ ವಲಯಗಳಲ್ಲಿ ಅಲ್ಲೋಲಕಲ್ಲೋಲವನ್ನೆಬ್ಬಿಸಿತು! ಜೊತೆಗೆ ವಿಶ್ವಸಂಸ್ಥೆ 1975ರ ವರ್ಷವನ್ನು ಮಹಿಳಾ ವರ್ಷ ಎಂದೂ ಹಾಗೂ 18ರವರೆಗಿನ ದಶಕವನ್ನು ಮಹಿಳಾ ದಶಕ ಎಂದೂ ಘೋಷಿಸಿತು. ಇವೆಲ್ಲವುಗಳಿಂದಾಗಿ, ಮತ್ತೆ ಮಹಿಳೆಯರ ಪರವಾದ ಪ್ರಯತ್ನಗಳಿಗೆ ದೊಡ್ಡ ಮಟ್ಟದಲ್ಲಿ ಚಾಲನೆ ದೊರಕಿತು.



ಅನೇಕ ಸ್ವಾಯತ್ತ ಮಹಿಳಾ ಸಂಘಟನೆಗಳು ಆರಂಭವಾದವು. ವರದಕ್ಷಿಣೆ ಕೊಲೆ, ಅತ್ಯಾಚಾರಗಳು ಮೊದಲಾದವುಗಳ ವಿರುದ್ಧ ಯಾವುದೇ ಸಂಘಟನೆಯಲ್ಲಿರಲಿ ಅಥವಾ ಇಲ್ಲದಿರಲಿ ಮಹಿಳೆಯರು ಬೀದಿಗಿಳಿದರು. 

ಜೊತೆಗೆ, ಒಳ್ಳೆಯ ಶಿಕ್ಷಣ, ಉದ್ಯೋಗಾವಕಾಶಗಳು, ಲೈಂಗಿಕ ಕಿರುಕುಳದಿಂದ ಮುಕ್ತ ಕೆಲಸದ ವಾತಾರವಣ ಮೊದಲಾದ ಅನೇಕ ಬೇಡಿಕೆಗಳೂ ಸೇರಿಕೊಂಡಿದ್ದವು. ಆರ್ಥಿಕ ಸ್ವಾತಂತ್ರ್ಯ ಮಹಿಳೆಯರಿಗೆ ಸಮಾನತೆ ಒದಗಿಸುತ್ತದೆಂಬ ಭಾವ ಬಲವಾಗಿತ್ತು. ಒಟ್ಟಿನಲ್ಲಿ ಮಹಿಳೆಯರ ಕುರಿತ ಸಾಮಾಜಿಕ ಸಂವೇದನೆ ಹೆಚ್ಚಿದ ಪರಿಣಾಮ ಸರ್ಕಾರ ‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ’, ಹಲವು ಮಹಿಳಾಪರ ಕಾಯ್ದೆಗಳು, ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳಾ ಪರ ಯೋಜನೆಗಳನ್ನು ಜಾರಿಗೊಳಿಸಲೇಬೇಕಾಯಿತು.

ಇಂದಿನ ಸನ್ನಿವೇಶ ಮತ್ತು ಸಾಧ್ಯತೆಗಳು:
ಇವೆಲ್ಲ ಸುದೀರ್ಘ ಪ್ರಯತ್ನಗಳ ಫಲವಾಗಿ ಇಂದಿನ ಸನ್ನಿವೇಶದಲ್ಲಿ ಒಂದಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇಂದು, ಮಹಿಳೆಯರಿಗೆ ಸಮಾನತೆ ಸಿಕ್ಕಿದೆ ಎಂದಾಗಲೀ, ಅವರ ಮೇಲಿನ ಹಿಂಸೆ, ತಾರತಮ್ಯ ನಿಂತಿದೆ ಎಂದಾಗಲಿ ಪ್ರತಿಪಾದಿಸಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿ ಹೇಳಬಹುದಾದ ಸಂಗತಿಯೆಂದರೆ, ಈ ಹಿಂದಿನ ಎಲ್ಲಾ ಪ್ರಯತ್ನಗಳ ಫಲವಾಗಿ ಮಹಿಳೆಯರು ಮತ್ತು ಮಹಿಳಾಪರರ ಮುಂದೆ ಅತ್ಯಂತ ಹೊಸ ಮಾದರಿಯ ಪ್ರತಿರೋಧದ ಸಾಧ್ಯತೆಗಳು ತೆರೆದುಕೊಂಡಿವೆ!
ಅನೇಕ ಬರಹಗಾರರು ಮತ್ತು ಅಧ್ಯಯನಕಾರರು ಮಹಿಳೆಯರ ಸಾಹಿತ್ಯ, ಕಲಾಭಿವ್ಯಕ್ತಿ, ಚಳವಳಿ ಮತ್ತು ವೈಯಕ್ತಿಕ ಬದುಕಿನ ನೆಲೆಯಲ್ಲಿಯೂ ಹೊಸ ಎಚ್ಚರವನ್ನು ಗುರುತಿಸಿದ್ದಾರೆ.
ಇಂದಿನ ತಲೆಮಾರಿನ ಮಹಿಳೆಯರು ಸಾಂಪ್ರದಾಯಿಕವಾದ ಮಹಿಳೆ ಕೀಳೆಂಬ ಆಲೋಚನೆಯಿಂದ ಬಿಡಿಸಿಕೊಂಡು ವಾಸ್ತವಿಕ ನೆಲೆಯಿಂದ ಚಿಂತಿಸುವುದನ್ನು ಕಾಣುತ್ತೇವೆ. ಈ ವಾಸ್ತವ ಪ್ರಜ್ಞೆಯನ್ನು ಅಡಗಿಸಲು, ಅನೇಕ ಮಹಿಳಾ ವಿರೋಧಿ ಧಾರಾವಾಹಿಗಳು, ಜ್ಯೋತಿಷ್ಯ, ಹೊಸ ದೇವರುಗಳು ಮುಂತಾದವನ್ನು ದಾರಿಗಡ್ಡವಾಗಿ ತಂದು ರಾಶಿ ಸುರಿದರೂ, ನೈಸರ್ಗಿಕವಾಗಿ ತಾವು ಸಮಾನರು ಮತ್ತು ಸಾಧನೆಗಳನ್ನು ಮಾಡುವ ಸಾಮರ್ಥ್ಯ ಉಳ್ಳವರು ಎಂಬುದನ್ನಂತೂ ಅಳಿಸಲು ಸಾಧ್ಯವಾಗಿಲ್ಲ.
ಶಿಕ್ಷಣ ಪಡೆಯುತ್ತಿರುವ ಹೆಣ್ಣಮಕ್ಕಳಂತೂ ಹೊಸ ಹೊಸ ಸವಾಲುಗಳನ್ನು ದಿಟ್ಟತನದಿಂದ ಮುಖಾಮುಖಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅಷ್ಟೇ ಅಲ್ಲದೆ, ಔಪಚಾರಿಕ ಶಿಕ್ಷಣ ಇಲ್ಲದಿದ್ದರೂ, ಅನೇಕ ಬಗೆಯ ಮಹಿಳಾ ಕಾರ್ಮಿಕರು, ಗ್ರಾಮೀಣ ಮಹಿಳೆಯರೂ ಕೂಡಾ ತಮ್ಮ ಕನಿಷ್ಠ ಹಕ್ಕುಗಳನ್ನು ಗಟ್ಟಿದನಿಯಿಂದ ಕೇಳಬಲ್ಲವರಾಗಿದ್ದಾರೆ. ಕಳೆದ ಶತಮಾನದಲ್ಲಿ ನಡೆದ ಸಮಾಜವಾದಿ, ಎಡಪಂಥೀಯ ಚಳವಳಿಗಳು ಹಾಗೂ ವಿವಿಧ ಐಡೆಂಟಿಟಿಗಳನ್ನು ಆಧರಿಸಿರುವ, ರೈತ, ದಲಿತ, ಮಹಿಳಾ ಚಳವಳಿ ಮೊದಲಾದವೂ ಸಹಾ ಹೊಸ ಪ್ರಜ್ಞೆಯ ಅನಾವರಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಿವೆ. ಹೊಸ ತಲೆಮಾರಿನ ಕವಯತ್ರಿಯರು, ಕಥೆಗಾರ್ತಿಯರು ಮತ್ತು ಮಹಿಳೆಯರ ಬಗ್ಗೆ ಬರೆಯುವ ಪುರುಷ ಬರಹಗಾರರ ಬರಹಗಳಲ್ಲಿ ಇಂತಹ ಬೌದ್ಧಿಕ ಎಚ್ಚರದ ಸ್ಪಷ್ಟ ಕುರುಹುಗಳು ಕಾಣುತ್ತವೆ. ಅದೇ ರೀತಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು, ಸ್ತ್ರೀಶಕ್ತಿ ಸಂಘಗಳ ಮೂಲಕ ಹೊರಬಂದು ಅನೇಕ ಚಟವಟಿಕೆಗಳಲ್ಲಿ ತೊಡಗುತ್ತಿರುವ ಗ್ರಾಮೀಣ ಮಹಿಳೆಯರು, ಮದ್ಯಪಾನದ ವಿರುದ್ಧ ಮಹಿಳೆಯರ ಹೋರಾಟ ಮೊದಲಾದವನ್ನು ಇಲ್ಲಿ ಉಲ್ಲೇಖಿಸಬಹುದು.

ಆದರೆ, ಇದೇ ಸಮಯದಲ್ಲಿ ‘ಮಹಿಳೆ’ ಎಂಬ ಒಂದೇ ನೆಲೆಗಟ್ಟಿನ ಮೇಲೆ ರೂಪುಗೊಳ್ಳಬಹುದಾಗಿದ್ದ ಇಂತಹ ಸಂಘಟಿತ ಶಕ್ತಿಗೆ ಎದುರಾಗಿ, ಮತೀಯವಾದಿ ಸಾಂಸ್ಕೃತಿಕ ರಾಜಕಾರಣವೂ ತನ್ನ ಪ್ರಭಾವವಲಯವನ್ನು ವಿಸ್ತರಿಸುತ್ತಿರುವುದನ್ನು ಕಾಣುತ್ತೇವೆ. ಇತ್ತೀಚಿನ ಕೆಲವು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ ಧರಿಸಿ ತರಗತಿಗೆ ಬರುವುದನ್ನು ವಿರೋಧಿಸಿ ಕೇಸರಿ ಅಂಗವಸ್ತ್ರ ಧರಿಸಿ ದಾಂಧಲೆಯೆಬ್ಬಿಸಿದ ಪುಂಡ ಹುಡುಗರ ಗುಂಪುಗಳಲ್ಲಿ ಸಾಕಷ್ಟು ವಿದ್ಯಾರ್ಥಿನಿಯರೂ ಇದ್ದದ್ದು ಎದ್ದು ಕಾಣುತ್ತಿತ್ತು. ಇಂತಹವು ಮುಂದುವರೆಯುತ್ತಾ, ಹೆಣ್ಣುಮಕ್ಕಳ ಬದುಕು ಮತ್ತು ಉಡುಪಿನ ಆಯ್ಕೆ, ಜೀವನಶೈಲಿಯನ್ನು ನಿಯಂತ್ರಿಸುವುದು, ಸಾಂಪ್ರದಾಯಿಕ ಅಚ್ಚಿಗೆ ಆಧುನಿಕ ಮಹಿಳೆಯನ್ನು ಮತ್ತೆ ನೂಕುವ ಹುನ್ನಾರ ವಿಸ್ತರಿಸುತ್ತಿದೆ.
ಇಂತಹ ‘ಅನೈತಿಕ ಗೂಂಡಾಗಿರಿ’ಯನ್ನೂ ಪ್ರತಿರೋಧಿಸುವ ಹೊಸದಾರಿಗಳನ್ನು ಮಹಿಳಾಪರ ಶಕ್ತಿಗಳು ಹುಡುಕಿಕೊಳ್ಳುತ್ತಿರುವುದು ಸಹ ತೆರೆದುಕೊಂಡಿರುವ ಹೊಸ ಸಾಧ್ಯತೆಗಳ ಭಾಗವೇ ಆಗಿದೆ. ಮಂಗಳೂರಿನಲ್ಲಿ ಸಾಲಾಗಿ ನಡೆದ ಇಂತಹ ಗೂಂಡಾಗಿರಿಯ ಘಟನೆಗಳನ್ನು ವಿರೋಧಿಸುತ್ತಾ ‘ಜಾಗತಿಕ ಸಹೋದರಿತ್ವ’ದ ಪರಿಕಲ್ಪನೆಯನ್ನು ಬಲಗೊಳಿಸಲು ಆರಂಭವಾದ ‘ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ಆ ನಂತರದಲ್ಲೂ ಕ್ರಿಯಾಶೀಲವಾಗಿದೆ.


ಅದೇ ರೀತಿ, ಇಂದು ಆಧುನಿಕ ಆರ್ಥಿಕತೆಯ ಚೌಕಟ್ಟಿಗೆ ಹೊಸದಾಗಿ ಒಳಪಡುತ್ತಾ ಅದರ ಬಿಕ್ಕಟ್ಟು ಮತ್ತು ತಲ್ಲಣಗಳನ್ನು ಅನುಭವಿಸುತ್ತಿರುವ ಓಬಿಸಿ ವರ್ಗಗಳು, ಇಂತಹ ಬಿಕ್ಕಟ್ಟಿಗೆ ಪರಿಹಾರವೆಂಬಂತೆ ಬಿಂಬಿಸಲಾಗುತ್ತಿರುವ ಮತೀಯ ರಾಜಕಾರಣದ ಕಾಲಾಳು ವರ್ಗವಾಗುತ್ತಿರುವ ಆಘಾತಕರ ಬೆಳವಣಿಗೆಯನ್ನು ನೋಡುತ್ತಿದ್ದೇವೆ. ಇದಕ್ಕೆ ಪ್ರತಿಯಾಗಿ, ವ್ಯಾಪಕವಾದ ಪ್ರಜಾಸತ್ತಾತ್ಮಕ ಸಹಮತವನ್ನು ರೂಪಿಸಬೇಕಾದದ್ದು ಇಂದಿನ ಅಗತ್ಯವಾಗಿದ್ದು, ಈ ದಿಕ್ಕಿನಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸುವಂತಹ ಪ್ರಯತ್ನಗಳೂ ಆಗುತ್ತಿವೆ.
80ರ ದಶಕದ ಮಹಿಳಾಪರ ಹೋರಾಟಗಳಿಂದ ದೊರೆತ ಕಾನೂನುಗಳು ಮಹಿಳೆಯರಿಗೆ ಒಂದು ಹಂತದಲ್ಲಿ ಬಿಡುಗಡೆಯ ಅಸ್ತ್ರಗಳಾಗಿ ಕಂಡದ್ದು ಸತ್ಯ. ಆದರೆ, ಇಂದು ಆ ಕಾನೂನುಗಳ ಸುತ್ತಲೇ ಸುತ್ತುವ ಮಹಿಳೆಯರು ವ್ಯಕ್ತಿಗತ ನೆಲೆಯಲ್ಲಿ ಹಲವು ಸಂಕೀರ್ಣ ಸಮಸ್ಯೆಗಳನ್ನು ಎದುರಿಸುವ ಸಂದರ್ಭಗಳು ಉಂಟಾಗುತ್ತಿವೆ. ಆದ್ದರಿಂದಲೇ, ವ್ಯ್ಕತಿಗತ ಸಮಸ್ಯೆಗಳು ಸಾಮೂಹಿಕ ನೆಲೆಯ ಆಂದೋಲನಗಳೂ ಸಹಾ ಆಗಿ ಪರಿವರ್ತಿತವಾಗುವ ಅಗತ್ಯವಿದೆ. ಹಾಗೆಯೇ ಸ್ವಸಹಾಯ ಸಂಘಗಳಿಂದ ದೊರೆತಿರುವ, ನಾಲ್ಕು ಗೋಡೆಯಾಚೆಗೆ ಇಣಿಕುವ ಮತ್ತು ‘ಹೊಸಿಲು ದಾಟುವ’ ಅವಕಾಶಗಳನ್ನೂ ಸಹ, ವಿಶಾಲ ನೆಲೆಯ ಆಂದೋಲನಗಳ ಜೊತೆ ಬೆಸೆಯುವ ಪ್ರಯತ್ನಗಳ ತುರ್ತು ಅಗತ್ಯಿವೆ. ಇಂತಹ ಎಚ್ಚರದೊಂದಿಗೆ ಹೊಸ ಬಗೆಯ ಮಹಿಳಾ ಸಂಘಟನೆಗಳ ಪ್ರಯತ್ನಗಳು (ಲೈಂಗಿಕ ಹಿಂಸೆಯ ವಿರುದ್ಧ, ಮದ್ಯಪಾನದ ವಿರುದ್ಧ ಇತ್ಯಾದಿ) ಅಲ್ಲಲ್ಲಿ ನಡೆಯುತ್ತಿರುವುದು ಗುರುತಿಸಬೇಕಾದಂತಹವು.
ಈಗಷ್ಟೇ ಹೊರಜಗತ್ತಿಗೆ ಕಾಲಿಡುತ್ತಿರುವ ವಿದ್ಯಾರ್ಥಿ ಸಮುದಾಯವನ್ನು ಮಹಿಳಾ ವಿಚಾರಗಳಲ್ಲಿ ಸಂವೇದನಾಶೀಲರನ್ನಾಗಿಸುವಲ್ಲಿ ಅಧ್ಯಾಪಕರು, ಶಿಕ್ಷಕರು ಮತ್ತಿತರ ವೃತ್ತಿಪರರ ಪಾತ್ರ ಹಿರಿದು. ಅದಕ್ಕಾಗಿ ಇಂತಹ ಸೂಕ್ಷ್ಮತೆಯನ್ನು ವೃತ್ತಿಪರರಲ್ಲಿ ರೂಢಿಸಲು ಹೊಸ ಬಗೆಯ ಕಾರ್ಯತಂತ್ರವನ್ನೇ ಹೆಣೆಯಬೇಕಾದ ಸಂದರ್ಭವಿದು. ಅದೇ ರೀತಿ, ಹೊಸ ಮಾಧ್ಯಮಗಳನ್ನೂ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡುವ ಮಾರ್ಗೋಪಾಯಗಳನ್ನು ನಾವು ಶೋಧಿಸಬೇಕಿದೆ. ಅಂತಹ ಹೊಸ ಮಾರ್ಗಗಳು ಖಂಡಿತ ಯಶಸ್ಸನ್ನು ಕಾಣುತ್ತವೆ ಎಂಬುದಕ್ಕೆ, ಶಬರಿಮಲೈ ವಿವಾದದ ಸಂದರ್ಭದಲ್ಲಿ ಕೇರಳದಲ್ಲಿ ನಡೆದ ಒಂದು ಬಿಡಿ ಘಟನೆ ಸಾಕ್ಷಿ. ಶಬರಿಮಲೈಗೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಹೋದರೆ, ಅವರು ಮುಟ್ಟಾಗುವ ಕಾರಣದಿಂದ ದೇವಾಲಯ ಅಪವಿತ್ರವಾಗುತ್ತದೆಂದು ದೇವಾಲಯದ ದೇವಸ್ವ ಮಂಡಳಿ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ ಸಂದರ್ಭದಲ್ಲಿ, ಕೇರಳದ ನಾಲ್ವರು ಯುವ ವಕೀಲೆಯರು ‘ಹ್ಯಾಪಿ ಟು ಬ್ಲೀಡ್’ (ಋತುಸ್ರಾವದ ಬಗ್ಗೆ ಸಂತಸವಿದೆ) ಎಂಬ ಆಂದೋಲನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದರು. ತಮ್ಮ ನೈಸರ್ಗಿಕ ವಿಶಿಷ್ಟತೆಯನ್ನು ಅವಮಾನಿಸುವ ಸಾಂಪ್ರದಾಯಿಕತೆಯನ್ನು ಹೀಗೆ ಪ್ರತಿರೋಧಿಸಿದ ಆ ಯುವತಿಯರಿಗೆ ಕೆಲವೇ ದಿನಗಳಲ್ಲಿ ಬಹುದೊಡ್ಡ ಬೆಂಬಲ ವ್ಯಕ್ತವಾದದ್ದು ಮತ್ತು ನಂತರದಲ್ಲಿ ಕೋರ್ಟಿನಲ್ಲೂ ಅದು ಮಾರ್ದನಿಸಿದ್ದು ತಿಳಿದಿರುವ ಸಂಗತಿಯೇ. ಜೊತೆಗೆ, ಈ ಆಂದೋಲನ ಆರಂಭಿಸಿದ ಯುವತಿಯರಿಗೆ ಸಂಪ್ರದಾಯವಾದಿಗಳಿಂದ ಬೆದರಿಕೆ ಬಂದಾಗ, ಯುವಕರೆಲ್ಲಾ ಸೇರಿ ‘ಪಿತೃಪ್ರಧಾನತೆಯನ್ನು ವಿರೋಧಿಸಿ’ ಎಂಬ ಮತ್ತೊಂದು ಅಭಿಯಾನವನ್ನು ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಸಿ ಬೆಂಬಲ ವ್ಯಕ್ತಪಡಿಸಿದರು. ಇದು ನಮ್ಮ ದೇಶದ ಗಡಿ ದಾಟಿ ಹೊರದೇಶಗಳಲ್ಲೂ ಸದ್ದು ಮಾಡಿತು.

ಅದೇ ರೀತಿ, ಒಂದೇ ಶತೃವಿನ ವಿರುದ್ಧದ ಹೊಡೆದಾಟಕ್ಕೆ, ಪ್ರತ್ಯೇಕವಾಗಿಯೇ ಕೆಲಸಮಾಡುವ ವಿಭಿನ್ನ ವಿಚಾರಧಾರೆಗಳೆಲ್ಲವೂ ಒಂದೇ ಸೂರಿನಡಿ ಬರುವುದು ಸಾಧ್ಯ ಎಂಬ ಸಂಗತಿಯೂ ನಮಗೆ ಕಾಣುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡಿದ ಆಂದೋಲನಗಳಲ್ಲಿ ಒಂದಾದ ‘ಚಲೋ ಉಡುಪಿ’ಯ ಯಶಸ್ಸು ಅಂತಹ ಸಾಧ್ಯತೆಯು ವಾಸ್ತವಿಕ ತಳಹದಿಯ ಮೇಲೆ ನಿಂತಿದೆ ಎಂಬುದನ್ನು ತೋರಿಸಿದೆ. ಅದೇ ರೀತಿ, ಮಹಿಳಾ ವಿಮೋಚನೆ ಪುರುಷರ ಮತ್ತು ಇಡೀ ಸಮಾಜದ ಬಿಡುಗಡೆಯ ಹಾದಿಯೂ ಹೌದು ಎಂಬ ತಿಳುವಳಿಕೆಯನ್ನೂ ಮೂಡಿಸುವ ಅಗತ್ಯವಿದೆ.
ಈ ರೀತಿಯ ಅನೇಕ ಸಾಧ್ಯತೆಗಳನ್ನು ತಳದಿಂದ ಶೋಧಿಸುವ, ಅಂತಹ ಸಾಧ್ಯತೆಗಳೆಡೆಗೆ ಸಾಗುವ ಸೃಜನಶೀಲವಾದ ಮಾರ್ಗಗಳನ್ನು ರೂಪಿಸುವ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು, ಚಿಂತಕರು ಮತ್ತು ಎಲ್ಲಾ ಮಹಿಳಾಪರರು ಇನ್ನಷ್ಟು ವೇಗವಾಗಿ ಚಲಿಸಬೇಕಾಗಿರುವುದು ಇಂದಿನ ತುರ್ತು!
- ಪ್ರೊ. ಮಾಧವಿ, ಸಹಾಯಕ ಪ್ರಾಧ್ಯಾಪಕರು, 
ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ.


ವ್ಯಕ್ತಿ ಪರಿಚಯ - ಆರ್ ಕಲ್ಯಾಣಮ್ಮ



ನಮಗೆಲ್ಲಾ ತಿಳಿದಿರುವಂತೆ ರಾಜಕೀಯದಲ್ಲಿ ಅದರಲ್ಲು ಔಪಚಾರಿಕ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ತುಂಬಾ ಕಡಿಮೆ ಇದೆ.  ಔಪಚಾರಿಕ ರಾಜಕೀಯದಲ್ಲಿ ನೇರವಾಗಿ ಭಾಗವಹಿಸಿದದಿದ್ದರೂ ಸಮಾಜದ ಇತರ ಚಟುವಟಿಕೆಗಳಲ್ಲಿ ತೊಡಗುವುದರ ಮೂಲಕ ರಾಜಕೀಯವನ್ನು ಪ್ರಭಾವಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಅನೇಕ ಕಾರಣಗಳಿಂದ ಅವರ ಸಂಖ್ಯೆ ಅನೌಪಚಾರಿಕ ರಾಜಕೀಯ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಚಳುವಳಿ, ಮಾಜ ಸುಧಾರಣೆ, ಸಾಹಿತ್ಯದ ಕೊಡುಗೆ ಮುಂತಾದವುಗಳ ಮೂಲಕ ಮಹಿಳೆಯರು ಅನೌಪಚಾರಿಕ ರಾಜಕೀಯ ಪ್ರಕ್ರಿಯೆಯಲ್ಲಿ ಕಂಡು ಬರುತ್ತಾರೆ. ಅಂತಹವರಲ್ಲಿ ಆರ್ ಕಲ್ಯಾಣಮ್ಮ ಅವರು ಪ್ರಮುಖರು. ಇವರು ತಮ್ಮ ಬದುಕು ಬರಹ ಮತ್ತು ಸಮಾಜ ಸುಧಾರಣೆ ಕೆಲಸಗಳ ಮೂಲಕ ಮಹಿಳೆಯರ ಪ್ರಗತಿಗಾಗಿ ಶ್ರಮಿಸಿದಂತವರು. ಇವರ ವೈಯಕ್ತಿಕ ಜೀವನದ ಹಿನ್ನೆಲೆ, ಸಾಹಿತ್ಯದ ಕೊಡುಗೆ, ಸಮಾಜ ಸುಧಾರಣಾ ಚಟುವಟಿಕೆಗಳನ್ನ ಅಧ್ಯಯನ ಮಾಡಿ ಅವುಗಳನ್ನ ಬೆಳಕಿಗೆ ತಂದು ಇಂದಿನ ಯುವ ಪೀಳಿಗೆಗೆ ಆದರ್ಶ ಮಾದರಿ ಮಹಿಳೆಯನ್ನಾಗಿ ಗುರುತಿಸಬೇಕಾಗಿದೆ. ಈಗಾಗಲೆ ಇವರ ಬಗ್ಗೆ ಪುಸ್ತಕ, ಸಂಶೋಧನೆ, ಕೆಲಸಗಳು ನಡೆದಿವೆ. ಆದರೂ ಹಲವಾರು ಮಾರ್ಗಗಳ ಮೂಲಕ  ಇನ್ನೂ ಹೆಚ್ಚು ಜನರನ್ನು  ತಲುಪಿ ಇವರ ಬಗ್ಗೆ ಪ್ರಚಾರವಾಗಬೇಕಾಗಿದೆ. ಅದರಿಂದ ಈ ಲೇಖನ.

           ಆರ್. ಕಲ್ಯಾಣಮ್ಮನವರು ಹುಟ್ಟಿದ ವರ್ಷದ ಬಗ್ಗೆ ಏಕ ಅಭಿಪ್ರಾಯವಿಲ್ಲದಿದ್ದರೂ. ಕೆಲವು ಆಧಾರದ ಮೇಲೆ ಅವರು 1892ರಲ್ಲಿ ಹುಟ್ಟಿದ್ದರೆಂದು ಹೇಳಲಾಗುವುದು. ತಮಿಳುನಾಡಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಎಂಟು ಮಕ್ಕಳಲ್ಲೊಬ್ಬರಾಗಿ ಜನಿಸಿದರು. ಏಳು ಜನ ಹೆಣ್ಣುಮಕ್ಕಳಲ್ಲಿ ಇವರು ಎರಡನೆಯುವರು. ಏಳು ಜನರಲ್ಲಿ 5 ಜನರು ವಿಧವೆಯರಾಗಿದ್ದರು. ಚಿಕ್ಕವಯಸ್ಸಿಗೆ, ಮದುವೆಯ ಬಗ್ಗೆ ತಿಳುವಳಿಕೆ ಬರುವ ಮುನ್ನವೇ ವಿಧವೆಯಾದರು. ಕಲ್ಯಾಣಮ್ಮನವರ ಬುದ್ದಿವಂತಿಕೆಯನ್ನು ಅರಿತ ಅವರ ಚಿಕ್ಕಪ್ಪನವರು ಎಲ್ಲಾ ವಿಧವೆಯರಂತೆ ಜೀವನ ನಡೆಸಲು ಬಿಡಬೇಡವೆಂದು ಹೇಳಿ ಅವರ ಓದನ್ನು ಮುಂದುವರೆಸಲು ಪ್ರೋತ್ಸಾಹ ನೀಡೀದರು. ಚಿಕ್ಕಪ್ಪನವರ ಪ್ರೇರಣೆಯೇ ಅವರ ಜೀವನದ ಹಾದಿಯನ್ನು ಬದಲಾಯಿಸಲು ಕಾರಣವಾಯಿತು. ಕಲ್ಯಾಣಮ್ಮನವರು ತಮಗೊದಗಿದ ದುರಂತವನ್ನು ಮೆಟ್ಟಿನಿಂತು ವಿದ್ಯಾವಂತೆಯೆನಿಸಿ ಸಮಾಜಕ್ಕೆ ಬದುಕನ್ನು ಮುಡಿಪಾಗಿಡುವಂತೆ ಪ್ರೇರೇಪಿಸಿದರು. ಚಿಕ್ಕಪ್ಪ ಹಾಗು ತಂದೆಯ ಬೆಂಬಲದಿಂದ ಕಲ್ಯಾಣಮ್ಮ 1906 ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆ ಕಟ್ಟಿ, ಕನ್ನಡ ಮತ್ತು ಇಂಗ್ಲೀಷ್ ವಿಷಯಗಳೆರಡರಲ್ಲು ಉತೀರ್ಣರಾದರು. ಮುಂದೆ ಓದುವ ಆಸೆ ಇದ್ದರು ಮನೆಯ ಸಂಪ್ರದಾಯದ ವಾತಾವರಣ ಓದಲು ಬಿಡಲಿಲ್ಲ. ಆದರೆ ಮನೆಯಲ್ಲೆ ತಮಿಳು, ಸಂಸ್ಕೃತ ಭಾಷೆಗಳ ಪ್ರಾಚೀನ ಗ್ರಂಥಗಳನ್ನು ಅಧ್ಯಯನ ಮಾಡತೊಡಗಿದರು, ಈ ಅಧ್ಯಯನಗಳಿಂದ ಅವರ ವಿಚಾರಶಕ್ತಿ ಹೆಚ್ಚಿ ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಕಂಡು ಮನದಲ್ಲೆ ಚಿಂತಿಸಲು ಪ್ರಾರಂಬಿಸಿದರು.

          ಮನೆಯ ಸಂಪ್ರದಾಯ ಪರಿಸರಕ್ಕೆ ಹೊಂದಿಕೂಂಡು ತಮ್ಮ ಓದುವ, ಬರೆಯುವ  ಚಟುವಟಿಕೆಗಳನ್ನು, ಮನೆಯ ನಿಗದಿತ ಕೆಲಸ ಎಲ್ಲವನ್ನು ಒಟ್ಟಿಗೆ ಮಾಡಿಕೊಂಡು ಹೋಗಬೇಕಾಗುತ್ತಿತ್ತು. ಸಾಂಪ್ರಾದಾಯಿಕ ಬದುಕಿನ ಗತಿಯನ್ನು ನಿರಾಕರಿಸುವುದರಿಂದ ಉಂಟಾಗುವ ಹಿಂಸೆ, ಅವಮಾನ, ಹೀಯಾಳಿಸುವಿಕೆ, ಕಡ್ಡಾಯವಾದ ಅಮಾನವೀಯ ನಿಯಮಗಳಿಂದ ತಮ್ಮನ್ನು ಪಾರು ಮಾಡಿಕೊಳ್ಳುವುದಲ್ಲದೆ ತಮ್ಮಂತಹ ಇತರರನ್ನು ಪಾರು ಮಾಡುವುದಕ್ಕೋಸ್ಕರ ಕಲ್ಯಾಣಮ್ಮ ಕೂನೆಗೆ ಸಮಾಜ ಸೇವೆಯ ಮಾರ್ಗವನ್ನು ಆರಿಸಿಕೊಂಡರು. ಅಸಂಖ್ಯಾತ ವಿಧವೆಯರ ಬದುಕು ಅನರಕ್ಷರತೆ, ಮೌಡ್ಯ ಮತ್ತು ಕ್ರೂರ ಸಂಪ್ರದಾಯಗಳಲ್ಲಿ ಸಿಕ್ಕಿ ಯಾತನಾಮಯವಾಗಿರುವುದನ್ನು ಕಂಡ ಕಲ್ಯಾಣಮ್ಮ ತಾವು ಅವರ ಹಾಗೆ ಆಗುವುದಿಲ್ಲ ಎಂದು ಹದಿನಾಲ್ಕು - ಹದಿನೈದನೇ ವಯಸ್ಸಿನಲ್ಲಿ ನಿರ್ಧರಿಸಿದರು.

     ಹಲವು ವರ್ಷಗಳ ಅಧ್ಯಯನದ ನಂತರ ಕನ್ನಡದಲ್ಲಿ ಲೇಖನ, ಕಥೆಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸತೂಡಗಿದರು. ಬರವಣಿಗೆಯ ಜೊತೆಯಲ್ಲೆ ಹತಭಾಗಿನಿಯರ, ನಿರ್ಗತಿಕ ಸ್ತ್ರೀಯರ ಏಳಿಗೆಗಾಗಿ ದುಡಿಯಲು ನಿರ್ಧರಿಸಿ ಯೋಜನಾಬದ್ದವಾಗಿ ಯತ್ನಿಸಿದರು. ಆಧ್ಯಾತ್ಮಿಕ ಶ್ರದ್ದೆ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳ ಜೂತೆಗೆ ಸುತ್ತಲಿನ ಹಲವು ಗಣ್ಯ ವ್ಯಕ್ತಿಗಳ ಸಹಕಾರದಿಂದ ಅವರು ತಮ್ಮ ಗುರಿಯತ್ತ ಹೆಜ್ಜೆ ಹಾಕಿದರು.

 ಕಲ್ಯಾಣಮ್ಮ ನವರ ಕಾರ್ಯ ಸಾಧನೆಯನ್ನು ಮೂರು ಪ್ರಮುಖ ಕ್ಷೇತ್ರಗಳಲ್ಲಿ ಕಾಣಬಹುದು
1.ಸ್ತ್ರೀಯರ ಅಭಿವೃಧ್ದಿ /ಏಳಿಗೆ
2. ಪತ್ರಿಕೋದ್ಯಮ ಹಾಗೂ
3. ಮಕ್ಕಳ ಏಳಿಗೆ
        ದೇಶದ ಇತರೆ ರಾಜ್ಯಗಳಲ್ಲಿ ಸ್ತ್ರೀಯರ ಅಭಿವೃದ್ದಿಗಾಗಿ ನಡೆಯುತ್ತಿದ್ದಂತಹ ಸುಧಾರಣೆ ಚಳುವಳಿಗಳು ವಿವಿಧ ಸಂಸ್ಥೆಗಳ ಸ್ಥಾಪನೆ ಇವುಗಳನ್ನು ಕಂಡ ಕಲ್ಯಾಣಮ್ಮನವರು ಕರ್ನಾಟಕದಲ್ಲೂ ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದರು. 1913ರಲ್ಲಿ ಶಾರದಾ ಸ್ತ್ರೀ ಸಮಾಜವನ್ನು ಸ್ಥಾಪಿಸಿದರು. ಅದರ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಕಲ್ಯಾಣಮ್ಮನವರೆ ಕೆಲಸ ಮಾಡಿದರು. ಅವರ ಕಲ್ಪನೆಯಲ್ಲಿ ಶಾರದಾ ಸಮಾಜವು ಪಸ್ತಕ ಭಂಡಾರ ತೆರೆಯುವುದು, ಉಪನ್ಯಾಸ ನಡೆಸುವುದು, ಸಂಗೀತ ಶಾಲೆ ಕುಶಲಕೈಗಾರಿಕೆಗಳನ್ನು ಕಲಿಸುವುದು, ಕಲಿಯಲು ಬರುವ ತಾಯಂದಿರ ಮಕ್ಕಳನ್ನ ನೋಡಿಕೂಳ್ಳುವ ವ್ಯವಸ್ಥೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕೇಂದ್ರವಾಗಿತ್ತು. ತಮ್ಮ ಕಲ್ಪನೆಗಳನ್ನು ಸಾಕಾರಗೂಳಿಸುವಲ್ಲಿಯೂ ಅವರು ಸಾಕಷ್ಟು ಶ್ರಮವಹಿಸಿ ಅದರಲ್ಲಿ ಯಶಸ್ಸನ್ನು ಪಡೆದರು. ಆದರೆ 1926 ರ ಹೊತ್ತಿಗೆ ತಾವೆ ಕಟ್ಟಿ ಬೆಳೆಸಿದರೂಅನೇಕ ಕಾರಣಗಳಿಂದ ಹೊರಬರಬೇಕಾಯಿತು. ಆದರೆ ನಂತರ ಅವರು ಸುಮ್ಮನೆ ಕೂರಲಿಲ್ಲ.
      
ಸಮಾಜದ ಏಳಿಗೆಯ ಮುಖ್ಯವಾಣಿಯಾಗಿ ಒದಗಬಲ್ಲ ಮಹಿಳಾ ಪತ್ರಿಕೆಯೊಂದನ್ನು ಪ್ರಕಟಿಸುವುದು ಅವಶ್ಯಕವೆಂದು ತಿಳಿದ ಕಲ್ಯಾಣಮ್ಮನವರು 1917 ರಲ್ಲಿ ಸರಸ್ವತಿ ಎಂಬ ಪತ್ರಿಕೆಯನ್ನು ಹೊರತಂದರು. ಇದು ಭಾರತ ಮಹಿಳೆಯರ ಇಹಪರ ಅಭ್ಯುದಯಗಳನ್ನು ಬೋಧಿಸುವಂತಹ ಲೇಖನಗಳನ್ನು ಒಳಗೊಂಡ ಪತ್ರಿಕೆಯಾಗಿತ್ತು. ಈ ಪತ್ರಿಕೆಗಾಗಿ ಕಲ್ಯಾಣಮ್ಮ ಮಾಡದ ಕೆಲಸವಿಲ್ಲ, ಪಡದ ಕಷ್ಟವಿಲ್ಲ. ಬರಹಗಳಿಗಾಗಿ ಲೇಖಕ ಲೇಖಕಿಯರಿಗೆ ಪತ್ರ ಬರೆಯುವುದು, ಸಾಧ್ಯವಿದ್ದವರನ್ನು ಸ್ವತಃ ಕಂಡು ಬರೆಸುವುದು, ಮುದ್ರಣ ಕಛೇರಿಗಳಿಗೆ ಓಡಾಡುವುದು, ಮುದ್ರಣ ಕಾಗದವನ್ನು ತರಿಸುವುದು, ಮುದ್ರಿತ ಪತ್ರಿಕೆಯನ್ನು ಚಂದಾದಾರರಿಗೆ ಟಪಾಲಿನಲ್ಲಿ ಕಳುಹಿಸುವುದು ಮೊದಲಾದ ಎಲ್ಲಾ ಕೆಲಸಗಳನ್ನು ಅವರೆ ನಿರ್ವಹಿಸುತ್ತಿದ್ದರು. ಹೊಸ ಪ್ರತಿಭೆಗಳು ಸರಸ್ವತಿಯ ಮೂಲಕ ಬೆಳಕು ಕಾಣಲು ಅವರು ಅವಕಾಶ ನೀಡಿದರು.

ಸ್ನೇಹ ವಾತ್ಸಲ್ಯಗಳಿಂದ ಎಂಥವರ ಮನಸ್ಸನ್ನು ಗೆದ್ದು ಅವರ ಸಹಕಾರವನ್ನು ಪಡೆದು ಕಾರ್ಯ ಸಾದನೆ ಮಾಡಿದ್ದರು ಜೊತೆಗೆ ತಮ್ಮ ಸಾಧನೆ ಪ್ರತಿಷ್ಠೆಗಳಿಗೆ ತಾವೇ ಮಣಿದು ತಲೆಗೇರಿಸಿಕೊಳ್ಳದ ಸರಳತೆಯೇ ಕಲ್ಯಾಣಮ್ಮನವರ ಯಶಸ್ಸಿನ ಮೂಲವೆನ್ನಬಹುದು. ಸುಮಾರು ನಲವತ್ತೈದು ವರ್ಷಗಳವರೆಗೆ ಪತ್ರಕರ್ತೆಯಾಗಿ ಕಲ್ಯಾಣಮ್ಮ ಸರಸ್ವತಿಯನ್ನು ನಿರ್ವಹಿಸಿದ ಬಗೆಯು ವಿಶೇಷವಾದುದು. ಬಡವರು ಹಾಗು ಎಲ್ಲರಿಗು ಪತ್ರಿಕೆಯು ಸುಲಭವಾಗಿ ಸಿಗುವಂತಾಗಲಿ ಎಂದು ಪತ್ರಿಕೆಗೆ ಕಡಿಮೆ ಬೆಲೆ ಇಟ್ಟಿದರು. ಕೊನೆಗೆ ತಮ್ಮ ಅನಾರೋಗ್ಯದ ಕಾರಣದಿಂದ ಪತ್ರಿಕೆಯ ಕಾರ್ಯವನ್ನು ಕೈಬಿಟ್ಟರು.




ಮಕ್ಕಳ ಕೊಟ: ಸ್ತ್ರೀಯರ ಸಮಸ್ಯೆಗಳು ಕುಟುಂಬ ಮತ್ತು ಮಕ್ಕಳ ಸಮಸ್ಯೆಯೊಂದಿಗೆ ಬೆಸೆದುಕೊಂಡಿರುವುದರಿಂದ ಮಕ್ಕಳನ್ನು ಬೇರ್ಪಡಿಸಿ ಮಹಿಳೆಯರ ಅಭಿವೃದ್ದಿ ಅಸಾದ್ಯವೆಂದು ಭಾವಿಸಿದ್ದ ಕಲ್ಯಾಣಮ್ಮನವರು ಮಹಿಳಾ ಸಮಾಜಗಳಲ್ಲಿ ಮಕ್ಕಳಿಗೂ ಸ್ಥಳವಿರಬೇಕು ಎಂದು ಪ್ರತಿಪಾದಿಸಿದ್ದಲ್ಲದೆ ತಮ್ಮ ಸಮಾಜದಲ್ಲಿ ನರ್ಸರಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದರು. ಬೀದಿಯಲ್ಲಿ ಆಡುವ ಮಕ್ಕಳನ್ನು ನೋಡಿದಾಗ ಇಂಥ ಮಕ್ಕಳಲ್ಲೂ ಹುದುಗಿರಬಹುದಾದ ಪ್ರತಿಭೆ ಅರಳುವಂತಾಗಲು ಏನಾದರು ಮಹತ್ತರವಾದ ಯೋಜನೆ ಮಾಡಬೇಕೆಂದು ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿಯಿದ್ದವರನ್ನು ಕಲೆಹಾಕಿ ತಮ್ಮೆಲ್ಲಾ ಯೋಜನೆ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದು ಅಖಿಲ ಕರ್ನಾಟಕ ಮಕ್ಕಳ ಕೂಟ ವನ್ನು 1938 ರಲ್ಲಿ  ಸ್ಥಾಪಿಸಿದರು. ಮೈಸೂರು ಮಂಗಳೂರಿನಲ್ಲೂ ಅದರ ಉಪಶಾಖೆಗಳಲ್ಲೂ ಪ್ರಾರಂಭವಾದವು. ಮಕ್ಕಳ ಸಮ್ಮೇಳನ ನಡೆಸುವುದು, ಶಾಖೆಗಳನ್ನು ವಿಸ್ತರಿಸುವುದು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವುದು, ಮಕ್ಕಳ ಸಾಹಿತ್ಯ ಪ್ರಕಟಿಸುವುದು ಮೊದಲಾದವು ಮಕ್ಕಳ ಕೂಟದ ಉದ್ದೇಶಗಳಾಗಿದ್ದವು. ಕಲ್ಯಾಣಮ್ಮನವರು ಬದುಕಿದ್ದಾಗಲೆ ಜನರ ಬೆಂಬಲದೊಂದಿಗೆ ಮಕ್ಕಳಕೂಟ ಬಹುಮಟ್ಟಿಗೆ ಯಶಸ್ವಿಯಾಗಿ ನಡೆಯಿತು. ಪಟ್ಟಣಗಳಲ್ಲೇ ಅಲ್ಲಾ ಗ್ರಾಮಾಂತರ ಸ್ಥಳಗಳಲ್ಲೂ ಮಕ್ಕಳ ಕೂಟಗಳು ಸ್ಥಾಪಿತವಾದವು. ಮಕ್ಕಳಕೂಟದಿಂದ ಶಿಶು ಸಾಹಿತ್ಯದ ಅನೇಕ ಕಥೆ ಕವನಗಳನ್ನು ಪ್ರಕಟಿಸಿದರು. ಮಕ್ಕಳೆ ಬರೆದ ಕಥೆ ಕವನ ನಾಟಕಗಳನ್ನು ಒಬ್ಬ ಬಾಲಕ ಸಂಪಾದಕನ ನೇತೃತ್ವದಲಿಯೂ ಪ್ರಕಟಿಸಿದರು. ಎಳೆಯ ವಯಸ್ಸಿನಲ್ಲಿ ತಮ್ಮ ಜೀವನದಲ್ಲಿ ಅನೇಕ ಅಡ್ಡಿ ಸಮಸ್ಯೆಗಳನ್ನು ಎದುರಿಸುತಿದ್ದರೂ ಹಲವು ಕ್ಷೇತ್ರಗಳಲ್ಲಿ ಕೆಲಸಮಾಡಿ, ಇತರ ಮಹಿಳೆಯರಿಗೆ ದಾರಿದೀಪವಾಗಿ ಸಮಾಜಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ.  ಮಹಿಳೆಯರು ಯಾವುದರಲೂ ಕಡಿಮೆಯಲ್ಲ ಎಂಥ ಕಾರ್ಯಕ್ಷೇತ್ರದಲ್ಲೂ ದಕ್ಷತೆಯಿಂದ ಕೆಲಸ ಮಾಡಬಲ್ಲರು ಎಂಬುದನ್ನು ಸಾದಹಿಸಿ ತೋರಿಸಬೇಕು ಎನ್ನುವುದು ಕಲ್ಯಾಣಮ್ಮನವರಲ್ಲಿ ಬಲವಾಗಿದ್ದ ಆಕಾಂಕ್ಷೆ.
    ತಾವು ಹಮ್ಮಿಕೊಂಡಿದ್ದ ಚಟುವಟಿಕೆಗಳ ಜೊತೆಜೊತೆಯಲ್ಲೇ ಕಲ್ಯಾಣಮ್ಮನವರು ಸಮಾಜದ ಇತರ ಸಂಘ ಸಂಸ್ಥೆಗಳ ಚಟುವಟಿಕೆಗಳಲೂ ಬಾಗವಹಿಸುತ್ತಿದ್ದರು. 
1926—27 ರಲ್ಲಿ ನ್ಯಾಷನಲ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದ್ದ ಬಾಲ ಕರ್ನಾಟಕ ಸಂಘಕ್ಕೆ ಅಧ್ಯಕ್ಷರಾಗಿದ್ದರು. 1932 ರಲ್ಲಿ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ಸಕಾರದಿಂದ ನೇಮಕಗೊಂಡು ಅಲ್ಲಿಯೂ ಕಾರ್ಯನಿರ್ವಹಿಸಿದರು. 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಮಹಿಳಾ ಅಧ್ಯಕ್ಷೆಯಾಗಿದ್ದರು ಕನ್ನಡ ನುಡಿ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದರು .
1919 ರಲ್ಲಿ ಬಂಗಾಲದ ಆರ್ಯ ಸಾಹಿತ್ಯ ಪರಿಷತ್ತು ಕಲ್ಯಣಮ್ಮನವರಿಗೆ ದ್ಯಾವಿನೋದಿನಿ ಎಂಬ ಬಿರುದನ್ನಿತ್ತು ಗೌರವಿಸಿತು.
1937 ರಲ್ಲಿ ಸರ್ಕಾರ ಕಲ್ಯಾಣಮ್ಮನವರು ಮಕ್ಕಳ ಏಳಿಗೆಗಾಗಿ ನಡೆಸುತ್ತಿದ್ದ ಸಾರ್ಥಕ ಸೇವೆಯನ್ನು ಗುರುತಿಸಿ ಸಿಟಿ ಮುನ್ಸಿಪಾಲ್ ಸ್ಕೂಲ್ ಬೋರ್ಡಿಂಗ್ ನ ಸದಸ್ಯೆಯನ್ನಾಗಿ ನೇಮಿಸಿತು.
1933ರಲ್ಲಿ ಬೆಂಚ್ ಮೆಜಿಸ್ಟ್ರೇಟ್‍ರಾಗಿ ನೇಮಕಗೊಂಡಿದ್ದ ಕಲ್ಯಾಣಮ್ಮ ಸುಮಾರು 15 ವರ್ಷ ಈ ಸೇವೆಯನ್ನು ನಿರ್ವಹಿಸಿದರು.
ಅರಮನೆಯ ನಿಕಟ ಸಂಪರ್ಕ£ವನ್ನಿಟ್ಟುಕೊಂಡಿದ್ದ ಸ್ತ್ರೀಯರ ವಿದ್ಯಾಬ್ಯಾಸ ಮತ್ತು ಏಳಿಗೆ ಎಲ್ಲಾ ರೀತಿಯ ಅನುಕೂಲ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾದರು. 1935ರಲ್ಲಿ ನವರಾತ್ರಿಯ ಸಂದರ್ಬದಲ್ಲಿ ಮೈಸೂರು ಸಂಸ್ಥಾನದ ಸರ್ಕಾರ ಇವರಿಗೆ ಸಾರ್ವಜನಿಕ ಸೇವಾ ಪದಕ ನೀಡಿ ಗೌರವಿಸಿತ್ತಲ್ಲದೆ ಅವರನ್ನು ಮೈಸೂರು ಪ್ರಜಾಪ್ರತಿನಿಧಿಯಾಗಿ ಪರಿಷತ್ತಿನ ಸದಸ್ಯೆಯಾಗಿ ನೇಮಿಸಿತು.
1938 ರಲ್ಲಿ ಬೆಂಗಳೂರಿನ ಪುರಸಭೆ ಸದಸ್ಯೆಯಾಗಿ ಚುನಾವಣೆಯಿಂದ ಆಯ್ಕೆಗೊಂಡರು. ಅಲ್ಲಿ ಸಲ್ಲಿಸಿದ ದಕ್ಷಸೇವೆಯಿಂದಾಗಿ ನಗರದ ಉಪಾದ್ಯಕ್ಷೆಯಾಗಿ ಆರಿಸಲ್ಪಟ್ಟರು. ಈ ಚುನಾವಣೆಯಲ್ಲಿ ಅವರು 18 ಮತಗಳಿಸಿ ತಮ್ಮ ಪ್ರತಿಸ್ಪರ್ದಿಗಿಂತ 10 ಮತಗಳನ್ನು ಹೆಚ್ಚಿಗೆ ಪಡೆದು ಗೆದ್ದರು. ಇಲ್ಲಿನ ಪ್ರಾಮಾಣಿಕ ದುಡಿಮೆಯಿಂದ 1937ರಲ್ಲಿ ಮುಸ್ಲಿಂ ಶಿಕ್ಷಣ ಸಮಿತಿಗೆ ಅದ್ಯಕರಾಗಿಯೂ ನೇಮಕಗೊಂಡಿದ್ದರು.
ಮೈಸೂರು ರಾಜಯ ಜೀವ ವಿಮಾ ಕಂಪನಿಯ ನಿರ್ದೇಶಕರಾಗಿ, ಯೂನಿವರ್ಸಿಟಿ ಸೆನೆಟ್ ಸದಸ್ಯೆಯಾಗಿ,ಥಿಯಸಾಫಿಕಲ್ ಸೂಸೈಟಿ ಮುಂತಾದ ಅನೇಕ ಸಂಘಗಳಿಗೆ ಕೆಲಸ ಮಾಡಿದರು. ಸೆಂಟ್ರಲ್ ಜೈಲ್ ಸಮಿತಿಯ ಸದಸ್ಯೆಯಾಗಿದ್ದರು. ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯಕ್ರಮಗಳಲ್ಲಿಯೂ ಹಾಗು ಗಾಂದೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಹಿಂಸಾವಾದಿ ಚಳುವಳಿಯಲ್ಲಿಯೂ ತುಂಬಾ ಶ್ರದ್ದೆಯಿಟ್ಟಿದ್ದರು. ಹಲವಾರು ಕಾಂಗ್ರೆಸ್ ಧುರೀಣರ ಸಂಪರ್ಕಗಳು ಅವರಿಗಿದ್ದವು. ಬೆಳಗಾವಿ ಕಾಂಗೆಸ್ ಅಧಿವೇಶನದಲ್ಲಿ ಮಹಿಳಾ ಮಂಡಲವನ್ನು ಉದ್ದೇಶಿಸಿ ಬಾಷಣ ಮಾಡಿ ಮಹಿಳೆಯರು ರಾಷ್ಟ್ರ ನಿರ್ಮಾಣದಲ್ಲಿ ದೈರ್ಯವಾಗಿ ಮುಂದೆ ಬರಬೇಕೆಂದು ಕರೆ ನೀಡೀದರು. ಹೀಗೆ ಅವರು ರಾಜಕೀಯ ಆಗುಹೋಗುಗಳಲ್ಲಿ ಆಸಕ್ತಿಯಿದ್ದರು ನೇರವಾಗಿ ರಾಜಕೀಯದಲ್ಲಿ ಪಾಲ್ಗೂಳ್ಳಲು ಆಹ್ವಾನವಿದ್ದರು ಅದನ್ನು ನಿರಾಕರಿಸಿ ಸಮಾಜ ಸೇವೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡರು.
  ಬದುಕಿನ ಹಲವು ರಂಗಗಳಿಗೆ ತಮ್ಮ ಕ್ರಿಯಾಶಕ್ತಿಯನ್ನು ಹಂಚಿದ ಕಲ್ಯಾಣಮ್ಮನವರಿಗೆ ಯಾವುದು ಅಸಾದ್ಯವಲ್ಲ. ಮನಸಿದ್ದರೆ ಏನನ್ನಾದರು ಸಾದಿಸಬಹುದು ಎಂಬ ಮನ ಸಂಕಲ್ಪವೇ ಬಲವೆನ್ನಬೇಕು ಇಲ್ಲದಿದ್ದಲ್ಲಿ ದೀರ್ಘಕಾಲದಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದ ಅವರು ತಮಗೆ ವಿರುದ್ದವಾಗಿದ್ದ ಸಾಂಪ್ರದಾಯಿಕ ಶಕ್ತಿಗಳನ್ನು ಎದುರಿಸುತ್ತಲೆ ಇಷ್ಟೊಂದು ಬಹುಮುಖವಾದ ಕಾರ್ಯ ಸಾದನೆಯಲ್ಲಿ ಯಶಸ್ಸು ಪಡೆಯುವುದು ಅಸಾಧಾರಣ ಮಾತಾಗಿತ್ತು. ಅವರ ಅಖಂಡ ಚಿತ್ತ ಶಕ್ತಿಯೆ ಅವರನ್ನು ಸ್ತ್ರೀಯರ ಸಾಧನೆಗಳ ಇತಿಹಾಸದಲ್ಲಿ ಹಲವಾರು ಪ್ರಥಮಗಳನ್ನು ನಿರ್ಮಿಸಲು ಪ್ರೇರೇಪಿಸಿತ್ತು.



-   ಹೇಮಲತ ಎಚ್.ಎಮ್.  
ಮೈಸೂರು   

ಅನುವಾದಿತ ಕಥೆ - ಬಾಯ್ಮುಚ್ಚು

['ನೊರ್ಮುಯ್' ಅಂದರೆ ಬಾಯ್ಮುಚ್ಚು ಎಂದರ್ಥ. 
ಈ ಕಥೆಯನ್ನು ತೆಲುಗಿನ ಪ್ರಖ್ಯಾತ ಲೇಖಕಿಯವರಾದ ಓಲ್ಗಾರವರು ಬರೆದಿದ್ದಾರೆ. ಅವರ "ರಾಜಕೀಯ ಕಥಲು" ಕಥಾಸಂಕಲನದಿಂದ ಈ ಕಥೆಯನ್ನು ಆರಿಸಲಾಗಿದೆ]

ಈ ಮಾತು ಪದೇ ಪದೇ ಕಿವಿಯಲ್ಲಿ ಬೀಳುತ್ತಿದ್ದರೆ ಅದನ್ನು ತಡೆಯಲಾಗದೆ ಜಾನಕಿ ಕಿವಿಗಳನ್ನು ಕೂಡ ಮುಚ್ಚಿಕೊಂಡಳು. ಈ ಮಾತಿನ ಪರಿಚಯ ಅವಳಿಗೆ ಒಂದು ದಿನದ್ದಲ್ಲ, ಒಂದು ವರ್ಷದ್ದೂ ಅಲ್ಲ. ಜಾನಕಿಗೆ ಬುದ್ಧಿ ಬಂದಾಗಿನಿಂದ ಯಾರೋ ಒಬ್ಬರು ಈ ಮಾತನ್ನು ಯಾವಾಗಲೂ ಹೇಳುತ್ತಲೇ ಇದ್ದರು. 
ಚಿಕ್ಕವಳಿದ್ದಾಗ ಅವಳು ಏನು ನೋಡಿದರೂ, ಏನು ನಡೆದರೂ ತಡೆಯಲಾಗದಷ್ಟು ಖುಷಿಯಾಗುತ್ತಿತ್ತು. ಅವನ್ನೆಲ್ಲ ತಾಯಿಗೊ ತಂದೆಗೊ ಹೇಳಬೇಕೆಂದು ಓಡಿ ಬರುತ್ತಿದ್ದಳು. ಅವಳು ತನ್ನೆಲ್ಲಾ ಆವೇಶವನ್ನು ಪ್ರದರ್ಶಿಸುತ್ತಾ ಹೇಳಲು ಶುರು ಮಾಡಿದರೆ ಅವರು ತಕ್ಷಣವೇ “ಬಾಯ್ಮುಚ್ಚಿಕೊಂಡು ಹೊರಗಡೆ ಹೋಗು, ಎಲ್ಲಾ ವಿಷಯಗಳು ನಿನಗೇ ಬೇಕಾ?" ಎಂದು ಗದರಿಕೊಳ್ಳುತ್ತಿದ್ದರು. 
ಅಪ್ಪ, ಅಮ್ಮ ಮಾತ್ರವಲ್ಲ, ಅಜ್ಜಿಯಂದಿರು, ತಾತಂದಿರು, ಅತ್ತೆ, ಚಿಕ್ಕಮ್ಮ, ಮಾವ, ಚಿಕ್ಕಪ್ಪ ಎಲ್ಲರೂ ಅಷ್ಟೇ. “ಯಾಕಷ್ಟು ಮಾತನಾಡುತ್ತೀಯ?” ಎನ್ನುತ್ತಿದ್ದರು.
'ಹೆಣ್ಣುಮಕ್ಕಳಿಗೆ ಇಷ್ಟೊಂದು ದೊಡ್ಡ ಬಾಯಿ ಇರಬಾರದು' ಎನ್ನುತ್ತಿದ್ದರು ಅತ್ತೆ. ಎಷ್ಟು ದೊಡ್ಡ ಬಾಯಿ ತನ್ನದು. ಕನ್ನಡಿಯಲ್ಲಿ ನೋಡಿಕೊಂಡರೆ ಕೆಂಪು ತುಟಿಗಳಿರುವ ಚಿಕ್ಕ ಬಾಯಿ ಕಾಣಿಸಿತು. ಇಷ್ಟು ಚಿಕ್ಕ ಬಾಯನ್ನು ಅತ್ತೆ ಏಕೆ ದೊಡ್ಡದು ಎನ್ನುತ್ತಾಳೆ? ಇಷ್ಟು ಚೆನ್ನಾಗಿರುವ ಬಾಯಿ ಮೇಲೆ ಬರೆ ಹಾಕುತ್ತೇನೆ ಎಂದು ಅಮ್ಮ ಅನ್ನುತ್ತಾಳೆ. ಹೆಣ್ಣು ಮಕ್ಕಳಿಗೆ ಬಾಯಿ ಏಕಿರಬಾರದು?
ಅಣ್ಣಂದಿರು, ತಮ್ಮಂದಿರು ಊರೆಲ್ಲಾ ಸುತ್ತಿಬರುತ್ತಾರೆ. ಊಟದ ಸಮಯಕ್ಕೆ ಬಂದು ಊಟ ಮಾಡಿ ನಿದ್ರೆ ಮಾಡುತ್ತಾರೆ. ಅವರು ಹೊರಗಡೆ ತಿರುಗುತ್ತಾ ಆಟವಾಡುವ ಸಮಯದಲ್ಲಿ ಹಾಯಾಗಿ ಕಿರುಚುತ್ತಾರೆ, ಮಾತನಾಡಿಕೊಳ್ಳುತ್ತಾರೆ. ಅಣ್ಣಂದಿರು ಕಾಲುವೆಯಲ್ಲಿ ಈಜಾಡುವಾಗ ಹೇಗೆ ಅರಚುತ್ತಾರೆ?
ಜಾನಕಿ ಒಂದು ದಿನ ತೊಟ್ಟಿ ತುಂಬ ನೀರಿದ್ದಾಗ ಕಟ್ಟೆಯ ಮೇಲೆ ನಿಂತು ಜೋರಾಗಿ ಅರಚುತ್ತಾ ತೊಟ್ಟಿಯಲ್ಲಿ ಬಿದ್ದಳು. ತೊಟ್ಟಿಯಲ್ಲಿದ್ದ ನೀರೆಲ್ಲಾ ಎಗರುವುದನ್ನು ನೋಡಿ ಜಾನಕಿ ಖುಷಿಯನ್ನು ತಡೆದುಕೊಳ್ಳಲಾಗದೆ ಜೋರಾಗಿ ಅರಚಿದಳು. ಗಂಟಲಿನ ನರಗಳು ಕಿತ್ತುಹೋಗುವ ಹಾಗೆ ಅರಚಿದಳು. 
ಅಜ್ಜಿ ಮತ್ತು ಅಪ್ಪ ಪ್ರತ್ಯಕ್ಷವಾದರು. ಅಪ್ಪ ಮುಖವನ್ನು ಕೆಟ್ಟದಾಗಿ ಮಾಡಿಕೊಂಡು ಅವಳನ್ನು ತೊಟ್ಟಿಯಿಂದ ಎತ್ತಿ ಹೊರಹಾಕಿದರು. ಬರಿಮೈಲಿದ್ದ ಜಾನಕಿಯನ್ನು ನೋಡಿ “ನಾಚಿಕೆ ಇಲ್ಲವಾ?” ಎಂದು ಬೈಯುತ್ತಾ ಹೊರಟುಹೋದ. ಅಣ್ಣನನ್ನು ತಮ್ಮಂದಿರನ್ನು ಕಾಲುವೆಗೆ ಸ್ನಾನಕ್ಕೆ ಕರೆದೊಯ್ದು, ಅವರು ಬಟ್ಟೆ ಬಿಚ್ಚಿ ಈಜು ಹೊಡೆಯುತ್ತಿದ್ದರೆ ನಕ್ಕುನಕ್ಕು ಸುಸ್ತಾಗುತ್ತಿದ್ದರು ತಂದೆ. 
ತನ್ನನ್ನು ಹೇಗಿದ್ದರೂ ಕಾಲುವೆಗೆ ಕರೆದುಕೊಂಡು ಹೋಗುವುದಿಲ್ಲ ಮನೆಯಲ್ಲಿದ್ದ ತೊಟ್ಟಿಯೊಳಗೂ ಇಳಿಯಬಾರದ? ಆಗ ಬಟ್ಟೆ ಏತಕ್ಕೆ? ಈ ಮಾತನ್ನೆ ಅಜ್ಜಿಯನ್ನು ಕೇಳಿದರೆ ಅವಳು ಬೆನ್ನ ಮೇಲೆರಡು ಏಟು ಕೊಟ್ಟು "ಬಾಯಿಮುಚ್ಚಿಕೊಳ್ಳೆ ನಾಚಿಕೆಯಿಲ್ಲದವಳೆ" ಎಂದಳು. 
ಮಾತುಗಳು ಬಾಯಿನಿಂದ ಹೊರಬರುತ್ತವೆಯೆ ಹೊರತು ನಿಜವಾಗಲು ಅವು ಹುಟ್ಟುವುದು ತಲೆಯಲ್ಲಿ ಎಂದು ಬೆಳೆದ ಮೇಲೆ ಜಾನಕಿ ಗ್ರಹಿಸಿದಳು. ಅದಕ್ಕೆ "ನಿನ್ನ ಬಾಯಿಯನ್ನು ಹೊಲಿಯಬೇಕು" ಎಂದು ಅತ್ತೆ ಹೇಳಿದರೆ ಜಾನಕಿ ಕಿಲಕಿಲ ನಕ್ಕಳು, "ನಿನಗೆ ಗೊತ್ತಿಲ್ಲವಾ ಮಾತುಗಳು ಹುಟ್ಟುವುದು ಇಲ್ಲಿ, ಬಾಯಿಯಿಂದ ಹೊರ ಬರುತ್ತದೆ ಅಷ್ಟೇ "ಎಂದು ಹೇಳಿ ತನ್ನ ತಲೆಯನ್ನು ತೋರಿಸಿದಳು. "ನಿನ್ನ ಬುದ್ದಿ ಜಾಸ್ತಿಯಾಯಿತು" ಎಂದು ಅತ್ತೆ ಬೆನ್ನಿನ ಮೇಲೆ ದಬದಬ ಎಂದು ಬಾರಿಸಿದಳು. 
ತಲೆಯಲ್ಲಿ ಮಾತುಗಳು ಹುಟ್ಟಿದಾಗ ಅವುಗಳನ್ನು ತಕ್ಷಣವೇ ಹೊರಗೆ ಬರಲು ಅವಕಾಶ ಮಾಡಿಕೊಡಬಾರದೆಂದು, ಕೆಲವನ್ನಂತೂ ಹೊರಗಡೆ ಹೇಳಲೂ ಬಾರದೆಂದು ಜಾನಕಿಗೆ ನಿಧಾನವಾಗಿಯಾದರೂ ಅರ್ಥವಾಯಿತು,
ಮಾತುಗಳ ಸಂಗತಿ ಹೋಗಲಿ - ನನ್ನ ಮಾತುಗಳು ದೊಡ್ಡವರಿಗೆ ಅರ್ಥವಾಗುವುದಿಲ್ಲ, ಕೋಪ ಬರುತ್ತದೆ ಅವರ ಮಾತುಗಳಿಂದ ತನಗೆ ಆಳುಬರುವಂತೆಯೇ, ಹಾಗೆಯೇ ನನ್ನ ಮಾತುಗಳಿಂದ ಅವರಿಗೆ ಕೋಪಬರುತ್ತದೆಯೇನೋ ಅಂದುಕೊಂಡಳು. 
ಆದರೆ ನಗು ಏನು ಮಾಡಿದೆ?
ನಕ್ಕರೆ ಯಾರಿಗದರೂ ನೋವು ಏತಕ್ಕೆ? ಕೋಪ ಏಕೆ? ಅದರಲ್ಲೂ ಜಾನಕಿಗೆ ನಗು ತುಟಿಗಳ ಮೇಲಿದೆಯೇನೋ ಅನ್ನುವಷ್ಟು ಬೇಗ ಬಂದುಬಿಡುತ್ತದೆ. ಮನೆಯೊಳಗೆ ಹೊರಗೆ ಎಷ್ಟು ವಿಚಿತ್ರಗಳು, ಎಷ್ಟು ತಮಾಷೆಗಳು ಎಲ್ಲಕ್ಕು ನಗು ಬರುತ್ತದೆ. ಹೇಗೆ ತಡೆಯಬೇಕು? ನಗು ಬರುವಂತಹುದು ಎದುರುಗಡೆ ನಡೆದರೂ ನಗಬಾರದು.  ನಕ್ಕರೆ ಹೊಡೆಯುತ್ತಾರಲ್ಲ, ಹೊಡೆದರೆ ನೋವಾಗುತ್ತದಲ್ಲ, ನೋವಿಗೆ ಅಳು ಬರುತ್ತದಲ್ಲ. ಅಳಬಾರದು, ನೋವು ಬರುವಷ್ಟು ಹೊಡೆದರೂ ಅಳಬಾರದೆಂದರೆ  ಆಶ್ಚರ್ಯವಾಗುತ್ತಿತ್ತು ಜಾನಕಿಗೆ. 
"ಹೊಡೆಯದಿದ್ದರೆ ಅವನು ಅಳುವುದಿಲ್ಲವಲ್ಲ" ಎಂದು ಜಾನಕಿ ತಂದೆ, ತಮ್ಮನಿಗೆ ಹೊಡೆಯುತ್ತಿದ್ದಾಗ ಹೇಳಿದಳು. 
"ನೀನು ಬಾಯ್ಮುಚ್ಚದಿದ್ದರೆ ನಿನಗೂ ಬೀಳುತ್ತದೆ, ಉಪಯೋಗಕ್ಕೆ ಬಾರದ ಪ್ರಶ್ನೆಗಳು, ಏನೂ ಇಲ್ಲದಿದ್ದರೂ ದೇವರು ಬಾಯೊಂದನ್ನು ಕೊಟ್ಟು ಬಿಟ್ಟಿದ್ದಾನೆ" ತಂದೆಯ ಕೋಪ ಇವಳೆಡೆಗೆ ತಿರುಗಿತು.
ದೇವರು ಬಾಯಿ ಕೊಟ್ಟಿದ್ದಾನೆ. ಬಾಯಿಯಿಂದ ಮಾತನಾಡುತ್ತಾರೆ,  ನಗುತ್ತಾರೆ, ಅಳುತ್ತಾರೆ. ಮತ್ತೆ ಇದೆಲ್ಲವನ್ನು ಮಾಡಬಾರದೆಂದೇಕೆ ಹೇಳುತ್ತಾರೆ? ಇವೆಲ್ಲಾ ಮಾಡಬಾರದಾದರೆ ದೇವರು ಬಾಯಿ ಕೊಟ್ಟಿದ್ದೇಕೆ? ಜಾನಕಿಯ ಚಿಕ್ಕ ತಲೆಗೆ ಇದಕ್ಕೂ ಹೆಚ್ಚಿನ ಆಲೋಚನೆ ಬರುತ್ತಿರಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಆ ಆಲೋಚನೆಯನ್ನು ಅಲ್ಲಿಗೆ ಬಿಟ್ಟುಬಿಡುತ್ತಿದ್ದಳು.
ಜಾನಕಿಗೆ ನಿಧಾನವಾಗಿ ಎಷ್ಟೋ  ವಿಚಿತ್ರ ವಿಷಯಗಳು ತಿಳಿದವು.
ಮೊದಲಿಗೆ, ಚಿಕ್ಕ ಮಕ್ಕಳನ್ನು ದೊಡ್ಡವರು ಬಾಯಿ ಮುಚ್ಚಲು ಹೇಳುತ್ತಾರೆ ಎಂದು ಅರ್ಥವಾಯಿತು.
ನಂತರ ಚಿಕ್ಕಮಕ್ಕಳಲ್ಲೂ ಹೆಣ್ಣುಮಕ್ಕಳು ಹೆಚ್ಚು ಸಾರಿ ಬಾಯಿ ಮುಚ್ಚಿಕೊಳ್ಳಬೇಕೆಂದು ಅರ್ಥವಾಯಿತು. ಬುದ್ಧಿ ಬಂದಾಗ, ಹೆಂಗಸರನ್ನು ಕೂಡ ಗಂಡಸರು ಬಾಯಿ ಮುಚ್ಚಲು ಹೇಳುತ್ತಾರೆಂದು ಅರ್ಥವಾಯಿತು. ಅಪ್ಪ ಅಮ್ಮ ಒಬ್ಬರೇನೂ, ಮನೆಯಲ್ಲಿರುವ ಎಲ್ಲಾ ಹೆಂಗಸರು, ಗಂಡಸರು, ಮಕ್ಕಳು ಸಹ ಎಲ್ಲರಿಗಿಂತ. ದೊಡ್ಡವನಾದ ವೆಂಕಟಿಯನ್ನು ಬಾಯಿ ಮುಚ್ಚಿಕೊಳ್ಳಲು ಎನ್ನುತ್ತಾರೆ. 
ಜಾನಕಿಗೆ ಸಹ ವೆಂಕಟಿಗೆ ಬಾಯಿ ಮುಚ್ಚಿಕೊಂಡು ಎಂದು ಹೇಳಬೇಕೆಂದು ಎಷ್ಟೋ ಸಾರಿ ಅನಿಸಿದೆ.
ಆದರೆ ವೆಂಕಟಿ ಜಾನಕಿಗೆ ತುಂಬಾ ಒಳ್ಳೆಯ ವಿಷಯಗಳನ್ನು ಹೇಳುತ್ತಿದ್ದ.  ಹಸುಗಳು ಕಿರುಚಿದರೆ ಅವು ತಮ್ಮ ಭಾಷೆಯಲ್ಲಿ ಏನನ್ನುತ್ತಿವೆ ಎಂಬುದನ್ನು  ಹೇಳುತ್ತಿದ್ದ. ಪಕ್ಷಿಗಳು ಸೀಬೆಮರದ ಮೇಲೆ ಕುಳಿತು ಮೀಟಿಂಗ್ ಮಾಡುತ್ತ ಏನನ್ನು ಮಾತನಾಡಿಕೊಳ್ಳುತ್ತಿದ್ದವೋ, ಅದನ್ನು ಹೇಳುತ್ತಿದ್ದ. ಮೋಡಗಳು ಬೇಗ ಬೇಗ ಮನೆಯತ್ತ ಏಕೆ ಓಡುತ್ತಿವೆ ಎಂಬುದನ್ನು ಹೇಳುತ್ತಿದ್ದ. ಸಂಜೆಯಾದ ಮೇಲೆ ಬಿಂದಿಗೆಯಲ್ಲಿ ನೀರನ್ನು ಹೊತ್ತು ಮನೆಯ ತೊಟ್ಟಿಗೆ ತುಂಬುವುದು, ಮನೆ ಸೇರಲಾಗದಿದ್ದರೆ ಆ ನೀರನ್ನೆಲ್ಲಾ ಮಳೆಯಂತೆ ಚೆಲ್ಲುತ್ತಿದ್ದೆ ಎಂಬುದನ್ನು ಹೇಳುತ್ತಿದ್ದರೆ ಬಾಯಿ ತೆರೆದುಕೊಂಡು ಕೇಳಿಸಿಕೊಳ್ಳುತ್ತಿದ್ದಳು ಜಾನಕಿ. "ಬಾಯ್ಮುಚ್ಚು, ಏನಾ ಮಾತು, ಏನಾ ಹರಟೆ"  ಎಂದು ಹೇಳುತ್ತಿದ್ದದನ್ನು ಮರೆತು ನೋಡುತ್ತಿದ್ದಳು.
ವೆಂಕಟಿ ಹೇಳುತ್ತಿದ್ದ ಮಾತುಗಳನ್ನೇ, ಅಮ್ಮನಿಗೆ, ಅಪ್ಪನಿಗೆ ಹೇಳುತ್ತಿದ್ದರೆ ಬಾಯಿಮುಚ್ಚಿಕೊ ಎನ್ನುತ್ತಿದ್ದರು. ಭಿಕಾರಿಗಳನ್ನು, ಕೆಳಜಾತಿಯವರನ್ನು ಹೆಣ್ಣು ಮಕ್ಕಳನ್ನು ಬಾಯಿ ಮುಚ್ಚಿಕೊ ಎನ್ನುತ್ತಾರೆ ಎಂಬುದನ್ನು ಜಾನಕಿ ಗ್ರಹಿಸಿದಳು.
ಆಗಲಿಂದ ಜಾನಕಿ ಅತಿ ಕಡಿಮೆ ಮಾತನಾಡುವುದನ್ನು ಪ್ರಯತ್ನ ಪೂರ್ವಕವಾಗಿ ಅಳವಡಿಸಿಕೊಂಡಳು. ಶಾಲೆಯಲ್ಲಿ, ಮನೆಯಲ್ಲಿ ಮಾತನಾಡದೆ ಕೆಲಸಗಳನ್ನು ಮಾಡುವುದನ್ನು ಕಲಿತುಕೊಂಡಳು.
ಜಾನಕಿಯನ್ನು ಎಲ್ಲರೂ ಮೆಚ್ಚಿಕೊಂಡರು. 
ತಲೆಯಿಂದ ಹುಟ್ಟುವ ಮಾತನ್ನು ನಿಲ್ಲಿಸಲು ಪ್ರಯತ್ನಿಸಿದ ಜಾನಕಿಗೆ ತಲೆಯಲ್ಲಿಯೇ ಮಾತುಗಳು ಹುಟ್ಟುವುದು ನಿಂತುಹೋಗುತ್ತದೆ ಎಂದು ಗ್ರಹಿಸಲಾಗಲಿಲ್ಲ. ಮಾತಾಡದಿದ್ದರೆ ತನ್ನಲ್ಲಿ ಉಂಟಾಗುವ ಅಶಾಂತಿ ನಿಧಾನವಾಗಿ ಕಡಿಮೆಯಾಗುತ್ತದೆ ಎಂದು ಸಂತೋಷಿಸಿದಳೇ ಹೊರತು ತನಗಿರುವ ಊಹಾಶಕ್ತಿಯು ಸಹ ಹೋಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳದಾದಳು.
ಚಿಕ್ಕವಳಾಗಿದ್ದಾಗ ಬಾಡಿಹೋದ ಕೊಂಬೆಗಳನ್ನೂ, ಉದುರಿಬಿದ್ದ ಹೂಗಳನ್ನು ನೋಡಿ ಅವುಗಳಿಗಾಗಿ ನೋವು ಪಟ್ಟುಕೊಂಡು ಅವುಗಳ ದುಸ್ಥಿತಿಯ ಬಗ್ಗೆ ನಾಲ್ಕು ಜನರಿಗೆ ಹೇಳಬೇಕು ಎಂದುಕೊಳ್ಳುತ್ತಿದ್ದ ಜಾನಕಿ, ಇಂದು ತನ್ನ ಎದುರಿನಲ್ಲಿ ಮನುಷ್ಯರು ನೋವನ್ನನುಭವಿಸುತ್ತಿದ್ದರೂ ಏನೂ ಮಾತನಾಡದೆ ಇರುವಂತಹ ದುಸ್ಥಿತಿಗೆ ತಲುಪಿದ್ದಳು. ನಿಶ್ಯಬ್ದವಾಗಿ ಅಳುವುದನ್ನು ಬಿಟ್ಟರೆ ಇನ್ನೇನೂ ಮಾಡಲಾರದಾದಳು. 
ಪಕ್ಷಿಗಳ ಕಲರವ, ಕರುಗಳ ಅಂಬಾ ಎನ್ನುವ ಕೂಗಿಗೆ ಜೋರಾಗಿ ನಗುತ್ತಿದ್ದ ಜಾನಕಿ ಈಗ ತನ್ನ ಮುಂದೆ ಎಷ್ಟೇ ಸಂತೋಷದ ವಿಷಯ ನಡೆದರು ಮುಗುಳ್ನಕ್ಕು ನಿಶ್ಯಬ್ದವಾಗಿ ನಗುವುದನ್ನು ಅಭ್ಯಾಸ ಮಾಡಿಕೊಂಡಳು. 
ಜಾನಕಿಗೆ ಮದುವೆಯಾಯಿತು. ಮದುಮಗ ಸುಂದರಾಂಗ. ಒಳ್ಳೆಯ ಉದ್ಯೋಗ. ಜಾನಕಿ ತನ್ನಲ್ಲೇ ತಾನು ಖುಷಿಪಟ್ಟುಕೊಂಡಳು.
ಆದರೆ ಆ ಖುಷಿ ಹೋಗಿ, ಅದರ ಸ್ಥಾನದಲ್ಲಿ ಭಯ ಆವರಿಸಲು ಹೆಚ್ಚೇನೂ ಕಾಲವಾಗಲಿಲ್ಲ. 
“ಏನು ಆ ನೋಟ, ಮುಂಗುಸಿಯಂತೆ, ಯಾಕೆ ಮಾತಾಡುತ್ತಿಲ್ಲ?” ಜಾನಕಿ ಗಂಡನಿಗೆ ಅವಳ ಮೌನದಿಂದ ಬೇಸರ ಹುಟ್ಟಿತು. ಏನು ಹೇಳಿದರೂ ಕೇಳಿ ಸುಮ್ಮನಿರುವ ಜಾನಕಿ, ಮರುಮಾತನಾಡದೆ ಹೇಳಿದ ಕೆಲಸವನ್ನೆಲ್ಲ ಮಾಡುವ ಜಾನಕಿಯನ್ನು ಕಂಡು ಅವನಲ್ಲಿ ತುಂಬ ಅಸಹನೆ ತುಂಬಿತು.
ತನ್ನ ಗಂಡನಿಗೆ ಮಾತುಗಳು ಬೇಕೆಂದು ಅರ್ಥವಾಗುವಷ್ಟರಲ್ಲಿ ಜಾನಕಿಯ ಕೆನ್ನೆಗಳು ಬಾಸುಂಡೆ ಬಂದವು. ಜಾನಕಿ ಮತ್ತೆ ಮಾತುಗಳನ್ನು ಕಲಿಯಲಾರಂಭಿಸಿದಳು. ಬಾಯಿ ತೆರೆಯುವುದನ್ನು ಆರಂಭಿಸಿದಳು. ತನಗಾದ ಅನುಭವವನ್ನು ಮಾತುಗಳಲ್ಲಿ ಹೇಳುವುದು ಹಿಂದೆ ಬಹಳ ಸುಲಭವಾಗಿತ್ತು.
ಈಗ ಆ ರೀತಿ ಇರಲಿಲ್ಲ.
ಈಗ ಮಾತುಗಳಿಗೆ ಯುದ್ಧ ಮಾಡಬೇಕಾಗಿ ಬರುತ್ತಿತ್ತು.
ತಲೆ, ಗಂಟಲು, ನಾಲಿಗೆ, ತುಟಿಯ ಮೇಲೆ ಯುದ್ಧ ಮಾಡಬೇಕಾಗಿ ಬರುತ್ತಿತ್ತು. ಈ ಯುದ್ಧದ್ದಲ್ಲಿ ಅಪಜಯ ಬಂದರೂ, ಸುಸ್ತಾದರೂ ಜಾನಕಿ ತನ್ನ ಪ್ರಯತ್ನವನ್ನು ಬಿಡಲಿಲ್ಲ.
ನಿಧಾನವಾಗಿ ನಡೆಯಲು ಬಾರದ ಕಂದ ಎದ್ದು ಬಿದ್ದು ನಡೆಯುವುದನ್ನು ಕಲಿತಂತೆ ಜಾನಕಿ ಮಾತನಾಡುವುದನ್ನು ಕಲಿತಳು. ಜಾನಕಿಯಲ್ಲಿನ ಬದಲಾವಣೆಗೆ ಅವಳ ಗಂಡ ಕೂಡ ಸಂತೋಷಿಸಿದ.
ಜಾನಕಿ ಅವನಿಗೇನು ಬೇಕೊ, ಅವನ ಇಷ್ಟಗಳೇನೆಂದು ಕೇಳಿ ಕಂಡುಕೊಳ್ಳುತ್ತಿರುವಾಗ, ಅವನ ಇಷ್ಟಗಳನ್ನು ಪೂರೈಸುವೆ ಎಂದು ಹೇಳುವಾಗ ಅವನು ತುಂಬಾ ಖುಷಿಪಟ್ಟ.
ಅವನ ಕೆಲಸಗಳನ್ನು, ವರ್ತನೆಯನ್ನು ಸೌಂದರ್ಯವನ್ನು ಜಾನಕಿ ಮುದ್ದಾದ ಮಾತುಗಳಲ್ಲಿ ಮೆಚ್ಚಿಕೊಳ್ಳುತ್ತಿದ್ದರೆ ಅವನು ನಿಜವಾಗಿಯೂ ಆನಂದಪಟ್ಟ. ಆದರೆ ಜಾನಕಿ ಮಾತುಗಳು ಅಲ್ಲಿಗೆ ನಿಲ್ಲಲಿಲ್ಲ. ಜಾನಕಿ ಗಿಣಿಯಲ್ಲ. ವ್ಯಕ್ತಿ. ಜಾನಕಿ ಮತ್ತೆ ಕೆಲವು ವಿಷಯಗಳನ್ನು ಕೇಳುವುದು, ಮಾತನಾಡುವುದು ಶುರು ಮಾಡಿದ ಮೇಲೆ ಗಂಡನಿಗೆ ಮತ್ತೆ ಅವಳ ಮೇಲೆ ಕೋಪ ಬರಲಾರಂಭಿಸಿತು. 
ಸಣ್ಣದಾಗಿ ಆರಂಭವಾದ ಈ ಕೋಪ ಜಾನಕಿಯ ಮಾತುಗಳಿಂದ ದೊಡ್ಡದಾಗುತ್ತಾ ಹೋಯಿತು. ಒಂದಿನ ಅದು ಹೊರಬಂತು.
“ಬಾಯ್ಮುಚ್ಚು, ಹೆಂಗಸಿಗೆ ಅಷ್ಟು ಬಾಯಿ ಒಳ್ಳೆಯದಲ್ಲ.”
“ಹೆಂಗಸು ನೀನು, ಬಾಯಿ ಮುಚ್ಚಿಕೊಂಡು ಬಿದ್ದಿರು.”
ಗಂಡ ಈ ಮಾತನಾಡಿದ ದಿನ ಜಾನಕಿ ಹುಚ್ಚುಚ್ಚಾಗಿ ನಕ್ಕಳು. ಕಣ್ಣಿನಿಂದ ನೀರು ಸುರಿಯುವಷ್ಟು ನಕ್ಕಳು. ನಕ್ಕು ನಕ್ಕು ಸುಸ್ತಾಗಿ ಮಂಚದ ಮೇಲೆ ಒರಗಿದಳು.
“ಏನಾ ವಿಪರೀತ ನಗು? ಹೆಂಗಸೇನಾ?”
ಜಾನಕಿಯ ನಗು ನಿಲ್ಲಲ್ಲಿಲ್ಲ.
ಆ ನಗು ಅಳುವಾಗಿ ಬದಲಾಗುವವರೆಗೆ ನಿಲ್ಲುವುದಿಲ್ಲ ಕೂಡ!
“ಬಾಯ್ಮುಚ್ಚು, ಬಾಯ್ಮುಚ್ಚು.”
ಜಾನಕಿ ಕಿವಿಗಳಲ್ಲಿ ಈ ಮಾತು ಪ್ರತಿಧ್ವನಿಸತೊಡಗಿತು. ಕಿವಿಗಳನ್ನು ಮುಚ್ಚಿದರೂ ಸಹ!
ಆ ಮಾತು ಕಿವಿಗಳ ಮೂಲಕ ಕೇಳಿಸಿದರೂ ಹುಟ್ಟಿದ್ದು ತಲೆಯಲ್ಲಿಯೇ. ರಕ್ತದೊಳಗಿಳಿಯಿತು!!
   - ಸುಧಾ ಜಿ      

Saturday 8 April 2017

Point of View - Gender Budgeting


Poverty and deprivation at all levels in our society has always bothered me, and the helplessness that I felt intensified every time I finalised a research report. Time and again non-availability of funds to execute many programmes and translate policy commitments into action raised a few questions; every year, year after year our financial ministers have been giving us statements of allocation of funds for various activities, they where did these funds go? How much did they really allocate towards educating our children? How much was assigned for undertaking activities related to health issues? What about the share for farmers?
My search for answers to these questions educated me to read budget. Till then I was under the impression it is not my concern but that of an accounts person. I was introduced to reading budget, believe me, initially it was torture.


The budget that my government shares with us is unreadable to common citizens. I understood that every government should in a democracy provide what is known as people’s budget. People’s budget is the basis for open, accountable and a just practice. 
As I started understanding the budget allocation of governments, I also started to realize that our budget formation premises assumes that the given budget will automatically be shared with all the citizens of the land. The realities are otherwise. The non-inclusive societal values very subtly gets expressed in sharing the resources too. It became necessary therefore to understand not only the given budget but also to look at it from different sections’ positions too.
I thought of sharing my learning about the budget and specifically about gender budget as it is my interest area.

What is Budget?

budget is a financial document used to distribute funds based on the projections of future income and expenses.
Not many people would argue with the concept of budget transparency. A government takes money from taxpayers, and should therefore be accountable to them. The non-taxpaying public should also know as much as possible about the government’s spending plans to ensure its needs are met. Even governments themselves should push for transparency, as it allows the voting public to give feedback on its spending priorities and thereby increasing a government’s chances of staying in office.
In practice, of course, things are not quite as clear: people with vested interests want to keep certain information from public scrutiny.

Why do we need to understand or track the budget?

To make public affairs transparent and public information made available
To promote efficient and effective public service delivery
To institutionalize the participation of Civil Society in the analysis, tracking and advocacy
To make citizens participate in the process of allocation, tracking of disbursement, and in monitoring the use of public resources.

What happens when we track the budget?
We understand
Budget formulation ie. We come to know how public resources are allocated
Budget review components ie, we will be able to diagnosing the implications of the budget when formed and their likely impact on our lives
Public expenditure at the local and national levels ie, seeing where the money is actually going
The performance of programmes at the decentralized level ie, after money is spent, see how the output/service is performing
Let us see what gender budgeting is all about and why ask for gender budget?
India is one of the countries that signed committing itself to achieve the Millennium Development Goals.  This meant that both at the state and the Union level the governments promised to recongnise the needs of women and accordingly make allocations, so that reaching the target of a society that has both men and women are equally able access the national resources.
What is gender budgeting then?
It is analysing how governments raise and spend public money, with the aim of securing gender equality in decision-making about public resource allocation;
It is understanding how gender equality is achieved in the distribution of the impact of government budgets, both in their benefits and in their burdens.
Gender budgeting is part of the gender mainstreaming strategy. Gender budgeting focuses on a gender-based analysis and an equality-oriented evaluation of the distribution of resources. These resources are mainly money, time as well as paid and/or unpaid work. Gender budgeting seeks to achieve a gender-equal distribution of resources.
I understood that it is not enough to understand gender budgeting merely as a gender-differentiated analysis of the use of certain public funds. This is only a small, yet necessary part. But this alone neither qualifies for implementing a gender-equality-related evaluation of the total budget, nor does it make statements on gender-related interactions of expenditures with other resources possible.

Benefits of Gender Budgeting

Gender budgeting offers a range of advantages that partly go beyond an effective contribution to gender equality:
Gender Budgeting creates greater transparency regarding the criteria that form the basis for budget related political decisions.
Gender Budgeting facilitates greater accuracy and sustainability because available funds are more precisely tailored to the real needs of the different social groups.
Gender Budgeting is a procedure that makes discriminating implications of financially effective decisions visible and that enables a gender-equitable restructuring of resource-related decisions.
Gender Budgeting is an option to put gender-equality-related goals into practice, including in times of bigger budgetary margins.
In the context of gender budgeting, a whole range of questions have been formulated that serve to analyse resource-effective decisions and check their efficacy regarding gender equality:
  • o   What impact does a resource-effective decision / measure have on the living conditions of women and men in their diversity?
  • o   Who directly or indirectly benefits from state expenditures?
  • o   What impact do economic measures have on unpaid work and which social groups do this kind of work?
  • o   Which women and men pay what kind of direct, indirect and invisible taxes (as unpaid work) to the community?
  • o   What resource-effective decisions / measures consolidate or change existing gender roles?

These questions serve as an initial basis for developing tools and action steps for the implementation of gender budgeting.
I have found that gender auditing is a very important tool that could be used at all levels
What is gender auditing then?
Gender audit can also be called as Social audit. GA Belongs to the category of quality audits as opposed to financial audits.  Gender Audit considers whether internal practices and related support systems for gender mainstreaming are effective and reinforce each other and whether they are being followed. It establishes a baseline. It Identifies critical gaps, and challenges and recommends ways of addressing gender gaps. Suggests possible improvements and innovations and further documents good practices toward achievement of gender equality
Gender auditing is a tool and process based on a participatory methodology to promote organizational learning at individual, work unit and organizational levels on how to practically and effectively mainstream gender.

Thus when we speak of Gender budgeting, Gender auditing should form the basis to plan, propose as well as implement the Gender Budget. Further, it will be good to have a People’s Budget document which needs to be circulated among the general public so that more number of people understand the budget and be budget literate. 
To conclude I would say that in our effort to work towards an equitable society we need to equip ourselves with information as knowledge provides strength.
- Dr Shanthi VG   

Sources:
*I have extensively drawn from note in the training workshops that I attended organised by International Budget Partnership and Center for Budget and Governance Accountability New Delhi. This is a compilation of ideas that I have gathered over a couple of years in my effort to learn about budgeting in general and Gender Budgeting in specific.
Jhamb. Bhumika & Navanita Sinha.  2010. Millennium Development Goals & Gender Budgeting: Where does India stand? Centre for Budget and Governance Accountability. New Delhi